ETV Bharat / elections

ಮಾಧ್ಯಮಗಳ ಸಹವಾಸವೇ ಬೇಡ ಎಂದ ಸಿಎಂ... ಡೇಂಜರ್​​ ಅಂತಾ ಸಿಡಿಮಿಡಿ! - Kannada news

ಕಳೆದ‌ 3 ತಿಂಗಳಿಂದ ಕೆಲವು ಎಲೆಕ್ಟ್ರಾನಿಕ್ ಮಾಧ್ಯಮಗಳು ಬಿತ್ತರಿಸುತ್ತಿರುವ ಸುದ್ದಿಯ ಬಗ್ಗೆ ಅಸಮಾಧಾನ ಹೊರ ಹಾಕಿ ವಾಗ್ದಾಳಿ ನಡೆಸಿದ ಸಿಎಂ ಮಾಧ್ಯಮದವರ ಸಹವಾಸವೇ ಡೆಂಜರ್ ಎಂದು ಹರಿಹಾಯ್ದರು

ಸಿಎಂ ಕುಮಾರಸ್ವಾಮಿ
author img

By

Published : May 19, 2019, 5:51 PM IST

ಮೈಸೂರು : 23 ರ ನಂತರ ಸಮ್ಮಿಶ್ರ ಸರ್ಕಾರ ಬೀಳುತ್ತದೆ ಎಂದು ಬಿಜೆಪಿಯವರು ಹೊಸ ಕೋಟ್​ಗಳನ್ನ ಹೊಲಿಸಿಕೊಳ್ಳುತ್ತಿದ್ದಾರೆ. ಮಾಧ್ಯಮಗಳು ಸಿರಿಯಲ್ ಎಪಿಸೋಡ್ ರೀತಿ ಸರ್ಕಾರ ಬಿದ್ದು ಹೋಗುತ್ತೆ ಅಂತ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದಾರೆ. ಆದ್ರೆ ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಿಲ್ಲ, ಸಿದ್ದರಾಮಯ್ಯ ಅವರ ಮಾರ್ಗದರ್ಶನಲ್ಲೇ ಸರ್ಕಾರ ಮುಂದುವರೆಯುತ್ತದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ನಗರದ ಕಲಾಮಂದಿರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ‌ ಅತಿಥಿ ಭಾಷಣ ಮಾಡಿ ಮಾತನಾಡಿ, ಕಳೆದ‌ 3 ತಿಂಗಳಿಂದ ಕೆಲವು ಎಲೆಕ್ಟ್ರಾನಿಕ್ ಮಾಧ್ಯಮಗಳು ಬಿತ್ತರಿಸುತ್ತಿರುವ ಸುದ್ದಿಯ ಬಗ್ಗೆ ಅಸಮಾಧಾನ ಹೊರ ಹಾಕಿ ವಾಗ್ದಾಳಿ ನಡೆಸಿದ ಸಿಎಂ, ಕೆಲವು ಎಲೆಕ್ಟ್ರಾನಿಕ್ ಮಾಧ್ಯಮಗಳು ಸಮ್ಮಿಶ್ರ ಸರ್ಕಾರ ‌ಆಗ ಬಿದ್ದು ಹೋಗುತ್ತದೆ, ಈಗ ಬಿದ್ದು ಹೋಗುತ್ತದೆ ಎಂದು ಧಾರವಾಹಿ ಎಪಿಸೋಡ್ ಗಳ ರೀತಿಯಲ್ಲಿ ಪ್ರಸಾರ ಮಾಡುತ್ತಿವೆ.

ಇದರ ಜೊತೆಗೆ ಲೋಕಾಸಭಾ ಚುನಾವಣೆಯ ಫಲಿತಾಂಶದ ನಂತರ ಸರ್ಕಾರ ಬಿದ್ದು ಹೋಗುತ್ತದೆ ಎಂದು ನಂಬಿರುವ ರಾಜ್ಯ ಬಿಜೆಪಿ ನಾಯಕರು ಈಗಾಗಲೇ ಪ್ರಮಾಣ ವಚನ ಸ್ವೀಕಾರ ಮಾಡಲು ಹೊಸ ಕೋಟು, ಪ್ಯಾಂಟ್​​​​​ಗಳನ್ನು ಹೊಲಿಸಿಕೊಳ್ಳುತ್ತಿದಾರೆ. ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ಈ ಸರ್ಕಾರ ಬೀಳುವುದಿಲ್ಲ. 5 ವರ್ಷ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ ಎಂದರು.

ಸಿಎಂ ಕುಮಾರಸ್ವಾಮಿ

ಮಾಧ್ಯಮಗಳ ಸಹವಾಸವೇ ಡೆಂಜರ್

ಇತ್ತೀಚೆಗೆ ಕೆಲವು ದೃಶ್ಯ ಮಾಧ್ಯಮಗಳು ನೀಡುತ್ತಿರುವ ವರದಿಗಳಿಂದ ನಾವು ನಿದ್ದೆಯನ್ನೇ ಮಾಡುವಂಗಿಲ್ಲ ಅದಕ್ಕೆ ಅವರ ಸಹವಾಸವೇ ಬೇಡ ಎಂದು ದೂರ ಉಳಿದಿದ್ದೇನೆ. ಮಾಧ್ಯಮಗಳ ನಡವಳಿಕೆಯಿಂದ ಅವರ ಮೇಲೆ ಇದ್ದ ಗೌರವ ಕಡಿಮೆಯಾಗಿದೆ. ಮಾಧ್ಯಮಗಳಲ್ಲಿ ಯಾವುದನ್ನು ತೋರಿಸಬೇಕು ಯಾವುದನ್ನು ತೋರಿಸಬಾರದು ಎಂಬ ಕನಿಷ್ಠ ಅರಿವೇ ಇಲ್ಲ. ಟಿ.ಆರ್.ಪಿಗಾಗಿ ರಾಜಕಾರಣಿಗಳನ್ನು ಕಾಮಿಡಿ ಪೀಸ್ ಗಳಾಗಿ ತೋರಿಸುತ್ತಿದ್ದಾರೆ ನಾವೇನು ಬಿಟ್ಟಿ ಸಿಕ್ಕಿದ್ದೀವೆ ಎಂದು ಕಿಡಿಕಾರಿದದರು

ಕೆಲವು ದೃಶ್ಯ ಮಾಧ್ಯಮಗಳ ಕಾರ್ಯಕ್ರಮದಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದ್ದು, ಅದಕ್ಕೆ ಮಾಧ್ಯಮಗಳ ನಿಯಂತ್ರಣಕ್ಕೆ ಹೊಸ ಕಾನೂನು ರಚಿಸುವ ಚಿಂತನೆ ನಡೆಸಿದ್ದೇನೆ ಎಂದರು. ನಾವು ಮಾಧ್ಯಮಗಳಿಂದ ಬದುಕಬೇಕಾಗಿಲ್ಲ, ನಾವು ಬದುಕಿರೋದು ರಾಜ್ಯದ ಜನರಿಂದ. ಮಾಧ್ಯಮಗಳನ್ನು‌ ನಡೆಸಲು ಸಾಧ್ಯವಾಗದಿದ್ದರೆ ಬಾಗಿಲು ಮುಚ್ಚಿಕೊಂಡು ಹೋಗಿ ಅದಕ್ಕೆ ಬದಲಾಗಿ ಸಮಾಜವನ್ನು ಹಾಳು ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು : 23 ರ ನಂತರ ಸಮ್ಮಿಶ್ರ ಸರ್ಕಾರ ಬೀಳುತ್ತದೆ ಎಂದು ಬಿಜೆಪಿಯವರು ಹೊಸ ಕೋಟ್​ಗಳನ್ನ ಹೊಲಿಸಿಕೊಳ್ಳುತ್ತಿದ್ದಾರೆ. ಮಾಧ್ಯಮಗಳು ಸಿರಿಯಲ್ ಎಪಿಸೋಡ್ ರೀತಿ ಸರ್ಕಾರ ಬಿದ್ದು ಹೋಗುತ್ತೆ ಅಂತ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದಾರೆ. ಆದ್ರೆ ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಿಲ್ಲ, ಸಿದ್ದರಾಮಯ್ಯ ಅವರ ಮಾರ್ಗದರ್ಶನಲ್ಲೇ ಸರ್ಕಾರ ಮುಂದುವರೆಯುತ್ತದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ನಗರದ ಕಲಾಮಂದಿರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ‌ ಅತಿಥಿ ಭಾಷಣ ಮಾಡಿ ಮಾತನಾಡಿ, ಕಳೆದ‌ 3 ತಿಂಗಳಿಂದ ಕೆಲವು ಎಲೆಕ್ಟ್ರಾನಿಕ್ ಮಾಧ್ಯಮಗಳು ಬಿತ್ತರಿಸುತ್ತಿರುವ ಸುದ್ದಿಯ ಬಗ್ಗೆ ಅಸಮಾಧಾನ ಹೊರ ಹಾಕಿ ವಾಗ್ದಾಳಿ ನಡೆಸಿದ ಸಿಎಂ, ಕೆಲವು ಎಲೆಕ್ಟ್ರಾನಿಕ್ ಮಾಧ್ಯಮಗಳು ಸಮ್ಮಿಶ್ರ ಸರ್ಕಾರ ‌ಆಗ ಬಿದ್ದು ಹೋಗುತ್ತದೆ, ಈಗ ಬಿದ್ದು ಹೋಗುತ್ತದೆ ಎಂದು ಧಾರವಾಹಿ ಎಪಿಸೋಡ್ ಗಳ ರೀತಿಯಲ್ಲಿ ಪ್ರಸಾರ ಮಾಡುತ್ತಿವೆ.

ಇದರ ಜೊತೆಗೆ ಲೋಕಾಸಭಾ ಚುನಾವಣೆಯ ಫಲಿತಾಂಶದ ನಂತರ ಸರ್ಕಾರ ಬಿದ್ದು ಹೋಗುತ್ತದೆ ಎಂದು ನಂಬಿರುವ ರಾಜ್ಯ ಬಿಜೆಪಿ ನಾಯಕರು ಈಗಾಗಲೇ ಪ್ರಮಾಣ ವಚನ ಸ್ವೀಕಾರ ಮಾಡಲು ಹೊಸ ಕೋಟು, ಪ್ಯಾಂಟ್​​​​​ಗಳನ್ನು ಹೊಲಿಸಿಕೊಳ್ಳುತ್ತಿದಾರೆ. ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ಈ ಸರ್ಕಾರ ಬೀಳುವುದಿಲ್ಲ. 5 ವರ್ಷ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ ಎಂದರು.

ಸಿಎಂ ಕುಮಾರಸ್ವಾಮಿ

ಮಾಧ್ಯಮಗಳ ಸಹವಾಸವೇ ಡೆಂಜರ್

ಇತ್ತೀಚೆಗೆ ಕೆಲವು ದೃಶ್ಯ ಮಾಧ್ಯಮಗಳು ನೀಡುತ್ತಿರುವ ವರದಿಗಳಿಂದ ನಾವು ನಿದ್ದೆಯನ್ನೇ ಮಾಡುವಂಗಿಲ್ಲ ಅದಕ್ಕೆ ಅವರ ಸಹವಾಸವೇ ಬೇಡ ಎಂದು ದೂರ ಉಳಿದಿದ್ದೇನೆ. ಮಾಧ್ಯಮಗಳ ನಡವಳಿಕೆಯಿಂದ ಅವರ ಮೇಲೆ ಇದ್ದ ಗೌರವ ಕಡಿಮೆಯಾಗಿದೆ. ಮಾಧ್ಯಮಗಳಲ್ಲಿ ಯಾವುದನ್ನು ತೋರಿಸಬೇಕು ಯಾವುದನ್ನು ತೋರಿಸಬಾರದು ಎಂಬ ಕನಿಷ್ಠ ಅರಿವೇ ಇಲ್ಲ. ಟಿ.ಆರ್.ಪಿಗಾಗಿ ರಾಜಕಾರಣಿಗಳನ್ನು ಕಾಮಿಡಿ ಪೀಸ್ ಗಳಾಗಿ ತೋರಿಸುತ್ತಿದ್ದಾರೆ ನಾವೇನು ಬಿಟ್ಟಿ ಸಿಕ್ಕಿದ್ದೀವೆ ಎಂದು ಕಿಡಿಕಾರಿದದರು

ಕೆಲವು ದೃಶ್ಯ ಮಾಧ್ಯಮಗಳ ಕಾರ್ಯಕ್ರಮದಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದ್ದು, ಅದಕ್ಕೆ ಮಾಧ್ಯಮಗಳ ನಿಯಂತ್ರಣಕ್ಕೆ ಹೊಸ ಕಾನೂನು ರಚಿಸುವ ಚಿಂತನೆ ನಡೆಸಿದ್ದೇನೆ ಎಂದರು. ನಾವು ಮಾಧ್ಯಮಗಳಿಂದ ಬದುಕಬೇಕಾಗಿಲ್ಲ, ನಾವು ಬದುಕಿರೋದು ರಾಜ್ಯದ ಜನರಿಂದ. ಮಾಧ್ಯಮಗಳನ್ನು‌ ನಡೆಸಲು ಸಾಧ್ಯವಾಗದಿದ್ದರೆ ಬಾಗಿಲು ಮುಚ್ಚಿಕೊಂಡು ಹೋಗಿ ಅದಕ್ಕೆ ಬದಲಾಗಿ ಸಮಾಜವನ್ನು ಹಾಳು ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Intro:ಮೈಸೂರು: ೨೩ ರ ನಂತರ ಸಮ್ಮಿಶ್ರ ಸರ್ಕಾರ ಬೀಳುತ್ತದೆ ಎಂದು ಬಿಜೆಪಿಯವರು ಹೊಸ ಕೋಟ್ ಗಳನ್ನು ಹೊಲಿಸಿಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಿಲ್ಲ ಸಿದ್ದರಾಮಯ್ಯ ಅವರ ಮಾರ್ಗದರ್ಶನಲ್ಲೇ ಸರ್ಕಾರ ಮುಂದುವರೆಯುತ್ತದೆ ಎಂದು ಸಿಎಂ ಕುಮಾರಸ್ವಾಮಿ ಭಾಷಣದಲ್ಲಿ ಹೇಳಿಕೆ ನೀಡಿದ್ದಾರೆ.


Body:ಇಂದು ನಗರದ ಕಲಾಮಂದಿರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ‌ ಅತಿಥಿ ಭಾಷಣ ಮಾಡಿ ಮಾತನಾಡಿದ ಕುಮಾರಸ್ವಾಮಿ ಕಳೆದ‌ ೩ ತಿಂಗಳಿಂದ ಕೆಲವು ಎಲೆಕ್ಟ್ರಾನಿಕ್ ಮಾಧ್ಯಮಗಳು ಬಿತ್ತರಿಸುತ್ತಿರುವ ಸುದ್ದಿಯ ಬಗ್ಗೆ ತಮ್ಮ‌ ಅಸಮಾಧಾನವನ್ನು ಹೊರ ಹಾಕಿ ವಾಗ್ದಾಳಿ ನಡೆಸಿದ ಸಿಎಂ ಕುಮಾರಸ್ವಾಮಿ ಕೆಲವು ಎಲೆಕ್ಟ್ರಾನಿಕ್ ಮಾಧ್ಯಮಗಳು ಸಮ್ಮಿಶ್ರ ಸರ್ಕಾರ ‌ಆಗ ಬಿದ್ದು ಹೋಗುತ್ತದೆ, ಈಗ ಬಿದ್ದು ಹೋಗುತ್ತದೆ ಎಂದು ಧಾರವಾಹಿ ರೂಪದಲ್ಲಿ ಎಪಿಸೋಡ್ ಗಳ ರೀತಿಯಲ್ಲಿ ಪ್ರಸಾರ ಮಾಡುತ್ತಿವೆ. ಇದರ ಜೊತೆಗೆ ಲೋಕಾಸಭಾ ಚುನಾವಣೆಯ ಫಲಿತಾಂಶದ ನಂತರ ಸರ್ಕಾರ ಬಿದ್ದು ಹೋಗುತ್ತದೆ ಎಂದು ನಂಬಿರುವ ರಾಜ್ಯ ನಾಯಕರು ಈಗಾಗಲೇ ಪ್ರಮಾಣ ವಚನ ಸ್ವೀಕಾರ ಮಾಡಲು ಹೊಸ ಕೋಟು, ಪ್ಯಾಂಟ್ಗಳನ್ನು ಹೊಲಿಸಿಕೊಳ್ಳುತ್ತಿದಾರೆ. ಸಿದ್ದರಾಮಯ್ಯ ಅವರ ಆಶಿರ್ವಾದದಿಂದ ಈ ಸರ್ಕಾರ ಬೀಳುವುದಿಲ್ಲ. ೫ ವರ್ಷ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ ಎಂದರು. ಮಾಧ್ಯಮಗಳ ಸಹವಾಸವೇ ಡೆಂಜರ್:- ಇತ್ತಿಚೆಗೆ ಕೆಲವು ದೃಶ್ಯ ಮಾಧ್ಯಮಗಳು ನೀಡುತ್ತಿರುವ ವರದಿಗಳಿಂದ ನಾವು ನಿದ್ದೆಯನ್ನೇ ಮಾಡುವಂಗಿಲ್ಲ ಅದಕ್ಕೆ ಅವರ ಸಹವಾಸವೇ ಬೇಡ ಎಂದು ದೂರ ಉಳಿದಿದ್ದೇನೆ. ಮಾಧ್ಯಮಗಳ ನಡವಳಿಕೆಯಿಂದ ಅವರ ಮೇಲೆ ಇದ್ದ ಗೌರವ ಕಡಿಮೆಯಾಗಿದೆ. ಮಾಧ್ಯಮಗಳಲ್ಲಿ ಯಾವುದನ್ನು ತೋರಿಸಬೇಕು ಯಾವುದನ್ನು ತೋರಿಸಬಾರದು ಎಂಬ ಅರಿವೇ ಇಲ್ಲ. ಟಿ.ಆರ್.ಪಿಗಾಗಿ ರಾಜಕಾರಣಿಗಳನ್ನು ಕಾಮಿಡಿ ಪೀಸ್ ಗಳಾಗಿ ತೋರಿಸುತ್ತಿದ್ದಾರೆ ನಾವೇನು ಬಿಟ್ಟಿ ಸಿಕ್ಕಿದ್ದೀವ ಎಂದು ಕಿಡಿಕಾರಿದ ಕುಮಾರಸ್ವಾಮಿ ಕೆಲವು ದೃಶ್ಯ ಮಾಧ್ಯಮಗಳ ಕಾರ್ಯಕ್ರಮದಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದ್ದು ಆದ್ದರಿಂದ ಮಾಧ್ಯಮಗಳ ನಿಯಂತ್ರಣಕ್ಕೆ ಹೊಸ ಕಾನೂನು ತರುವ ಚಿಂತನೆ ನಡೆಸಿದ್ದೇನೆ ಎಂದರು. ಇನ್ನೂ ಸುಮಾರು ೧೫ ನಿಮಿಷಗಳ ಕಾಲ ಕೆಲವು ಎಲೆಕ್ಟ್ರಾನಿಕ್ ಮಾಧ್ಯಮಗಳ ವರದಿಗಳನ್ನು ಉಲ್ಲೇಖಿಸಿ ಅವುಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ನಾವು ಮಾಧ್ಯಮಗಳಿಂದ ಬದುಕ ಬೇಕಾಗಿಲ್ಲ ನಾವು ಬದುಕಿರೋದು ರಾಜ್ಯದ ಜನರಿಂದ. ಮಾಧ್ಯಮಗಳನ್ನು‌ ನಡೆಸಲು ಸಾಧ್ಯವಾಗದಿದ್ದರೆ ಬಾಗಿಲು ಮುಚ್ಚಿಕೊಂಡು ಹೋಗಿ ಅದಕ್ಕೆ ಬದಲಾಗಿ ಸಮಾಜವನ್ನು ಹಾಳು ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.