ETV Bharat / crime

ಆಸ್ಪತ್ರೆಗೆ ದಾಖಲಾದ ಮಗು ಆರೈಕೆ ಹಿನ್ನೆಲೆ: ಮಹಿಳಾ ಆರೋಪಿಗೆ ಜಾಮೀನು ನೀಡಿದ ಕೋರ್ಟ್

author img

By

Published : Apr 13, 2021, 11:40 AM IST

ಆಸ್ಪತ್ರೆಯ ಐಸಿಯುನಲ್ಲಿ ಅನಾರೋಗ್ಯದಿಂದಾಗಿ ದಾಖಲಾಗಿರುವ ಮಗುವಿನ ಸ್ಥಿತಿ ಸುಧಾರಿಸಲು ಅದು ತಾಯಿಯೊಂದಿಗೆ ಇರಬೇಕು ಎಂದು ವೈದ್ಯರು ಸಲಹೆ ನೀಡಿದ್ದು, ಮಹಿಳಾ ಆರೋಪಿಗೆ ಕೋರ್ಟ್ ಜಾಮೀನು ನೀಡಿ ಬಿಡುಗಡೆ ಮಾಡಲು ಆದೇಶ ನೀಡಿದೆ.

Woman granted bail to take care of hospitalised infant
ಆಸ್ಪತ್ರೆಗೆ ದಾಖಲಾದ ಮಗು ಆರೈಕೆಗೆಂದು ಮಹಿಳಾ ಆರೋಪಿಗೆ ಜಾಮೀನು ನೀಡಿದ ಕೋರ್ಟ್

ಇಂದೋರ್ (ಮಧ್ಯಪ್ರದೇಶ): ಅಕ್ರಮ ಮದ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಪಟ್ಟಿದ್ದ 23 ವರ್ಷದ ಮಹಿಳಾ ಆರೋಪಿಗೆ ಆಸ್ಪತ್ರೆಗೆ ದಾಖಲಾಗಿರುವ ಈಕೆಯ ಮಗುವನ್ನು ನೋಡಿಕೊಳ್ಳಲೆಂದು ನ್ಯಾಯಾಲಯ ಜಾಮೀನು ನೀಡಿದೆ.

ಮಹಿಳೆಯ ಜಾಮೀನು ಅರ್ಜಿಯ ವಿಚಾರಣೆ ನಡೆಸಿರುವ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ನ್ಯಾಯಪೀಠ, ಆರೋಪಿ ಖುಷಿ ಯಾದವ್​ ಅವರನ್ನು 30,000 ರೂ. ಮೊತ್ತದ ಬಾಂಡ್​ ಮೇಲೆ ಜಾಮೀನು ನೀಡಿ ಬಿಡುಗಡೆ ಮಾಡಲು ಆದೇಶಿಸಿದೆ.

ಇದನ್ನೂ ಓದಿ: ಚಿಲ್ಕಾರಿ ಹತ್ಯಾಕಾಂಡದ ಮೋಸ್ಟ್ ವಾಂಟೆಡ್​ ನಕ್ಸಲ್​ ಕೊಲ್ಹಾ ಯಾದವ್ ಬಂಧನ

ಆರೋಪಿಯ 8 ತಿಂಗಳ ಗಂಡು ಮಗು ಅನಾರೋಗ್ಯದಿಂದಾಗಿ ಆಸ್ಪತ್ರೆಯ ತೀವ್ರಾ ನಿಗಾ ಘಟಕ (ಐಸಿಯು)ದಲ್ಲಿ ದಾಖಲಾಗಿದ್ದು, ಮಗುವಿನ ಸ್ಥಿತಿ ಸುಧಾರಿಸಲು ಅದು ತಾಯಿಯೊಂದಿಗೆ ಇರಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಆದರೆ, ಕೋವಿಡ್​ನಿಂದ ಜೈಲಿನ ಆರೋಗ್ಯ ಕೇಂದ್ರದಲ್ಲಿ ತಾಯಿಯೊಂದಿಗೆ ಮಗುವನ್ನು ಇಡಲು ಸಾಧ್ಯವಿಲ್ಲ. ಹೀಗಾಗಿ ಮಹಿಳೆಗೆ ಜಾಮೀನು ನೀಡಲಾಗಿದೆ ಎಂದು ಆರೋಪಿ ಪರ ವಕೀಲ ರಾಮ್​ ಬಜಾದ್​ ಗುರ್ಜಾರ್​ ತಿಳಿಸಿದ್ದಾರೆ.

ಮಾರ್ಚ್ 29 ರಂದು ಇಂದೋರ್‌ನ ಲಾಸುಡಿಯಾ ಪ್ರದೇಶದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಖುಷಿ ಯಾದವ್ ಸೇರಿದಂತೆ ಮೂವರು ಮಹಿಳೆಯರನ್ನು ಅರೆಸ್ಟ್ ಮಾಡಿದ್ದ ಪೊಲೀಸರು, 197 ಲೀಟರ್ ಮದ್ಯ ವಶಪಡಿಸಿಕೊಂಡಿದ್ದರು. ಸ್ಥಳೀಯ ನ್ಯಾಯಾಲಯವು ಮೂವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿತ್ತು.

ಇಂದೋರ್ (ಮಧ್ಯಪ್ರದೇಶ): ಅಕ್ರಮ ಮದ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಪಟ್ಟಿದ್ದ 23 ವರ್ಷದ ಮಹಿಳಾ ಆರೋಪಿಗೆ ಆಸ್ಪತ್ರೆಗೆ ದಾಖಲಾಗಿರುವ ಈಕೆಯ ಮಗುವನ್ನು ನೋಡಿಕೊಳ್ಳಲೆಂದು ನ್ಯಾಯಾಲಯ ಜಾಮೀನು ನೀಡಿದೆ.

ಮಹಿಳೆಯ ಜಾಮೀನು ಅರ್ಜಿಯ ವಿಚಾರಣೆ ನಡೆಸಿರುವ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ನ್ಯಾಯಪೀಠ, ಆರೋಪಿ ಖುಷಿ ಯಾದವ್​ ಅವರನ್ನು 30,000 ರೂ. ಮೊತ್ತದ ಬಾಂಡ್​ ಮೇಲೆ ಜಾಮೀನು ನೀಡಿ ಬಿಡುಗಡೆ ಮಾಡಲು ಆದೇಶಿಸಿದೆ.

ಇದನ್ನೂ ಓದಿ: ಚಿಲ್ಕಾರಿ ಹತ್ಯಾಕಾಂಡದ ಮೋಸ್ಟ್ ವಾಂಟೆಡ್​ ನಕ್ಸಲ್​ ಕೊಲ್ಹಾ ಯಾದವ್ ಬಂಧನ

ಆರೋಪಿಯ 8 ತಿಂಗಳ ಗಂಡು ಮಗು ಅನಾರೋಗ್ಯದಿಂದಾಗಿ ಆಸ್ಪತ್ರೆಯ ತೀವ್ರಾ ನಿಗಾ ಘಟಕ (ಐಸಿಯು)ದಲ್ಲಿ ದಾಖಲಾಗಿದ್ದು, ಮಗುವಿನ ಸ್ಥಿತಿ ಸುಧಾರಿಸಲು ಅದು ತಾಯಿಯೊಂದಿಗೆ ಇರಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಆದರೆ, ಕೋವಿಡ್​ನಿಂದ ಜೈಲಿನ ಆರೋಗ್ಯ ಕೇಂದ್ರದಲ್ಲಿ ತಾಯಿಯೊಂದಿಗೆ ಮಗುವನ್ನು ಇಡಲು ಸಾಧ್ಯವಿಲ್ಲ. ಹೀಗಾಗಿ ಮಹಿಳೆಗೆ ಜಾಮೀನು ನೀಡಲಾಗಿದೆ ಎಂದು ಆರೋಪಿ ಪರ ವಕೀಲ ರಾಮ್​ ಬಜಾದ್​ ಗುರ್ಜಾರ್​ ತಿಳಿಸಿದ್ದಾರೆ.

ಮಾರ್ಚ್ 29 ರಂದು ಇಂದೋರ್‌ನ ಲಾಸುಡಿಯಾ ಪ್ರದೇಶದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಖುಷಿ ಯಾದವ್ ಸೇರಿದಂತೆ ಮೂವರು ಮಹಿಳೆಯರನ್ನು ಅರೆಸ್ಟ್ ಮಾಡಿದ್ದ ಪೊಲೀಸರು, 197 ಲೀಟರ್ ಮದ್ಯ ವಶಪಡಿಸಿಕೊಂಡಿದ್ದರು. ಸ್ಥಳೀಯ ನ್ಯಾಯಾಲಯವು ಮೂವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.