ETV Bharat / city

ತುಮಕೂರಿನಲ್ಲಿ ಪತ್ತೆಯಾಗುತ್ತಲೇ ಇವೆ ಅಪರಿಚಿತ ಮಹಿಳೆಯರ ಶವಗಳು! - ತುಮಕೂರಿನಲ್ಲಿ ಪತ್ತೆಯಾಗುತ್ತಲೇ ಇವೆ ಅಪರಿಚಿತ ಮಹಿಳೆಯರ ಶವ

ತುಮಕೂರು ನಗರದ ಹೊರವಲಯದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳು ಒಂದು ರೀತಿಯ ಕ್ರಿಮಿನಲ್ ಚಟುವಟಿಕೆಗಳ ತಾಣವಾಗಿ ಪರಿವರ್ತನೆಗೊಂಡಿದೆ ಎನ್ನುವ ಗಂಭೀರ ಆರೋಪಗಳು ಕೇಳಿ ಬರ್ತಿವೆ.

womans dead body
ಅಪರಿಚಿತ ಮಹಿಳೆಯರ ಶವ ಪತ್ತೆ
author img

By

Published : Jan 9, 2020, 7:31 PM IST

ತುಮಕೂರು: ನಗರದ ಹೊರವಲಯದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳು ಒಂದು ರೀತಿಯ ಕ್ರಿಮಿನಲ್ ಚಟುವಟಿಕೆಗಳ ತಾಣವಾಗಿ ಪರಿವರ್ತನೆಗೊಂಡಿದೆ ಎನ್ನುವ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.

ಅಪರಿಚಿತ ಮಹಿಳೆಯರ ಶವ ಪತ್ತೆ ಕುರಿತು ವಂಶಿಕೃಷ್ಣ ಪ್ರತಿಕ್ರಿಯೆ

ಹೆದ್ದಾರಿಯ ಇಕ್ಕೆಲಗಳಲ್ಲಿನ ನಿರ್ಜನ ಪ್ರದೇಶದಲ್ಲಿ ಮಹಿಳೆಯರ ಶವಗಳನ್ನು ಬಿಸಾಡಿ ಹೋಗುತ್ತಿರುವುದು ಆತಂಕಕಾರಿಯಾಗಿದೆ. 2019 ರಲ್ಲಿ ಜಿಲ್ಲೆಯಲ್ಲಿ ಒಟ್ಟು 36 ಅಪರಿಚಿತ ಮಹಿಳೆಯರ ಶವಗಳು ಇಲ್ಲಿ ಪತ್ತೆಯಾಗಿವೆ. ಅದ್ರಲ್ಲಿ ಇತ್ತೀಚೆಗೆ ತುಮಕೂರು ಹೊರವಲಯದಲ್ಲಿ ಮಹಿಳೆಯೊಬ್ಬರನ್ನು ಆರೋಪಿಗಳು ಸುಟ್ಟುಹಾಕಿ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ತುಮಕೂರು ಜಿಲ್ಲೆಯಲ್ಲಿ ಪದೇ ಪದೇ ಮಹಿಳೆಯರ ಅನಾಥ ಶವಗಳು ಪತ್ತೆಯಾಗುತ್ತಿವೆ. ಬಹುತೇಕ ಪ್ರಕರಣಗಳ ತನಿಖೆ ಕೂಡ ನಡೆಯುತ್ತಿದೆ. ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆಲಹಾಳ್ ಸಮೀಪ ಅಪರಿಚಿತ ಮಹಿಳೆಯನ್ನು ಕೊಲೆ ಮಾಡಿ, ಸುಟ್ಟು ಹಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಕ್ಯಾತಸಂದ್ರದ ಬಳಿಯೂ ಸಹ ಮಹಿಳೆ ಕತ್ತುಕೊಯ್ದು ಚಿನ್ನಾಭರಣ ದೋಚಲಾಗಿತ್ತು.

ಇದಲ್ಲದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್​ಪೇಟೆಗೆ ಹೊಂದಿಕೊಂಡಂತೆ ಇರುವ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಈ ಎಲ್ಲಾ ಕೇಸ್​ಗಳು ನಿಗೂಢವಾಗಿಯೇ ಉಳಿದಿವೆ. ಪೊಲೀಸರು ಎಷ್ಟೇ ಹರಸಾಹಸ ಪಟ್ಟರೂ ಅಪರಿಚಿತ ಮಹಿಳೆಯರ ಶವಗಳ ಗುರುತು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. 2019 ರಲ್ಲಿ ಪತ್ತೆಯಾದ 36 ಮಹಿಳೆಯರ ಶವಗಳಲ್ಲಿ ಕೇವಲ 9 ಶವಗಳ ಗುರುತು ಪತ್ತೆಯಾಗಿದೆ. ಇನ್ನುಳಿದಂತೆ ಶವದ ಹಿನ್ನೆಲೆ ಪತ್ತೆಯಾಗದಿರುವುದು ದುರಂತ.

ತುಮಕೂರು: ನಗರದ ಹೊರವಲಯದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳು ಒಂದು ರೀತಿಯ ಕ್ರಿಮಿನಲ್ ಚಟುವಟಿಕೆಗಳ ತಾಣವಾಗಿ ಪರಿವರ್ತನೆಗೊಂಡಿದೆ ಎನ್ನುವ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.

ಅಪರಿಚಿತ ಮಹಿಳೆಯರ ಶವ ಪತ್ತೆ ಕುರಿತು ವಂಶಿಕೃಷ್ಣ ಪ್ರತಿಕ್ರಿಯೆ

ಹೆದ್ದಾರಿಯ ಇಕ್ಕೆಲಗಳಲ್ಲಿನ ನಿರ್ಜನ ಪ್ರದೇಶದಲ್ಲಿ ಮಹಿಳೆಯರ ಶವಗಳನ್ನು ಬಿಸಾಡಿ ಹೋಗುತ್ತಿರುವುದು ಆತಂಕಕಾರಿಯಾಗಿದೆ. 2019 ರಲ್ಲಿ ಜಿಲ್ಲೆಯಲ್ಲಿ ಒಟ್ಟು 36 ಅಪರಿಚಿತ ಮಹಿಳೆಯರ ಶವಗಳು ಇಲ್ಲಿ ಪತ್ತೆಯಾಗಿವೆ. ಅದ್ರಲ್ಲಿ ಇತ್ತೀಚೆಗೆ ತುಮಕೂರು ಹೊರವಲಯದಲ್ಲಿ ಮಹಿಳೆಯೊಬ್ಬರನ್ನು ಆರೋಪಿಗಳು ಸುಟ್ಟುಹಾಕಿ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ತುಮಕೂರು ಜಿಲ್ಲೆಯಲ್ಲಿ ಪದೇ ಪದೇ ಮಹಿಳೆಯರ ಅನಾಥ ಶವಗಳು ಪತ್ತೆಯಾಗುತ್ತಿವೆ. ಬಹುತೇಕ ಪ್ರಕರಣಗಳ ತನಿಖೆ ಕೂಡ ನಡೆಯುತ್ತಿದೆ. ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆಲಹಾಳ್ ಸಮೀಪ ಅಪರಿಚಿತ ಮಹಿಳೆಯನ್ನು ಕೊಲೆ ಮಾಡಿ, ಸುಟ್ಟು ಹಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಕ್ಯಾತಸಂದ್ರದ ಬಳಿಯೂ ಸಹ ಮಹಿಳೆ ಕತ್ತುಕೊಯ್ದು ಚಿನ್ನಾಭರಣ ದೋಚಲಾಗಿತ್ತು.

ಇದಲ್ಲದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್​ಪೇಟೆಗೆ ಹೊಂದಿಕೊಂಡಂತೆ ಇರುವ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಈ ಎಲ್ಲಾ ಕೇಸ್​ಗಳು ನಿಗೂಢವಾಗಿಯೇ ಉಳಿದಿವೆ. ಪೊಲೀಸರು ಎಷ್ಟೇ ಹರಸಾಹಸ ಪಟ್ಟರೂ ಅಪರಿಚಿತ ಮಹಿಳೆಯರ ಶವಗಳ ಗುರುತು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. 2019 ರಲ್ಲಿ ಪತ್ತೆಯಾದ 36 ಮಹಿಳೆಯರ ಶವಗಳಲ್ಲಿ ಕೇವಲ 9 ಶವಗಳ ಗುರುತು ಪತ್ತೆಯಾಗಿದೆ. ಇನ್ನುಳಿದಂತೆ ಶವದ ಹಿನ್ನೆಲೆ ಪತ್ತೆಯಾಗದಿರುವುದು ದುರಂತ.

Intro:Body:ಪತ್ತೆಯಾಗುತ್ತಲೇ ಇವೆ ಸಾಲುಸಾಲು ಅಪರಿಚಿತ ಮಹಿಳೆಯ ಶವ ಗಳು.....


ತುಮಕೂರು
ಕಲ್ಪತರು ನಾಡು ತುಮಕೂರು ಜಿಲ್ಲೆ ರಾಜಧಾನಿ ಬೆಂಗಳೂರಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಆದರೆ ಹಲವು ಕ್ರಿಮಿನಲ್ ಚಟುವಟಿಕೆಗಳಿಗೂ ಇದು ಒಂದು ರೀತಿ ರಹದಾರಿ ಆಗಿದೆ ಎಂದರೆ ತಪ್ಪಾಗಲಾರದು.

ಹೌದು ತುಮಕೂರು ನಗರ ಬೆಂಗಳೂರಿಗೆ ಸುಮಾರು ಒಂದುವರೆ ಗಂಟೆ ಪ್ರಯಾಣದ ಅವಧಿಯದ್ದಾಗಿದೆ.
ತುಮಕೂರು ನಗರದ ಹೊರವಲಯದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಕ್ಕೆಲಗಳು ಒಂದು ರೀತಿ ಕ್ರಿಮಿನಲ್ ಚಟುವಟಿಕೆ ನಡೆಸುವವರಿಗೆ ಹಾಟ್ಸ್ಪಾಟ್ ಆಗಿ ಪರಿವರ್ತನೆಗೊಂಡಿದೆ.
ಮುಖ್ಯವಾಗಿ ಬೇರೆಲ್ಲೋ ಕೊಲೆ ಮಾಡಿ ಶವಗಳನ್ನು ತಂದು ಬಿಸಾಡಿ ಹೋಗುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಇನ್ನು ಹೆದ್ದಾರಿಯ ಇಕ್ಕೆಲಗಳಲ್ಲಿನ ನಿರ್ಜನ ಪ್ರದೇಶದಲ್ಲಿ ಮಹಿಳೆಯರ ಶವಗಳನ್ನು ಬಿಸಾಡಿಹೋಗುತ್ತಿರುವುದು ಆತಂಕಕಾರಿ ಯಾಗಿದೆ. 2019ರಲ್ಲಿ ಜಿಲ್ಲೆಯಲ್ಲಿ ಒಟ್ಟು 36 ಅಪರಿಚಿತ ಮಹಿಳೆಯರ ಶವಗಳು ಪತ್ತೆಯಾಗಿವೆ. ಅದ್ರಲ್ಲಿ ಇತ್ತೀಚಿಗೆ ತುಮಕೂರು ಹೊರವಲಯದಲ್ಲಿ ಮಹಿಳೆಯೊಬ್ಬರನ್ನು ಸುಟ್ಟುಹಾಕಿ ಪರಾರಿಯಾಗಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.

ತುಮಕೂರು ಜಿಲ್ಲೆಯಲ್ಲಿ ಪದೇ ಪದೇ ಹೀಗೆ ಮಹಿಳೆಯರ ಅನಾಥ ಶವಗಳು ಪತ್ತೆಯಾಗುತ್ತಿವೆ. ಬಹುತೇಕ ಇಂತಹ ಪ್ರಕರಣಗಳು ಇನ್ನು ತನಿಖೆ ಹಂತದಲ್ಲಿವೆ.
ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆಲಹಾಳ್ ಸಮೀಪ ಅಪರಿಚಿತ ಮಹಿಳೆಯನ್ನು ಕೊಲೆ ಮಾಡಿ ಸುಟ್ಟು ಹಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಕ್ಯಾತಸಂದ್ರದ ಬಳಿ ಮಹಿಳೆ ಕತ್ತುಕೊಯ್ದು ಚಿನ್ನಾಭರಣ ಕಳವು ದೋಚಲಾಗಿತ್ತು.

ಇದಲ್ಲದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್ಪೇಟೆಗೆ ಹೊಂದಿಕೊಂಡಂತೆ ಇರುವ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಈ ಎಲ್ಲಾ ಕೇಸ್ ಗಳು ನಿಗೂಢವಾಗಿಯೇ ಉಳಿದಿವೆ.

ಪೊಲೀಸ್ ಎಷ್ಟೇ ಹರಸಾಹಸ ಪಟ್ಟರು ಅಪರಿಚಿತ ಮಹಿಳೆಯರ ಶವಗಳ ಗುರುತು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. 2019ರಲ್ಲಿ ಪತ್ತೆಯಾದ 36 ಮಹಿಳೆಯರ ಶವಗಳಲ್ಲಿ ಕೇವಲ 9 ಶವಗಳ ಗುರುತು ಪತ್ತೆಯಾಗಿದೆ. ಇನ್ನುಳಿದಂತೆ ಶವ ಹಿನ್ನೆಲೇ ಪತ್ತೆಯಾಗದಿರುವುದು ದುರಂತವಾಗಿದೆ.

ಬೆಂಗಳೂರಿಗೆ ಹೊಂದಿಕೊಂಡಂತೆ ಇರುವ ತಾಲ್ಲೂಕುಗಳಲ್ಲಿ ಶವಗಳು ಪತ್ತೆಯಾಗುತ್ತಲೇ ಇವೆ. ಹೀಗಾಗಿ ತುಮಕೂರು ಜಿಲ್ಲೆಯ ಬೆಂಗಳೂರಿಗೆ ಹೊಂದಿಕೊಂಡಂತೆ ಇದ್ದರೂ ಇಂತಹ ಕ್ರಿಮಿನಲ್ ಚಟುವಟಿಕೆ ನಡೆಸುವ ರಿಗೆ ಮಾತ್ರ ಸುಲಭದ ಮಾರ್ಗವಾಗಿ ಪರಿವರ್ತನೆಯಾಗಿರುವುದು ದುರಂತವಾಗಿದೆ.
ಬೈಟ್: ವಂಶಿಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ....Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.