ETV Bharat / crime

ಮುನುಗೋಡು ಬೈಎಲೆಕ್ಷನ್ :​ ಕುರುಡು ಕಾಂಚಾಣದ್ದೇ ಸದ್ದು

ಉಪಚುನಾವಣೆ ಪ್ರಮುಖ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಪ್ರಚಾರದೊಂದಿಗೆ ಹಣ ಹಂಚುವ ಅಬ್ಬರ ಜೋರಾಗಿದೆ. ಈ ಹಿನ್ನೆಲೆಯಲ್ಲಿ ನಲ್ಗೊಂಡ ಮತ್ತು ರಂಗಾರೆಡ್ಡಿ ಜಿಲ್ಲೆಯಿಂದ ಮುನುಗೋಡಕ್ಕೆ ಬರುವ ವಿವಿಧ ಪ್ರದೇಶಗಳ ಗಡಿಯಲ್ಲಿ ಪೊಲೀಸರು ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದ್ದಾರೆ. ಆದರೆ ಕೆಲವರು ಅಡ್ಡದಾರಿ, ಆಟೋ, ಬೈಕ್‌ಗಳ ಮೂಲಕ ವಿವಿಧೆಡೆ ಹಣ ಸಾಗಿಸುತ್ತಿರುವುದು ಕಂಡುಬಂದಿದೆ.

author img

By

Published : Oct 18, 2022, 12:33 PM IST

Updated : Oct 18, 2022, 1:21 PM IST

ಮುನುಗೋಡು ಉಪಚುನಾವಣೆಯಲ್ಲಿ ಕಾಂಚಾಣದ್ದೇ ಆಟ..
In the Munugodu by election Fierce competition between 3 parties

ನಲ್ಗೊಂಡಾ: ಮುನುಗೋಡು ಕ್ಷೇತ್ರದ ಉಪಚುನಾವಣೆಗೆ ಇನ್ನೇನು ಕೇವಲ 15 ದಿನಗಳು ಬಾಕಿ ಉಳಿದಿದ್ದು, ಕ್ಷೇತ್ರದಲ್ಲಿ ಹಣದ ಹರಿವು ದಿನೇ ದಿನೆ ಹೆಚ್ಚಾಗುತ್ತಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಾಯಕರನ್ನು ಖರೀದಿಸಿ ಕಣಕ್ಕಿಳಿಸಿರುವ ರಾಜಕೀಯ ಪಕ್ಷಗಳು ಈಗ ನೇರವಾಗಿ ಮತದಾರರಿಗೆ ಹಣ ಹಂಚಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದಕ್ಕಾಗಿ ಪಕ್ಷಗಳು ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ತಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತಿವೆ. ಇತ್ತೀಚೆಗಷ್ಟೆ ಬಿಜೆಪಿ ನಾಯಕರೊಬ್ಬರಿಗೆ ಸೇರಿದ್ದೆಂದು ಹೇಳಲಾದ 1 ಕೋಟಿ ರೂಪಾಯಿ ವಶಪಡಿಸಿಕೊಂಡ ಪ್ರಕರಣ ಈಗ ಪ್ರದೇಶದಲ್ಲಿ ಬಹು ಚರ್ಚೆಯ ವಿಷಯವಾಗಿದೆ.

ಉಪಚುನಾವಣೆ ಪ್ರಮುಖ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಪ್ರಚಾರದೊಂದಿಗೆ ಹಣ ಹಂಚುವ ಅಬ್ಬರ ಜೋರಾಗಿದೆ. ಈ ಹಿನ್ನೆಲೆಯಲ್ಲಿ ನಲ್ಗೊಂಡ ಮತ್ತು ರಂಗಾರೆಡ್ಡಿ ಜಿಲ್ಲೆಯಿಂದ ಮುನುಗೋಡಕ್ಕೆ ಬರುವ ವಿವಿಧ ಪ್ರದೇಶಗಳ ಗಡಿಯಲ್ಲಿ ಪೊಲೀಸರು ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದ್ದಾರೆ. ಆದರೆ ಕೆಲವರು ಅಡ್ಡದಾರಿ, ಆಟೋ, ಬೈಕ್‌ಗಳ ಮೂಲಕ ವಿವಿಧೆಡೆ ಹಣ ಸಾಗಿಸುತ್ತಿರುವುದು ಕಂಡುಬಂದಿದೆ. ಕಣ್ಗಾವಲು ಹೆಚ್ಚಿಸುವ ಜತೆಗೆ ಎಲ್ಲ ಪಕ್ಷಗಳ ಪ್ರಮುಖ ನಾಯಕರ ವಾಹನಗಳ ಸಂಚಾರದ ಮೇಲೂ ಗಮನ ಹರಿಸಲಾಗಿದೆ. ಈ ಹಿನ್ನಲೆಯಲ್ಲಿ ಪ್ರಮುಖ ಪಕ್ಷಗಳು, ಪೊಲೀಸರು, ವಿರೋಧ ಪಕ್ಷದ ಮುಖಂಡರು ಹಣ ಹಂಚುವ ಕಾರ್ಯಕ್ರಮವನ್ನು ಅತ್ಯಂತ ಜಾಣತನದಿಂದ ರಹಸ್ಯವಾಗಿ ಜಾರಿಗೊಳಿಸುತ್ತಿದ್ದಾರೆ.

ಜನಪ್ರಿಯವಲ್ಲದ, ನಿಷ್ಠಾವಂತರ ಮನೆಗಳಲ್ಲಿ ಹಣ: ಹಲವು ವರ್ಷಗಳಿಂದ ಪಕ್ಷಕ್ಕೆ ನಿಷ್ಠರಾಗಿರುವ ಮತ್ತು ಜನತೆಯಲ್ಲಿ ಅಷ್ಟೊಂದು ಗುರುತಿಸಿಕೊಳ್ಳದ ನಾಯಕರ ಮನೆಯಲ್ಲಿ ಹಣ ಬಚ್ಚಿಡಲು ಪ್ರಮುಖ ಪಕ್ಷಗಳು ಆದ್ಯತೆ ನೀಡುತ್ತಿವೆ. ಇತ್ತೀಚೆಗಷ್ಟೇ ನಾಮಪತ್ರ ಸಲ್ಲಿಕೆ ವೇಳೆ ಪ್ರಮುಖ ಪಕ್ಷವೊಂದು ಚಂಡೂರು ಪುರಸಭೆ ಸಮೀಪದ ಗ್ರಾಮವೊಂದರ ಪಕ್ಷದ ಬಡ ಕಾರ್ಯಕರ್ತನೊಬ್ಬನ ಬಳಿ ಮುಖಂಡರು ಹಾಗೂ ಕಾರ್ಯಕರ್ತರ ಖರ್ಚಿಗಾಗಿ 25 ಲಕ್ಷ ರೂ.ಗಳನ್ನು ಇಟ್ಟಿರುವುದು ತಿಳಿದುಬಂದಿದೆ. ಈ ವಿಚಾರ ಕಾರ್ಯಕರ್ತನ ಪತ್ನಿಗೆ ತಿಳಿಯದಂತೆ ಮುಖಂಡರು ಎಚ್ಚರಿಕೆ ವಹಿಸಿದ್ದರು ಎಂದು ವರದಿಯಾಗಿದೆ. ಇನ್ನೊಂದು ಪಕ್ಷದವರು ಹಲವಾರು ವರ್ಷಗಳಿಂದ ತಮಗೆ ನಿಷ್ಠರಾಗಿರುವ ಮಹಿಳಾ ಕಾರ್ಯಕರ್ತೆಯ ಬಳಿ 36 ಲಕ್ಷ ರೂ.ಗಳನ್ನು ಇಟ್ಟಿದ್ದು, ನಾಮಪತ್ರ ಸಲ್ಲಿಕೆ ವೇಳೆ ಚೀಟಿ ಬರೆದು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದು ಪ್ರಮುಖ ಪಕ್ಷವು ಈಗಾಗಲೇ ಕನಿಷ್ಠ 10 ಲಕ್ಷ ರೂಗಳನ್ನು ಕಾರ್ಯಕರ್ತರು ಮತ್ತು ಮುಖಂಡರ ಮನೆಗೆ ತಲುಪಿಸಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.

ಹಣ ಹಂಚಲು ತಂಡ ರಚನೆ: ಚುನಾವಣೆಯಲ್ಲಿ ಹಣ ಚಲಾವಣೆ ಮಾಡಲು ಪ್ರಮುಖ ಪಕ್ಷಗಳು ತಂತ್ರಗಾರಿಕೆ ನಡೆಸುತ್ತಿವೆ ಎನ್ನಲಾಗಿದೆ. ಇದಕ್ಕಾಗಿ ತಂಡಗಳನ್ನು ರಚಿಸಿದ್ದು, ಅವುಗಳ ನಾಯಕರಿಗೆ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ. ಪ್ರಮುಖರು ಸೂಚಿಸಿದ ಜಾಗಗಳಿಂದ ಹಣ ತೆಗೆದುಕೊಂಡು ಹೋಗಿ ಹೇಳಿದ ಜಾಗಕ್ಕೆ ತಲುಪಿಸುವ ಹೊಣೆ ಒಂದು ಗುಂಪಿನವರಾದರೆ, ನಂಬಿಕಸ್ಥರ ಬಳಿ ಹಣ ಬಚ್ಚಿಟ್ಟು ಅಲ್ಲಿಂದ ಕಾರ್ಯಕರ್ತರು ಹಾಗೂ ಮತದಾರರಿಗೆ ಹಂಚುವ ಹೊಣೆ ಇನ್ನೊಂದು ಗುಂಪಿನದಾಗಿರುತ್ತದೆ. ಪ್ರಮುಖ ಪಕ್ಷಗಳಿಗೆ ಸೇರಿದ ಈ ಗುಂಪುಗಳು ಕಳೆದ ನಾಲ್ಕೈದು ದಿನಗಳಿಂದ ಯಾರಿಗೂ ಗೊತ್ತಾಗದಂತೆ ತಮ್ಮ ಕೆಲಸ ಮಾಡುತ್ತಿವೆ.

ನ.3 ರಂದು ಮತದಾನ: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮುನುಗೋಡು ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 3 ರಂದು ನಡೆಯಲಿರುವ ಉಪಚುನಾವಣೆಯು ರಾಜ್ಯದಲ್ಲಿ ಇದುವರೆಗೆ ಕಂಡ ಅತ್ಯಂತ ದುಬಾರಿ ಉಪಚುನಾವಣೆಯಾಗಿ ಪರಿಣಮಿಸಬಹುದು.

ಇದನ್ನೂ ಓದಿ: ಕಾವೇರಿದ ಮುನಗೋಡು ಉಪಚುನಾವಣೆ :10 ದಿನದಲ್ಲಿ 11 ಕೋಟಿ ಹವಾಲ ಹಣ ವಶ

ನಲ್ಗೊಂಡಾ: ಮುನುಗೋಡು ಕ್ಷೇತ್ರದ ಉಪಚುನಾವಣೆಗೆ ಇನ್ನೇನು ಕೇವಲ 15 ದಿನಗಳು ಬಾಕಿ ಉಳಿದಿದ್ದು, ಕ್ಷೇತ್ರದಲ್ಲಿ ಹಣದ ಹರಿವು ದಿನೇ ದಿನೆ ಹೆಚ್ಚಾಗುತ್ತಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಾಯಕರನ್ನು ಖರೀದಿಸಿ ಕಣಕ್ಕಿಳಿಸಿರುವ ರಾಜಕೀಯ ಪಕ್ಷಗಳು ಈಗ ನೇರವಾಗಿ ಮತದಾರರಿಗೆ ಹಣ ಹಂಚಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದಕ್ಕಾಗಿ ಪಕ್ಷಗಳು ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ತಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತಿವೆ. ಇತ್ತೀಚೆಗಷ್ಟೆ ಬಿಜೆಪಿ ನಾಯಕರೊಬ್ಬರಿಗೆ ಸೇರಿದ್ದೆಂದು ಹೇಳಲಾದ 1 ಕೋಟಿ ರೂಪಾಯಿ ವಶಪಡಿಸಿಕೊಂಡ ಪ್ರಕರಣ ಈಗ ಪ್ರದೇಶದಲ್ಲಿ ಬಹು ಚರ್ಚೆಯ ವಿಷಯವಾಗಿದೆ.

ಉಪಚುನಾವಣೆ ಪ್ರಮುಖ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಪ್ರಚಾರದೊಂದಿಗೆ ಹಣ ಹಂಚುವ ಅಬ್ಬರ ಜೋರಾಗಿದೆ. ಈ ಹಿನ್ನೆಲೆಯಲ್ಲಿ ನಲ್ಗೊಂಡ ಮತ್ತು ರಂಗಾರೆಡ್ಡಿ ಜಿಲ್ಲೆಯಿಂದ ಮುನುಗೋಡಕ್ಕೆ ಬರುವ ವಿವಿಧ ಪ್ರದೇಶಗಳ ಗಡಿಯಲ್ಲಿ ಪೊಲೀಸರು ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದ್ದಾರೆ. ಆದರೆ ಕೆಲವರು ಅಡ್ಡದಾರಿ, ಆಟೋ, ಬೈಕ್‌ಗಳ ಮೂಲಕ ವಿವಿಧೆಡೆ ಹಣ ಸಾಗಿಸುತ್ತಿರುವುದು ಕಂಡುಬಂದಿದೆ. ಕಣ್ಗಾವಲು ಹೆಚ್ಚಿಸುವ ಜತೆಗೆ ಎಲ್ಲ ಪಕ್ಷಗಳ ಪ್ರಮುಖ ನಾಯಕರ ವಾಹನಗಳ ಸಂಚಾರದ ಮೇಲೂ ಗಮನ ಹರಿಸಲಾಗಿದೆ. ಈ ಹಿನ್ನಲೆಯಲ್ಲಿ ಪ್ರಮುಖ ಪಕ್ಷಗಳು, ಪೊಲೀಸರು, ವಿರೋಧ ಪಕ್ಷದ ಮುಖಂಡರು ಹಣ ಹಂಚುವ ಕಾರ್ಯಕ್ರಮವನ್ನು ಅತ್ಯಂತ ಜಾಣತನದಿಂದ ರಹಸ್ಯವಾಗಿ ಜಾರಿಗೊಳಿಸುತ್ತಿದ್ದಾರೆ.

ಜನಪ್ರಿಯವಲ್ಲದ, ನಿಷ್ಠಾವಂತರ ಮನೆಗಳಲ್ಲಿ ಹಣ: ಹಲವು ವರ್ಷಗಳಿಂದ ಪಕ್ಷಕ್ಕೆ ನಿಷ್ಠರಾಗಿರುವ ಮತ್ತು ಜನತೆಯಲ್ಲಿ ಅಷ್ಟೊಂದು ಗುರುತಿಸಿಕೊಳ್ಳದ ನಾಯಕರ ಮನೆಯಲ್ಲಿ ಹಣ ಬಚ್ಚಿಡಲು ಪ್ರಮುಖ ಪಕ್ಷಗಳು ಆದ್ಯತೆ ನೀಡುತ್ತಿವೆ. ಇತ್ತೀಚೆಗಷ್ಟೇ ನಾಮಪತ್ರ ಸಲ್ಲಿಕೆ ವೇಳೆ ಪ್ರಮುಖ ಪಕ್ಷವೊಂದು ಚಂಡೂರು ಪುರಸಭೆ ಸಮೀಪದ ಗ್ರಾಮವೊಂದರ ಪಕ್ಷದ ಬಡ ಕಾರ್ಯಕರ್ತನೊಬ್ಬನ ಬಳಿ ಮುಖಂಡರು ಹಾಗೂ ಕಾರ್ಯಕರ್ತರ ಖರ್ಚಿಗಾಗಿ 25 ಲಕ್ಷ ರೂ.ಗಳನ್ನು ಇಟ್ಟಿರುವುದು ತಿಳಿದುಬಂದಿದೆ. ಈ ವಿಚಾರ ಕಾರ್ಯಕರ್ತನ ಪತ್ನಿಗೆ ತಿಳಿಯದಂತೆ ಮುಖಂಡರು ಎಚ್ಚರಿಕೆ ವಹಿಸಿದ್ದರು ಎಂದು ವರದಿಯಾಗಿದೆ. ಇನ್ನೊಂದು ಪಕ್ಷದವರು ಹಲವಾರು ವರ್ಷಗಳಿಂದ ತಮಗೆ ನಿಷ್ಠರಾಗಿರುವ ಮಹಿಳಾ ಕಾರ್ಯಕರ್ತೆಯ ಬಳಿ 36 ಲಕ್ಷ ರೂ.ಗಳನ್ನು ಇಟ್ಟಿದ್ದು, ನಾಮಪತ್ರ ಸಲ್ಲಿಕೆ ವೇಳೆ ಚೀಟಿ ಬರೆದು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದು ಪ್ರಮುಖ ಪಕ್ಷವು ಈಗಾಗಲೇ ಕನಿಷ್ಠ 10 ಲಕ್ಷ ರೂಗಳನ್ನು ಕಾರ್ಯಕರ್ತರು ಮತ್ತು ಮುಖಂಡರ ಮನೆಗೆ ತಲುಪಿಸಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.

ಹಣ ಹಂಚಲು ತಂಡ ರಚನೆ: ಚುನಾವಣೆಯಲ್ಲಿ ಹಣ ಚಲಾವಣೆ ಮಾಡಲು ಪ್ರಮುಖ ಪಕ್ಷಗಳು ತಂತ್ರಗಾರಿಕೆ ನಡೆಸುತ್ತಿವೆ ಎನ್ನಲಾಗಿದೆ. ಇದಕ್ಕಾಗಿ ತಂಡಗಳನ್ನು ರಚಿಸಿದ್ದು, ಅವುಗಳ ನಾಯಕರಿಗೆ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ. ಪ್ರಮುಖರು ಸೂಚಿಸಿದ ಜಾಗಗಳಿಂದ ಹಣ ತೆಗೆದುಕೊಂಡು ಹೋಗಿ ಹೇಳಿದ ಜಾಗಕ್ಕೆ ತಲುಪಿಸುವ ಹೊಣೆ ಒಂದು ಗುಂಪಿನವರಾದರೆ, ನಂಬಿಕಸ್ಥರ ಬಳಿ ಹಣ ಬಚ್ಚಿಟ್ಟು ಅಲ್ಲಿಂದ ಕಾರ್ಯಕರ್ತರು ಹಾಗೂ ಮತದಾರರಿಗೆ ಹಂಚುವ ಹೊಣೆ ಇನ್ನೊಂದು ಗುಂಪಿನದಾಗಿರುತ್ತದೆ. ಪ್ರಮುಖ ಪಕ್ಷಗಳಿಗೆ ಸೇರಿದ ಈ ಗುಂಪುಗಳು ಕಳೆದ ನಾಲ್ಕೈದು ದಿನಗಳಿಂದ ಯಾರಿಗೂ ಗೊತ್ತಾಗದಂತೆ ತಮ್ಮ ಕೆಲಸ ಮಾಡುತ್ತಿವೆ.

ನ.3 ರಂದು ಮತದಾನ: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮುನುಗೋಡು ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 3 ರಂದು ನಡೆಯಲಿರುವ ಉಪಚುನಾವಣೆಯು ರಾಜ್ಯದಲ್ಲಿ ಇದುವರೆಗೆ ಕಂಡ ಅತ್ಯಂತ ದುಬಾರಿ ಉಪಚುನಾವಣೆಯಾಗಿ ಪರಿಣಮಿಸಬಹುದು.

ಇದನ್ನೂ ಓದಿ: ಕಾವೇರಿದ ಮುನಗೋಡು ಉಪಚುನಾವಣೆ :10 ದಿನದಲ್ಲಿ 11 ಕೋಟಿ ಹವಾಲ ಹಣ ವಶ

Last Updated : Oct 18, 2022, 1:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.