ETV Bharat / entertainment

ಕಿಚ್ಚ ಸುದೀಪ್​ ಹುಟ್ಟುಹಬ್ಬಕ್ಕೆ ನಿರ್ದೇಶಕ ಆರ್​.ಚಂದ್ರು ಬಿಗ್​ ಸರ್​ಪ್ರೈಸ್​!

author img

By ETV Bharat Karnataka Team

Published : Sep 1, 2023, 5:33 PM IST

Kiccha Sudeep next movie: ಸೂಪರ್​ ಹಿಟ್​ ಚಿತ್ರಗಳ ಕಥೆಗಾರ ವಿ.ವಿಜಯೇಂದ್ರ ಪ್ರಸಾದ್, ಪ್ಯಾನ್​ ಇಂಡಿಯಾ ನಿರ್ದೇಶಕ ಆರ್​.ಚಂದ್ರು ಮತ್ತು ಕಿಚ್ಚ ಸುದೀಪ್​ ಕಾಂಬೋದಲ್ಲಿ ಹೊಸ ಸಿನಿಮಾ ರೂಪುಗೊಳ್ಳುತ್ತಿದೆ.

ಕಿಚ್ಚ ಸುದೀಪ್​ ಹುಟ್ಟುಹಬ್ಬಕ್ಕೆ ನಿರ್ದೇಶಕ ಆರ್​.ಚಂದ್ರ ಕೊಟ್ರು ಬಿಗ್​ ಸರ್​ಪ್ರೈಸ್​!
birthday gift for kiccha sudeep from director R Chandru

ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಮಗಧೀರ, ಬಾಹುಬಲಿ, ಆರ್​ಆರ್​ಆರ್​ನಂತಹ ಸೂಪರ್​ ಹಿಟ್​ ಚಿತ್ರಗಳ ಕಥೆಗಾರ ವಿ.ವಿಜಯೇಂದ್ರ ಪ್ರಸಾದ್. ಪ್ಯಾನ್​ ಇಂಡಿಯಾ ಎಂಬ ಪರಿಕಲ್ಪನೆ ಹುಟ್ಟುಹಾಕಿದ ಎಸ್​.ಎಸ್.ರಾಜಮೌಳಿ ಅವರ ಎಲ್ಲಾ ಚಿತ್ರಗಳಿಗೆ ಸ್ಕ್ರಿಪ್ಟ್​ ರೈಟರ್​ ಆಗಿರುವ ಇವರು ಕನ್ನಡದ ಪ್ರತಿಷ್ಠಿತ ಆರ್​.ಸಿ.ಸ್ಟುಡಿಯೋಸ್ ಸಂಸ್ಥೆಯ ಚೊಚ್ಚಲ ಚಿತ್ರಕ್ಕೆ ಸ್ಕ್ರಿಪ್ಟ್​ ಸೂಪರ್‌ ವೈಸ್​ ಮಾಡಿದ್ದಾರೆ. ಈ ಸಿನಿಮಾಗೆ ನಿರ್ದೇಶಕ ಆರ್​.ಚಂದ್ರು ಆ್ಯಕ್ಷನ್​ ಕಟ್​ ಹೇಳುತ್ತಿದ್ದು, ಸುದೀಪ್​ ನಾಯಕ ನಟನಾಗಿ ಅಭಿನಯಿಸಲಿದ್ದಾರೆ.

ಪ್ಯಾನ್​ ಇಂಡಿಯಾ ಮಟ್ಟದಲ್ಲಿ 'ಕಬ್ಜ' ಚಿತ್ರವನ್ನು ಸಕ್ಸಸ್ ಮಾಡಿದ ನಿರ್ದೇಶಕ ಆರ್​.ಚಂದ್ರು. ಈ ಚಿತ್ರದಲ್ಲಿ ಕಿಚ್ಚ ಸುದೀಪ್​ ಸೂಪರ್​ ಕಾಪ್​ ಆಗಿ ಅಭಿನಯಿಸಿದ್ದರು. ಇದೀಗ ನಿರ್ದೇಶಕ ಆರ್.ಚಂದ್ರು ಅವರು ಸುದೀಪ್​ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಈ ಮೂವರು ದಿಗ್ಗಜರು ಒಂದಾಗಿ ಮಾಡುತ್ತಿರುವ ಚಿತ್ರಕ್ಕೆ ಇಡೀ ಭಾರತೀಯ ಸಿನಿಪ್ರೇಮಿಗಳು ಕಾತುರದಿಂದ ಎದುರು ನೋಡುತ್ತಿದ್ದು, ಈ ವರ್ಷದ ಮೆಗಾ ಹಿಟ್​ ಚಿತ್ರವೆಂದೇ ಹೇಳಲಾಗುತ್ತಿದೆ.

ಆರ್​.ಸಿ.ಸ್ಟುಡಿಯೋಸ್​ ಕರ್ನಾಟಕದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿದ್ದು, 5 ದೊಡ್ಡ ಚಿತ್ರಗಳಿಗೆ ಈ ವರ್ಷ ಚಾಲನೆ ದೊರೆಯಲಿದೆ. ಆರ್​.ಸಿ.ಸ್ಟುಡಿಯೋಸ್​ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆಗೊಳಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕಿಚ್ಚನ ಹುಟ್ಟುಹಬ್ಬವಾದ ಸೆಪ್ಟೆಂಬರ್​ 2ರಂದು (ನಾಳೆ) ಅಧಿಕೃತ ಘೋಷಣೆಯಾಗಲಿದೆ.

ಇದನ್ನೂ ಓದಿ: ಅರಸು ಕ್ರಿಯೇಷನ್ಸ್ ವತಿಯಿಂದ ಸುದೀಪ್​ 50ನೇ ಜನ್ಮೋತ್ಸವಕ್ಕೆ ವಿಶೇಷ ಉಡುಗೊರೆ!

ವಿ.ವಿಜಯೇಂದ್ರ ಪ್ರಸಾದ್​ ಅವರ ಸ್ಕ್ರಿಪ್ಟ್​ ಸೂಪರ್​ ವೈಸಿಂಗ್​, ಕಿಚ್ಚ ಸುದೀಪ್​ ನಟನೆ ಮತ್ತು ಆರ್.ಚಂದ್ರು ನಿರ್ದೇಶನದಲ್ಲಿ ಅದ್ಭುತ ಸಿನಿಮಾವೊಂದು ಮೂಡಿಬರುತ್ತಿರುವುದು ಪಕ್ಕಾ. ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಇದೂ ಒಂದು. ವಿಜಯೇಂದ್ರ ಪ್ರಸಾದ್​ ಈವರೆಗೆ 25ಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ ಬರೆದಿದ್ದು, ಎಲ್ಲಾ ಚಿತ್ರಗಳು ಕೂಡ ಕಮರ್ಷಿಯಲ್​ ಸಕ್ಸಸ್​ ಕಂಡಿವೆ. ಆಂಧ್ರದ ಪ್ರತಿಷ್ಠಿತ ನಂದಿ ಮತ್ತು ಫಿಲಂ ಫೇರ್​ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ.

ಆರ್​.ಸಿ.ಸ್ಟುಡಿಯೋಸ್​ ಸಂಸ್ಥೆಯು ಬಹುಕೋಟಿ ವೆಚ್ಚದಲ್ಲಿ ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಪ್ಯಾನ್​ ಇಂಡಿಯಾ ಕಾನ್ಸೆಪ್ಟ್​​ ಮುರಿದು ಗ್ಲೋಬಲ್​ ಮೂವಿ ಕಾನ್ಸೆಪ್ಟ್​ನೊಂದಿಗೆ ಇಂಡಿಯನ್​ ಹ್ಯೂಜ್​ ಬಜೆಟ್​ ಚಿತ್ರವಾಗಲಿದೆ. ಈ ಮೂಲಕ ಆರ್​.ಸಿ.ಸ್ಟುಡಿಯೋಸ್​ ಸಂಸ್ಥೆ ಕೂಡ ಗ್ಲೋಬಲ್​ ಸಂಸ್ಥೆಯಾಗಿ ಯುವ, ಪ್ರತಿಭಾವಂತ ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿದೆ. ಈ ಮೂವರು ದಿಗ್ಗಜರ ಸಮಾಗಮವು ಮುಂದಿನ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗಲಿದೆ. ದೊಡ್ಡ ಮಟ್ಟದಲ್ಲೇ ಚಿತ್ರ ನಿರ್ಮಾಣಕ್ಕೆ ಪ್ಲ್ಯಾನ್​ ಮಾಡಲಾಗುತ್ತಿದೆ.

ಇದನ್ನೂ ಓದಿ: 'ಕನ್ನಡದ ಅತ್ಯುತ್ತಮ ಪ್ರೇಮಕಾವ್ಯಗಳಲ್ಲೊಂದು': ಸಪ್ತಸಾಗರದಾಚೆ ಎಲ್ಲೋ ಸಿನಿಮಾಗೆ ರಿಷಬ್​ ಶೆಟ್ಟಿ ಮೆಚ್ಚುಗೆ

ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಮಗಧೀರ, ಬಾಹುಬಲಿ, ಆರ್​ಆರ್​ಆರ್​ನಂತಹ ಸೂಪರ್​ ಹಿಟ್​ ಚಿತ್ರಗಳ ಕಥೆಗಾರ ವಿ.ವಿಜಯೇಂದ್ರ ಪ್ರಸಾದ್. ಪ್ಯಾನ್​ ಇಂಡಿಯಾ ಎಂಬ ಪರಿಕಲ್ಪನೆ ಹುಟ್ಟುಹಾಕಿದ ಎಸ್​.ಎಸ್.ರಾಜಮೌಳಿ ಅವರ ಎಲ್ಲಾ ಚಿತ್ರಗಳಿಗೆ ಸ್ಕ್ರಿಪ್ಟ್​ ರೈಟರ್​ ಆಗಿರುವ ಇವರು ಕನ್ನಡದ ಪ್ರತಿಷ್ಠಿತ ಆರ್​.ಸಿ.ಸ್ಟುಡಿಯೋಸ್ ಸಂಸ್ಥೆಯ ಚೊಚ್ಚಲ ಚಿತ್ರಕ್ಕೆ ಸ್ಕ್ರಿಪ್ಟ್​ ಸೂಪರ್‌ ವೈಸ್​ ಮಾಡಿದ್ದಾರೆ. ಈ ಸಿನಿಮಾಗೆ ನಿರ್ದೇಶಕ ಆರ್​.ಚಂದ್ರು ಆ್ಯಕ್ಷನ್​ ಕಟ್​ ಹೇಳುತ್ತಿದ್ದು, ಸುದೀಪ್​ ನಾಯಕ ನಟನಾಗಿ ಅಭಿನಯಿಸಲಿದ್ದಾರೆ.

ಪ್ಯಾನ್​ ಇಂಡಿಯಾ ಮಟ್ಟದಲ್ಲಿ 'ಕಬ್ಜ' ಚಿತ್ರವನ್ನು ಸಕ್ಸಸ್ ಮಾಡಿದ ನಿರ್ದೇಶಕ ಆರ್​.ಚಂದ್ರು. ಈ ಚಿತ್ರದಲ್ಲಿ ಕಿಚ್ಚ ಸುದೀಪ್​ ಸೂಪರ್​ ಕಾಪ್​ ಆಗಿ ಅಭಿನಯಿಸಿದ್ದರು. ಇದೀಗ ನಿರ್ದೇಶಕ ಆರ್.ಚಂದ್ರು ಅವರು ಸುದೀಪ್​ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಈ ಮೂವರು ದಿಗ್ಗಜರು ಒಂದಾಗಿ ಮಾಡುತ್ತಿರುವ ಚಿತ್ರಕ್ಕೆ ಇಡೀ ಭಾರತೀಯ ಸಿನಿಪ್ರೇಮಿಗಳು ಕಾತುರದಿಂದ ಎದುರು ನೋಡುತ್ತಿದ್ದು, ಈ ವರ್ಷದ ಮೆಗಾ ಹಿಟ್​ ಚಿತ್ರವೆಂದೇ ಹೇಳಲಾಗುತ್ತಿದೆ.

ಆರ್​.ಸಿ.ಸ್ಟುಡಿಯೋಸ್​ ಕರ್ನಾಟಕದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿದ್ದು, 5 ದೊಡ್ಡ ಚಿತ್ರಗಳಿಗೆ ಈ ವರ್ಷ ಚಾಲನೆ ದೊರೆಯಲಿದೆ. ಆರ್​.ಸಿ.ಸ್ಟುಡಿಯೋಸ್​ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆಗೊಳಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕಿಚ್ಚನ ಹುಟ್ಟುಹಬ್ಬವಾದ ಸೆಪ್ಟೆಂಬರ್​ 2ರಂದು (ನಾಳೆ) ಅಧಿಕೃತ ಘೋಷಣೆಯಾಗಲಿದೆ.

ಇದನ್ನೂ ಓದಿ: ಅರಸು ಕ್ರಿಯೇಷನ್ಸ್ ವತಿಯಿಂದ ಸುದೀಪ್​ 50ನೇ ಜನ್ಮೋತ್ಸವಕ್ಕೆ ವಿಶೇಷ ಉಡುಗೊರೆ!

ವಿ.ವಿಜಯೇಂದ್ರ ಪ್ರಸಾದ್​ ಅವರ ಸ್ಕ್ರಿಪ್ಟ್​ ಸೂಪರ್​ ವೈಸಿಂಗ್​, ಕಿಚ್ಚ ಸುದೀಪ್​ ನಟನೆ ಮತ್ತು ಆರ್.ಚಂದ್ರು ನಿರ್ದೇಶನದಲ್ಲಿ ಅದ್ಭುತ ಸಿನಿಮಾವೊಂದು ಮೂಡಿಬರುತ್ತಿರುವುದು ಪಕ್ಕಾ. ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಇದೂ ಒಂದು. ವಿಜಯೇಂದ್ರ ಪ್ರಸಾದ್​ ಈವರೆಗೆ 25ಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ ಬರೆದಿದ್ದು, ಎಲ್ಲಾ ಚಿತ್ರಗಳು ಕೂಡ ಕಮರ್ಷಿಯಲ್​ ಸಕ್ಸಸ್​ ಕಂಡಿವೆ. ಆಂಧ್ರದ ಪ್ರತಿಷ್ಠಿತ ನಂದಿ ಮತ್ತು ಫಿಲಂ ಫೇರ್​ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ.

ಆರ್​.ಸಿ.ಸ್ಟುಡಿಯೋಸ್​ ಸಂಸ್ಥೆಯು ಬಹುಕೋಟಿ ವೆಚ್ಚದಲ್ಲಿ ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಪ್ಯಾನ್​ ಇಂಡಿಯಾ ಕಾನ್ಸೆಪ್ಟ್​​ ಮುರಿದು ಗ್ಲೋಬಲ್​ ಮೂವಿ ಕಾನ್ಸೆಪ್ಟ್​ನೊಂದಿಗೆ ಇಂಡಿಯನ್​ ಹ್ಯೂಜ್​ ಬಜೆಟ್​ ಚಿತ್ರವಾಗಲಿದೆ. ಈ ಮೂಲಕ ಆರ್​.ಸಿ.ಸ್ಟುಡಿಯೋಸ್​ ಸಂಸ್ಥೆ ಕೂಡ ಗ್ಲೋಬಲ್​ ಸಂಸ್ಥೆಯಾಗಿ ಯುವ, ಪ್ರತಿಭಾವಂತ ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿದೆ. ಈ ಮೂವರು ದಿಗ್ಗಜರ ಸಮಾಗಮವು ಮುಂದಿನ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗಲಿದೆ. ದೊಡ್ಡ ಮಟ್ಟದಲ್ಲೇ ಚಿತ್ರ ನಿರ್ಮಾಣಕ್ಕೆ ಪ್ಲ್ಯಾನ್​ ಮಾಡಲಾಗುತ್ತಿದೆ.

ಇದನ್ನೂ ಓದಿ: 'ಕನ್ನಡದ ಅತ್ಯುತ್ತಮ ಪ್ರೇಮಕಾವ್ಯಗಳಲ್ಲೊಂದು': ಸಪ್ತಸಾಗರದಾಚೆ ಎಲ್ಲೋ ಸಿನಿಮಾಗೆ ರಿಷಬ್​ ಶೆಟ್ಟಿ ಮೆಚ್ಚುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.