ETV Bharat / entertainment

ಭಾರತದಲ್ಲಿ ಹೆದರಲಿಲ್ಲ, ಪಾಕ್​ನಲ್ಲೇಕೆ ಭಯಪಡಲಿ: ಜಾವೇದ್ ಅಖ್ತರ್

author img

By

Published : Feb 25, 2023, 7:59 PM IST

ಜಾವೇದ್ ಅಖ್ತರ್ ಅವರು ಪಾಕ್​​​ ನಡೆಯನ್ನು ಬಹಿರಂಗವಾಗಿಯೇ ಪಾಕ್​​ ನೆಲದಲ್ಲೇ ಟೀಕಿಸಿದ್ದರು. ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆಗುತ್ತಿದ್ದು, ಈ ಕುರಿತು ಸ್ವತಃ ಜಾವೇದ್ ಅಖ್ತರ್ ಪ್ರತಿಕ್ರಿಯಿಸಿದ್ದಾರೆ.

Javed Akhtar
ಜಾವೇದ್ ಅಖ್ತರ್

ಇತ್ತೀಚೆಗೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ ಫೈಜ್ ಉತ್ಸವದಲ್ಲಿ ಭಾರತದ ಖ್ಯಾತ ಕವಿ, ಗೀತೆ ರಚನೆಕಾರ ಜಾವೇದ್ ಅಖ್ತರ್ ಪಾಲ್ಗೊಂಡು ಪಾಕ್​ ಬಗ್ಗೆ ಹೇಳಿಕೆ ನೀಡಿದ್ದರು. 26/11ರ ಮುಂಬೈ ದಾಳಿಯ ಕುರಿತಾಗಿ ಭಾರತೀಯರ ಹೃದಯದಲ್ಲಿ ಅಡಗಿರುವ ನೋವಿನ ಬಗ್ಗೆ ಮಾತನಾಡಿದ್ದ ಜಾವೇದ್​​ ಅಖ್ತರ್, ಪಾಕ್​​​ ನಡೆಯನ್ನು ಬಹಿರಂಗವಾಗಿಯೇ ಟೀಕಿಸಿದ್ದರು. ಈ ಸುದ್ದಿ ಸದ್ಯ ದೊಡ್ಡ ಮಟ್ಟಿಗೆ ಸೌಂಡ್​ ಮಾಡುತ್ತಿದ್ದು, ಈ ಬಗ್ಗೆ ಸ್ವತಃ ಜಾವೇದ್ ಅಖ್ತರ್ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಕಾಮೆಂಟ್‌ಗಳನ್ನು "ಸ್ವಲ್ಪ ವಿವಾದಾತ್ಮಕ ಮತ್ತು ಸೂಕ್ಷ್ಮ" ಎಂದು ಬಣ್ಣಿಸಿದ ಜಾವೇದ್​ ಅಖ್ತರ್, ಪಾಕಿಸ್ತಾನದಲ್ಲಿ ತಮ್ಮ ಅಭಿಪ್ರಾಯವನ್ನು ಹೇಳಲು ನಾನು ಹೆದರುವುದಿಲ್ಲ ಎಂದು ಹೇಳಿದರು. ಕಳೆದ ವಾರ ಖ್ಯಾತ ಉರ್ದು ಕವಿ ಫೈಜ್ ಅಹ್ಮದ್ ಫೈಜ್ ಅವರನ್ನು ಗೌರವಿಸುವ ಉತ್ಸವದಲ್ಲಿ ಭಾಗಿ ಆಗಿದ್ದ ಅಖ್ತರ್, 2008ರ ಭಯೋತ್ಪಾದಕ ದಾಳಿಯನ್ನು ಭಾರತ ಪ್ರಸ್ತಾಪಿಸಿದಾಗ ಪಾಕಿಸ್ತಾನಿಗಳು ನೊಂದುಕೊಳ್ಳಬಾರದು ಎಂದು ಹೇಳಿದ್ದರು.

ಇದು (ಅಖ್ತರ್​ ಹೇಳಿಕೆ ಪರಿಣಾಮ) ಬಹಳ ದೊಡ್ಡದಾಯಿತು. ಇದು ನನಗೆ ಕೊಂಚ ಮುಜುಗರದ ಸಂಗತಿಯಾಗಿದೆ. ಸದ್ಯ ನಾನು ಅದರ ಬಗ್ಗೆ ಹಿಗ್ಗಬಾರದು ಎಂದು ಭಾವಿಸುತ್ತೇನೆ. ನಾನು ಇಲ್ಲಿಗೆ (ಭಾರತ) ಬಂದಾಗ, ನಾನು ಮೂರನೇ ಮಹಾಯುದ್ಧವನ್ನು ಗೆದ್ದಂತೆ ನನಗೆ ಅನಿಸಿತು. ಜನರು ಮತ್ತು ಮಾಧ್ಯಮಗಳಿಂದ ಹಲವಾರು ಪ್ರತಿಕ್ರಿಯೆಗಳು ಬಂದವು. ನಾನು ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ಬಳಿಕ ನಾನು ಅಂಥಹ ಯಾವ ಹೇಳಿಕೆ ಕೊಟ್ಟೆ ಎಂದು ನನಗೆ ಕೊಂಚ ಮುಜುಗರವಾಯಿತು. ಅಷ್ಟರ ಮಟ್ಟಿಗೆ ಸುದ್ದಿ ಆಯಿತು. ಪ್ರಶಂಸೆ ಸಿಕ್ಕಿತು. ನಾನು ಈ ವಿಷಯಗಳನ್ನು ಹೇಳಬೇಕಾಗಿತ್ತು. ನಾವು ಸುಮ್ಮನಿರಬೇಕೇ? ಎಂದು ಜಾವೇದ್​ ಅಖ್ತರ್​​ ಅವರು ಎಬಿಪಿ ಐಡಿಯಾಸ್ ಆಫ್ ಇಂಡಿಯಾ 2023 ಶೃಂಗಸಭೆಯಲ್ಲಿ ಹೇಳಿದರು.

ಇದನ್ನೂ ಓದಿ: ಮುಂಬೈ ದಾಳಿ ಕುರಿತ ಜಾವೇದ್‌ ಅಖ್ತರ್‌ ಹೇಳಿಕೆಯನ್ನು 'ಸಂವೇದನಾರಹಿತ' ಎಂದ ಪಾಕ್​ ನಟ

ನನ್ನ ಕಾಮೆಂಟ್‌ಗಳು ಪಾಕಿಸ್ತಾನದಲ್ಲಿ ಕೋಲಾಹಲಕ್ಕೆ ಕಾರಣವಾಗಿವೆ ಎಂದು ಈಗ ನನಗೆ ತಿಳಿದಿದೆ. ಅಲ್ಲಿನ ಜನರು ನನ್ನನ್ನು ನಿಂದಿಸುತ್ತಿದ್ದಾರೆ ಎಂದು ನನಗೆ ಗೊತ್ತಾಯಿತು. ಅವರಿಗೆ (ತನಗೆ) ವೀಸಾ ಏಕೆ ನೀಡಲಾಯಿತು? ಎಂದು ಅಲ್ಲಿನ ಜನರು ಕೇಳುತ್ತಿದ್ದಾರೆ. ಅದು ಎಂಥಹ ಸ್ಥಳ ಆಗಿತ್ತು ಅನ್ನೋದು ಈಗ ನೆನಪಾಗುತ್ತದೆ. ಕೊಂಚ ವಿವಾದಾತ್ಮಕ, ಸೂಕ್ಷ್ಮ ಸ್ವಭಾವದ ಮಾತುಗಳನ್ನ ಹೇಳುತ್ತಾ ಬಂದೆ. ನಾನು ಇಲ್ಲಿ ಹುಟ್ಟಿ ಬೆಳೆದಿದ್ದೇನೆ, ಇಲ್ಲೇ ಸಾಯುತ್ತೇನೆ, ನಾನು ಇಲ್ಲಿ ಭಯ ಪಡಲಿಲ್ಲ, ಇನ್ನೂ ಅಲ್ಲೇಕೆ ಹೆದರುತ್ತೇನೆ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಪಾಕ್‌ ನೆಲದಲ್ಲೇ ಮುಂಬೈ ದಾಳಿಗೆ ಚಾಟಿ ಬೀಸಿದ ಜಾವೆದ್ ಅಖ್ತರ್‌: 'ಮನೆಗೆ ನುಗ್ಗಿ ಹೊಡೆದಿದ್ದೀರಾ' ಎಂದ ಕಂಗನಾ

ಪಾಕ್​ನಲ್ಲಿ ಜಾವೇದ್‌ ಅಖ್ತರ್ ಹೇಳಿದ್ದೇನು?: ಇತ್ತೀಚೆಗೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ ಫೈಜ್ ಉತ್ಸವದಲ್ಲಿ, ನಾವು ಮುಂಬೈನಿಂದ ಬಂದವರು. ನಮ್ಮ ನಗರದ ಮೇಲೆ ನಡೆದ ದಾಳಿಯನ್ನು ನಾವು ನೋಡಿದ್ದೇವೆ. ದಾಳಿಕೋರರು ನಾರ್ವೆ, ಈಜಿಪ್ಟ್‌ನಿಂದ ಬಂದವರಲ್ಲ. ಅವರು ಇನ್ನೂ ನಿಮ್ಮ ದೇಶದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ ಎಂದು ಜಾವೇದ್​ ಅಖ್ತರ್​ ಹೇಳಿದ್ದರು. ಅಷ್ಟೇ ಅಲ್ಲದೇ ಪಾಕಿಸ್ತಾನಿ ಕಲಾವಿದರಾದ ನುಸ್ರತ್ ಫತೇ ಅಲಿ ಖಾನ್ ಮತ್ತು ಮೆಹದಿ ಹಸನ್ ಅವರನ್ನು ಭಾರತದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಆದರೆ ಪಾಕಿಸ್ತಾನವು ಲತಾ ಮಂಗೇಶ್ಕರ್ ಅವರ ಒಂದೇ ಒಂದು ಪ್ರದರ್ಶನವನ್ನೂ ನಡೆಸಿಲ್ಲ ಎಂಬುದನ್ನು ಕೂಡ ಪಾಕಿಸ್ತಾನದಲ್ಲೇ ಹೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.

ಇತ್ತೀಚೆಗೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ ಫೈಜ್ ಉತ್ಸವದಲ್ಲಿ ಭಾರತದ ಖ್ಯಾತ ಕವಿ, ಗೀತೆ ರಚನೆಕಾರ ಜಾವೇದ್ ಅಖ್ತರ್ ಪಾಲ್ಗೊಂಡು ಪಾಕ್​ ಬಗ್ಗೆ ಹೇಳಿಕೆ ನೀಡಿದ್ದರು. 26/11ರ ಮುಂಬೈ ದಾಳಿಯ ಕುರಿತಾಗಿ ಭಾರತೀಯರ ಹೃದಯದಲ್ಲಿ ಅಡಗಿರುವ ನೋವಿನ ಬಗ್ಗೆ ಮಾತನಾಡಿದ್ದ ಜಾವೇದ್​​ ಅಖ್ತರ್, ಪಾಕ್​​​ ನಡೆಯನ್ನು ಬಹಿರಂಗವಾಗಿಯೇ ಟೀಕಿಸಿದ್ದರು. ಈ ಸುದ್ದಿ ಸದ್ಯ ದೊಡ್ಡ ಮಟ್ಟಿಗೆ ಸೌಂಡ್​ ಮಾಡುತ್ತಿದ್ದು, ಈ ಬಗ್ಗೆ ಸ್ವತಃ ಜಾವೇದ್ ಅಖ್ತರ್ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಕಾಮೆಂಟ್‌ಗಳನ್ನು "ಸ್ವಲ್ಪ ವಿವಾದಾತ್ಮಕ ಮತ್ತು ಸೂಕ್ಷ್ಮ" ಎಂದು ಬಣ್ಣಿಸಿದ ಜಾವೇದ್​ ಅಖ್ತರ್, ಪಾಕಿಸ್ತಾನದಲ್ಲಿ ತಮ್ಮ ಅಭಿಪ್ರಾಯವನ್ನು ಹೇಳಲು ನಾನು ಹೆದರುವುದಿಲ್ಲ ಎಂದು ಹೇಳಿದರು. ಕಳೆದ ವಾರ ಖ್ಯಾತ ಉರ್ದು ಕವಿ ಫೈಜ್ ಅಹ್ಮದ್ ಫೈಜ್ ಅವರನ್ನು ಗೌರವಿಸುವ ಉತ್ಸವದಲ್ಲಿ ಭಾಗಿ ಆಗಿದ್ದ ಅಖ್ತರ್, 2008ರ ಭಯೋತ್ಪಾದಕ ದಾಳಿಯನ್ನು ಭಾರತ ಪ್ರಸ್ತಾಪಿಸಿದಾಗ ಪಾಕಿಸ್ತಾನಿಗಳು ನೊಂದುಕೊಳ್ಳಬಾರದು ಎಂದು ಹೇಳಿದ್ದರು.

ಇದು (ಅಖ್ತರ್​ ಹೇಳಿಕೆ ಪರಿಣಾಮ) ಬಹಳ ದೊಡ್ಡದಾಯಿತು. ಇದು ನನಗೆ ಕೊಂಚ ಮುಜುಗರದ ಸಂಗತಿಯಾಗಿದೆ. ಸದ್ಯ ನಾನು ಅದರ ಬಗ್ಗೆ ಹಿಗ್ಗಬಾರದು ಎಂದು ಭಾವಿಸುತ್ತೇನೆ. ನಾನು ಇಲ್ಲಿಗೆ (ಭಾರತ) ಬಂದಾಗ, ನಾನು ಮೂರನೇ ಮಹಾಯುದ್ಧವನ್ನು ಗೆದ್ದಂತೆ ನನಗೆ ಅನಿಸಿತು. ಜನರು ಮತ್ತು ಮಾಧ್ಯಮಗಳಿಂದ ಹಲವಾರು ಪ್ರತಿಕ್ರಿಯೆಗಳು ಬಂದವು. ನಾನು ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ಬಳಿಕ ನಾನು ಅಂಥಹ ಯಾವ ಹೇಳಿಕೆ ಕೊಟ್ಟೆ ಎಂದು ನನಗೆ ಕೊಂಚ ಮುಜುಗರವಾಯಿತು. ಅಷ್ಟರ ಮಟ್ಟಿಗೆ ಸುದ್ದಿ ಆಯಿತು. ಪ್ರಶಂಸೆ ಸಿಕ್ಕಿತು. ನಾನು ಈ ವಿಷಯಗಳನ್ನು ಹೇಳಬೇಕಾಗಿತ್ತು. ನಾವು ಸುಮ್ಮನಿರಬೇಕೇ? ಎಂದು ಜಾವೇದ್​ ಅಖ್ತರ್​​ ಅವರು ಎಬಿಪಿ ಐಡಿಯಾಸ್ ಆಫ್ ಇಂಡಿಯಾ 2023 ಶೃಂಗಸಭೆಯಲ್ಲಿ ಹೇಳಿದರು.

ಇದನ್ನೂ ಓದಿ: ಮುಂಬೈ ದಾಳಿ ಕುರಿತ ಜಾವೇದ್‌ ಅಖ್ತರ್‌ ಹೇಳಿಕೆಯನ್ನು 'ಸಂವೇದನಾರಹಿತ' ಎಂದ ಪಾಕ್​ ನಟ

ನನ್ನ ಕಾಮೆಂಟ್‌ಗಳು ಪಾಕಿಸ್ತಾನದಲ್ಲಿ ಕೋಲಾಹಲಕ್ಕೆ ಕಾರಣವಾಗಿವೆ ಎಂದು ಈಗ ನನಗೆ ತಿಳಿದಿದೆ. ಅಲ್ಲಿನ ಜನರು ನನ್ನನ್ನು ನಿಂದಿಸುತ್ತಿದ್ದಾರೆ ಎಂದು ನನಗೆ ಗೊತ್ತಾಯಿತು. ಅವರಿಗೆ (ತನಗೆ) ವೀಸಾ ಏಕೆ ನೀಡಲಾಯಿತು? ಎಂದು ಅಲ್ಲಿನ ಜನರು ಕೇಳುತ್ತಿದ್ದಾರೆ. ಅದು ಎಂಥಹ ಸ್ಥಳ ಆಗಿತ್ತು ಅನ್ನೋದು ಈಗ ನೆನಪಾಗುತ್ತದೆ. ಕೊಂಚ ವಿವಾದಾತ್ಮಕ, ಸೂಕ್ಷ್ಮ ಸ್ವಭಾವದ ಮಾತುಗಳನ್ನ ಹೇಳುತ್ತಾ ಬಂದೆ. ನಾನು ಇಲ್ಲಿ ಹುಟ್ಟಿ ಬೆಳೆದಿದ್ದೇನೆ, ಇಲ್ಲೇ ಸಾಯುತ್ತೇನೆ, ನಾನು ಇಲ್ಲಿ ಭಯ ಪಡಲಿಲ್ಲ, ಇನ್ನೂ ಅಲ್ಲೇಕೆ ಹೆದರುತ್ತೇನೆ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಪಾಕ್‌ ನೆಲದಲ್ಲೇ ಮುಂಬೈ ದಾಳಿಗೆ ಚಾಟಿ ಬೀಸಿದ ಜಾವೆದ್ ಅಖ್ತರ್‌: 'ಮನೆಗೆ ನುಗ್ಗಿ ಹೊಡೆದಿದ್ದೀರಾ' ಎಂದ ಕಂಗನಾ

ಪಾಕ್​ನಲ್ಲಿ ಜಾವೇದ್‌ ಅಖ್ತರ್ ಹೇಳಿದ್ದೇನು?: ಇತ್ತೀಚೆಗೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ ಫೈಜ್ ಉತ್ಸವದಲ್ಲಿ, ನಾವು ಮುಂಬೈನಿಂದ ಬಂದವರು. ನಮ್ಮ ನಗರದ ಮೇಲೆ ನಡೆದ ದಾಳಿಯನ್ನು ನಾವು ನೋಡಿದ್ದೇವೆ. ದಾಳಿಕೋರರು ನಾರ್ವೆ, ಈಜಿಪ್ಟ್‌ನಿಂದ ಬಂದವರಲ್ಲ. ಅವರು ಇನ್ನೂ ನಿಮ್ಮ ದೇಶದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ ಎಂದು ಜಾವೇದ್​ ಅಖ್ತರ್​ ಹೇಳಿದ್ದರು. ಅಷ್ಟೇ ಅಲ್ಲದೇ ಪಾಕಿಸ್ತಾನಿ ಕಲಾವಿದರಾದ ನುಸ್ರತ್ ಫತೇ ಅಲಿ ಖಾನ್ ಮತ್ತು ಮೆಹದಿ ಹಸನ್ ಅವರನ್ನು ಭಾರತದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಆದರೆ ಪಾಕಿಸ್ತಾನವು ಲತಾ ಮಂಗೇಶ್ಕರ್ ಅವರ ಒಂದೇ ಒಂದು ಪ್ರದರ್ಶನವನ್ನೂ ನಡೆಸಿಲ್ಲ ಎಂಬುದನ್ನು ಕೂಡ ಪಾಕಿಸ್ತಾನದಲ್ಲೇ ಹೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.