ಅಮೃತ್ಸರ್ (ಪಂಜಾಬ್): ಬ್ಯಾಂಕ್ ನೌಕರನೊಬ್ಬನನ್ನು ಅಡ್ಡಗಟ್ಟಿದ ಇಬ್ಬರು ಕಳ್ಳರು ಆತನ ಕೈ ಕತ್ತರಿಸಿ ದರೋಡೆ ನಡೆಸಿರುವ ಘಟನೆ ನಡೆದಿದೆ.
ಓದಿ: ರಾಜೀವ್ ಹತ್ಯೆ ಅಪರಾಧಿಯಿಂದ ತಮಿಳುನಾಡು ಸರ್ಕಾರಕ್ಕೆ ಕೋವಿಡ್ ಫಂಡ್
ಇಲ್ಲಿನ ನಂಗಾಲಿ ಗ್ರಾಮದ ಬಳಿ ನೌಕರ ಬರುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಆತನನ್ನು ಅಡ್ಡಗಟ್ಟಿದ್ದಾರೆ. ಅಲ್ಲದೇ ಕೈ ಕತ್ತರಿಸಿ ಆತನ ಬಳಿಯಿದ್ದ 1,500 ರೂಪಾಯಿ ಹಣ ಕದ್ದು ಪರಾರಿಯಾಗಿದ್ದಾರೆ.
ಸದ್ಯ ಗಾಯಗೊಂಡು ತೀವ್ರ ರಕ್ತಸ್ರಾವವಾಗಿದ್ದ ಆತನನ್ನು ಅಮನ್ದೀಪ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಇಲ್ಲಿನ ಖಾಸಗಿ ಬ್ಯಾಂಕ್ನಲ್ಲಿ ನೌಕರನಾಗಿದ್ದು, ಆಕಾಶ್ ಅವೆನ್ಯೂ ಕಟ್ಟಡದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಎನ್ನಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ದರೋಡೆಕೋರರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಕಂಬೋಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.