ETV Bharat / entertainment

''ನನ್ನತ್ರ ಬೇಡ, ನಾನ್ ಸರಿಯಿಲ್ಲ'': ಬಿಗ್​ ಬಾಸ್​ ಸ್ಪರ್ಧಿಗಳಿಗೆ ಕಿಚ್ಚನ ವಾರ್ನಿಂಗ್​​

author img

By ETV Bharat Karnataka Team

Published : Jan 6, 2024, 7:48 PM IST

ಆಲಸ್ಯ ತೋರಿದ ಬಿಗ್​ ಬಾಸ್​ ಮನೆ ಮಂದಿಗೆ ಸುದೀಪ್​ ಕ್ಲಾಸ್​ ತೆಗೆದುಕೊಂಡಿದ್ದಾರೆ.

Sudeep
ಸುದೀಪ್​​

ನಟ ಸುದೀಪ್​ ನಿರೂಪಣೆಯಲ್ಲಿ ಮೂಡಿ ಬರುವ ಬಿಗ್​ ಬಾಸ್​ ಸೀಸನ್ 10 ಬಹುತೇಕ ಫಿನಾಲೆ ಹಂತಕ್ಕೆ ತಲುಪಿದೆ. ಕೆಲವೇ ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಂಡಿದ್ದು, ಈ ವಾರ ಓರ್ವರು ಎಲಿಮಿನೇಟ್​ ಆಗಲಿದ್ದಾರೆ. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನಿರೂಪಕ ಸುದೀಪ್​ ಗರಂ ಆಗಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.

ಬಿಗ್​ ಬಾಸ್​ ಪ್ರೋಮೋ: 'ಸ್ಪರ್ಧಿಗಳ ಆಲಸ್ಯಕ್ಕೆ ಬಿಸಿ ಮುಟ್ಟಿಸಿದ ಕಿಚ್ಚ!' ಶೀರ್ಷಿಕೆಯಲ್ಲಿ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯ ಪ್ರೋಮೋ ಅನಾವರಣಗೊಂಡಿದೆ. ''ನನ್ನತ್ರ ಬೇಡ, ನಾನ್ ಸರಿಯಿಲ್ಲ. ಇಷ್ಟ ಇದ್ರೆ ಇರಿ, ಇಲ್ಲಾಂದ್ರೆ ಹೋಗಿ'' ಎಂದು ನಟ ಸುದೀಪ್​ ಮನೆಯ ಸ್ಪರ್ಧಿಗಳಿಗೆ ತಿಳಿಸಿದ್ದಾರೆ. ಆಲಸ್ಯ ತೋರಿದ ಮನೆ ಮಂದಿಗೆ ಸುದೀಪ್​ ಬಿಸಿ ಮುಟ್ಟಿಸಿದಂತಿದೆ.

ಸ್ಪರ್ಧಿಗಳ ಆಲಸ್ಯಕ್ಕೆ ಬಿಸಿ ಮುಟ್ಟಿಸಿದ ಕಿಚ್ಚ!

ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9⁠#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/IuWoDuFnNi

— Colors Kannada (@ColorsKannada) January 6, 2024 ">

ವಿಚಾರವೊಂದರ ಬಗ್ಗೆ ಮಾತುಕತೆ ನಡೆಸಿದಂತಿದೆ. ನಮ್ರತಾ, ವಿನಯ್​​, ಮೈಕಲ್​ ಯಾವ್ದಕ್ಕೂ ಕೈ ಎತ್ತಲಿಲ್ಲ ಎಂದು ಸುದೀಪ್​ ಪ್ರಶ್ನಿಸಿದ್ದಾರೆ. ಅದಕ್ಕೆ ಮೈಕಲ್​ 'ಇಟ್​ ಡಸ್​ ನಾಟ್ ಮೇಕ್ ಅ ಡಿಫ್ರೆನ್ಸ್' ಎಂದು ತಿಳಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸುದೀಪ್​, ಈಗ ಒಂದು ವೋಟಿಂಗು, ರೇಟಿಂಗು ಅಂತಾ ನಿಮ್ಮ ಒಪಿನಿಯನ್​ ಕೇಳ್ತೀನಿ. ಅದಕ್ಕೆ ಸರಿಯಾಗಿ ಉತ್ತರ ಕೊಟ್ರೆ, ಸ್ಪಂದಿಸಿದರೆ ನಾವು ಮಾತಾಡಣ. ಸುಮ್ನೆ ಒಂದ್​ ಹಿಂಟ್​ ಕೊಡ್ತೀನಿ. ''ನನ್ನತ್ರ ಬೇಡ, ನಾನ್ ಸರಿಯಿಲ್ಲ''. ಗೌರವ ಶುರು ಆಗೋದೇ ನಿಮ್ಮೆಲ್ಲರನ್ನು ಕೂರಿಸಿ, ನಾನು ನಿಂತು ಮಾತಾಡೋ ಕ್ಷಣದಿಂದ. ಇಷ್ಟ ಇದ್ರೆ ಇರಿ ಇಲ್ಲಾಂದ್ರೆ ಬಾಗಿಲು ತೆರೆದು ಹೋಗ್ತಾ ಇರಿ ಎಂದು ಬಾಗಿಲ ಕಡೆ ಕೈ ತೋರಿಸಿದ್ದಾರೆ. ಇದು ಮನೆ ಮಂದಿಗೆ ಬಿಸಿ ಮುಟ್ಟಿಸಿದಂತಾಗಿದೆ. ಸ್ಪರ್ಧಿಗಳ ಮೊಗದಲ್ಲಿ ಆತಂಕ, ಭಯ ಎದ್ದು ಕಂಡಿದೆ.

ಇದನ್ನೂ ಓದಿ: 'ಭಯ ಪಡಬೇಡ, ಮುನ್ನುಗ್ಗು': ರಿಷಬ್ ಶೆಟ್ಟಿಗೆ ಮೈಸಂದಾಯ ದೈವದ ಅಭಯ

ನಟ ಸುದೀಪ್​ ನಿರೂಪಣೆಯಲ್ಲಿ ಮೂಡಿ ಬರುವ ಬಿಗ್​ ಬಾಸ್​ ಸೀಸನ್ 10 ಬಹುತೇಕ ಫಿನಾಲೆ ಹಂತಕ್ಕೆ ತಲುಪಿದೆ. ಕೆಲವೇ ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಂಡಿದ್ದು, ಈ ವಾರ ಓರ್ವರು ಎಲಿಮಿನೇಟ್​ ಆಗಲಿದ್ದಾರೆ. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನಿರೂಪಕ ಸುದೀಪ್​ ಗರಂ ಆಗಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.

ಬಿಗ್​ ಬಾಸ್​ ಪ್ರೋಮೋ: 'ಸ್ಪರ್ಧಿಗಳ ಆಲಸ್ಯಕ್ಕೆ ಬಿಸಿ ಮುಟ್ಟಿಸಿದ ಕಿಚ್ಚ!' ಶೀರ್ಷಿಕೆಯಲ್ಲಿ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯ ಪ್ರೋಮೋ ಅನಾವರಣಗೊಂಡಿದೆ. ''ನನ್ನತ್ರ ಬೇಡ, ನಾನ್ ಸರಿಯಿಲ್ಲ. ಇಷ್ಟ ಇದ್ರೆ ಇರಿ, ಇಲ್ಲಾಂದ್ರೆ ಹೋಗಿ'' ಎಂದು ನಟ ಸುದೀಪ್​ ಮನೆಯ ಸ್ಪರ್ಧಿಗಳಿಗೆ ತಿಳಿಸಿದ್ದಾರೆ. ಆಲಸ್ಯ ತೋರಿದ ಮನೆ ಮಂದಿಗೆ ಸುದೀಪ್​ ಬಿಸಿ ಮುಟ್ಟಿಸಿದಂತಿದೆ.

ವಿಚಾರವೊಂದರ ಬಗ್ಗೆ ಮಾತುಕತೆ ನಡೆಸಿದಂತಿದೆ. ನಮ್ರತಾ, ವಿನಯ್​​, ಮೈಕಲ್​ ಯಾವ್ದಕ್ಕೂ ಕೈ ಎತ್ತಲಿಲ್ಲ ಎಂದು ಸುದೀಪ್​ ಪ್ರಶ್ನಿಸಿದ್ದಾರೆ. ಅದಕ್ಕೆ ಮೈಕಲ್​ 'ಇಟ್​ ಡಸ್​ ನಾಟ್ ಮೇಕ್ ಅ ಡಿಫ್ರೆನ್ಸ್' ಎಂದು ತಿಳಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸುದೀಪ್​, ಈಗ ಒಂದು ವೋಟಿಂಗು, ರೇಟಿಂಗು ಅಂತಾ ನಿಮ್ಮ ಒಪಿನಿಯನ್​ ಕೇಳ್ತೀನಿ. ಅದಕ್ಕೆ ಸರಿಯಾಗಿ ಉತ್ತರ ಕೊಟ್ರೆ, ಸ್ಪಂದಿಸಿದರೆ ನಾವು ಮಾತಾಡಣ. ಸುಮ್ನೆ ಒಂದ್​ ಹಿಂಟ್​ ಕೊಡ್ತೀನಿ. ''ನನ್ನತ್ರ ಬೇಡ, ನಾನ್ ಸರಿಯಿಲ್ಲ''. ಗೌರವ ಶುರು ಆಗೋದೇ ನಿಮ್ಮೆಲ್ಲರನ್ನು ಕೂರಿಸಿ, ನಾನು ನಿಂತು ಮಾತಾಡೋ ಕ್ಷಣದಿಂದ. ಇಷ್ಟ ಇದ್ರೆ ಇರಿ ಇಲ್ಲಾಂದ್ರೆ ಬಾಗಿಲು ತೆರೆದು ಹೋಗ್ತಾ ಇರಿ ಎಂದು ಬಾಗಿಲ ಕಡೆ ಕೈ ತೋರಿಸಿದ್ದಾರೆ. ಇದು ಮನೆ ಮಂದಿಗೆ ಬಿಸಿ ಮುಟ್ಟಿಸಿದಂತಾಗಿದೆ. ಸ್ಪರ್ಧಿಗಳ ಮೊಗದಲ್ಲಿ ಆತಂಕ, ಭಯ ಎದ್ದು ಕಂಡಿದೆ.

ಇದನ್ನೂ ಓದಿ: 'ಭಯ ಪಡಬೇಡ, ಮುನ್ನುಗ್ಗು': ರಿಷಬ್ ಶೆಟ್ಟಿಗೆ ಮೈಸಂದಾಯ ದೈವದ ಅಭಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.