ETV Bharat / entertainment

ಕೋವಿಡ್​ ವ್ಯಥೆ ಕಥೆಯಾಗಿ ತೆರೆಗೆ: 'ಭೀಡ್'​ ಟ್ರೇಲರ್​ ರಿಲೀಸ್​

author img

By

Published : Mar 10, 2023, 6:04 PM IST

ರಾಜ್​ಕುಮಾರ್ ರಾವ್​​ ಮತ್ತು ಭೂಮಿ ಪೆಡ್ನೇಕರ್ ಅಭಿನಯದ ಭೀಡ್​​ ಚಿತ್ರದ ಟ್ರೇಲರ್​​ ಬಿಡುಗಡೆಯಾಗಿದೆ.

Bheed
ಭೀಡ್

ಬಾಲಿವುಡ್​ ಸೂಪರ್​ಸ್ಟಾರ್​ಗಳಾದ ರಾಜ್​ಕುಮಾರ್ ರಾವ್​​ ಮತ್ತು ಭೂಮಿ ಪೆಡ್ನೇಕರ್ ಅಭಿನಯದ ಭೀಡ್​​ (Bheed) ಚಿತ್ರದ ಟ್ರೇಲರ್​​ ಬಿಡುಗಡೆಯಾಗಿದೆ. ಚಿತ್ರತಂಡ ಶುಕ್ರವಾರ ಬೆಳಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೇಲರ್ ಅನ್ನು ಅನಾವರಣಗೊಳಿಸಿದ್ದಾರೆ. ಎರಡು ನಿಮಿಷ, 39 ಸೆಕೆಂಡುಗಳ ಟ್ರೇಲರ್​ ಇದಾಗಿದೆ. ಅನುಭವ್​ ಸಿನ್ಹಾ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದ್ದು, ಕೋವಿಡ್​ ಸಮಯದಲ್ಲಿನ ಲಾಕ್​ಡೌನ್​ ಕಥೆಯನ್ನು ಹೇಳುತ್ತದೆ.

  • " class="align-text-top noRightClick twitterSection" data="">

ಚಿತ್ರಕಥೆ ಹೀಗಿದೆ.. 2020 ರಲ್ಲಿ ದೇಶವನ್ನಷ್ಟೇ ಅಲ್ಲ, ಇಡೀ ವಿಶ್ವವನ್ನೇ ಕೋವಿಡ್​ ಎಂಬ ಸಾಂಕ್ರಾಮಿಕ ರೋಗ ಅಲ್ಲೋಲ ಕಲ್ಲೋಲ ಮಾಡಿತ್ತು. ಚೀನಾದಿಂದ ಬಂದ ಕೊರೊನಾ ಪ್ರಪಂಚದಾದ್ಯಂತ ಹಬ್ಬಿತ್ತು. ಈ ಒಂದು ವೈರಸ್​ ಅದೆಷ್ಟೋ ಮಂದಿಗೆ ಬಾಧಿಸಿದ್ದು ಮಾತ್ರವಲ್ಲದೇ, ಅನೇಕರನ್ನು ಬೀದಿಗೆ ತಳ್ಳಿತ್ತು. ತಮ್ಮ ಪ್ರಾಣವನ್ನು ಅಂಗೈಯಲ್ಲಿ ಇಟ್ಟುಕೊಂಡು ಒಂದು ಹೊತ್ತು ತಿನ್ನಲು ಪರದಾಡುವ ಸ್ಥಿತಿ ಜನರಲ್ಲಿ ನಿರ್ಮಾಣವಾಗಿತ್ತು. ಕೋವಿಡ್​ ಹರಡುವಿಕೆಯನ್ನು ತಡೆಯಲು ಸರ್ಕಾರ ಲಾಕ್​ಡೌನ್​ ಜಾರಿಗೆ ತಂದಿತು. ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು ಎಂಬ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಲಾಗಿತ್ತು.

ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಜನರಿಗೆ ಸರಿಯಾಗಿದ್ದರೂ ಸಹ ದೂರದ ಊರುಗಳಿಂದ ಉದ್ಯೋಗಕ್ಕಾಗಿ ಬಂದವರಿಗೆ ಈ ನಿಬಂಧನೆ ತುಂಬಾ ತೊಂದರೆಯಾಗಿ ಪರಿಣಮಿಸಿತ್ತು. ವಲಸೆ ಕಾರ್ಮಿಕರ ಪರಿಸ್ಥಿತಿಯಂತು ಹೇಳತೀರದ್ದಾಗಿತ್ತು. ಲಾಕ್​ಡೌನ್​ನಿಂದಾಗಿ ಎಲ್ಲ ಕೆಲಸಗಳು ಒಂದೇ ಬಾರಿಗೆ ನಿಂತು ಹೋಗಿದ್ದವು. ಜೊತೆಗೆ ಕೆಲಸ ಕೂಡ ಕಳೆದುಕೊಂಡ ಜನರಿಗೆ ತಮ್ಮ ಊರಿಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿತ್ತು. ತಮ್ಮ ಸ್ವಂತ ಊರು ತಲುಪಲು ದಾರಿ ಕಾಣದೇ ಕಂಗಾಲಾಗಿ ಹೋಗಿದ್ದರು.

ಇದನ್ನೂ ಓದಿ: ಆಸ್ಕರ್​​ ವೇದಿಕೆಯಲ್ಲಿ RRR​ ಭಾರತವನ್ನು ಹೃದಯದಲ್ಲಿಟ್ಟುಕೊಂಡು ಹೆಜ್ಜೆ ಹಾಕಲಿದೆ: ಜೂ.ಎನ್​​ಟಿಆರ್​

ಆದರೆ, ಕೆಲವರು ಹೇಗಾದರೂ ಮಾಡಿ ಮನೆ ತಲುಪಲು ನಡೆದುಕೊಂಡೇ ಹೋಗಲು ತೀರ್ಮಾನಿಸಿದ್ದರು. ಆದರೆ, ಅವರಿಗೆ ಅದರಲ್ಲೂ ಕಹಿ ಅನುಭವಗಳು ಎದುರಾದವು. ಹಸಿವು ನೀಗಿಸಲು ಎಲ್ಲೋ ಒಂದು ಕಡೆ ನಿಂತರೆ ಆ ಹಳ್ಳಿ ಜನ ಅವರನ್ನು ಹತ್ತಿರಕ್ಕೂ ಸೇರಿಸಿಕೊಳ್ಳುತ್ತಿರಲಿಲ್ಲ. ಕೆಲವೆಡೆ ಪೊಲೀಸರು ಅಂತಹವರ ಮೇಲೆ ಹಲ್ಲೆ ನಡೆಸಿದ್ದೂ ಇದೆ. ಇಂತಹ ಇನ್ನೂ ಅನೇಕ ಘಟನೆಗಳು ನಡೆದಿವೆ. ಇದ್ಯಾವುದನ್ನೂ ಜನ ಮರೆತಿಲ್ಲ. ನಿಜ ಜೀವನದಲ್ಲಿ ಅನುಭವಿಸಿದ ಈ ವ್ಯಥೆ ಇದೀಗ ಕಥೆಯಾಗಿ ಬೆಳ್ಳಿತೆರೆಯಲ್ಲಿ ಮೂಡಲು ತಯಾರಾಗಿದೆ.

ಬಾಲಿವುಡ್​ ಖ್ಯಾತ ನಿರ್ದೇಶಕ ಅನುಭವ್​ ಸಿನ್ಹಾ ಅವರ ಭೀಡ್​ ಚಿತ್ರ ಇದೇ ಮಾರ್ಚ್​ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇಡೀ ಸಿನಿಮಾವನ್ನು ಕಪ್ಪು ಬಿಳುಪಿನಲ್ಲಿ ಚಿತ್ರೀಕರಿಸಲಾಗಿದೆ. ಬನಾರಸ್ ಮೀಡಿಯಾ ವರ್ಕ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್ ಹೀರೋ ರಾಜ್‌ಕುಮಾರ್ ರಾವ್ ಜೊತೆಗೆ ಭೂಮಿ ಪೆಡ್ನೇಕರ್ ನಟಿಸುತ್ತಿದ್ದಾರೆ. ಇವರೊಂದಿಗೆ ಪಂಕಜ್ ಕಪೂರ್, ಅಶುತೋಷ್ ರಾಣಾ, ದಿಯಾ ಮಿರ್ಜಾ, ವೀರೇಂದ್ರ ಸಕ್ಸೇನಾ, ಆದಿತ್ಯ ಶ್ರೀವಾಸ್ತವ್, ಕೃತಿಕಾ ಕಾಮ್ರಾ, ಕರಣ್ ಪಂಡಿತ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಸ್ವರಾ ಫಹಾದ್​ ಅದ್ದೂರಿ ಮದುವೆಗೆ ಕ್ಷಣಗಣನೆ; ದೀಪಾಲಂಕೃತ ಮನೆ ಫೋಟೋ ಹಂಚಿಕೊಂಡ ನಟಿ

ಬಾಲಿವುಡ್​ ಸೂಪರ್​ಸ್ಟಾರ್​ಗಳಾದ ರಾಜ್​ಕುಮಾರ್ ರಾವ್​​ ಮತ್ತು ಭೂಮಿ ಪೆಡ್ನೇಕರ್ ಅಭಿನಯದ ಭೀಡ್​​ (Bheed) ಚಿತ್ರದ ಟ್ರೇಲರ್​​ ಬಿಡುಗಡೆಯಾಗಿದೆ. ಚಿತ್ರತಂಡ ಶುಕ್ರವಾರ ಬೆಳಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೇಲರ್ ಅನ್ನು ಅನಾವರಣಗೊಳಿಸಿದ್ದಾರೆ. ಎರಡು ನಿಮಿಷ, 39 ಸೆಕೆಂಡುಗಳ ಟ್ರೇಲರ್​ ಇದಾಗಿದೆ. ಅನುಭವ್​ ಸಿನ್ಹಾ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದ್ದು, ಕೋವಿಡ್​ ಸಮಯದಲ್ಲಿನ ಲಾಕ್​ಡೌನ್​ ಕಥೆಯನ್ನು ಹೇಳುತ್ತದೆ.

  • " class="align-text-top noRightClick twitterSection" data="">

ಚಿತ್ರಕಥೆ ಹೀಗಿದೆ.. 2020 ರಲ್ಲಿ ದೇಶವನ್ನಷ್ಟೇ ಅಲ್ಲ, ಇಡೀ ವಿಶ್ವವನ್ನೇ ಕೋವಿಡ್​ ಎಂಬ ಸಾಂಕ್ರಾಮಿಕ ರೋಗ ಅಲ್ಲೋಲ ಕಲ್ಲೋಲ ಮಾಡಿತ್ತು. ಚೀನಾದಿಂದ ಬಂದ ಕೊರೊನಾ ಪ್ರಪಂಚದಾದ್ಯಂತ ಹಬ್ಬಿತ್ತು. ಈ ಒಂದು ವೈರಸ್​ ಅದೆಷ್ಟೋ ಮಂದಿಗೆ ಬಾಧಿಸಿದ್ದು ಮಾತ್ರವಲ್ಲದೇ, ಅನೇಕರನ್ನು ಬೀದಿಗೆ ತಳ್ಳಿತ್ತು. ತಮ್ಮ ಪ್ರಾಣವನ್ನು ಅಂಗೈಯಲ್ಲಿ ಇಟ್ಟುಕೊಂಡು ಒಂದು ಹೊತ್ತು ತಿನ್ನಲು ಪರದಾಡುವ ಸ್ಥಿತಿ ಜನರಲ್ಲಿ ನಿರ್ಮಾಣವಾಗಿತ್ತು. ಕೋವಿಡ್​ ಹರಡುವಿಕೆಯನ್ನು ತಡೆಯಲು ಸರ್ಕಾರ ಲಾಕ್​ಡೌನ್​ ಜಾರಿಗೆ ತಂದಿತು. ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು ಎಂಬ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಲಾಗಿತ್ತು.

ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಜನರಿಗೆ ಸರಿಯಾಗಿದ್ದರೂ ಸಹ ದೂರದ ಊರುಗಳಿಂದ ಉದ್ಯೋಗಕ್ಕಾಗಿ ಬಂದವರಿಗೆ ಈ ನಿಬಂಧನೆ ತುಂಬಾ ತೊಂದರೆಯಾಗಿ ಪರಿಣಮಿಸಿತ್ತು. ವಲಸೆ ಕಾರ್ಮಿಕರ ಪರಿಸ್ಥಿತಿಯಂತು ಹೇಳತೀರದ್ದಾಗಿತ್ತು. ಲಾಕ್​ಡೌನ್​ನಿಂದಾಗಿ ಎಲ್ಲ ಕೆಲಸಗಳು ಒಂದೇ ಬಾರಿಗೆ ನಿಂತು ಹೋಗಿದ್ದವು. ಜೊತೆಗೆ ಕೆಲಸ ಕೂಡ ಕಳೆದುಕೊಂಡ ಜನರಿಗೆ ತಮ್ಮ ಊರಿಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿತ್ತು. ತಮ್ಮ ಸ್ವಂತ ಊರು ತಲುಪಲು ದಾರಿ ಕಾಣದೇ ಕಂಗಾಲಾಗಿ ಹೋಗಿದ್ದರು.

ಇದನ್ನೂ ಓದಿ: ಆಸ್ಕರ್​​ ವೇದಿಕೆಯಲ್ಲಿ RRR​ ಭಾರತವನ್ನು ಹೃದಯದಲ್ಲಿಟ್ಟುಕೊಂಡು ಹೆಜ್ಜೆ ಹಾಕಲಿದೆ: ಜೂ.ಎನ್​​ಟಿಆರ್​

ಆದರೆ, ಕೆಲವರು ಹೇಗಾದರೂ ಮಾಡಿ ಮನೆ ತಲುಪಲು ನಡೆದುಕೊಂಡೇ ಹೋಗಲು ತೀರ್ಮಾನಿಸಿದ್ದರು. ಆದರೆ, ಅವರಿಗೆ ಅದರಲ್ಲೂ ಕಹಿ ಅನುಭವಗಳು ಎದುರಾದವು. ಹಸಿವು ನೀಗಿಸಲು ಎಲ್ಲೋ ಒಂದು ಕಡೆ ನಿಂತರೆ ಆ ಹಳ್ಳಿ ಜನ ಅವರನ್ನು ಹತ್ತಿರಕ್ಕೂ ಸೇರಿಸಿಕೊಳ್ಳುತ್ತಿರಲಿಲ್ಲ. ಕೆಲವೆಡೆ ಪೊಲೀಸರು ಅಂತಹವರ ಮೇಲೆ ಹಲ್ಲೆ ನಡೆಸಿದ್ದೂ ಇದೆ. ಇಂತಹ ಇನ್ನೂ ಅನೇಕ ಘಟನೆಗಳು ನಡೆದಿವೆ. ಇದ್ಯಾವುದನ್ನೂ ಜನ ಮರೆತಿಲ್ಲ. ನಿಜ ಜೀವನದಲ್ಲಿ ಅನುಭವಿಸಿದ ಈ ವ್ಯಥೆ ಇದೀಗ ಕಥೆಯಾಗಿ ಬೆಳ್ಳಿತೆರೆಯಲ್ಲಿ ಮೂಡಲು ತಯಾರಾಗಿದೆ.

ಬಾಲಿವುಡ್​ ಖ್ಯಾತ ನಿರ್ದೇಶಕ ಅನುಭವ್​ ಸಿನ್ಹಾ ಅವರ ಭೀಡ್​ ಚಿತ್ರ ಇದೇ ಮಾರ್ಚ್​ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇಡೀ ಸಿನಿಮಾವನ್ನು ಕಪ್ಪು ಬಿಳುಪಿನಲ್ಲಿ ಚಿತ್ರೀಕರಿಸಲಾಗಿದೆ. ಬನಾರಸ್ ಮೀಡಿಯಾ ವರ್ಕ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್ ಹೀರೋ ರಾಜ್‌ಕುಮಾರ್ ರಾವ್ ಜೊತೆಗೆ ಭೂಮಿ ಪೆಡ್ನೇಕರ್ ನಟಿಸುತ್ತಿದ್ದಾರೆ. ಇವರೊಂದಿಗೆ ಪಂಕಜ್ ಕಪೂರ್, ಅಶುತೋಷ್ ರಾಣಾ, ದಿಯಾ ಮಿರ್ಜಾ, ವೀರೇಂದ್ರ ಸಕ್ಸೇನಾ, ಆದಿತ್ಯ ಶ್ರೀವಾಸ್ತವ್, ಕೃತಿಕಾ ಕಾಮ್ರಾ, ಕರಣ್ ಪಂಡಿತ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಸ್ವರಾ ಫಹಾದ್​ ಅದ್ದೂರಿ ಮದುವೆಗೆ ಕ್ಷಣಗಣನೆ; ದೀಪಾಲಂಕೃತ ಮನೆ ಫೋಟೋ ಹಂಚಿಕೊಂಡ ನಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.