ತುಮಕೂರು : ಉಕ್ರೇನ್ನಲ್ಲಿ ಸಿಲುಕಿರುವ ತುಮಕೂರಿನ ಪ್ರತಿಭಾ ಎಂಬ ಮೆಡಿಕಲ್ ವಿದ್ಯಾರ್ಥಿನಿ ನಿತ್ಯ ತನ್ನ ಪೋಷಕರೊಂದಿಗೆ ವಾಟ್ಸ್ಆ್ಯಪ್ ಕಾಲ್ ಮೂಲಕ ಮಾತನಾಡುತ್ತಿದ್ದಾರೆ.
ಪ್ರಸ್ತುತ ಪ್ರತಿಭಾ ಉಳಿದುಕೊಂಡಿರೋ ಸ್ಥಳದಲ್ಲಿ ಕುಡಿಯಲು ನೀರು ಲಭ್ಯವಾಗುತ್ತಿಲ್ಲ, ಪರ್ಯಾಯವಾಗಿ ನಲ್ಲಿ ನೀರನ್ನು ಕುದಿಸಿ ಕುಡಿಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ಆಹಾರ ವಸ್ತುಗಳು ಸರಿಯಾಗಿ ಲಭ್ಯವಾಗುತ್ತಿಲ್ಲ. ಜೊತೆಗೆ ಎಟಿಎಂ ಅಲ್ಲಿ ಹಣ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಮನೆಯ ಸಮೀಪವೇ ಬಾಂಬ್ ಹಾಕಿದಂತಹ ಶಬ್ದ ಕೇಳಿ ಬರುತ್ತಿದೆ.
ತಕ್ಷಣ ಸುರಂಗಮಾರ್ಗವನ್ನು ಅವಲಂಬಿಸಬೇಕಿದೆ ಎಂದು ತನ್ನ ಪೋಷಕರಿಗೆ ಪ್ರತಿಭಾ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಪ್ರತಿಭಾ ಪೋಷಕರಾದ ಬಸವರಾಜ್ ಮತ್ತು ರಾಜೇಶ್ವರಿ ಸದ್ಯ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದು ಬಂದಿದೆ.
ಓದಿ : ಉಕ್ರೇನ್: ಆಹಾರ, ನೀರಿಲ್ಲದೇ ಬಂಕರ್ನಲ್ಲಿ ಸಿಲುಕಿರುವ ಮೈಸೂರಿನ ವಿದ್ಯಾರ್ಥಿನಿ