ETV Bharat / entertainment

ಪರಭಾಷಾ ಚಿತ್ರದಲ್ಲಿ ​ಅಭಿನಯಿಸುವ ಬಗ್ಗೆ ಶಿವರಾಜ್​ ಕುಮಾರ್ ಏನಂದ್ರು? - Kannada movie released

ಸ್ಯಾಂಡಲ್​ವುಡ್​ ನಟ ಶಿವರಾಜ್​ ಕುಮಾರ್ ಮುಂಬರುವ ದಿನಗಳಲ್ಲಿ ತಾವು ಪರಭಾಷಾ ಚಿತ್ರದಲ್ಲಿ ​ನಟಿಸುವ ಮನದಿಂಗಿತ ವ್ಯಕ್ತಪಡಿಸಿದರು. ಈಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನಲ್ಲಿ ಅವರು ತಮ್ಮ ಅನಿಸಿಕೆ ಹಂಚಿಕೊಂಡರು.

Shivarajkumar Special Interview
Shivarajkumar Special Interview
author img

By

Published : Dec 26, 2022, 8:00 PM IST

ಈಟಿವಿ ಭಾರತದ ಜೊತೆ ಶಿವಣ್ಣನ ಮಾತು

ಬೆಂಗಳೂರು: 'ಮುಂದಿನ ದಿನಗಳಲ್ಲಿ ರಜನಿಕಾಂತ್​ ಸರ್ ಜೊತೆ ನಟಿಸುವುದಿದೆ. ಅದಕ್ಕೂ ಮುನ್ನ ನಟ ಧನುಷ್ ಜೊತೆ ತೆರೆ ಹಂಚಿಕೊಳ್ಳಲಿದ್ದೇನೆ. ಚಿತ್ರ ಯಾವುದು? ಪಾತ್ರ ಯಾವುದು ಎಂಬುದರ ಬಗ್ಗೆ ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ತಿಳಿಯಲಿದೆ' ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ​​ಕುಮಾರ್ ಹೇಳಿದ್ದಾರೆ.

ವೇದ ಚಿತ್ರದ ಬಿಡುಗಡೆಗೂ ಮುನ್ನ ಇತ್ತೀಚೆಗೆ ಈಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ರಜನಿಕಾಂತ್​ ಸರ್ ಜೊತೆಗಿನ ಕಾಂಬಿನೇಷನ್​ ಇನ್ನೂ ಆಗಿಲ್ಲ. ಆದರೆ, ಧನುಷ್​ ಜೊತೆ ಶೀಘ್ರದಲ್ಲೇ ಸಿನಿಮಾ ಆರಂಭವಾಗಲಿದೆ. ಅವರಂದ್ರೆ ನನಗೆ ತುಂಬಾ ಇಷ್ಟ ಎಂದು ಧನುಷ್‌ ನಟನಾ ಚಾತುರ್ಯವನ್ನು ಹೊಗಳಿದರು.

ನಮ್ಮ ಬ್ಯಾನರ್​ ಅಡಿಯಲ್ಲಿ ಮುಂಬರುವ ದಿನಗಳಲ್ಲಿ ಹೊಸಬರಿಗೆ ಅವಕಾಶ ಸಿಗಲಿದೆ. ಕೇವಲ ನನ್ನ ಸಿನಿಮಾಗಳಿಗೆ ಮಾತ್ರವಲ್ಲ. ಚೆನ್ನಾಗಿರುವ ಕಥೆಗಳು ಬಂದರೆ ನಮ್ಮ ಬ್ಯಾನರ್‌ ಅಡಿಯಲ್ಲಿ ಬೆಳೆಯುವ ಹುಡುಗರಿಗೆ ಖಂಡಿತ ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ಕೊಟ್ಟರು.

ನಾನು ಈ ಕಥೆ ಒಪ್ಪಿಕೊಂಡಿದ್ದು ಮೊದಲ ಲಾಕ್​ಡೌನ್ ಸಮಯದಲ್ಲಿ. ಆಗ ಭೈರಾಗಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ನಿರ್ದೇಶಕ ಹರ್ಷ ಕಥೆ ಹೇಳಿದ್ದರು. ಆಗ ವೇದ ಸಿನಿಮಾವನ್ನು ಬೇರೆ ನಿರ್ಮಾಪಕರು ಮಾಡುವವರಿದ್ದರು. ಆ ನಿರ್ಮಾಪಕರ ಜೊತೆ ನಾವು ಮಾತನಾಡಿ ವೇದದ ನಿರ್ಮಾಣ ಹೊಣೆಯನ್ನು ತೆಗೆದುಕೊಂಡೆವು ಎಂದು ಹೇಳಿದರು.

ಇದನ್ನೂ ಓದಿ: ನಟ ದರ್ಶನ್‌ ಅವಮಾನಿಸಿದ ಪ್ರಕರಣ: ಮೂವರು ಕಿಡಿಗೇಡಿಗಳ ಬಂಧನ

ಈಟಿವಿ ಭಾರತದ ಜೊತೆ ಶಿವಣ್ಣನ ಮಾತು

ಬೆಂಗಳೂರು: 'ಮುಂದಿನ ದಿನಗಳಲ್ಲಿ ರಜನಿಕಾಂತ್​ ಸರ್ ಜೊತೆ ನಟಿಸುವುದಿದೆ. ಅದಕ್ಕೂ ಮುನ್ನ ನಟ ಧನುಷ್ ಜೊತೆ ತೆರೆ ಹಂಚಿಕೊಳ್ಳಲಿದ್ದೇನೆ. ಚಿತ್ರ ಯಾವುದು? ಪಾತ್ರ ಯಾವುದು ಎಂಬುದರ ಬಗ್ಗೆ ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ತಿಳಿಯಲಿದೆ' ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ​​ಕುಮಾರ್ ಹೇಳಿದ್ದಾರೆ.

ವೇದ ಚಿತ್ರದ ಬಿಡುಗಡೆಗೂ ಮುನ್ನ ಇತ್ತೀಚೆಗೆ ಈಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ರಜನಿಕಾಂತ್​ ಸರ್ ಜೊತೆಗಿನ ಕಾಂಬಿನೇಷನ್​ ಇನ್ನೂ ಆಗಿಲ್ಲ. ಆದರೆ, ಧನುಷ್​ ಜೊತೆ ಶೀಘ್ರದಲ್ಲೇ ಸಿನಿಮಾ ಆರಂಭವಾಗಲಿದೆ. ಅವರಂದ್ರೆ ನನಗೆ ತುಂಬಾ ಇಷ್ಟ ಎಂದು ಧನುಷ್‌ ನಟನಾ ಚಾತುರ್ಯವನ್ನು ಹೊಗಳಿದರು.

ನಮ್ಮ ಬ್ಯಾನರ್​ ಅಡಿಯಲ್ಲಿ ಮುಂಬರುವ ದಿನಗಳಲ್ಲಿ ಹೊಸಬರಿಗೆ ಅವಕಾಶ ಸಿಗಲಿದೆ. ಕೇವಲ ನನ್ನ ಸಿನಿಮಾಗಳಿಗೆ ಮಾತ್ರವಲ್ಲ. ಚೆನ್ನಾಗಿರುವ ಕಥೆಗಳು ಬಂದರೆ ನಮ್ಮ ಬ್ಯಾನರ್‌ ಅಡಿಯಲ್ಲಿ ಬೆಳೆಯುವ ಹುಡುಗರಿಗೆ ಖಂಡಿತ ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ಕೊಟ್ಟರು.

ನಾನು ಈ ಕಥೆ ಒಪ್ಪಿಕೊಂಡಿದ್ದು ಮೊದಲ ಲಾಕ್​ಡೌನ್ ಸಮಯದಲ್ಲಿ. ಆಗ ಭೈರಾಗಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ನಿರ್ದೇಶಕ ಹರ್ಷ ಕಥೆ ಹೇಳಿದ್ದರು. ಆಗ ವೇದ ಸಿನಿಮಾವನ್ನು ಬೇರೆ ನಿರ್ಮಾಪಕರು ಮಾಡುವವರಿದ್ದರು. ಆ ನಿರ್ಮಾಪಕರ ಜೊತೆ ನಾವು ಮಾತನಾಡಿ ವೇದದ ನಿರ್ಮಾಣ ಹೊಣೆಯನ್ನು ತೆಗೆದುಕೊಂಡೆವು ಎಂದು ಹೇಳಿದರು.

ಇದನ್ನೂ ಓದಿ: ನಟ ದರ್ಶನ್‌ ಅವಮಾನಿಸಿದ ಪ್ರಕರಣ: ಮೂವರು ಕಿಡಿಗೇಡಿಗಳ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.