ETV Bharat / entertainment

ಕಡಲೂರ ಕಣ್ಮಣಿ ಚಿತ್ರದ ಟೀಸರ್ ರಿಲೀಸ್....ದಸರಾಕ್ಕೆ ತೆರೆಕಾಣಲು ಸಜ್ಜು

author img

By

Published : Aug 16, 2022, 12:03 PM IST

ಕಡಲೂರ ಕಣ್ಮಣಿ ಟೀಸರ್ ಹಾಗು ಹಾಡುಗಳನ್ನು ನಟ ವಿರಾಟ್ ಅನಾವರಣ ಮಾಡುವ ಮೂಲಕ‌ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು.

kadaloora Kanmani teaser released
ಕಡಲೂರ ಕಣ್ಮಣಿ ಚಿತ್ರದ ಟೀಸರ್ ರಿಲೀಸ್

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರಿಂದ‌ ಹಿಡಿದು ಯುವ ನಟರವರೆಗೂ ಹೊಸ ಪ್ರತಿಭೆಗಳ ಸಿನಿಮಾಗಳಿಗೆ ಸಪೋರ್ಟ್ ಮಾಡುವ ಉತ್ತಮ ವಾತಾವರಣವಿದೆ. ಈ ಮಾತಿಗೆ ಪೂರಕವಾಗಿ ಯುವ ನಟ ಅರ್ಜುನ್ ನಗರ್ಕರ್ ಅಭಿನಯದ ಹಾಗೂ ರಾಮ್ ಪ್ರಸನ್ನ ಹುಣಸೂರು ನಿರ್ದೇಶನದ ಕಡಲೂರ ಕಣ್ಮಣಿ ಚಿತ್ರಕ್ಕೆ ಕಿಸ್ ಚಿತ್ರದ ನಟ ವಿರಾಟ್ ಸಾಥ್ ನೀಡಿದ್ದಾರೆ. ಕಡಲೂರ ಕಣ್ಮಣಿ ಚಿತ್ರದ ಟೀಸರ್ ಹಾಗು ಹಾಡುಗಳನ್ನು ನಟ ವಿರಾಟ್ ಅನಾವರಣ ಮಾಡುವ ಮೂಲಕ‌ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು. ಬಹುಭಾಷಾ ನಟಿ ನೇಹಾ ಸಕ್ಸೇನಾ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

‌ನಿರ್ದೇಶಕ‌ ರಾಮ್ ಪ್ರಸನ್ನ ಹುಣಸೂರು ಮಾತನಾಡಿ, ಕಡಲೂರ ಕಣ್ಮಣಿ ಎಂದರೆ ವಜ್ರ ಎಂದು ನಾನು ಹಿಂದೆಯೇ ತಿಳಿಸಿದ್ದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ದಸರಾ ಹಬ್ಬಕ್ಕೆ ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ವಿರಾಟ್ ಅವರಿಗೆ ಹಾಗೂ‌ ಚಿತ್ರಕ್ಕೆ ಬಂಡಾವಳ ಹೂಡಿರುವ ನಿರ್ಮಾಪಕರಿಗೆ ನನ್ನ ಕೃತಜ್ಞತೆಗಳು ಎಂದರು.

  • " class="align-text-top noRightClick twitterSection" data="">

ಯುವ ನಟ ಅರ್ಜುನ್ ನಗರ್ಕರ್ ಮಾತನಾಡಿ, ಶಿರಸಿಯಿಂದ ಹಲವು ಕನಸುಗಳನ್ನು ಹೊತ್ತು ಬಂದವನು ನಾನು. ನನ್ನ ಕನಸಿಗೆ ಆಸರೆಯಾದವರು ನಿರ್ದೇಶಕ ರಾಮ್ ಪ್ರಸನ್ನ ಹುಣಸೂರು. ಇಬ್ಬರ ಕನಸು ಸೇರಿ ಈ ಚಿತ್ರವಾಗಿದೆ ಎಂದು ತಿಳಿಸಿದರು. ನಟಿ ನಿಶಾಯಾಲಿನಿ ಮಾತನಾಡಿ, ಇದು ನನ್ನ ಮೊದಲ ಸಿನಿಮಾ. ಅಂಜು ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಿಮ್ಮೆಲ್ಲರಿಗೂ ನನ್ನ ಪಾತ್ರ ಹಾಗೂ ಚಿತ್ರ ಹಿಡಿಸುತ್ತದೆ ಎಂಬ ಭರವಸೆಯಿದೆ ಎಂದು ತಿಳಿಸಿದರು.

ಇದನ್ನೂ ಓದಿ: NTR 31 Movie Update... ಶೂಟಿಂಗ್​ ಆರಂಭ ಯಾವಾಗ ಎಂಬುದರ ಬಗ್ಗೆ ಹೇಳಿದ ಡೈರೆಕ್ಟರ್​ ಪ್ರಶಾಂತ್​ ನೀಲ್​

ನಿರ್ಮಾಪಕ ವಿನೋದ್ ರಾಮ್,‌ ಶೈಲೇಶ್ ಆರ್ ಪೂಜಾರಿ ಹಾಗೂ ಬಸವರಾಜ ಗಜ್ಜಿ ಕಡಲೂರ ಕಣ್ಮಣಿ ಸಿನಿಮಾಕ್ಕೆ ಹಣ ಹಾಕಿದ್ದಾರೆ. ಈ ಚಿತ್ರಕ್ಕೆ ಆರ್.ಪಿ ಸಂಗೀತ ನೀಡಿದ್ದಾರೆ. ಸದ್ಯ ಟೀಸರ್​ನಿಂದ ಗಮನ ಸೆಳೆಯುತ್ತಿರೋ ಕಡಲೂರ ಕಣ್ಮಣಿ ಸಿನಿಮಾ ದಸರಾಕ್ಕೆ ಬಿಡುಗಡೆಗೆ ಸಜ್ಜಾಗಿದೆ.

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರಿಂದ‌ ಹಿಡಿದು ಯುವ ನಟರವರೆಗೂ ಹೊಸ ಪ್ರತಿಭೆಗಳ ಸಿನಿಮಾಗಳಿಗೆ ಸಪೋರ್ಟ್ ಮಾಡುವ ಉತ್ತಮ ವಾತಾವರಣವಿದೆ. ಈ ಮಾತಿಗೆ ಪೂರಕವಾಗಿ ಯುವ ನಟ ಅರ್ಜುನ್ ನಗರ್ಕರ್ ಅಭಿನಯದ ಹಾಗೂ ರಾಮ್ ಪ್ರಸನ್ನ ಹುಣಸೂರು ನಿರ್ದೇಶನದ ಕಡಲೂರ ಕಣ್ಮಣಿ ಚಿತ್ರಕ್ಕೆ ಕಿಸ್ ಚಿತ್ರದ ನಟ ವಿರಾಟ್ ಸಾಥ್ ನೀಡಿದ್ದಾರೆ. ಕಡಲೂರ ಕಣ್ಮಣಿ ಚಿತ್ರದ ಟೀಸರ್ ಹಾಗು ಹಾಡುಗಳನ್ನು ನಟ ವಿರಾಟ್ ಅನಾವರಣ ಮಾಡುವ ಮೂಲಕ‌ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು. ಬಹುಭಾಷಾ ನಟಿ ನೇಹಾ ಸಕ್ಸೇನಾ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

‌ನಿರ್ದೇಶಕ‌ ರಾಮ್ ಪ್ರಸನ್ನ ಹುಣಸೂರು ಮಾತನಾಡಿ, ಕಡಲೂರ ಕಣ್ಮಣಿ ಎಂದರೆ ವಜ್ರ ಎಂದು ನಾನು ಹಿಂದೆಯೇ ತಿಳಿಸಿದ್ದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ದಸರಾ ಹಬ್ಬಕ್ಕೆ ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ವಿರಾಟ್ ಅವರಿಗೆ ಹಾಗೂ‌ ಚಿತ್ರಕ್ಕೆ ಬಂಡಾವಳ ಹೂಡಿರುವ ನಿರ್ಮಾಪಕರಿಗೆ ನನ್ನ ಕೃತಜ್ಞತೆಗಳು ಎಂದರು.

  • " class="align-text-top noRightClick twitterSection" data="">

ಯುವ ನಟ ಅರ್ಜುನ್ ನಗರ್ಕರ್ ಮಾತನಾಡಿ, ಶಿರಸಿಯಿಂದ ಹಲವು ಕನಸುಗಳನ್ನು ಹೊತ್ತು ಬಂದವನು ನಾನು. ನನ್ನ ಕನಸಿಗೆ ಆಸರೆಯಾದವರು ನಿರ್ದೇಶಕ ರಾಮ್ ಪ್ರಸನ್ನ ಹುಣಸೂರು. ಇಬ್ಬರ ಕನಸು ಸೇರಿ ಈ ಚಿತ್ರವಾಗಿದೆ ಎಂದು ತಿಳಿಸಿದರು. ನಟಿ ನಿಶಾಯಾಲಿನಿ ಮಾತನಾಡಿ, ಇದು ನನ್ನ ಮೊದಲ ಸಿನಿಮಾ. ಅಂಜು ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಿಮ್ಮೆಲ್ಲರಿಗೂ ನನ್ನ ಪಾತ್ರ ಹಾಗೂ ಚಿತ್ರ ಹಿಡಿಸುತ್ತದೆ ಎಂಬ ಭರವಸೆಯಿದೆ ಎಂದು ತಿಳಿಸಿದರು.

ಇದನ್ನೂ ಓದಿ: NTR 31 Movie Update... ಶೂಟಿಂಗ್​ ಆರಂಭ ಯಾವಾಗ ಎಂಬುದರ ಬಗ್ಗೆ ಹೇಳಿದ ಡೈರೆಕ್ಟರ್​ ಪ್ರಶಾಂತ್​ ನೀಲ್​

ನಿರ್ಮಾಪಕ ವಿನೋದ್ ರಾಮ್,‌ ಶೈಲೇಶ್ ಆರ್ ಪೂಜಾರಿ ಹಾಗೂ ಬಸವರಾಜ ಗಜ್ಜಿ ಕಡಲೂರ ಕಣ್ಮಣಿ ಸಿನಿಮಾಕ್ಕೆ ಹಣ ಹಾಕಿದ್ದಾರೆ. ಈ ಚಿತ್ರಕ್ಕೆ ಆರ್.ಪಿ ಸಂಗೀತ ನೀಡಿದ್ದಾರೆ. ಸದ್ಯ ಟೀಸರ್​ನಿಂದ ಗಮನ ಸೆಳೆಯುತ್ತಿರೋ ಕಡಲೂರ ಕಣ್ಮಣಿ ಸಿನಿಮಾ ದಸರಾಕ್ಕೆ ಬಿಡುಗಡೆಗೆ ಸಜ್ಜಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.