ETV Bharat / entertainment

ದೆಹಲಿ ಬಳಿಕ ಬಾಲಿವುಡ್​ ಮಂದಿಗಾಗಿ ಮುಂಬೈನಲ್ಲಿ ಅದ್ಧೂರಿ ಆರತಕ್ಷತೆಗೆ ಸಿದ್ಧರಾದ ಸಿದ್ಧಾರ್ಥ್-ಕಿಯಾರಾ

author img

By

Published : Feb 11, 2023, 11:02 AM IST

ರಾಜಸ್ಥಾನದಲ್ಲಿ ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಮದುವೆಯಾದ ಈ ಜೋಡಿ ಇದೀಗ ಮುಂಬೈನಲ್ಲಿ ತಮ್ಮ ಸಿನಿ ಕುಟುಂಬಕ್ಕಾಗಿ ಅದ್ಧೂರಿ ಆರತಕ್ಷತೆ ನಡೆಸಲು ಸಜ್ಜಾಗಿದ್ದಾರೆ.

ದೆಹಲಿ ಬಳಿಕ ಬಾಲಿವುಡ್​ ಮಂದಿಗಾಗಿ ಮುಂಬೈನಲ್ಲಿ ಅದ್ದೂರಿ ಆರತಕ್ಷತೆಗೆ ಸಿದ್ದರಾದ ಸಿದ್ಧಾರ್ಥ್​ ಕಿಯಾರಾ
after-delhi-siddharth-kiara-is-ready-for-a-lavish-reception-in-mumbai-for-bollywood-people

ಮುಂಬೈ: ಬಾಲಿವುಡ್​ನ ರೋಮ್ಯಾಂಟಿಕ್​ ಜೋಡಿಗಳಲ್ಲಿ ಒಂದಾಗಿರುವ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್​ ಮಲ್ಹೋತ್ರಾ ಇತ್ತೀಚೆಗಷ್ಟೇ ಎರಡು ಕುಟುಂಬಸ್ಥಗಳ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು. ರಾಜಸ್ಥಾನದ ಜೈಸಲ್ಮೇರ್​ನ ಸೂರ್ಯಗಢ ಕೋಟೆಯಲ್ಲಿ ನಡೆದ ಸಮಾರಂಭಕ್ಕೆ ಕೇವಲ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಇದೀಗ ಈ ಜೋಡಿ ಮುಂಬೈನಲ್ಲಿ ಅದ್ಧೂರಿ ಆರತಕ್ಷತೆಗೆ ಸಿದ್ಧರಾಗಿದ್ದಾರೆ. ಈ ಆರತಕ್ಷತೆ ಸಮಾರಂಭದಲ್ಲಿ ಬಾಲಿವುಡ್​ ಮಂದಿ ಭಾಗಿಯಾಗಲಿದ್ದು, ಮತ್ತೊಂದು ಅದ್ಧೂರಿ ಕಾರ್ಯಕ್ರಮ ನಡೆಸಲು ಜೋಡಿ ಸಜ್ಜಾಗಿದೆ. ಸದ್ಯ ರಾಜಸ್ಥಾನದ ಸೂರ್ಯಗಢ್​ ಅರಮನೆಯಲ್ಲಿ ನಡೆದ ಅದ್ಧೂರಿ ಮದುವೆ ಬಳಿಕ ಇದೀಗ ದೆಹಲಿಯಲ್ಲಿ ಸಿದ್ಧಾರ್ಥ್​​ ಮನೆಯಲ್ಲಿ ಈ ಜೋಡಿ ಹಲವು ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದಾರೆ.

ಮದುವೆ ಬಳಿಕ ಈ ಜೋಡಿ ಎರಡು ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಫೆ 9ರಂದು ದೆಹಲಿಯಲ್ಲಿ ಸ್ನೇಹಿತರು, ಕುಟುಂಬಸ್ಥರಿಗೆ ದೆಹಲಿಯ ಲೀಲಾ ಪ್ಯಾಲೇಸ್​ನಲ್ಲಿ ಫೆಬ್ರವರಿ 9ರಂದು ಆರತಕ್ಷತೆ ನಡೆಸಲಾಗಿತ್ತು. ಈಗ ಬಾಲಿವುಡ್​ ಮಂದಿಗಾಗಿ ಎರಡನೇ ಆರತಕ್ಷತೆಯನ್ನು ಮುಂಬೈನ ಸೇಂಟ್​ ರೆಜಿಸ್​ ಹೋಟೆಲ್​ನಲ್ಲಿ ಫೆ. 12ರಂದು(ಭಾನುವಾರ) ನಡೆಸಲು ಸಜ್ಜಾಗಿದ್ದಾರೆ. ದೆಹಲಿಯಲ್ಲಿ ಕುಟುಂಬಸ್ಥರಿಗಾಗಿ ನಡೆದ ಆರತಕ್ಷತೆಯಲ್ಲಿ ತುಂಬಾ ಸಿಂಪಲ್​ ಲುಕ್​ನಲ್ಲಿ ಕಿಯಾರಾ ಮತ್ತು ಸಿದ್ದಾರ್ಥ್​ ಕಂಡು ಬಂದಿದ್ದಾರೆ ಎನ್ನಲಾಗಿದೆ. ಮುಂಬೈ ಆರತಕ್ಷತೆಯಲ್ಲಿ ಮತ್ತೆ ಅವರು ಮನೀಷ್​ ಮಲ್ಹೋತ್ರಾ ವಸ್ತ್ರ ವಿನ್ಯಾಸದಲ್ಲಿ ಅದ್ದೂರಿಯಾಗಿ ಕಣ್ಸೆಳೆಯಬಹುದು ಎನ್ನಲಾಗಿದೆ. ಸಿದ್ದಾರ್ಥ್​ ಮತ್ತು ಕಿಯಾರಾ ಶನಿವಾರ ದೆಹಲಿಯಿಂದ ಮುಂಬೈಗೆ ಆಗಮಿಸಲಿದ್ದಾರೆ.

ಮದುವೆಯಲ್ಲಿ ಸಾಕಷ್ಟು ಗೌಪ್ಯತೆ ಕಾಪಾಡಿದ ಈ ಜೋಡಿಯ ಆರತಕ್ಷತೆಯ ಆಹ್ವಾನ ಪತ್ರಿಕೆ ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ. ವೆಬ್​ಲೊಯ್ಡ್​​ , ಸಿದ್ದಾರ್ಥ್​ ಕಿಯಾರಾ ಅವರ ಮುಂಬೈ ಆರತಕ್ಷತೆಯ ಆಹ್ವಾನ ಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ವೈರಲ್​ ಆಗಿದೆ. ಕಾರ್ಡ್​ನಲ್ಲಿ ಸಿದ್ದಾರ್ಥ್​​-ಕಿಯಾರಾ ನಗು ಮುಖದ ಫೋಟೋ ಕಾಣಬಹುದಾಗಿದ್ದು, ಜೊತೆಗೆ ಆರತಕ್ಷತೆ ನಡೆಯುವ ಸ್ಥಳ, ದಿನಾಂಕ ಮತ್ತು ಸಮಯ ದಾಖಲಾಗಿದೆ.

ಬಾಲಿವುಡ್​ ಮತ್ತು ಉದ್ಯಮಿಗಳು ಈ ಆರತಕ್ಷತೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಇನ್ನು ಮೂಲಗಳ ಪ್ರಕಾರ, ಕರಣ್​ ಜೋಹರ್​​, ಶಹೀದ್​ ಕಪೂರ್​​, ಮನೀಷ್​ ಮಲ್ಹೋತ್ರಾ, ಶಾರುಖ್​ ಖಾನ್​, ವರುಣ್​ ಧವನ್​, ಅಕ್ಷಯ್​ ಕುಮಾರ್​, ಪರಿಣಿತಿ ಚೋಪ್ರಾ, ಜೂಹಿ ಚಾವ್ಲಾ, ಅನಿಲ್​ ಕಪೂರ್​, ಅಜಯ್​ ದೇವಗನ್​ ಮತ್ತು ರಾಕುಲ್​ ಪ್ರೀತ್​​ ಸಿಂಗ್​ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ಸಿದ್ಧಾರ್ಥ್​- ಕಿಯಾರಾ ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆ ಬಗ್ಗೆ ಯಾವುದೇ ಗುಟ್ಟನ್ನು ಅವರು ಬಿಟ್ಟುಕೊಟ್ಟಿರಲಿಲ್ಲ. ಶೇರ್​ಶಾ ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ಅಭಿನಯಿಸಿದ್ದರು. ಮದುವೆ ವಿಷಯವನ್ನು ಈ ಜೋಡಿ ಫೋಟೋವನ್ನು ಹಂಚಿಕೊಂಡಿತ್ತು. ಖ್ಯಾತ ವಸ್ತ್ರ ವಿನ್ಯಾಸಕ ಮನಿಷ್​ ಮಲ್ಹೋತ್ರಾ ವಿನ್ಯಾಸಿತ ತಿಳಿ ಗುಲಾಬಿ ಬಣ್ಣದ ಲೆಹಂಗಾದಲ್ಲಿ ಕಿಯಾರಾ ಕಂಗೊಳಿಸಿದರೆ, ಕ್ರೀಮ್​ ಬಣ್ಣದ ಶೇರ್​ವಾನಿಯಲ್ಲಿ ನಟ ಸಿದ್ದಾರ್ಥ್​ ಮಿಂಚಿದ್ದರು. ಇನ್ನು ಮದುವೆಯ ಸಮಾರಂಭದಲ್ಲಿನ ವಿಡಿಯೋವನ್ನು ಕೂಡ ದೆಹಲಿ ಆರತಕ್ಷತೆಗೆ ಮುನ್ನ ಈ ಜೋಡಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ಸಿದ್ಧಾರ್ಥ್ ಕಿಯಾರಾ ವಿವಾಹ: ವಧುವಿನ ಕಡೆಯವರಿಗಿಂತ ವರನ ಅತಿಥಿಗಳ ಸಂಖ್ಯೆಯೇ ದುಪ್ಪಟ್ಟು!

ಮುಂಬೈ: ಬಾಲಿವುಡ್​ನ ರೋಮ್ಯಾಂಟಿಕ್​ ಜೋಡಿಗಳಲ್ಲಿ ಒಂದಾಗಿರುವ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್​ ಮಲ್ಹೋತ್ರಾ ಇತ್ತೀಚೆಗಷ್ಟೇ ಎರಡು ಕುಟುಂಬಸ್ಥಗಳ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು. ರಾಜಸ್ಥಾನದ ಜೈಸಲ್ಮೇರ್​ನ ಸೂರ್ಯಗಢ ಕೋಟೆಯಲ್ಲಿ ನಡೆದ ಸಮಾರಂಭಕ್ಕೆ ಕೇವಲ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಇದೀಗ ಈ ಜೋಡಿ ಮುಂಬೈನಲ್ಲಿ ಅದ್ಧೂರಿ ಆರತಕ್ಷತೆಗೆ ಸಿದ್ಧರಾಗಿದ್ದಾರೆ. ಈ ಆರತಕ್ಷತೆ ಸಮಾರಂಭದಲ್ಲಿ ಬಾಲಿವುಡ್​ ಮಂದಿ ಭಾಗಿಯಾಗಲಿದ್ದು, ಮತ್ತೊಂದು ಅದ್ಧೂರಿ ಕಾರ್ಯಕ್ರಮ ನಡೆಸಲು ಜೋಡಿ ಸಜ್ಜಾಗಿದೆ. ಸದ್ಯ ರಾಜಸ್ಥಾನದ ಸೂರ್ಯಗಢ್​ ಅರಮನೆಯಲ್ಲಿ ನಡೆದ ಅದ್ಧೂರಿ ಮದುವೆ ಬಳಿಕ ಇದೀಗ ದೆಹಲಿಯಲ್ಲಿ ಸಿದ್ಧಾರ್ಥ್​​ ಮನೆಯಲ್ಲಿ ಈ ಜೋಡಿ ಹಲವು ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದಾರೆ.

ಮದುವೆ ಬಳಿಕ ಈ ಜೋಡಿ ಎರಡು ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಫೆ 9ರಂದು ದೆಹಲಿಯಲ್ಲಿ ಸ್ನೇಹಿತರು, ಕುಟುಂಬಸ್ಥರಿಗೆ ದೆಹಲಿಯ ಲೀಲಾ ಪ್ಯಾಲೇಸ್​ನಲ್ಲಿ ಫೆಬ್ರವರಿ 9ರಂದು ಆರತಕ್ಷತೆ ನಡೆಸಲಾಗಿತ್ತು. ಈಗ ಬಾಲಿವುಡ್​ ಮಂದಿಗಾಗಿ ಎರಡನೇ ಆರತಕ್ಷತೆಯನ್ನು ಮುಂಬೈನ ಸೇಂಟ್​ ರೆಜಿಸ್​ ಹೋಟೆಲ್​ನಲ್ಲಿ ಫೆ. 12ರಂದು(ಭಾನುವಾರ) ನಡೆಸಲು ಸಜ್ಜಾಗಿದ್ದಾರೆ. ದೆಹಲಿಯಲ್ಲಿ ಕುಟುಂಬಸ್ಥರಿಗಾಗಿ ನಡೆದ ಆರತಕ್ಷತೆಯಲ್ಲಿ ತುಂಬಾ ಸಿಂಪಲ್​ ಲುಕ್​ನಲ್ಲಿ ಕಿಯಾರಾ ಮತ್ತು ಸಿದ್ದಾರ್ಥ್​ ಕಂಡು ಬಂದಿದ್ದಾರೆ ಎನ್ನಲಾಗಿದೆ. ಮುಂಬೈ ಆರತಕ್ಷತೆಯಲ್ಲಿ ಮತ್ತೆ ಅವರು ಮನೀಷ್​ ಮಲ್ಹೋತ್ರಾ ವಸ್ತ್ರ ವಿನ್ಯಾಸದಲ್ಲಿ ಅದ್ದೂರಿಯಾಗಿ ಕಣ್ಸೆಳೆಯಬಹುದು ಎನ್ನಲಾಗಿದೆ. ಸಿದ್ದಾರ್ಥ್​ ಮತ್ತು ಕಿಯಾರಾ ಶನಿವಾರ ದೆಹಲಿಯಿಂದ ಮುಂಬೈಗೆ ಆಗಮಿಸಲಿದ್ದಾರೆ.

ಮದುವೆಯಲ್ಲಿ ಸಾಕಷ್ಟು ಗೌಪ್ಯತೆ ಕಾಪಾಡಿದ ಈ ಜೋಡಿಯ ಆರತಕ್ಷತೆಯ ಆಹ್ವಾನ ಪತ್ರಿಕೆ ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ. ವೆಬ್​ಲೊಯ್ಡ್​​ , ಸಿದ್ದಾರ್ಥ್​ ಕಿಯಾರಾ ಅವರ ಮುಂಬೈ ಆರತಕ್ಷತೆಯ ಆಹ್ವಾನ ಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ವೈರಲ್​ ಆಗಿದೆ. ಕಾರ್ಡ್​ನಲ್ಲಿ ಸಿದ್ದಾರ್ಥ್​​-ಕಿಯಾರಾ ನಗು ಮುಖದ ಫೋಟೋ ಕಾಣಬಹುದಾಗಿದ್ದು, ಜೊತೆಗೆ ಆರತಕ್ಷತೆ ನಡೆಯುವ ಸ್ಥಳ, ದಿನಾಂಕ ಮತ್ತು ಸಮಯ ದಾಖಲಾಗಿದೆ.

ಬಾಲಿವುಡ್​ ಮತ್ತು ಉದ್ಯಮಿಗಳು ಈ ಆರತಕ್ಷತೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಇನ್ನು ಮೂಲಗಳ ಪ್ರಕಾರ, ಕರಣ್​ ಜೋಹರ್​​, ಶಹೀದ್​ ಕಪೂರ್​​, ಮನೀಷ್​ ಮಲ್ಹೋತ್ರಾ, ಶಾರುಖ್​ ಖಾನ್​, ವರುಣ್​ ಧವನ್​, ಅಕ್ಷಯ್​ ಕುಮಾರ್​, ಪರಿಣಿತಿ ಚೋಪ್ರಾ, ಜೂಹಿ ಚಾವ್ಲಾ, ಅನಿಲ್​ ಕಪೂರ್​, ಅಜಯ್​ ದೇವಗನ್​ ಮತ್ತು ರಾಕುಲ್​ ಪ್ರೀತ್​​ ಸಿಂಗ್​ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ಸಿದ್ಧಾರ್ಥ್​- ಕಿಯಾರಾ ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆ ಬಗ್ಗೆ ಯಾವುದೇ ಗುಟ್ಟನ್ನು ಅವರು ಬಿಟ್ಟುಕೊಟ್ಟಿರಲಿಲ್ಲ. ಶೇರ್​ಶಾ ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ಅಭಿನಯಿಸಿದ್ದರು. ಮದುವೆ ವಿಷಯವನ್ನು ಈ ಜೋಡಿ ಫೋಟೋವನ್ನು ಹಂಚಿಕೊಂಡಿತ್ತು. ಖ್ಯಾತ ವಸ್ತ್ರ ವಿನ್ಯಾಸಕ ಮನಿಷ್​ ಮಲ್ಹೋತ್ರಾ ವಿನ್ಯಾಸಿತ ತಿಳಿ ಗುಲಾಬಿ ಬಣ್ಣದ ಲೆಹಂಗಾದಲ್ಲಿ ಕಿಯಾರಾ ಕಂಗೊಳಿಸಿದರೆ, ಕ್ರೀಮ್​ ಬಣ್ಣದ ಶೇರ್​ವಾನಿಯಲ್ಲಿ ನಟ ಸಿದ್ದಾರ್ಥ್​ ಮಿಂಚಿದ್ದರು. ಇನ್ನು ಮದುವೆಯ ಸಮಾರಂಭದಲ್ಲಿನ ವಿಡಿಯೋವನ್ನು ಕೂಡ ದೆಹಲಿ ಆರತಕ್ಷತೆಗೆ ಮುನ್ನ ಈ ಜೋಡಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ಸಿದ್ಧಾರ್ಥ್ ಕಿಯಾರಾ ವಿವಾಹ: ವಧುವಿನ ಕಡೆಯವರಿಗಿಂತ ವರನ ಅತಿಥಿಗಳ ಸಂಖ್ಯೆಯೇ ದುಪ್ಪಟ್ಟು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.