ETV Bharat / entertainment

ಪ್ರಯಾಣದ ವೇಳೆ ಅಭಿಮಾನಿಗಳನ್ನು ನಿರ್ಲಕ್ಷಿಸಿದ ಕರೀನಾ ಕಪೂರ್​: ಹೀಗಂದ್ರು ನಾರಾಯಣಮೂರ್ತಿ

author img

By

Published : Jul 25, 2023, 8:56 PM IST

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ತಮ್ಮ ಅಭಿಮಾನಿಗಳನ್ನು ಕಡೆಗಣಿಸಿದ್ದಕ್ಕಾಗಿ ನಟಿ ಕರೀನಾ ಕಪೂರ್ ಅವರನ್ನು ಟೀಕಿಸಿದ್ದಾರೆ. ಆದರೆ, ಈ ವೇಳೆ ಅವರ ಪತ್ನಿ ಸುಧಾಮೂರ್ತಿ ಅವರು ನಟಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ-ಕರೀನಾ ಕಪೂರ್
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ-ಕರೀನಾ ಕಪೂರ್

ಹೈದರಾಬಾದ್: ನಟಿ ಕರೀನಾ ಕಪೂರ್ ವಿಮಾನ ಪ್ರಯಾಣದ ವೇಳೆ ತಮ್ಮ ಅಭಿಮಾನಿಗಳನ್ನು ಕಡೆಗಣಿಸಿದ ಘಟನೆಯ ಕುರಿತು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಚರ್ಚಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ನಟಿ ತನ್ನ ಅಭಿಮಾನಿಯನ್ನು ಮಾತನಾಡಿಸದಿದ್ದಕ್ಕೆ ಮಿಲಿಯನೇರ್ ಉದ್ಯಮಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಐಐಟಿ - ಕಾನ್ಪುರದಲ್ಲಿ ನಡೆದ ಚರ್ಚೆಗೆ ಅತಿಥಿ ಉಪನ್ಯಾಸಕರಾಗಿ ಬಿಲಿಯನೇರ್ ಉದ್ಯಮಿಯನ್ನು ಆಹ್ವಾನಿಸಲಾಗಿತ್ತು. ಅಲ್ಲಿ ಅವರು ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುವಾಗ ನಾರಾಯಣ ಮೂರ್ತಿ ಅವರು ಲಂಡನ್‌ನಿಂದ ಭಾರತಕ್ಕೆ ಕೈಗೊಂಡ ತಮ್ಮ ವಿಮಾನ ಪ್ರಯಾಣದಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಅಭಿಮಾನಿಗಳಿಗೆ ಪ್ರತಿಕ್ರಿಯಿಸಲು ಮುಂದಾಗದ ನಟಿ: ನಾನು ಲಂಡನ್‌ನಿಂದ ಭಾರತಕ್ಕೆ ಬರುತ್ತಿದ್ದೆ. ನನ್ನ ಪಕ್ಕದಲ್ಲಿ ಕರೀನಾ ಕಪೂರ್ ಕುಳಿತಿದ್ದರು. ಈ ವೇಳೆ ತುಂಬಾ ಜನ ಅಭಿಮಾನಿಗಳು ನಟಿಯ ಬಳಿಗೆ ಬಂದರು ಮತ್ತು ಅವರು ನಟಿ ಕರೀನಾ ಕಪೂರ್​ಗೆ ಅಭಿಮಾನದಿಂದ ಹಲೋ ಎಂದು ಹೇಳಿದರು. ಆದರೆ, ಈ ವೇಳೆ ನಟಿ ಕನಿಷ್ಠಪಕ್ಷ ಪ್ರತಿಕ್ರಿಯಿಸಲು ಸಹ ಚಿಂತಿಸಲಿಲ್ಲ. ಈ ವೇಳೆ ಅಲ್ಲಿಯೇ ಕುಳಿತ್ತಿದ್ದ ನಾನು ಒಂದು ಕ್ಷಣ ದಿಗ್ಭ್ರಮೆಗೊಂಡೆ. "ನನ್ನ ಹತ್ತಿರ ಯಾರೇ ಬಂದರೂ, ನಾನು ಎದ್ದುನಿಂತು, ಒಂದು ನಿಮಿಷ ಅಥವಾ ಅರ್ಧ ನಿಮಿಷ ಮಾತನಾಡಿ ಕಳುಹಿಸುತ್ತೇನೆ'' ಎಂದು ತಿಳಿಸಿದ ಅವರು ನಟಿಯ ವರ್ತನೆಯ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ಲಾಲ್​ ಸಿಂಗ್ ಚಡ್ಡಾ' : ಮಗ 'ಜೇ' ಅನ್ನು ಹೊತ್ತು ರೊಮ್ಯಾಂಟಿಕ್​ ಸಾಂಗ್​ ಮುಗಿಸಿದ್ದ ಕರೀನಾ..!

ನಟಿ ಕರೀನಾ ಕಪೂರ್ ಅವರನ್ನ ಸಮರ್ಥಿಸಿಕೊಂಡ ಸುಧಾಮೂರ್ತಿ: ಆದರೆ, ಇದೇ ವೇಳೆ ಅವರೊಂದಿಗೆ ವೇದಿಕೆಯಲ್ಲಿದ್ದ ಅವರ ಪತ್ನಿ ಸುಧಾ ಮೂರ್ತಿ ಅವರು ಕರೀನಾ ಕಪೂರ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಕರೀನಾ ಕಪೂರ್ ಅವರು ಬಾಲಿವುಡ್ ಸೆಲೆಬ್ರಿಟಿಯಾಗಿರುವುದರಿಂದ, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ಅವರು ಸ್ಪಂದಿಸುವಲ್ಲಿ ಸುಸ್ತಾಗಿರಬಹುದು ಎಂದಿದ್ದಾರೆ. "ನಾರಾಯಣ ಮೂರ್ತಿ, ಸಂಸ್ಥಾಪಕ, ಸಾಫ್ಟ್‌ವೇರ್ ವ್ಯಕ್ತಿ, ಬಹುಶಃ ಅವರು 10,000 ಅಭಿಮಾನಿಗಳನ್ನು ಹೊಂದಿರಬಹುದು. ಆದರೆ ಚಲನಚಿತ್ರ ನಟಿಗೆ ಮಿಲಿಯನ್ ಗಟ್ಟಲೆ ಅಭಿಮಾನಿಗಳಿರುತ್ತಾರೆ' ಎಂದು ಸುಧಾಮೂರ್ತಿಯವರು ವಾದಿಸಿದ್ದಾರೆ.

ಇದನ್ನೂ ಓದಿ: ಸೋಹಾ ಅಲಿ ಖಾನ್ ಪುತ್ರಿ ಬರ್ತ್​ ಡೇ ಪಾರ್ಟಿಯಲ್ಲಿ ಪುತ್ರರೊಂದಿಗೆ ಮಿಂಚಿದ ಕರೀನಾ

ನಿಮ್ಮ ಅಹಂಕಾರವನ್ನು ಕಡಿಮೆ ಮಾಡುವ ಮಾರ್ಗ: ಆದರೆ ನಾರಾಯಣ ಮೂರ್ತಿಯವರು ತಮ್ಮ ವಾದವನ್ನು ಮಂಡಿಸುವುದರಲ್ಲಿ ಹಠ ಹಿಡಿದರು. "ಅದು ಸಮಸ್ಯೆ ಅಲ್ಲ. ಸಮಸ್ಯೆಯೆಂದರೆ ಯಾರಾದರೂ ಪ್ರೀತಿಯನ್ನು ಪ್ರದರ್ಶಿಸಿದಾಗ, ನೀವು ಅವರಿಗೆ ಮರಳಿ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಅದು ವಿಮರ್ಶಾತ್ಮಕವಾಗಿದೆ ಎಂದು ನಾನು ನಂಬುತ್ತೇನೆ. ಇವೆಲ್ಲವೂ ನಿಮ್ಮ ಅಹಂಕಾರವನ್ನು ಕಡಿಮೆ ಮಾಡುವ ಮಾರ್ಗಗಳಾಗಿವೆ" ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: 'ನಿಮ್ಮ ಸೋದರ ಸಂಬಂಧಿಗೆ ಅದನ್ನೇ ಹೇಳಿ': ನಿಯಾಮವಳಿ ಪಾಲಿಸುವಂತೆ ಕರೆ ನೀಡಿದ ಕರೀನಾಗೆ ಕಾಲೆಳೆದ ಟ್ರೋಲಿಗರು!

ಹೈದರಾಬಾದ್: ನಟಿ ಕರೀನಾ ಕಪೂರ್ ವಿಮಾನ ಪ್ರಯಾಣದ ವೇಳೆ ತಮ್ಮ ಅಭಿಮಾನಿಗಳನ್ನು ಕಡೆಗಣಿಸಿದ ಘಟನೆಯ ಕುರಿತು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಚರ್ಚಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ನಟಿ ತನ್ನ ಅಭಿಮಾನಿಯನ್ನು ಮಾತನಾಡಿಸದಿದ್ದಕ್ಕೆ ಮಿಲಿಯನೇರ್ ಉದ್ಯಮಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಐಐಟಿ - ಕಾನ್ಪುರದಲ್ಲಿ ನಡೆದ ಚರ್ಚೆಗೆ ಅತಿಥಿ ಉಪನ್ಯಾಸಕರಾಗಿ ಬಿಲಿಯನೇರ್ ಉದ್ಯಮಿಯನ್ನು ಆಹ್ವಾನಿಸಲಾಗಿತ್ತು. ಅಲ್ಲಿ ಅವರು ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುವಾಗ ನಾರಾಯಣ ಮೂರ್ತಿ ಅವರು ಲಂಡನ್‌ನಿಂದ ಭಾರತಕ್ಕೆ ಕೈಗೊಂಡ ತಮ್ಮ ವಿಮಾನ ಪ್ರಯಾಣದಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಅಭಿಮಾನಿಗಳಿಗೆ ಪ್ರತಿಕ್ರಿಯಿಸಲು ಮುಂದಾಗದ ನಟಿ: ನಾನು ಲಂಡನ್‌ನಿಂದ ಭಾರತಕ್ಕೆ ಬರುತ್ತಿದ್ದೆ. ನನ್ನ ಪಕ್ಕದಲ್ಲಿ ಕರೀನಾ ಕಪೂರ್ ಕುಳಿತಿದ್ದರು. ಈ ವೇಳೆ ತುಂಬಾ ಜನ ಅಭಿಮಾನಿಗಳು ನಟಿಯ ಬಳಿಗೆ ಬಂದರು ಮತ್ತು ಅವರು ನಟಿ ಕರೀನಾ ಕಪೂರ್​ಗೆ ಅಭಿಮಾನದಿಂದ ಹಲೋ ಎಂದು ಹೇಳಿದರು. ಆದರೆ, ಈ ವೇಳೆ ನಟಿ ಕನಿಷ್ಠಪಕ್ಷ ಪ್ರತಿಕ್ರಿಯಿಸಲು ಸಹ ಚಿಂತಿಸಲಿಲ್ಲ. ಈ ವೇಳೆ ಅಲ್ಲಿಯೇ ಕುಳಿತ್ತಿದ್ದ ನಾನು ಒಂದು ಕ್ಷಣ ದಿಗ್ಭ್ರಮೆಗೊಂಡೆ. "ನನ್ನ ಹತ್ತಿರ ಯಾರೇ ಬಂದರೂ, ನಾನು ಎದ್ದುನಿಂತು, ಒಂದು ನಿಮಿಷ ಅಥವಾ ಅರ್ಧ ನಿಮಿಷ ಮಾತನಾಡಿ ಕಳುಹಿಸುತ್ತೇನೆ'' ಎಂದು ತಿಳಿಸಿದ ಅವರು ನಟಿಯ ವರ್ತನೆಯ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ಲಾಲ್​ ಸಿಂಗ್ ಚಡ್ಡಾ' : ಮಗ 'ಜೇ' ಅನ್ನು ಹೊತ್ತು ರೊಮ್ಯಾಂಟಿಕ್​ ಸಾಂಗ್​ ಮುಗಿಸಿದ್ದ ಕರೀನಾ..!

ನಟಿ ಕರೀನಾ ಕಪೂರ್ ಅವರನ್ನ ಸಮರ್ಥಿಸಿಕೊಂಡ ಸುಧಾಮೂರ್ತಿ: ಆದರೆ, ಇದೇ ವೇಳೆ ಅವರೊಂದಿಗೆ ವೇದಿಕೆಯಲ್ಲಿದ್ದ ಅವರ ಪತ್ನಿ ಸುಧಾ ಮೂರ್ತಿ ಅವರು ಕರೀನಾ ಕಪೂರ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಕರೀನಾ ಕಪೂರ್ ಅವರು ಬಾಲಿವುಡ್ ಸೆಲೆಬ್ರಿಟಿಯಾಗಿರುವುದರಿಂದ, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ಅವರು ಸ್ಪಂದಿಸುವಲ್ಲಿ ಸುಸ್ತಾಗಿರಬಹುದು ಎಂದಿದ್ದಾರೆ. "ನಾರಾಯಣ ಮೂರ್ತಿ, ಸಂಸ್ಥಾಪಕ, ಸಾಫ್ಟ್‌ವೇರ್ ವ್ಯಕ್ತಿ, ಬಹುಶಃ ಅವರು 10,000 ಅಭಿಮಾನಿಗಳನ್ನು ಹೊಂದಿರಬಹುದು. ಆದರೆ ಚಲನಚಿತ್ರ ನಟಿಗೆ ಮಿಲಿಯನ್ ಗಟ್ಟಲೆ ಅಭಿಮಾನಿಗಳಿರುತ್ತಾರೆ' ಎಂದು ಸುಧಾಮೂರ್ತಿಯವರು ವಾದಿಸಿದ್ದಾರೆ.

ಇದನ್ನೂ ಓದಿ: ಸೋಹಾ ಅಲಿ ಖಾನ್ ಪುತ್ರಿ ಬರ್ತ್​ ಡೇ ಪಾರ್ಟಿಯಲ್ಲಿ ಪುತ್ರರೊಂದಿಗೆ ಮಿಂಚಿದ ಕರೀನಾ

ನಿಮ್ಮ ಅಹಂಕಾರವನ್ನು ಕಡಿಮೆ ಮಾಡುವ ಮಾರ್ಗ: ಆದರೆ ನಾರಾಯಣ ಮೂರ್ತಿಯವರು ತಮ್ಮ ವಾದವನ್ನು ಮಂಡಿಸುವುದರಲ್ಲಿ ಹಠ ಹಿಡಿದರು. "ಅದು ಸಮಸ್ಯೆ ಅಲ್ಲ. ಸಮಸ್ಯೆಯೆಂದರೆ ಯಾರಾದರೂ ಪ್ರೀತಿಯನ್ನು ಪ್ರದರ್ಶಿಸಿದಾಗ, ನೀವು ಅವರಿಗೆ ಮರಳಿ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಅದು ವಿಮರ್ಶಾತ್ಮಕವಾಗಿದೆ ಎಂದು ನಾನು ನಂಬುತ್ತೇನೆ. ಇವೆಲ್ಲವೂ ನಿಮ್ಮ ಅಹಂಕಾರವನ್ನು ಕಡಿಮೆ ಮಾಡುವ ಮಾರ್ಗಗಳಾಗಿವೆ" ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: 'ನಿಮ್ಮ ಸೋದರ ಸಂಬಂಧಿಗೆ ಅದನ್ನೇ ಹೇಳಿ': ನಿಯಾಮವಳಿ ಪಾಲಿಸುವಂತೆ ಕರೆ ನೀಡಿದ ಕರೀನಾಗೆ ಕಾಲೆಳೆದ ಟ್ರೋಲಿಗರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.