ETV Bharat / entertainment

ಮತ್ತೊಮ್ಮೆ ಪ್ರೀತಿಯಲ್ಲಿ ಬೀಳಬೇಕು ಎಂದಿದ್ದಾರೆ ಶೆಹನಾಜ್​ ಗಿಲ್​; ಇದಕ್ಕೆ ನವಾಜ್​ ಸಿದ್ಧಿಕಿ ಹೇಳಿದ್ದೇನು?

ಜೀವನದಲ್ಲಿ ತನಗೆ ಬೇಕಾಗಿರುವುದನ್ನೆಲ್ಲಾ ಪ್ರೀತಿಸಬೇಕು. ಇದೇ ವೇಳೆ ಪ್ರೀತಿ ನಿಮ್ಮ ಬೆನ್ನಿಗೆ ಚೂರಿ ಹಾಕುವ ಗುಣ ಹೊಂದಿದೆ ಎಂದಿದ್ದಾರೆ ಗಿಲ್​.

author img

By

Published : May 23, 2023, 5:42 PM IST

Shehnaz Gill says should fall in love again; What did Nawaz Siddiqui say to this?
Shehnaz Gill says should fall in love again; What did Nawaz Siddiqui say to this?

ಹೈದ್ರಾಬಾದ್​: ಬಾಲಿವುಡ್​​ ನಟ ನವಾಜುದ್ದೀನ್​ ಸಿದ್ಧಿಕಿ ಮತ್ತು ನಟಿ ಶೆಹನಾಜ್​​ ಗಿಲ್​ ದೇಶಿ ವೈಬ್​ ಟಾಕ್​ ಶೋನಲ್ಲಿ ಮಾತಿನ ಹರಟೆ ಹೊಡೆದಿದ್ದಾರೆ. ಈ ವೇಳೆ ತಮ್ಮ ಜೀವನದ ಆಕಾಂಕ್ಷೆಗಳು ಏನು ಎಂಬ ಕುರಿತು ನವಾಜ್​ ಶೆಹನಾಜ್​ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ಜೀವನದಲ್ಲಿ ತನಗೆ ಬೇಕಾಗಿರುವುದನ್ನೆಲ್ಲಾ ಪ್ರೀತಿಸಬೇಕು ಎಂದಿದ್ದಾರೆ. ಇದೇ ವೇಳೆ ಪ್ರೀತಿ ನಿಮ್ಮ ಬೆನ್ನಿಗೆ ಚೂರಿ ಹಾಕುವ ಗುಣ ಹೊಂದಿದೆ ಎಂದಿದ್ದಾರೆ.

ನಟಿ ಶೆಹನಾಜ್​ ಹಾಗೂ ದಿವಂಗತ ನಟ ಸಿದ್ದಾರ್ಥ್​ ಶುಕ್ಲಾ ಪ್ರೀತಿಯ ಬಂಧನದಲ್ಲಿದ್ದರು ಎಂಬುದು ಬಹುತೇಕ ಅಭಿಮಾನಿಗಳಿಗೆ ತಿಳಿದ ವಿಷಯ. ಬಿಗ್​ ಬಾಸ್​ ಮನೆಯಲ್ಲಿ ಆರಂಭವಾದ ಇವರ ಪ್ರೀತಿ ಗಟ್ಟಿಯಾದ ತಳಹದಿಯನ್ನ ರೂಪಿಸಿತ್ತು. ಇನ್ನೇನು ಈ ಜೋಡಿ ಮದುವೆಯಾಗಬೇಕು ಎಂದು ನಿರ್ಧರಿಸುವ ಮೊದಲೇ ಸಿದ್ದಾರ್ಥ್​ ಹೃದಯಾಘಾತಕ್ಕೆ ಒಳಗಾದರು. ಆದರೆ, ಎಂದಿಗೂ ಈ ಜೋಡಿ ತಮ್ಮ ಸಂಬಂಧನ್ನು ಹೊರಜಗತ್ತಿಗೆ ತೋರಿಸಿರಲಿಲ್ಲ. ಆದರೆ, ಸಲ್ಮಾನ್​ ಖಾನ್​ ಮತ್ತು ಇತರೆ ಆಪ್ತ ವರ್ಗಕ್ಕೆ ಮಾತ್ರ ಈ ವಿಷಯ ಗೊತ್ತಿತ್ತು.

ಇನ್ನು ಕಾರ್ಯಕ್ರಮದಲ್ಲಿ ನವಾಜ್​ ಜೊತೆಗೆ ಮಾತು ಮುಂದುವರೆಸಿದ ನಟಿ, ತಾವು ಪ್ರೀತಿಯಲ್ಲಿ ಬಿದ್ದಿರಲಿಲ್ಲ. ಆರಂಭದಲ್ಲಿ ನನ್ನ ಗುರಿ ಕ್ಯಾಮೆರಾ ಮುಂದೆ ಮಾತ್ರ ಬರುವುದಾಗಿತ್ತು ಎಂದಿದ್ದಾರೆ. ಇದೀಗ ಈ ನಟಿ, ಸಿನಿಮಾ ಜೊತೆಗೆ ಹಾಡುಗಾರಿಕೆಯಿಂದ ಕಾರ್ಯಕ್ರಮದ ನಿರೂಪಣೆವರೆಗೆ ತಮ್ಮ ಛಾಪು ಮೂಡಿಸಲು ಮುಂದಾಗಿದ್ದಾರೆ.

ಇನ್ನು, ಇದೇ ವೇಳೆ ನಟಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ ನವಾಜ್​, ನೀವು ಹೃದಯಾಂತರಾಳದಿಂದ ಮಾಡಬೇಕಾದ ಕಾರ್ಯದ ಬಗ್ಗೆ ಹೇಳಿ ಎಂದಾಗ ಅವರು, ಎರಡು ನಿಮಿಷ ಸುಮ್ಮನಾಗಿ ಪ್ರೀತಿ ಎಂದು ಉತ್ತರಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನವಾಜ್​, ಅದು ಆಗುತ್ತದೆ. ಇದಕ್ಕೆ ಮಾತು ಮುಂದುವರೆಸಿದ ನಟಿ, ಪ್ರೀತಿ ಆದರೆ, ಪ್ರೀತಿ ನೋವು ಕೊಡುತ್ತದೆ. ಈ ನೋವಿನಿಂದ ನನ್ನ ನಟನೆ ಹೊರಬರುತ್ತದೆ ಎಂದಿದ್ದಾರೆ.

ಶೆಹನಾಜ್​ ತಮ್ಮನ್ನು ಹಾರ್ಟ್​ಬ್ರೋಕನ್​ (ಒಡೆದ ಹೃದಯ) ಎಂದು ಕರೆದುಕೊಂಡಿದ್ದು, ನನಗೆ ವಂಚನೆ ಹೇಗೆ ಆಗಿದೆ ಎಂದರೆ, ಅಳುತ್ತಲೇ ಇರುತ್ತೇನೆ. ನನ್ನ ಬಗ್ಗೆ 24 ಗಂಟೆ ಯೋಚಿಸಿದರೆ, ನೀವು ಹುಚ್ಚರಾಗಬಹುದು ಎಂದಿದ್ದಾರೆ. ಇದೇ ವೇಳೆ ಮಾತನಾಡಿದ ನವಾಜ್​, ಪ್ರತಿಯೊಬ್ಬರ ಪ್ರೀತಿ ಶುದ್ದ. ಪ್ರತಿಯೊಬ್ಬರು ಪ್ರೀತಿ ಮಾಡುವ ರೀತಿ ಬೇರೆಯದ್ದೇ ಆಗಿದೆ ಎಂದರು.

ಸಿದ್ದಾರ್ಥ್​​ 2021ರಲ್ಲಿ ಅಸುನೀಗಿದ ನಂತರ, ಶೆಹನಾಜ್​ ಈ ಕುರಿತು ಎಲ್ಲೂ ಬಹಿರಂಗಪಡಿಸಿಲ್ಲ. ಆದರೆ, ಸಲ್ಮಾನ್​ ಖಾನ್​, ತಮ್ಮ ಕಿಸಿ ಕಾ ಬಾಯ್​​ ಕಿಸಿ ಕಿ ಜಾನ್​ ಚಿತ್ರದ ಪ್ರಮೋಷನ್​ನಲ್ಲಿ ಆದನ್ನು ಮರೆತು, ಮುನ್ನಡೆಯುವಂತೆ ಸಲಹೆ ನೀಡಿದ್ದರು. ಸಲ್ಮಾನ್ ಕೂಡ ಆಕೆಯನ್ನು ಸಂತೋಷವಾಗಿ, ಜೀವನದಲ್ಲಿ ಮುನ್ನಡೆಯಲು, ಮದುವೆಯಾಗಲು ಮತ್ತು ಮಕ್ಕಳನ್ನು ನೋಡಲು ಬಯಸುತ್ತೇನೆ ಎಂದು ತಿಳಿಸಿದ್ದರು. ಇದೇ ವೇಳೆ ಸಿದ್​ನಾಜ್​​ ಅಭಿಮಾನಿಗಳ ವಿರುದ್ಧ ದೂರಿದ ನಟ ಸಲ್ಮಾನ್​ ಖಾನ್​, ಶೆಹನಾಜ್ ಜೀವನದಲ್ಲಿ ಮುಂದುವರಿಯಲು ಬಿಡಲಿಲ್ಲ ಎಂದು ಆಪಾದಿಸಿದ್ದರು.

ಇದನ್ನೂ ಓದಿ: ನಿರ್ದೇಶಕ ರವಿಪುಡಿಯೊಂದಿಗೆ ತಮನ್ನಾ ಜಗಳ: ಮೌನ ಮುರಿದ ಮಿಲ್ಕಿ​ ಬ್ಯೂಟಿ

ಹೈದ್ರಾಬಾದ್​: ಬಾಲಿವುಡ್​​ ನಟ ನವಾಜುದ್ದೀನ್​ ಸಿದ್ಧಿಕಿ ಮತ್ತು ನಟಿ ಶೆಹನಾಜ್​​ ಗಿಲ್​ ದೇಶಿ ವೈಬ್​ ಟಾಕ್​ ಶೋನಲ್ಲಿ ಮಾತಿನ ಹರಟೆ ಹೊಡೆದಿದ್ದಾರೆ. ಈ ವೇಳೆ ತಮ್ಮ ಜೀವನದ ಆಕಾಂಕ್ಷೆಗಳು ಏನು ಎಂಬ ಕುರಿತು ನವಾಜ್​ ಶೆಹನಾಜ್​ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ಜೀವನದಲ್ಲಿ ತನಗೆ ಬೇಕಾಗಿರುವುದನ್ನೆಲ್ಲಾ ಪ್ರೀತಿಸಬೇಕು ಎಂದಿದ್ದಾರೆ. ಇದೇ ವೇಳೆ ಪ್ರೀತಿ ನಿಮ್ಮ ಬೆನ್ನಿಗೆ ಚೂರಿ ಹಾಕುವ ಗುಣ ಹೊಂದಿದೆ ಎಂದಿದ್ದಾರೆ.

ನಟಿ ಶೆಹನಾಜ್​ ಹಾಗೂ ದಿವಂಗತ ನಟ ಸಿದ್ದಾರ್ಥ್​ ಶುಕ್ಲಾ ಪ್ರೀತಿಯ ಬಂಧನದಲ್ಲಿದ್ದರು ಎಂಬುದು ಬಹುತೇಕ ಅಭಿಮಾನಿಗಳಿಗೆ ತಿಳಿದ ವಿಷಯ. ಬಿಗ್​ ಬಾಸ್​ ಮನೆಯಲ್ಲಿ ಆರಂಭವಾದ ಇವರ ಪ್ರೀತಿ ಗಟ್ಟಿಯಾದ ತಳಹದಿಯನ್ನ ರೂಪಿಸಿತ್ತು. ಇನ್ನೇನು ಈ ಜೋಡಿ ಮದುವೆಯಾಗಬೇಕು ಎಂದು ನಿರ್ಧರಿಸುವ ಮೊದಲೇ ಸಿದ್ದಾರ್ಥ್​ ಹೃದಯಾಘಾತಕ್ಕೆ ಒಳಗಾದರು. ಆದರೆ, ಎಂದಿಗೂ ಈ ಜೋಡಿ ತಮ್ಮ ಸಂಬಂಧನ್ನು ಹೊರಜಗತ್ತಿಗೆ ತೋರಿಸಿರಲಿಲ್ಲ. ಆದರೆ, ಸಲ್ಮಾನ್​ ಖಾನ್​ ಮತ್ತು ಇತರೆ ಆಪ್ತ ವರ್ಗಕ್ಕೆ ಮಾತ್ರ ಈ ವಿಷಯ ಗೊತ್ತಿತ್ತು.

ಇನ್ನು ಕಾರ್ಯಕ್ರಮದಲ್ಲಿ ನವಾಜ್​ ಜೊತೆಗೆ ಮಾತು ಮುಂದುವರೆಸಿದ ನಟಿ, ತಾವು ಪ್ರೀತಿಯಲ್ಲಿ ಬಿದ್ದಿರಲಿಲ್ಲ. ಆರಂಭದಲ್ಲಿ ನನ್ನ ಗುರಿ ಕ್ಯಾಮೆರಾ ಮುಂದೆ ಮಾತ್ರ ಬರುವುದಾಗಿತ್ತು ಎಂದಿದ್ದಾರೆ. ಇದೀಗ ಈ ನಟಿ, ಸಿನಿಮಾ ಜೊತೆಗೆ ಹಾಡುಗಾರಿಕೆಯಿಂದ ಕಾರ್ಯಕ್ರಮದ ನಿರೂಪಣೆವರೆಗೆ ತಮ್ಮ ಛಾಪು ಮೂಡಿಸಲು ಮುಂದಾಗಿದ್ದಾರೆ.

ಇನ್ನು, ಇದೇ ವೇಳೆ ನಟಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ ನವಾಜ್​, ನೀವು ಹೃದಯಾಂತರಾಳದಿಂದ ಮಾಡಬೇಕಾದ ಕಾರ್ಯದ ಬಗ್ಗೆ ಹೇಳಿ ಎಂದಾಗ ಅವರು, ಎರಡು ನಿಮಿಷ ಸುಮ್ಮನಾಗಿ ಪ್ರೀತಿ ಎಂದು ಉತ್ತರಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನವಾಜ್​, ಅದು ಆಗುತ್ತದೆ. ಇದಕ್ಕೆ ಮಾತು ಮುಂದುವರೆಸಿದ ನಟಿ, ಪ್ರೀತಿ ಆದರೆ, ಪ್ರೀತಿ ನೋವು ಕೊಡುತ್ತದೆ. ಈ ನೋವಿನಿಂದ ನನ್ನ ನಟನೆ ಹೊರಬರುತ್ತದೆ ಎಂದಿದ್ದಾರೆ.

ಶೆಹನಾಜ್​ ತಮ್ಮನ್ನು ಹಾರ್ಟ್​ಬ್ರೋಕನ್​ (ಒಡೆದ ಹೃದಯ) ಎಂದು ಕರೆದುಕೊಂಡಿದ್ದು, ನನಗೆ ವಂಚನೆ ಹೇಗೆ ಆಗಿದೆ ಎಂದರೆ, ಅಳುತ್ತಲೇ ಇರುತ್ತೇನೆ. ನನ್ನ ಬಗ್ಗೆ 24 ಗಂಟೆ ಯೋಚಿಸಿದರೆ, ನೀವು ಹುಚ್ಚರಾಗಬಹುದು ಎಂದಿದ್ದಾರೆ. ಇದೇ ವೇಳೆ ಮಾತನಾಡಿದ ನವಾಜ್​, ಪ್ರತಿಯೊಬ್ಬರ ಪ್ರೀತಿ ಶುದ್ದ. ಪ್ರತಿಯೊಬ್ಬರು ಪ್ರೀತಿ ಮಾಡುವ ರೀತಿ ಬೇರೆಯದ್ದೇ ಆಗಿದೆ ಎಂದರು.

ಸಿದ್ದಾರ್ಥ್​​ 2021ರಲ್ಲಿ ಅಸುನೀಗಿದ ನಂತರ, ಶೆಹನಾಜ್​ ಈ ಕುರಿತು ಎಲ್ಲೂ ಬಹಿರಂಗಪಡಿಸಿಲ್ಲ. ಆದರೆ, ಸಲ್ಮಾನ್​ ಖಾನ್​, ತಮ್ಮ ಕಿಸಿ ಕಾ ಬಾಯ್​​ ಕಿಸಿ ಕಿ ಜಾನ್​ ಚಿತ್ರದ ಪ್ರಮೋಷನ್​ನಲ್ಲಿ ಆದನ್ನು ಮರೆತು, ಮುನ್ನಡೆಯುವಂತೆ ಸಲಹೆ ನೀಡಿದ್ದರು. ಸಲ್ಮಾನ್ ಕೂಡ ಆಕೆಯನ್ನು ಸಂತೋಷವಾಗಿ, ಜೀವನದಲ್ಲಿ ಮುನ್ನಡೆಯಲು, ಮದುವೆಯಾಗಲು ಮತ್ತು ಮಕ್ಕಳನ್ನು ನೋಡಲು ಬಯಸುತ್ತೇನೆ ಎಂದು ತಿಳಿಸಿದ್ದರು. ಇದೇ ವೇಳೆ ಸಿದ್​ನಾಜ್​​ ಅಭಿಮಾನಿಗಳ ವಿರುದ್ಧ ದೂರಿದ ನಟ ಸಲ್ಮಾನ್​ ಖಾನ್​, ಶೆಹನಾಜ್ ಜೀವನದಲ್ಲಿ ಮುಂದುವರಿಯಲು ಬಿಡಲಿಲ್ಲ ಎಂದು ಆಪಾದಿಸಿದ್ದರು.

ಇದನ್ನೂ ಓದಿ: ನಿರ್ದೇಶಕ ರವಿಪುಡಿಯೊಂದಿಗೆ ತಮನ್ನಾ ಜಗಳ: ಮೌನ ಮುರಿದ ಮಿಲ್ಕಿ​ ಬ್ಯೂಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.