ETV Bharat / entertainment

ವಿಷ್ಣುವರ್ಧನ್​ಗೆ ದೇವರ ಸ್ಥಾನ ಕೊಟ್ಟ ಅವಿನಾಶ್, ಮಾಳವಿಕಾ: ಮಗನ ಸ್ಥಿತಿ ನೆನೆದು ದಂಪತಿ ಭಾವುಕ!

author img

By

Published : Apr 23, 2023, 12:58 PM IST

'ವೀಕೆಂಡ್​​ ವಿತ್​ ರಮೇಶ್' ಶೋನಲ್ಲಿ ನಟ ಅವಿನಾಶ್ ಭಾಗಿಯಾಗಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ವಿಶೇಷಚೇತನ ಮಗನನ್ನು ನೆನೆದು ಭಾವುಕರಾದ ಅವಿನಾಶ್ ಮತ್ತು ಮಾಳವಿಕಾ ದಂಪತಿ

weekend with Ramesh
ವೀಕೆಂಡ್​​ ವಿತ್​ ರಮೇಶ್

ಕನ್ನಡದ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್​​ ವಿತ್​ ರಮೇಶ್' ಸಾಧಕರ ಸೀಟ್​ನಲ್ಲಿ ನಟ ಅವಿನಾಶ್ ಕುಳಿತು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಬಾಲ್ಯ, ಶಿಕ್ಷಣ, ಉದ್ಯೋಗ, ರಂಗಭೂಮಿ, ಸಿನಿಮಾ, ಕುಟುಂಬ ಹೀಗೆ ಹಲವು ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರತೀ ಶನಿವಾರ ಮತ್ತು ಭಾನುವಾರ ಪ್ರಸಾರವಾಗುವ ಈ ಕಾರ್ಯಕ್ರಮದ ಆರನೇ ಅತಿಥಿಯಾಗಿ ನಟ ಅವಿನಾಶ್ ಗಮನ ಸೆಳೆದಿದ್ದಾರೆ.

ಪ್ರಮುಖ ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಾ ಬಂದಿರುವ ಅವಿನಾಶ್​ ಈಗಲೂ ಸ್ಯಾಂಡಲ್​ವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಇಂಗ್ಲಿಷ್​​ ಭಾಷೆ ಬಾರದವರು ಸಾಕಷ್ಟು ಶ್ರಮಿಸಿ ಕೊನೆಗೆ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತ ಉತ್ತಮ ಕನ್ನಡವೂ ಬಾರದಿದ್ದ ಸಮಯದಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಹೀಗೆ ಹಲವು ಸಾಧನೆ, ಏರಿಳಿತಗಳು ಈ ಕಾರ್ಯಕ್ರಮದ ಮೂಲಕ ಪ್ರೇಕ್ಷಕರ ಮುಂದೆ ಅನಾವರಣಗೊಂಡಿದೆ.

ನಟ ಅವಿನಾಶ್​​ ಯಳಂದೂರಿನವರು. ತಂದೆ ವಕೀಲ, ರೈತರಾಗಿ ಕೆಲಸ ಮಾಡಿದ್ದಾರೆ. ಬಾಲ್ಯದಲ್ಲಿಯೂ ಸಾಕಷ್ಟು ಆ್ಯಕ್ಟೀವ್ ಇದ್ದ ಅವಿನಾಶ್​ ಅವರಿಗೆ ಸರಿಯಾಗಿ ಇಂಗ್ಲಿಷ್​​ ಬರುತ್ತಿರಲಿಲ್ಲ. ತಮ್ಮ ಸಹೋದರಿಯೊಂದಿಗೆ ಕಾರ್ಯಕ್ರಮವೊಂದಕ್ಕೆ ಹೋದಾಗ ಯಾರೋ ಅವರ ಬಳಿ ಇಂಗ್ಲಿಷ್​ನಲ್ಲಿ ಮಾತನಾಡಿದ್ದು, ಪ್ರತಿಕ್ರಿಯಿಸಲು ಅವಿನಾಶ್​ ಅವರಿಗೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಆಂಗ್ಲ ಭಾಷೆ ಮೇಲೆ ಹಿಡಿತ ಸಾಧಿಸಬೇಕೆಂದು ಹಠ ತೊಟ್ಟು, ಇಂಗ್ಲಿಷ್​ ಕಲಿಯುತ್ತಾರೆ. ಎಂಎ ಪದವಿಯನ್ನು ಇಂಗ್ಲೀಷ್ ಅನ್ನೇ ಆರಿಸಿಕೊಂಡು ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾರೆ. ಜೊತೆಗೆ ರಂಗಭೂಮಿಯಲ್ಲಿಯೂ ಅವಿನಾಶ್ ಗುರುತಿಸಿಕೊಂಡಿದ್ದರು.

ನಾಟಕ ವರ್ಕ್​ಶಾಪ್​ವೊಂದು ಈ ನಟನನ್ನು ಭಾರೀ ಸೆಳೆಯಿತು. ಬಳಿಕ ಸ್ಪಂದನ ಎಂಬ ನಾಟಕ ತಂಡ ಸೇರಿ ಅಲ್ಲಿ ಹಲವು ನಾಟಕಗಳನ್ನು ಮಾಡಿದ್ದಾರೆ. ಇದೇ ತಂಡದಲ್ಲಿ ನಟ ದೇವರಾಜ್ ಕೂಡ ಪರಿಚಯರಾದರು. ದೇವರಾಜ್​ ಅವರು ಸಿನಿಮಾ ಆಡಿಶನ್​ ಒಂದಕ್ಕೆ ಕರೆದುಕೊಂಡು ಹೋದರು. ಅಲ್ಲಿ ಈ ಇಬ್ಬರಿಗೂ ಅವಕಾಶ ಒದಗಿಬಂತು. ರಂಗಭೂಮಿ ಜೊತೆಗೆ ಸಿನಿಮಾಗಳಲ್ಲಿಯೂ ಅವಿನಾಶ್ ಕೆಲಸ ಮಾಡಿದರು. ಬಳಿಕ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡರು. ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಟೀಲು ದುರ್ಗಾಪರಮೇಶ್ವರಿ ದೇವಿಗೆ ಹರಕೆ ಸೀರೆ ಒಪ್ಪಿಸಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

ಇನ್ನೂ ಅವಿನಾಶ್ ಹಾಗೂ ಮಾಳವಿಕಾ ಅವರು ಸಾಹಸಸಿಂಹ ವಿಷ್ಣುವರ್ಧನ್​ ಅವರಿಗೆ ದೇವರ ಸ್ಥಾನ ಕೊಟ್ಟಿದ್ದಾರೆ. ದೇವರ ಮನೆಯಲ್ಲಿ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ವಿಷ್ಣುವರ್ಧನ್​ ಅವರ ಫೋಟೋ ಇದೆ. ಅವಿನಾಶ್ ಮಾಳವಿಕಾ ದಂಪತಿ ಮೇಲೆ ವಿಶೇಷ ಪ್ರೀತಿ ಹೊಂದಿದ್ದರು ವಿಷ್ಣುವರ್ಧನ್​.

ಇದನ್ನೂ ಓದಿ: ಮೂರು ಬಾರಿ 'ಕಾಂತಾರ' ನೋಡಿದೆ, ಸಿನಿಮಾ ಕ್ಲೈಮ್ಯಾಕ್ಸ್​ ಮೈ ಜುಮ್ಮೆನಿಸಿತು: ಕನ್ನಡ ಚಿತ್ರಗಳನ್ನು ಕೊಂಡಾಡಿದ ನಟ ವಿಕ್ರಮ್​

2001ರಲ್ಲಿ ಮಾಳವಿಕಾ ಅವರನ್ನು ಮದುವೆಯಾದ ಅವಿನಾಶ್ ಒಂದೇ ಧಾರವಾಹಿಯಲ್ಲಿ ನಟಿಸಿ ಸ್ನೇಹಿತರಾದವರು. ಇವರಿಗೆ ಗಾಲವ್​ ಎಂಬ ಪುತ್ರನಿದ್ದಾನೆ. ವಿಶೇಷ ಚೇತನರಾಗಿರುವ ಗಾಲವ್​ ಬಗ್ಗೆ ಮಾತನಾಡಿ ಕಾರ್ಯಕ್ರಮದಲ್ಲಿ ಈ ದಂಪತಿ ಭಾವುಕರಾದರು. ಇನ್ನು ಭಾನುವಾರ ಪ್ರಸಾರ ಆಗುವ ಎಪಿಸೋಡ್​ನಲ್ಲಿ ಮಂಡ್ಯ ರಮೇಶ್​ ಸಾಧಕರ ಸೀಟು ಅಲಂಕರಿಸಿದ್ದಾರೆ. ರಂಗಭೂಮಿಯಿಂದ ಸಿನಿಮಾಗೆ ಬಂದಿರುವ ರಮೇಶ್​​​ ಸುಮಾರು ಮೂರು ದಶಕಕ್ಕೂ ಹೆಚ್ಚು ಸಮಯದಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಕನ್ನಡದ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್​​ ವಿತ್​ ರಮೇಶ್' ಸಾಧಕರ ಸೀಟ್​ನಲ್ಲಿ ನಟ ಅವಿನಾಶ್ ಕುಳಿತು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಬಾಲ್ಯ, ಶಿಕ್ಷಣ, ಉದ್ಯೋಗ, ರಂಗಭೂಮಿ, ಸಿನಿಮಾ, ಕುಟುಂಬ ಹೀಗೆ ಹಲವು ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರತೀ ಶನಿವಾರ ಮತ್ತು ಭಾನುವಾರ ಪ್ರಸಾರವಾಗುವ ಈ ಕಾರ್ಯಕ್ರಮದ ಆರನೇ ಅತಿಥಿಯಾಗಿ ನಟ ಅವಿನಾಶ್ ಗಮನ ಸೆಳೆದಿದ್ದಾರೆ.

ಪ್ರಮುಖ ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಾ ಬಂದಿರುವ ಅವಿನಾಶ್​ ಈಗಲೂ ಸ್ಯಾಂಡಲ್​ವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಇಂಗ್ಲಿಷ್​​ ಭಾಷೆ ಬಾರದವರು ಸಾಕಷ್ಟು ಶ್ರಮಿಸಿ ಕೊನೆಗೆ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತ ಉತ್ತಮ ಕನ್ನಡವೂ ಬಾರದಿದ್ದ ಸಮಯದಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಹೀಗೆ ಹಲವು ಸಾಧನೆ, ಏರಿಳಿತಗಳು ಈ ಕಾರ್ಯಕ್ರಮದ ಮೂಲಕ ಪ್ರೇಕ್ಷಕರ ಮುಂದೆ ಅನಾವರಣಗೊಂಡಿದೆ.

ನಟ ಅವಿನಾಶ್​​ ಯಳಂದೂರಿನವರು. ತಂದೆ ವಕೀಲ, ರೈತರಾಗಿ ಕೆಲಸ ಮಾಡಿದ್ದಾರೆ. ಬಾಲ್ಯದಲ್ಲಿಯೂ ಸಾಕಷ್ಟು ಆ್ಯಕ್ಟೀವ್ ಇದ್ದ ಅವಿನಾಶ್​ ಅವರಿಗೆ ಸರಿಯಾಗಿ ಇಂಗ್ಲಿಷ್​​ ಬರುತ್ತಿರಲಿಲ್ಲ. ತಮ್ಮ ಸಹೋದರಿಯೊಂದಿಗೆ ಕಾರ್ಯಕ್ರಮವೊಂದಕ್ಕೆ ಹೋದಾಗ ಯಾರೋ ಅವರ ಬಳಿ ಇಂಗ್ಲಿಷ್​ನಲ್ಲಿ ಮಾತನಾಡಿದ್ದು, ಪ್ರತಿಕ್ರಿಯಿಸಲು ಅವಿನಾಶ್​ ಅವರಿಗೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಆಂಗ್ಲ ಭಾಷೆ ಮೇಲೆ ಹಿಡಿತ ಸಾಧಿಸಬೇಕೆಂದು ಹಠ ತೊಟ್ಟು, ಇಂಗ್ಲಿಷ್​ ಕಲಿಯುತ್ತಾರೆ. ಎಂಎ ಪದವಿಯನ್ನು ಇಂಗ್ಲೀಷ್ ಅನ್ನೇ ಆರಿಸಿಕೊಂಡು ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾರೆ. ಜೊತೆಗೆ ರಂಗಭೂಮಿಯಲ್ಲಿಯೂ ಅವಿನಾಶ್ ಗುರುತಿಸಿಕೊಂಡಿದ್ದರು.

ನಾಟಕ ವರ್ಕ್​ಶಾಪ್​ವೊಂದು ಈ ನಟನನ್ನು ಭಾರೀ ಸೆಳೆಯಿತು. ಬಳಿಕ ಸ್ಪಂದನ ಎಂಬ ನಾಟಕ ತಂಡ ಸೇರಿ ಅಲ್ಲಿ ಹಲವು ನಾಟಕಗಳನ್ನು ಮಾಡಿದ್ದಾರೆ. ಇದೇ ತಂಡದಲ್ಲಿ ನಟ ದೇವರಾಜ್ ಕೂಡ ಪರಿಚಯರಾದರು. ದೇವರಾಜ್​ ಅವರು ಸಿನಿಮಾ ಆಡಿಶನ್​ ಒಂದಕ್ಕೆ ಕರೆದುಕೊಂಡು ಹೋದರು. ಅಲ್ಲಿ ಈ ಇಬ್ಬರಿಗೂ ಅವಕಾಶ ಒದಗಿಬಂತು. ರಂಗಭೂಮಿ ಜೊತೆಗೆ ಸಿನಿಮಾಗಳಲ್ಲಿಯೂ ಅವಿನಾಶ್ ಕೆಲಸ ಮಾಡಿದರು. ಬಳಿಕ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡರು. ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಟೀಲು ದುರ್ಗಾಪರಮೇಶ್ವರಿ ದೇವಿಗೆ ಹರಕೆ ಸೀರೆ ಒಪ್ಪಿಸಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

ಇನ್ನೂ ಅವಿನಾಶ್ ಹಾಗೂ ಮಾಳವಿಕಾ ಅವರು ಸಾಹಸಸಿಂಹ ವಿಷ್ಣುವರ್ಧನ್​ ಅವರಿಗೆ ದೇವರ ಸ್ಥಾನ ಕೊಟ್ಟಿದ್ದಾರೆ. ದೇವರ ಮನೆಯಲ್ಲಿ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ವಿಷ್ಣುವರ್ಧನ್​ ಅವರ ಫೋಟೋ ಇದೆ. ಅವಿನಾಶ್ ಮಾಳವಿಕಾ ದಂಪತಿ ಮೇಲೆ ವಿಶೇಷ ಪ್ರೀತಿ ಹೊಂದಿದ್ದರು ವಿಷ್ಣುವರ್ಧನ್​.

ಇದನ್ನೂ ಓದಿ: ಮೂರು ಬಾರಿ 'ಕಾಂತಾರ' ನೋಡಿದೆ, ಸಿನಿಮಾ ಕ್ಲೈಮ್ಯಾಕ್ಸ್​ ಮೈ ಜುಮ್ಮೆನಿಸಿತು: ಕನ್ನಡ ಚಿತ್ರಗಳನ್ನು ಕೊಂಡಾಡಿದ ನಟ ವಿಕ್ರಮ್​

2001ರಲ್ಲಿ ಮಾಳವಿಕಾ ಅವರನ್ನು ಮದುವೆಯಾದ ಅವಿನಾಶ್ ಒಂದೇ ಧಾರವಾಹಿಯಲ್ಲಿ ನಟಿಸಿ ಸ್ನೇಹಿತರಾದವರು. ಇವರಿಗೆ ಗಾಲವ್​ ಎಂಬ ಪುತ್ರನಿದ್ದಾನೆ. ವಿಶೇಷ ಚೇತನರಾಗಿರುವ ಗಾಲವ್​ ಬಗ್ಗೆ ಮಾತನಾಡಿ ಕಾರ್ಯಕ್ರಮದಲ್ಲಿ ಈ ದಂಪತಿ ಭಾವುಕರಾದರು. ಇನ್ನು ಭಾನುವಾರ ಪ್ರಸಾರ ಆಗುವ ಎಪಿಸೋಡ್​ನಲ್ಲಿ ಮಂಡ್ಯ ರಮೇಶ್​ ಸಾಧಕರ ಸೀಟು ಅಲಂಕರಿಸಿದ್ದಾರೆ. ರಂಗಭೂಮಿಯಿಂದ ಸಿನಿಮಾಗೆ ಬಂದಿರುವ ರಮೇಶ್​​​ ಸುಮಾರು ಮೂರು ದಶಕಕ್ಕೂ ಹೆಚ್ಚು ಸಮಯದಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.