ETV Bharat / entertainment

ಡಾ. ರಾಜ್​ಕುಮಾರ್ ಅವರಿಗೂ ಕ್ರಿಕೆಟ್ ಮೇಲೆ ಪ್ರೀತಿಯಿತ್ತು: ಅನಿಲ್ ಕುಂಬ್ಳೆ

author img

By

Published : Jun 23, 2022, 1:29 PM IST

ಬುಧವಾರ ಶಿವರಾಜ್​ಕುಮಾರ್​ 125ನೇ ಸಿನಿಮಾದ ಟೈಟಲ್​ ಪೋಸ್ಟರ್​​ ಹಾಗೂ ಗೀತಾ ಪಿಕ್ಚರ್ಸ್​​ ಬ್ಯಾನರ್​ ಅನಾವರಣ ಮಾಡಲಾಯಿತು. ಈ ವೇಳೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಡಾ. ರಾಜ್​ಕುಮಾರ್ ಕುಟುಂಬದ ಜೊತೆಗಿರುವ ಕೆಲ ಇಂಟ್ರೆಸ್ಟ್ರಿಂಗ್ ವಿಚಾರಗಳನ್ನು ಹಂಚಿಕೊಂಡರು.

anil kumble speaks about dr rajkumar family
ಡಾ. ರಾಜ್​ಕುಮಾರ್ ಕುಟುಂಬದ ಬಗ್ಗೆ ಮಾತನಾಡಿದ ಅನಿಲ್​ ಕುಂಬ್ಳೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 125ನೇ ಸಿನಿಮಾದ ಫಸ್ಟ್ ಲುಕ್‌ ಅನಾವರಣ ಕಾರ್ಯಕ್ರಮ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಜರುಗಿತು. ಈ ಅದ್ಧೂರಿ ಕಾರ್ಯಕ್ರಮಕ್ಕೆ ಖ್ಯಾತ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಪತ್ನಿ ಜೊತೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಶಿವರಾಜ್ ಕುಮಾರ್ ವೇದಾ ಸಿನಿಮಾ ಹಾಗು ಗೀತಾ ಪಿಕ್ಚರ್ಸ್​ ಬ್ಯಾನರ್ ಬಗ್ಗೆ ಮಾತು ಶುರು ಮಾಡಿದ ಅನಿಲ್ ಕುಂಬ್ಳೆ, ಡಾ. ರಾಜ್​ಕುಮಾರ್ ಕುಟುಂಬದ ಜೊತೆಗಿರುವ ಕೆಲ ಇಂಟ್ರೆಸ್ಟ್ರಿಂಗ್ ವಿಚಾರಗಳನ್ನು ಹಂಚಿಕೊಂಡರು.

ಪುನೀತ್ ರಾಜ್‍ಕುಮಾರ್ ಇದ್ದಾಗ ಶಿವಣ್ಣ ಗೀತಾ ಪಿಕ್ಚರ್ಸ್​ ಬ್ಯಾನರ್ ಅನ್ನು ಲಾಂಚ್ ಮಾಡೋದಿಕ್ಕೆ ನೀವು ಬರಬೇಕು ಅಂತಾ ಪುನೀತ್ ಸಮ್ಮುಖದಲ್ಲಿ ಫೋನ್ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಅಪ್ಪು ನಮ್ಮನ್ನು ಅಗಲಿದ್ದಾರೆ. ಅಪ್ಪು ಅಗಲಿದರೂ ಅವರು ಯಾವತ್ತೂ ನಮ್ಮ ಜೊತೆನೇ ಇರುತ್ತಾರೆ ಅಂತಾ ಪುನೀತ್​ರನ್ನು ಸ್ಮರಿಸಿದರು.

ಡಾ. ರಾಜ್​ಕುಮಾರ್ ಕುಟುಂಬದ ಬಗ್ಗೆ ಮಾತನಾಡಿದ ಅನಿಲ್​ ಕುಂಬ್ಳೆ

ಕನ್ನಡ ಚಿತ್ರರಂಗಕ್ಕೆ ಡಾ. ರಾಜ್‌ಕುಮಾರ್ ಕುಟುಂಬ ಅಪಾರ ಕೊಡುಗೆ ನೀಡಿದೆ. ಶಿವ ರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್ ಹಾಗು ಪುನೀತ್ ರಾಜ್​ಕುಮಾರ್​ಗೆ ಕ್ರಿಕೆಟ್ ಅಂದ್ರೆ ಪ್ರೀತಿ. ಅದರಲ್ಲೂ ನಮ್ಮ ಕನ್ನಡದ ಆಟಗಾರರ ಮೇಲೆ ತುಂಬಾನೇ ಪ್ರೀತಿ ಗೌರವ ಇಟ್ಟುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮ್ಯಾಚ್ ಆಗುವಾಗ ಅಪ್ಪು, ಶಿವಣ್ಣ ಎಲ್ಲರೂ ಬರುತ್ತಿದ್ದರು ಎಂದರು.

ಅನಿಲ್ ಕುಂಬ್ಳೆ ಅವರು ತಮ್ಮ ಕ್ರಿಕೆಟ್ ಬ್ಯುಸಿ ಶೆಡ್ಯೂಲ್​ನಲ್ಲಿ ರಾಜ್​ಕುಮಾರ್ ಅವರನ್ನು ಒಮ್ಮೆ ಭೇಟಿ ಮಾಡಿ ಮಾತನಾಡಿಸಬೇಕೆಂದು ಅಂದುಕೊಂಡಿದ್ರಂತೆ. ಅದರಂತೆ ಒಂದು ದಿನ ಬೆಂಗಳೂರಿನಲ್ಲಿ ಮ್ಯಾಚ್ ನಡೆಯುತ್ತಿತ್ತು. ಆಗ ಮಳೆ ಬಂದು ಮ್ಯಾಚ್ ಎರಡು ಗಂಟೆ ಮುಂದಕ್ಕೆ ಹೋಗಿತ್ತು‌. ಆ ವೇಳೆ ಮೊಬೈಲ್ ಇರಲಿಲ್ಲ. ಆಗ ನಾನು ಮತ್ತು ಜಾವಗಲ್ ಶ್ರೀನಾಥ್ ಅಣ್ಣಾವ್ರನ್ನು ನೋಡೋದಕ್ಕೆ ಅವರ ಮನೆಗೆ ಹೋಗಿದ್ದೆವು. ಆಗ ಅಣ್ಣಾವ್ರು ನಮ್ಮನ್ನು ತುಂಬಾ ಗೌರವದೊಂದಿಗೆ ಬರಮಾಡಿಕೊಂಡು, ಸಾಕಷ್ಟು ವಿಚಾರಗಳನ್ನ ಮಾತನಾಡಿದರು. ಅಣ್ಣಾವ್ರು ಕ್ರಿಕೆಟ್ ಮೇಲಿದ್ದ ಪ್ರೀತಿಯನ್ನು ನಮ್ಮ ಜೊತೆ ಹಂಚಿಕೊಂಡರು ಅಂತಾ ಅನಿಲ್ ಕುಂಬ್ಳೆ ತಿಳಿಸಿದರು‌.

ಇದನ್ನೂ ಓದಿ: ಹ್ಯಾಟ್ರಿಕ್ ಹೀರೋ 125ನೇ ಸಿನಿಮಾ ಟೈಟಲ್ ಜೊತೆ ಗೀತಾ ಪಿಕ್ಚರ್ ಬ್ಯಾನರ್ ಲಾಂಚ್ ಮಾಡಿದ ಎವರ್ ಗ್ರೀನ್ ಹೀರೋ!

ನಟ ದುನಿಯಾ ವಿಜಯ್ ಮಾತನಾಡಿ, ಗೀತಾ ಪಿಕ್ಚರ್ಸ್ ಲಾಂಚ್ ಆಗಿದ್ದು ಬಹಳ ಖುಷಿ ಆಯ್ತು. ವೇದ ಚಿತ್ರಕ್ಕೆ ಶುಭವಾಗಲಿ. ನೂರು ಕಾಲ ಶಿವಣ್ಣ ಗೀತಕ್ಕ ಬಾಳಬೇಕು. ಇದನ್ನ ಹೇಳಲು ನಾನು ಚಿಕ್ಕವನು. ನಾನು ಶಿವಣ್ಣ ಜೊತೆಗೆ ನಟಿಸೋದು ತಡವಾಗ್ತಿದೆ ಎಂದು ವೇದ ಸಿನಿಮಾ ಆದ್ಮೇಲೆ ಶಿವರಾಜ್ ಕುಮಾರ್ ಜೊತೆ ದುನಿಯಾ ವಿಜಯ್ ಸಿನಿಮಾ ಮಾಡುವ ಸುಳಿವು ನೀಡಿದರು‌.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 125ನೇ ಸಿನಿಮಾದ ಫಸ್ಟ್ ಲುಕ್‌ ಅನಾವರಣ ಕಾರ್ಯಕ್ರಮ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಜರುಗಿತು. ಈ ಅದ್ಧೂರಿ ಕಾರ್ಯಕ್ರಮಕ್ಕೆ ಖ್ಯಾತ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಪತ್ನಿ ಜೊತೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಶಿವರಾಜ್ ಕುಮಾರ್ ವೇದಾ ಸಿನಿಮಾ ಹಾಗು ಗೀತಾ ಪಿಕ್ಚರ್ಸ್​ ಬ್ಯಾನರ್ ಬಗ್ಗೆ ಮಾತು ಶುರು ಮಾಡಿದ ಅನಿಲ್ ಕುಂಬ್ಳೆ, ಡಾ. ರಾಜ್​ಕುಮಾರ್ ಕುಟುಂಬದ ಜೊತೆಗಿರುವ ಕೆಲ ಇಂಟ್ರೆಸ್ಟ್ರಿಂಗ್ ವಿಚಾರಗಳನ್ನು ಹಂಚಿಕೊಂಡರು.

ಪುನೀತ್ ರಾಜ್‍ಕುಮಾರ್ ಇದ್ದಾಗ ಶಿವಣ್ಣ ಗೀತಾ ಪಿಕ್ಚರ್ಸ್​ ಬ್ಯಾನರ್ ಅನ್ನು ಲಾಂಚ್ ಮಾಡೋದಿಕ್ಕೆ ನೀವು ಬರಬೇಕು ಅಂತಾ ಪುನೀತ್ ಸಮ್ಮುಖದಲ್ಲಿ ಫೋನ್ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಅಪ್ಪು ನಮ್ಮನ್ನು ಅಗಲಿದ್ದಾರೆ. ಅಪ್ಪು ಅಗಲಿದರೂ ಅವರು ಯಾವತ್ತೂ ನಮ್ಮ ಜೊತೆನೇ ಇರುತ್ತಾರೆ ಅಂತಾ ಪುನೀತ್​ರನ್ನು ಸ್ಮರಿಸಿದರು.

ಡಾ. ರಾಜ್​ಕುಮಾರ್ ಕುಟುಂಬದ ಬಗ್ಗೆ ಮಾತನಾಡಿದ ಅನಿಲ್​ ಕುಂಬ್ಳೆ

ಕನ್ನಡ ಚಿತ್ರರಂಗಕ್ಕೆ ಡಾ. ರಾಜ್‌ಕುಮಾರ್ ಕುಟುಂಬ ಅಪಾರ ಕೊಡುಗೆ ನೀಡಿದೆ. ಶಿವ ರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್ ಹಾಗು ಪುನೀತ್ ರಾಜ್​ಕುಮಾರ್​ಗೆ ಕ್ರಿಕೆಟ್ ಅಂದ್ರೆ ಪ್ರೀತಿ. ಅದರಲ್ಲೂ ನಮ್ಮ ಕನ್ನಡದ ಆಟಗಾರರ ಮೇಲೆ ತುಂಬಾನೇ ಪ್ರೀತಿ ಗೌರವ ಇಟ್ಟುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮ್ಯಾಚ್ ಆಗುವಾಗ ಅಪ್ಪು, ಶಿವಣ್ಣ ಎಲ್ಲರೂ ಬರುತ್ತಿದ್ದರು ಎಂದರು.

ಅನಿಲ್ ಕುಂಬ್ಳೆ ಅವರು ತಮ್ಮ ಕ್ರಿಕೆಟ್ ಬ್ಯುಸಿ ಶೆಡ್ಯೂಲ್​ನಲ್ಲಿ ರಾಜ್​ಕುಮಾರ್ ಅವರನ್ನು ಒಮ್ಮೆ ಭೇಟಿ ಮಾಡಿ ಮಾತನಾಡಿಸಬೇಕೆಂದು ಅಂದುಕೊಂಡಿದ್ರಂತೆ. ಅದರಂತೆ ಒಂದು ದಿನ ಬೆಂಗಳೂರಿನಲ್ಲಿ ಮ್ಯಾಚ್ ನಡೆಯುತ್ತಿತ್ತು. ಆಗ ಮಳೆ ಬಂದು ಮ್ಯಾಚ್ ಎರಡು ಗಂಟೆ ಮುಂದಕ್ಕೆ ಹೋಗಿತ್ತು‌. ಆ ವೇಳೆ ಮೊಬೈಲ್ ಇರಲಿಲ್ಲ. ಆಗ ನಾನು ಮತ್ತು ಜಾವಗಲ್ ಶ್ರೀನಾಥ್ ಅಣ್ಣಾವ್ರನ್ನು ನೋಡೋದಕ್ಕೆ ಅವರ ಮನೆಗೆ ಹೋಗಿದ್ದೆವು. ಆಗ ಅಣ್ಣಾವ್ರು ನಮ್ಮನ್ನು ತುಂಬಾ ಗೌರವದೊಂದಿಗೆ ಬರಮಾಡಿಕೊಂಡು, ಸಾಕಷ್ಟು ವಿಚಾರಗಳನ್ನ ಮಾತನಾಡಿದರು. ಅಣ್ಣಾವ್ರು ಕ್ರಿಕೆಟ್ ಮೇಲಿದ್ದ ಪ್ರೀತಿಯನ್ನು ನಮ್ಮ ಜೊತೆ ಹಂಚಿಕೊಂಡರು ಅಂತಾ ಅನಿಲ್ ಕುಂಬ್ಳೆ ತಿಳಿಸಿದರು‌.

ಇದನ್ನೂ ಓದಿ: ಹ್ಯಾಟ್ರಿಕ್ ಹೀರೋ 125ನೇ ಸಿನಿಮಾ ಟೈಟಲ್ ಜೊತೆ ಗೀತಾ ಪಿಕ್ಚರ್ ಬ್ಯಾನರ್ ಲಾಂಚ್ ಮಾಡಿದ ಎವರ್ ಗ್ರೀನ್ ಹೀರೋ!

ನಟ ದುನಿಯಾ ವಿಜಯ್ ಮಾತನಾಡಿ, ಗೀತಾ ಪಿಕ್ಚರ್ಸ್ ಲಾಂಚ್ ಆಗಿದ್ದು ಬಹಳ ಖುಷಿ ಆಯ್ತು. ವೇದ ಚಿತ್ರಕ್ಕೆ ಶುಭವಾಗಲಿ. ನೂರು ಕಾಲ ಶಿವಣ್ಣ ಗೀತಕ್ಕ ಬಾಳಬೇಕು. ಇದನ್ನ ಹೇಳಲು ನಾನು ಚಿಕ್ಕವನು. ನಾನು ಶಿವಣ್ಣ ಜೊತೆಗೆ ನಟಿಸೋದು ತಡವಾಗ್ತಿದೆ ಎಂದು ವೇದ ಸಿನಿಮಾ ಆದ್ಮೇಲೆ ಶಿವರಾಜ್ ಕುಮಾರ್ ಜೊತೆ ದುನಿಯಾ ವಿಜಯ್ ಸಿನಿಮಾ ಮಾಡುವ ಸುಳಿವು ನೀಡಿದರು‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.