ETV Bharat / entertainment

'ಜನ ದುಡ್ಡು ಕೊಟ್ಟು ಸಿನಿಮಾ ನೋಡ್ತಾರೆ, ಅದ್ಭುತ ಚಿತ್ರ ನೀಡುವ ಜವಾಬ್ದಾರಿ ನನ್ನ ಮೇಲಿದೆ': ಯಶ್​​

author img

By

Published : Jun 21, 2023, 7:03 PM IST

ಸ್ಕ್ರಿಪ್ಟ್​ ರೆಡಿ ಆಗಿದೆ. ಶೀಘ್ರವೇ ಸಿನಿಮಾದೊಂದಿಗೆ ಬರುತ್ತೇವೆಂದು ನಟ ಯಶ್​ ತಿಳಿಸಿದ್ದಾರೆ.

Yash upcoming movie
ಯಶ್ ಮುಂದಿನ ಸಿನಿಮಾ

#Yash19... ಇದು ಸಾಮಾಜಿಕ ಜಾಲತಾಣದಲ್ಲಿ ಬಹು ಸಮಯದಿಂದ ಟ್ರೆಂಡ್​ನಲ್ಲಿರುವ ನಟ ಯಶ್‌ ಹೆಸರಿನ ಕೀವರ್ಡ್‌. ಕನ್ನಡ ಚಿತ್ರರಂಗದ ರಾಕಿಂಗ್​ ಸ್ಟಾರ್ ಖ್ಯಾತಿಯ ಯಶ್​ ಅವರ ಮುಂದಿನ ಸಿನಿಮಾ ಎಂಬ ಬಗ್ಗೆ ಅಂತೆಕಂತೆಗಳು ಸಾಕಷ್ಟು ಉರುಳಿ ಹೋಗಿವೆ. ಬೇಗ ಅಪ್​​ಡೇಟ್ಸ್ ಕೊಡುವಂತೆ ಅಭಿಮಾನಿಗಳು ಬೇಡಿಕೆ ಇಡುತ್ತಲೇ ಇದ್ದಾರೆ. ಆದ್ರೆ ಯಶ್​19 ಬಗ್ಗೆ ಯಾವುದೇ ಸುಳಿವಿಲ್ಲ. ಕೆಜಿಎಫ್​​ ಭಾಗ 2 ತೆರೆ ಕಂಡು ಒಂದು ವರ್ಷ ಕಳೆದರೂ ಯಶ್ ನಡೆ ಮಾತ್ರ ನಿಗೂಢ. ಹಾಗಾದ್ರೆ ಮುಂದಿನ ಸಿನಿಮಾ ಹೇಗಿರಬಹುದು ಎಂಬುದು ಹಲವರ ಕುತೂಹಲ. ಕೆಲವರಂತೂ ಯಶ್​ ನಡೆಗೆ ಅಸಮಾಧಾನ ಕೂಡಾ ವ್ಯಕ್ತಪಡಿಸಿದ್ದಾರೆ.

ಯಶ್ ಕನ್ನಡ ಚಿತ್ರರಂಗದಿಂದ ಬಾಲಿವುಡ್​ಗೆ ಹಾರಲಿದ್ದಾರೆ ಎಂಬ ವದಂತಿಯೂ ಇತ್ತೀಚೆಗೆ ಕೇಳಿಬಂದಿತ್ತು. ಆದ್ರೆ ಯಶ್ ನಟಿಸುತ್ತಿಲ್ಲ ಎಂಬ ಮಾಹಿತಿ ಸಿಕ್ಕ ನಂತರ ಕನ್ನಡಾಭಿಮಾನಿಗಳು ನಿಟ್ಟುಸಿರುಬಿಟ್ಟರು. ಯಶ್​ 19 ಕುರಿತು ಈವರೆಗೆ ಹಲವು ಊಹಾಪೋಹಗಳು ಬಂದು ಹೋಗಿದ್ದರೂ ಯಶ್​ ಅವರದ್ದು ಮಾತ್ರ ದಿವ್ಯಮೌನ. ತಮ್ಮ ಮುಂದಿನ ಸಿನಿಮಾ ಕುರಿತು ಅವರು ಬಾಯ್ಬಿಡುತ್ತಿಲ್ಲ. ಆದ್ರಿಂದು ಮೈಸೂರಿನಲ್ಲಿ ಯಶ್ ಉತ್ತರಿಸಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದರಿಂದ ಅವರು ಸಣ್ಣದೊಂದು ಸುಳಿವು ಬಿಟ್ಟುಕೊಟ್ಟರು.

ಯಶ್ ಇಂದು ಕುಟುಂಬಸಮೇತ ಪ್ರಸಿದ್ಧ ನಂಜುಡೇಶ್ವರನ ಸನ್ನಿಧಿಗೆ ಭೇಟಿ ಕೊಟ್ಟ ವೇಳೆ ಮುಂದಿನ ಸಿನಿಮಾ ಕುರಿತ ಪ್ರಶ್ನೆಗಳು ಎದುರಾದವು. ಸಮಾಧಾನದ ಸಂಗತಿಯೆಂದರೆ ಇಂದು ಯಶ್, "ಕಾದು ನೋಡಿ" ಎಂಬ ರೆಗ್ಯೂಲರ್ ಉತ್ತರಕ್ಕೆ ಸೀಮಿತವಾಗಿರದೇ ಕೆಲವು ಮಾಹಿತಿಯನ್ನೂ ಹಂಚಿಕೊಂಡರು. "ನಾನು ಎಲ್ಲಿಯೂ ಹೋಗಲ್ಲ (ಬಾಲಿವುಡ್​), ಎಲ್ಲರನ್ನೂ ನಾನು ಇರುವ ಕಡೆಗೆ ಕರೆಸಿಕೊಳ್ಳುತ್ತೇನೆ" ಎಂದುಬಿಟ್ಟರು.

ನಂಜುಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಯಶ್​, "ದೇವರ ಸನ್ನಿಧಿಯಲ್ಲಿ ಇದ್ದೇನೆ. ಸುಖಾ ಸುಮ್ಮನೆ ಹೇಳಿಕೆ ಕೊಡುವುದಿಲ್ಲ. ಒಂದಂತೂ ನಿಜ. ಜನರು ನಮಗೆ ಶಕ್ತಿ ಕೊಟ್ಟು ಬೆಳೆಸಿದ್ದಾರೆ, ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ನಾನು ನಂಬೋದು ಒಂದೇ, ಎಲ್ಲರೂ ದುಡ್ಡು ಕೊಟ್ಟು ಸಿನಿಮಾ ನೋಡ್ತಾರೆ. ಆ ದುಡ್ಡಿಗೊಂದು ವ್ಯಾಲ್ಯೂ ಇರಬೇಕು. ನಾವು ಮಾಡೋ ಕೆಲಸದಲ್ಲಿ ಶ್ರದ್ಧೆ ಇರಬೇಕು. ಇಡೀ ದೇಶ ಅಥವಾ ಇಡೀ ಜಗತ್ತು ನೋಡುತ್ತಿದೆ. ಆ ಜವಾಬ್ದಾರಿ ನನ್ನ ಮೇಲಿದೆ" ಎಂದು ತಿಳಿಸಿದರು.

ಇದನ್ನೂ ಓದಿ: 'ಸರ್ಕಸ್' ಮೂಲಕ ಅದೃಷ್ಟ ಪರೀಕ್ಷೆಗಿಳಿದ ತುಳುನಾಡಿನ ನಟ ರೂಪೇಶ್ ಶೆಟ್ಟಿ

ಮಾತು ಮುಂದುವರಿಸಿ, "ಬಹಳ ದಿನಗಳಿಂದ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ಖುಷಿ ಪಡುವ ರೀತಿ ಕೆಲಸ ಆಗುತ್ತದೆ. ಜನರು ಫ್ರೀಯಾಗಿ ಸಿನಿಮಾ ನೋಡೋ ಹಾಗಿದ್ದಿದ್ರೆ ನಮಗಿಷ್ಟ ಬಂದ ಹಾಗೆ ಮಾಡಬಹುದಿತ್ತು. ಆದ್ರೆ ಅವರೇ ನಮ್ಮನ್ನು ಬೆಳೆಸಿರುವುದು, ಅವರಿಗೆ ಖುಷಿ ಆಗೋ ರೀತಿ ಕೆಲಸ ಮಾಡಬೇಕು. ನಾನಂತೂ ಒಂದು ದಿನ, ಒಂದು ಕ್ಷಣವನ್ನೂ ವ್ಯರ್ಥ ಮಾಡಿಲ್ಲ. ಅಷ್ಟೊಂದು ಕೆಲಸ ಇದೆ, ಎಲ್ಲವೂ ಸುಗಮವಾಗಿ ನಡೆಯುತ್ತಿದೆ, ಆದಷ್ಟು ಬೇಗ ಸಿನಿಮಾದೊಂದಿಗೆ ಬರುತ್ತೇವೆ" ಎಂದು ಹೇಳಿದರು.

ಇದನ್ನೂ ಓದಿ: ಸ್ಕ್ರಿಪ್ಟ್ ರೆಡಿ, ಶೀಘ್ರವೇ ಸಿನಿಮಾ ಅನೌನ್ಸ್: ಬಾಲಿವುಡ್​ಗೆ ಹೋಗಲ್ಲ, ಎಲ್ಲರನ್ನೂ ಇಲ್ಲಿಗೆ ಕರೆಸಿಕೊಳ್ಳುತ್ತೇನೆಂದ ಯಶ್​​

ಯಶ್ ಕೊಟ್ಟಿರುವ ಈ ಮಾಹಿತಿ ಸದ್ಯ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ. ಉತ್ತಮ ಚಿತ್ರ ನೀಡಬೇಕೆಂಬ ಬದ್ಧತೆಯ ಮಾತು ಅಭಿಮಾನಿಗಳ ಅಭಿಮಾನವನ್ನು ಇನ್ನೂ ಏರಿಸಿತು. ಯಶ್ 19 ಹ್ಯಾಶ್‌ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ. ಯಶ್ ಹೇಳಿದಂತೆ ಅವರ ಮುಂದಿನ ಚಿತ್ರ ಕೆಜಿಎಫ್ ಅನ್ನು ಮೀರಿಸಲಿದೆಯೇ? ಕಾದು ನೋಡೋಣ.

#Yash19... ಇದು ಸಾಮಾಜಿಕ ಜಾಲತಾಣದಲ್ಲಿ ಬಹು ಸಮಯದಿಂದ ಟ್ರೆಂಡ್​ನಲ್ಲಿರುವ ನಟ ಯಶ್‌ ಹೆಸರಿನ ಕೀವರ್ಡ್‌. ಕನ್ನಡ ಚಿತ್ರರಂಗದ ರಾಕಿಂಗ್​ ಸ್ಟಾರ್ ಖ್ಯಾತಿಯ ಯಶ್​ ಅವರ ಮುಂದಿನ ಸಿನಿಮಾ ಎಂಬ ಬಗ್ಗೆ ಅಂತೆಕಂತೆಗಳು ಸಾಕಷ್ಟು ಉರುಳಿ ಹೋಗಿವೆ. ಬೇಗ ಅಪ್​​ಡೇಟ್ಸ್ ಕೊಡುವಂತೆ ಅಭಿಮಾನಿಗಳು ಬೇಡಿಕೆ ಇಡುತ್ತಲೇ ಇದ್ದಾರೆ. ಆದ್ರೆ ಯಶ್​19 ಬಗ್ಗೆ ಯಾವುದೇ ಸುಳಿವಿಲ್ಲ. ಕೆಜಿಎಫ್​​ ಭಾಗ 2 ತೆರೆ ಕಂಡು ಒಂದು ವರ್ಷ ಕಳೆದರೂ ಯಶ್ ನಡೆ ಮಾತ್ರ ನಿಗೂಢ. ಹಾಗಾದ್ರೆ ಮುಂದಿನ ಸಿನಿಮಾ ಹೇಗಿರಬಹುದು ಎಂಬುದು ಹಲವರ ಕುತೂಹಲ. ಕೆಲವರಂತೂ ಯಶ್​ ನಡೆಗೆ ಅಸಮಾಧಾನ ಕೂಡಾ ವ್ಯಕ್ತಪಡಿಸಿದ್ದಾರೆ.

ಯಶ್ ಕನ್ನಡ ಚಿತ್ರರಂಗದಿಂದ ಬಾಲಿವುಡ್​ಗೆ ಹಾರಲಿದ್ದಾರೆ ಎಂಬ ವದಂತಿಯೂ ಇತ್ತೀಚೆಗೆ ಕೇಳಿಬಂದಿತ್ತು. ಆದ್ರೆ ಯಶ್ ನಟಿಸುತ್ತಿಲ್ಲ ಎಂಬ ಮಾಹಿತಿ ಸಿಕ್ಕ ನಂತರ ಕನ್ನಡಾಭಿಮಾನಿಗಳು ನಿಟ್ಟುಸಿರುಬಿಟ್ಟರು. ಯಶ್​ 19 ಕುರಿತು ಈವರೆಗೆ ಹಲವು ಊಹಾಪೋಹಗಳು ಬಂದು ಹೋಗಿದ್ದರೂ ಯಶ್​ ಅವರದ್ದು ಮಾತ್ರ ದಿವ್ಯಮೌನ. ತಮ್ಮ ಮುಂದಿನ ಸಿನಿಮಾ ಕುರಿತು ಅವರು ಬಾಯ್ಬಿಡುತ್ತಿಲ್ಲ. ಆದ್ರಿಂದು ಮೈಸೂರಿನಲ್ಲಿ ಯಶ್ ಉತ್ತರಿಸಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದರಿಂದ ಅವರು ಸಣ್ಣದೊಂದು ಸುಳಿವು ಬಿಟ್ಟುಕೊಟ್ಟರು.

ಯಶ್ ಇಂದು ಕುಟುಂಬಸಮೇತ ಪ್ರಸಿದ್ಧ ನಂಜುಡೇಶ್ವರನ ಸನ್ನಿಧಿಗೆ ಭೇಟಿ ಕೊಟ್ಟ ವೇಳೆ ಮುಂದಿನ ಸಿನಿಮಾ ಕುರಿತ ಪ್ರಶ್ನೆಗಳು ಎದುರಾದವು. ಸಮಾಧಾನದ ಸಂಗತಿಯೆಂದರೆ ಇಂದು ಯಶ್, "ಕಾದು ನೋಡಿ" ಎಂಬ ರೆಗ್ಯೂಲರ್ ಉತ್ತರಕ್ಕೆ ಸೀಮಿತವಾಗಿರದೇ ಕೆಲವು ಮಾಹಿತಿಯನ್ನೂ ಹಂಚಿಕೊಂಡರು. "ನಾನು ಎಲ್ಲಿಯೂ ಹೋಗಲ್ಲ (ಬಾಲಿವುಡ್​), ಎಲ್ಲರನ್ನೂ ನಾನು ಇರುವ ಕಡೆಗೆ ಕರೆಸಿಕೊಳ್ಳುತ್ತೇನೆ" ಎಂದುಬಿಟ್ಟರು.

ನಂಜುಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಯಶ್​, "ದೇವರ ಸನ್ನಿಧಿಯಲ್ಲಿ ಇದ್ದೇನೆ. ಸುಖಾ ಸುಮ್ಮನೆ ಹೇಳಿಕೆ ಕೊಡುವುದಿಲ್ಲ. ಒಂದಂತೂ ನಿಜ. ಜನರು ನಮಗೆ ಶಕ್ತಿ ಕೊಟ್ಟು ಬೆಳೆಸಿದ್ದಾರೆ, ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ನಾನು ನಂಬೋದು ಒಂದೇ, ಎಲ್ಲರೂ ದುಡ್ಡು ಕೊಟ್ಟು ಸಿನಿಮಾ ನೋಡ್ತಾರೆ. ಆ ದುಡ್ಡಿಗೊಂದು ವ್ಯಾಲ್ಯೂ ಇರಬೇಕು. ನಾವು ಮಾಡೋ ಕೆಲಸದಲ್ಲಿ ಶ್ರದ್ಧೆ ಇರಬೇಕು. ಇಡೀ ದೇಶ ಅಥವಾ ಇಡೀ ಜಗತ್ತು ನೋಡುತ್ತಿದೆ. ಆ ಜವಾಬ್ದಾರಿ ನನ್ನ ಮೇಲಿದೆ" ಎಂದು ತಿಳಿಸಿದರು.

ಇದನ್ನೂ ಓದಿ: 'ಸರ್ಕಸ್' ಮೂಲಕ ಅದೃಷ್ಟ ಪರೀಕ್ಷೆಗಿಳಿದ ತುಳುನಾಡಿನ ನಟ ರೂಪೇಶ್ ಶೆಟ್ಟಿ

ಮಾತು ಮುಂದುವರಿಸಿ, "ಬಹಳ ದಿನಗಳಿಂದ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ಖುಷಿ ಪಡುವ ರೀತಿ ಕೆಲಸ ಆಗುತ್ತದೆ. ಜನರು ಫ್ರೀಯಾಗಿ ಸಿನಿಮಾ ನೋಡೋ ಹಾಗಿದ್ದಿದ್ರೆ ನಮಗಿಷ್ಟ ಬಂದ ಹಾಗೆ ಮಾಡಬಹುದಿತ್ತು. ಆದ್ರೆ ಅವರೇ ನಮ್ಮನ್ನು ಬೆಳೆಸಿರುವುದು, ಅವರಿಗೆ ಖುಷಿ ಆಗೋ ರೀತಿ ಕೆಲಸ ಮಾಡಬೇಕು. ನಾನಂತೂ ಒಂದು ದಿನ, ಒಂದು ಕ್ಷಣವನ್ನೂ ವ್ಯರ್ಥ ಮಾಡಿಲ್ಲ. ಅಷ್ಟೊಂದು ಕೆಲಸ ಇದೆ, ಎಲ್ಲವೂ ಸುಗಮವಾಗಿ ನಡೆಯುತ್ತಿದೆ, ಆದಷ್ಟು ಬೇಗ ಸಿನಿಮಾದೊಂದಿಗೆ ಬರುತ್ತೇವೆ" ಎಂದು ಹೇಳಿದರು.

ಇದನ್ನೂ ಓದಿ: ಸ್ಕ್ರಿಪ್ಟ್ ರೆಡಿ, ಶೀಘ್ರವೇ ಸಿನಿಮಾ ಅನೌನ್ಸ್: ಬಾಲಿವುಡ್​ಗೆ ಹೋಗಲ್ಲ, ಎಲ್ಲರನ್ನೂ ಇಲ್ಲಿಗೆ ಕರೆಸಿಕೊಳ್ಳುತ್ತೇನೆಂದ ಯಶ್​​

ಯಶ್ ಕೊಟ್ಟಿರುವ ಈ ಮಾಹಿತಿ ಸದ್ಯ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ. ಉತ್ತಮ ಚಿತ್ರ ನೀಡಬೇಕೆಂಬ ಬದ್ಧತೆಯ ಮಾತು ಅಭಿಮಾನಿಗಳ ಅಭಿಮಾನವನ್ನು ಇನ್ನೂ ಏರಿಸಿತು. ಯಶ್ 19 ಹ್ಯಾಶ್‌ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ. ಯಶ್ ಹೇಳಿದಂತೆ ಅವರ ಮುಂದಿನ ಚಿತ್ರ ಕೆಜಿಎಫ್ ಅನ್ನು ಮೀರಿಸಲಿದೆಯೇ? ಕಾದು ನೋಡೋಣ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.