ETV Bharat / crime

ಮೂರನೇ ಮದುವೆಯಾದರೂ ಎರಡನೇ ಗಂಡನ ಜೊತೆ ಸಂಬಂಧ; ಹೆಂಡತಿ ಕೊಂದು ಶವದ ಜೊತೆ ರಾತ್ರಿ ಕಳೆದ ಗಂಡ

author img

By

Published : Dec 29, 2022, 11:53 AM IST

ವಿವಿಧ ಹೆಸರಿನಲ್ಲಿ ಮೂರು ಮದುವೆ- ಹೆಂಡತಿ ಮೋಸ ಅರಿತು ಕೊಂದ ಗಂಡ- ಕೊಲೆಗೆ ಸಂಚು ರೂಪಿಸಿ ಹತ್ಯೆ

ಮೂರನೇ ಮದುವೆಯಾದರೂ ಎರಡನೇ ಗಂಡನ ಜೊತೆ ಸಂಬಂಧ; ಹೆಂಡತಿ ಕೊಂದು ಶವದ ಜೊತೆ ರಾತ್ರಿ ಕಳೆದ ಗಂಡ
relationship-with-second-husband-despite-third-marriage-the-husband-killed-his-wife-and-spent-the-night-with-the-corpse

ಗಾಜಿಯಾಬಾದ್​: ಹೆಂಡತಿಯನ್ನು ಕೊಲೆ ಮಾಡಿದ ಪ್ರಕರಣ ಸಂಬಂಧ ಗಂಡನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಇನ್ನು ಯಾವ ಉದ್ದೇಶಕ್ಕಾಗಿ ಈ ಕೊಲೆ ಮಾಡಲಾಯಿತು ಎಂಬ ವಿಚಾರಣೆ ವೇಳೆ ಆತ ಬಾಯ್ಬಿಟ್ಟ ಕಾರಣ ಮಾತ್ರ ಪೊಲೀಸರಿಗೆ ಶಾಕ್​ ಮೂಡಿಸಿದೆ. ಹೆಂಡತಿ ಈಗಾಗಲೇ ಎರಡು ಮದುವೆಯನ್ನು ಆಗಿದ್ದಳು. ಎರಡನೇ ಗಂಡ ಬೇರೆ ಸಮುದಾಯದಕ್ಕೆ ಸೇರಿದ್ದರೆ, ಮೊದಲ ಗಂಡ ಹಿಂದೂವಾಗಿದ್ದ. 16 ವರ್ಷದ ಮಗನ ಜೊತೆಗೆ ಮೂರನೇ ಮದುವೆಯನ್ನು ಆರೋಪಿಯೊಂದಿಗೆ ಆಗಿದ್ದಳು ಎಂದಿದ್ದಾನೆ.

ಎರಡನೇ ಗಂಡನ ಸಲುವಾಗಿ ಈತ ಈ ಕೊಲೆಯನ್ನು ಮಾಡಿದ್ದು, ವಿಡಿಯೋ ಕಾಲ್​ ಬಳಿಕ ಈ ಕೃತ್ಯ ನಡೆದಿರುವುದಾಗಿ ಆತ ತಿಳಿಸಿದ್ದಾನೆ

ವಿವಿಧ ಹೆಸರಿನಲ್ಲಿ ಸಂಬಂಧ​: ಡಿ. 26ರಂದು ಗಾಜಿಯಾಬಾದ್​ನ ಕಾಶ್ಕ್ಷಿರಾಮ್​ ಕಾಲೋನಿ ಯಲ್ಲಿ ಭವ್ಯ ಶರ್ಮಾ ಎಂಬ ಮಹಿಳೆ ಕೊಲೆ ಯಾಗಿರುವ ಸಂಬಂಧ ವಿಜಯನಗರ ಪೊಲೀಸರಿಗೆ ಮಾಹಿತಿ ಲಭಿಸಿದೆ. ಸ್ಥಳಕ್ಕೆ ಬಂದ ಪೊಲೀಸರು ಆಕೆಯ ಗಂಡ ವಿನೋದ್​ ಶರ್ಮಾನನ್ನು ಬಂಧಿಸಿದ್ದಾರೆ. ಆತನ ವಿಚಾರಣೆ ನಡೆಸಿದಾಗ ಭವ್ಯ ಈಗಾಗಲೇ ಮೂರು ಮದುವೆಯನ್ನು ಅಗಿದ್ದಳು. ಯೋಗೇಂದ್ರ ಯಾದವ್​​ ಜೊತೆ ಬೇಬಿ ಎಂಬ ಹೆಸರಿನಲ್ಲಿ ಮೊದಲ ಮದುವೆಯಾಗಿದ್ದ ಭವ್ಯ ಈ ಸಂಬಂಧ ಮುರಿದುಕೊಂಡು ಅನೀಸ್​ ಅನ್ಸಾರಿ ಜೊತೆ ಆಸಿಫಾ ಎಂಬ ಹೆಸರಿನಲ್ಲಿ ಎರಡನೇ ಮದುವೆಯಾಗಿದ್ದಳು. ಐದು ತಿಂಗಳ ಹಿಂದೆ ಈ ಸಂಬಂಧವು ಕಡಿದುಕೊಂಡ ಆಕೆ ವಿನೋದ್​ ಶರ್ಮಾನನ್ನು ಭವ್ಯ ಎಂಬ ಹೆಸರಿನ ಮೂಲಕ ಮದುವೆಯಾಗಿದ್ದಳು.

ವಿನೋದ್​ ಶರ್ಮಾ- ಭವ್ಯ
ವಿನೋದ್​ ಶರ್ಮಾ- ಭವ್ಯ

ಮೂರನೇ ಮದುವೆಯಾದರೂ ಎರಡನೇ ಗಂಡನ ಜೊತೆ ಸಂಬಂಧ: ಮಗ ಇದ್ದರೂ ಹಳೆ ಗಂಡನ ಜೊತೆ ಸಂಬಂಧ ಮುರಿದುಕೊಂಡ ಹಿನ್ನಲೆ ಆಕೆ ಜೊತೆ ಚೆನ್ನಾಗಿ ಸಂಸಾರ ನಡೆಸುತ್ತಿದ್ದೆ. ನಮಗೆ ಮಕ್ಕಳಿಲ್ಲದ ಕಾರಣ ಆಕೆಯ ಎರಡನೇ ಗಂಡನ ಮಗನನ್ನೇ ತನ್ನ ಮಗುವಂತೆ ಪ್ರೀತಿಸುತ್ತಿದ್ದೆ. ಈ ನಡುವೆ ಡಿ. 24ರಂದು ಇಂದೂರ್​ಗೆ ಹೋದ ಭವ್ಯ ಅಲ್ಲಿಂದ ವಿಡಿಯೋ ಕಾಲ್​ ಮಾಡಿದ್ದಳು. ಈ ವೇಳೆ ಆಕೆಯ ಎರಡನೇ ಗಂಡ ಅನೀಸ್​ ಆಕೆಯ ಜೊತೆಯಲ್ಲಿದ್ದ. ಆತನ ಜೊತೆ ಇನ್ನು ಸಂಬಂಧ ಮುಂದುವರೆಸಿದ ಹಿನ್ನಲೆ ಆಕೆಯನ್ನು ಹತ್ಯೆ ಮಾಡುವ ಯೋಜನೆ ರೂಪಿಸಿದ್ದಾಗಿ ಆರೋಪಿ ತಿಳಿಸಿದ್ದಾನೆ.

ಕೊಲೆಗಾಗಿ ಸಂಚು: ಆಕೆಯನ್ನು ಕೊಲೆ ಮಾಡುವ ಸಂಚಿನಿಂದಲೇ ಮಗನಿಗೆ ದುಡ್ಡು ಕೊಟ್ಟು ಹೊರಗೆ ಹೋಗಲು ಕಳುಹಿಸಿದ್ದ. ಈ ವೇಳೆ ಆಕೆಯನ್ನು ಚಾಕುವಿನಿಂದ ಕೊಲೆ ಮಾಡಿ. ಎಲ್ಲಾ ರಕ್ತದ ಕಲೆಗಳನ್ನು ಶುಚಿಗೊಳಿಸಿದ್ದ. ಆಕೆಯ ದೇಹವನ್ನು ರವಾನೆ ಮಾಡುವ ಹೊತ್ತಿಗೆ ಮಗ ಬಂದಿದ್ದಾನೆ ಆತನಿಗೆ ಭವ್ಯ ಮಲಗಿರುವುದಾಗಿ ಹೇಳಿ ಸುಮ್ಮನಾಗಿಸಿದ್ದ. ಒಂದು ದಿನವಾದರೂ ಆಕೆ ಎಚ್ಚರವಾಗದ ಹಿನ್ನಲೆ ಆತ ಅಳಲು ಶುರು ಮಾಡಿದ್ದಾನೆ. ಇದರಿಂದ ನೆರೆ ಹೊರೆಯವರಿಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ವಿವಾಹೇತರ ಸಂಬಂಧ.. ಬೇರೊಬ್ಬನ ಜೊತೆಗೂ ಸಲುಗೆ, ಮಹಿಳೆ ಕೊಂದು ಹೂತಾಕಿದ ಆರೋಪಿ ಅರೆಸ್ಟ್​

ಗಾಜಿಯಾಬಾದ್​: ಹೆಂಡತಿಯನ್ನು ಕೊಲೆ ಮಾಡಿದ ಪ್ರಕರಣ ಸಂಬಂಧ ಗಂಡನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಇನ್ನು ಯಾವ ಉದ್ದೇಶಕ್ಕಾಗಿ ಈ ಕೊಲೆ ಮಾಡಲಾಯಿತು ಎಂಬ ವಿಚಾರಣೆ ವೇಳೆ ಆತ ಬಾಯ್ಬಿಟ್ಟ ಕಾರಣ ಮಾತ್ರ ಪೊಲೀಸರಿಗೆ ಶಾಕ್​ ಮೂಡಿಸಿದೆ. ಹೆಂಡತಿ ಈಗಾಗಲೇ ಎರಡು ಮದುವೆಯನ್ನು ಆಗಿದ್ದಳು. ಎರಡನೇ ಗಂಡ ಬೇರೆ ಸಮುದಾಯದಕ್ಕೆ ಸೇರಿದ್ದರೆ, ಮೊದಲ ಗಂಡ ಹಿಂದೂವಾಗಿದ್ದ. 16 ವರ್ಷದ ಮಗನ ಜೊತೆಗೆ ಮೂರನೇ ಮದುವೆಯನ್ನು ಆರೋಪಿಯೊಂದಿಗೆ ಆಗಿದ್ದಳು ಎಂದಿದ್ದಾನೆ.

ಎರಡನೇ ಗಂಡನ ಸಲುವಾಗಿ ಈತ ಈ ಕೊಲೆಯನ್ನು ಮಾಡಿದ್ದು, ವಿಡಿಯೋ ಕಾಲ್​ ಬಳಿಕ ಈ ಕೃತ್ಯ ನಡೆದಿರುವುದಾಗಿ ಆತ ತಿಳಿಸಿದ್ದಾನೆ

ವಿವಿಧ ಹೆಸರಿನಲ್ಲಿ ಸಂಬಂಧ​: ಡಿ. 26ರಂದು ಗಾಜಿಯಾಬಾದ್​ನ ಕಾಶ್ಕ್ಷಿರಾಮ್​ ಕಾಲೋನಿ ಯಲ್ಲಿ ಭವ್ಯ ಶರ್ಮಾ ಎಂಬ ಮಹಿಳೆ ಕೊಲೆ ಯಾಗಿರುವ ಸಂಬಂಧ ವಿಜಯನಗರ ಪೊಲೀಸರಿಗೆ ಮಾಹಿತಿ ಲಭಿಸಿದೆ. ಸ್ಥಳಕ್ಕೆ ಬಂದ ಪೊಲೀಸರು ಆಕೆಯ ಗಂಡ ವಿನೋದ್​ ಶರ್ಮಾನನ್ನು ಬಂಧಿಸಿದ್ದಾರೆ. ಆತನ ವಿಚಾರಣೆ ನಡೆಸಿದಾಗ ಭವ್ಯ ಈಗಾಗಲೇ ಮೂರು ಮದುವೆಯನ್ನು ಅಗಿದ್ದಳು. ಯೋಗೇಂದ್ರ ಯಾದವ್​​ ಜೊತೆ ಬೇಬಿ ಎಂಬ ಹೆಸರಿನಲ್ಲಿ ಮೊದಲ ಮದುವೆಯಾಗಿದ್ದ ಭವ್ಯ ಈ ಸಂಬಂಧ ಮುರಿದುಕೊಂಡು ಅನೀಸ್​ ಅನ್ಸಾರಿ ಜೊತೆ ಆಸಿಫಾ ಎಂಬ ಹೆಸರಿನಲ್ಲಿ ಎರಡನೇ ಮದುವೆಯಾಗಿದ್ದಳು. ಐದು ತಿಂಗಳ ಹಿಂದೆ ಈ ಸಂಬಂಧವು ಕಡಿದುಕೊಂಡ ಆಕೆ ವಿನೋದ್​ ಶರ್ಮಾನನ್ನು ಭವ್ಯ ಎಂಬ ಹೆಸರಿನ ಮೂಲಕ ಮದುವೆಯಾಗಿದ್ದಳು.

ವಿನೋದ್​ ಶರ್ಮಾ- ಭವ್ಯ
ವಿನೋದ್​ ಶರ್ಮಾ- ಭವ್ಯ

ಮೂರನೇ ಮದುವೆಯಾದರೂ ಎರಡನೇ ಗಂಡನ ಜೊತೆ ಸಂಬಂಧ: ಮಗ ಇದ್ದರೂ ಹಳೆ ಗಂಡನ ಜೊತೆ ಸಂಬಂಧ ಮುರಿದುಕೊಂಡ ಹಿನ್ನಲೆ ಆಕೆ ಜೊತೆ ಚೆನ್ನಾಗಿ ಸಂಸಾರ ನಡೆಸುತ್ತಿದ್ದೆ. ನಮಗೆ ಮಕ್ಕಳಿಲ್ಲದ ಕಾರಣ ಆಕೆಯ ಎರಡನೇ ಗಂಡನ ಮಗನನ್ನೇ ತನ್ನ ಮಗುವಂತೆ ಪ್ರೀತಿಸುತ್ತಿದ್ದೆ. ಈ ನಡುವೆ ಡಿ. 24ರಂದು ಇಂದೂರ್​ಗೆ ಹೋದ ಭವ್ಯ ಅಲ್ಲಿಂದ ವಿಡಿಯೋ ಕಾಲ್​ ಮಾಡಿದ್ದಳು. ಈ ವೇಳೆ ಆಕೆಯ ಎರಡನೇ ಗಂಡ ಅನೀಸ್​ ಆಕೆಯ ಜೊತೆಯಲ್ಲಿದ್ದ. ಆತನ ಜೊತೆ ಇನ್ನು ಸಂಬಂಧ ಮುಂದುವರೆಸಿದ ಹಿನ್ನಲೆ ಆಕೆಯನ್ನು ಹತ್ಯೆ ಮಾಡುವ ಯೋಜನೆ ರೂಪಿಸಿದ್ದಾಗಿ ಆರೋಪಿ ತಿಳಿಸಿದ್ದಾನೆ.

ಕೊಲೆಗಾಗಿ ಸಂಚು: ಆಕೆಯನ್ನು ಕೊಲೆ ಮಾಡುವ ಸಂಚಿನಿಂದಲೇ ಮಗನಿಗೆ ದುಡ್ಡು ಕೊಟ್ಟು ಹೊರಗೆ ಹೋಗಲು ಕಳುಹಿಸಿದ್ದ. ಈ ವೇಳೆ ಆಕೆಯನ್ನು ಚಾಕುವಿನಿಂದ ಕೊಲೆ ಮಾಡಿ. ಎಲ್ಲಾ ರಕ್ತದ ಕಲೆಗಳನ್ನು ಶುಚಿಗೊಳಿಸಿದ್ದ. ಆಕೆಯ ದೇಹವನ್ನು ರವಾನೆ ಮಾಡುವ ಹೊತ್ತಿಗೆ ಮಗ ಬಂದಿದ್ದಾನೆ ಆತನಿಗೆ ಭವ್ಯ ಮಲಗಿರುವುದಾಗಿ ಹೇಳಿ ಸುಮ್ಮನಾಗಿಸಿದ್ದ. ಒಂದು ದಿನವಾದರೂ ಆಕೆ ಎಚ್ಚರವಾಗದ ಹಿನ್ನಲೆ ಆತ ಅಳಲು ಶುರು ಮಾಡಿದ್ದಾನೆ. ಇದರಿಂದ ನೆರೆ ಹೊರೆಯವರಿಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ವಿವಾಹೇತರ ಸಂಬಂಧ.. ಬೇರೊಬ್ಬನ ಜೊತೆಗೂ ಸಲುಗೆ, ಮಹಿಳೆ ಕೊಂದು ಹೂತಾಕಿದ ಆರೋಪಿ ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.