ETV Bharat / city

ಸದ್ದಿಲ್ಲದೆ ಸಸ್ಯರಾಶಿಯ ದಾಹ ನೀಗಿಸುತ್ತಿರುವ ಕೃಷಿಕ ಸಮಾಜ.

ಭಾರತೀಯ ಕೃಷಿಕ ಸಮಾಜ ಎಂಬ ಸಂಘಟನೆ ಗಿಡಮರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಒಂದು ವರ್ಷದಿಂದ ಸಸಿಗಳಿಗೆ ನೀರುಣಿಸುತ್ತಾ ಬಂದಿದೆ.

author img

By

Published : Nov 24, 2019, 12:56 PM IST

Updated : Nov 24, 2019, 2:48 PM IST

Free water for tree growth

ತುಮಕೂರು: ಜನಮನ ಗೆಲ್ಲಲು ಸ್ಥಳೀಯ ಜನಪ್ರತಿನಿಧಿಗಳು ನಾ ಮುಂದು, ತಾ ಮುಂದು ಎನ್ನುತ್ತಾ ಟ್ಯಾಂಕರ್​​ಗಳ ಮೂಲಕ ಉಚಿತವಾಗಿ ನೀರು ಪೂರೈಸಲು ಪೈಪೋಟಿ ನಡೆಸುತ್ತಾರೆ. ಅವರು ಕೇವಲ ಓಟಿಗಾಗಿ ಒಂದೆರಡು ದಿನ ಗಿಡಗಳಿಗೆ ನೀರುಣಿಸಿ ಕೈ ಬಿಡುತ್ತಾರೆ. ಆದರೆ, ತುಮಕೂರು ನಗರದಲ್ಲೊಂದು ಸಂಘಟನೆ ಪರಿಸರ ಉಳಿವಿಗೆ ಸದ್ದಿಲ್ಲದೆ ಶ್ರಮಿಸುತ್ತಿದೆ.

ರಸ್ತೆ ಬದಿ ನೀರಿಲ್ಲದೆ ಸೊರಗುತ್ತಿರುವ ವೃಕ್ಷಗಳಿಗೆ ಕೆಲವರು ಒಂದೆರಡು ದಿನ ಟ್ಯಾಂಕರ್ ಮೂಲಕ ನೀರುಣಿಸಿ ಸುಮ್ಮನಾಗುತ್ತಾರೆ. ಭಾರತೀಯ ಕೃಷಿಕ ಸಮಾಜ ಎಂಬ ಸಂಘಟನೆ ಗಿಡಮರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಒಂದು ವರ್ಷದಿಂದ ಸಸಿಗಳಿಗೆ ನೀರುಣಿಸುತ್ತಾ ಬಂದಿದೆ. ಅಲ್ಲದೆ, ಟ್ಯಾಂಕರ್ ಮೇಲೆ 'ಉಚಿತ ನೀರು ಮರ-ಗಿಡಗಳಿಗೆ ಮಾತ್ರ' ಎಂಬ ಬರಹವನ್ನೂ ಬರೆಸಿಕೊಂಡಿದೆ.

ಸಸ್ಯರಾಶಿಯ ದಾಹ ನೀಗಿಸುತ್ತಿರುವ ಕೃಷಿಕ ಸಮಾಜ

ಭಾರತೀಯ ಕೃಷಿಕ ಸಮಾಜ ತಿಂಗಳಿಗೆ ಸಾವಿರಾರು ವೃಕ್ಷಗಳಿಗೆ ನೀರುಣಿಸುವ ಮೂಲಕ ಪರಿಸರ ಉಳಿವಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಈ ಸಂಘಟನೆ ಕಾರ್ಯಕ್ಕೆ ಅರಣ್ಯ ಇಲಾಖೆ ನೆಟ್ಟಿರುವ ಎಷ್ಟೋ ಸಸಿಗಳು ಮರು ಜೀವ ಪಡೆದುಕೊಂಡಿವೆ.

ಅರಣ್ಯ ಇಲಾಖೆ ಸಸಿಗಳನ್ನು ನೆಡುತ್ತದಯೇ ವಿನಃ ಅವುಗಳನ್ನು ಬೆಳೆಸಿ ಪೋಷಿಸುವ ಗೋಜಿಗೆ ಹೋಗುವುದಿಲ್ಲ. ಇಲಾಖೆ ಮಾಡಬೇಕಾದ ಕೆಲಸವನ್ನು ಕೃಷಿಕ ಸಮಾಜ ಮಾಡುತ್ತಿದೆ. ಅದಕ್ಕಾಗಿಯೇ ಇಬ್ಬರು ಸಿಬ್ಬಂದಿಯನ್ನೂ ನೇಮಿಸಿದೆ. ಸಂಘಟನೆಯ ಈ ಕಾರ್ಯಕ್ಕೆ ಎಲ್ಲಡೆಯೂ ಪ್ರಶಂಸೆ ವ್ಯಕ್ತವಾಗಿದೆ.

ತುಮಕೂರು: ಜನಮನ ಗೆಲ್ಲಲು ಸ್ಥಳೀಯ ಜನಪ್ರತಿನಿಧಿಗಳು ನಾ ಮುಂದು, ತಾ ಮುಂದು ಎನ್ನುತ್ತಾ ಟ್ಯಾಂಕರ್​​ಗಳ ಮೂಲಕ ಉಚಿತವಾಗಿ ನೀರು ಪೂರೈಸಲು ಪೈಪೋಟಿ ನಡೆಸುತ್ತಾರೆ. ಅವರು ಕೇವಲ ಓಟಿಗಾಗಿ ಒಂದೆರಡು ದಿನ ಗಿಡಗಳಿಗೆ ನೀರುಣಿಸಿ ಕೈ ಬಿಡುತ್ತಾರೆ. ಆದರೆ, ತುಮಕೂರು ನಗರದಲ್ಲೊಂದು ಸಂಘಟನೆ ಪರಿಸರ ಉಳಿವಿಗೆ ಸದ್ದಿಲ್ಲದೆ ಶ್ರಮಿಸುತ್ತಿದೆ.

ರಸ್ತೆ ಬದಿ ನೀರಿಲ್ಲದೆ ಸೊರಗುತ್ತಿರುವ ವೃಕ್ಷಗಳಿಗೆ ಕೆಲವರು ಒಂದೆರಡು ದಿನ ಟ್ಯಾಂಕರ್ ಮೂಲಕ ನೀರುಣಿಸಿ ಸುಮ್ಮನಾಗುತ್ತಾರೆ. ಭಾರತೀಯ ಕೃಷಿಕ ಸಮಾಜ ಎಂಬ ಸಂಘಟನೆ ಗಿಡಮರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಒಂದು ವರ್ಷದಿಂದ ಸಸಿಗಳಿಗೆ ನೀರುಣಿಸುತ್ತಾ ಬಂದಿದೆ. ಅಲ್ಲದೆ, ಟ್ಯಾಂಕರ್ ಮೇಲೆ 'ಉಚಿತ ನೀರು ಮರ-ಗಿಡಗಳಿಗೆ ಮಾತ್ರ' ಎಂಬ ಬರಹವನ್ನೂ ಬರೆಸಿಕೊಂಡಿದೆ.

ಸಸ್ಯರಾಶಿಯ ದಾಹ ನೀಗಿಸುತ್ತಿರುವ ಕೃಷಿಕ ಸಮಾಜ

ಭಾರತೀಯ ಕೃಷಿಕ ಸಮಾಜ ತಿಂಗಳಿಗೆ ಸಾವಿರಾರು ವೃಕ್ಷಗಳಿಗೆ ನೀರುಣಿಸುವ ಮೂಲಕ ಪರಿಸರ ಉಳಿವಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಈ ಸಂಘಟನೆ ಕಾರ್ಯಕ್ಕೆ ಅರಣ್ಯ ಇಲಾಖೆ ನೆಟ್ಟಿರುವ ಎಷ್ಟೋ ಸಸಿಗಳು ಮರು ಜೀವ ಪಡೆದುಕೊಂಡಿವೆ.

ಅರಣ್ಯ ಇಲಾಖೆ ಸಸಿಗಳನ್ನು ನೆಡುತ್ತದಯೇ ವಿನಃ ಅವುಗಳನ್ನು ಬೆಳೆಸಿ ಪೋಷಿಸುವ ಗೋಜಿಗೆ ಹೋಗುವುದಿಲ್ಲ. ಇಲಾಖೆ ಮಾಡಬೇಕಾದ ಕೆಲಸವನ್ನು ಕೃಷಿಕ ಸಮಾಜ ಮಾಡುತ್ತಿದೆ. ಅದಕ್ಕಾಗಿಯೇ ಇಬ್ಬರು ಸಿಬ್ಬಂದಿಯನ್ನೂ ನೇಮಿಸಿದೆ. ಸಂಘಟನೆಯ ಈ ಕಾರ್ಯಕ್ಕೆ ಎಲ್ಲಡೆಯೂ ಪ್ರಶಂಸೆ ವ್ಯಕ್ತವಾಗಿದೆ.

Intro:ಸದ್ದಿಲ್ಲದೆ ಸಸ್ಯರಾಶಿಯ ದಾಹ ನೀಗಿಸುತ್ತಿರುವ ಕೃಷಿಕ ಸಮಾಜ.......

ತುಮಕೂರು
ಕೆಲವೆಡೆ ಸ್ಥಳೀಯ ಜನಪ್ರತಿನಿಧಿಗಳು ನಾ ಮುಂದು ತಾ ಮುಂದು ಎಂದು ಟ್ಯಾಂಕರ್ ಮೂಲಕ ಉಚಿತವಾಗಿ ನೀರನ್ನು ಕೊಡುವ ಮೂಲಕ ಜನ ಮನ ಗೆಲ್ಲಲು ಪೈಪೋಟಿ ನಡೆಸುತ್ತಾರೆ. ಆದರೆ ತುಮಕೂರು ನಗರದಲ್ಲಿ ಸಂಘಟನೆಯೊಂದು ಗಿಡ-ಮರಗಳ ದಾಹವನ್ನು ಸದ್ದಿಲ್ಲದೆ ನೀಗಿಸುವಲ್ಲಿ ನಿರತವಾಗಿದೆ.
ಹೌದು ಹೀಗೆ ನಗರದ ರಸ್ತೆ ಬದಿ ನೀರಿಲ್ಲದೆ ಸೊರಗುತ್ತಿರುವ ಮರಗಿಡಗಳಿಗೆ ಟ್ಯಾಂಕರ್ ಮೂಲಕ ನೀರುಣಿಸುವುದು ಸರ್ವೇಸಾಮಾನ್ಯವಾಗಿದೆ. ಈ ರೀತಿಯಾದ ಒಂದು ಪ್ರಕ್ರಿಯೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಟ್ಯಾಂಕರ್ ನೀರನ್ನು ಮರ ಗಿಡಗಳಿಗೆ ಮಾತ್ರ ಉಚಿತವಾಗಿ ನೀಡುವ ಉದ್ದೇಶ ಹೊಂದಲಾಗಿದೆ. ಟ್ಯಾಂಕರ್ ಮೇಲೆ ''ಉಚಿತ ನೀರು ಮರ-ಗಿಡಗಳಿಗೆ ಮಾತ್ರ'' ಎಂದು ಬರೆಯಲಾಗಿದೆ. ಇದರಿಂದಾಗಿ ಅದೆಷ್ಟು ಮರಗಿಡಗಳ ನೀರಿನ ದಾಹ ನೀಗಿದೆ. ಇಂತಹ ಅಪರೂಪದ ಒಂದು ಕಾಯಕದಲ್ಲಿ ತೊಡಗಿರುವುದು ತುಮಕೂರಿನ ಭಾರತೀಯ ಕೃಷಿಕ ಸಮಾಜ ತಿಂಗಳಿಗೆ ನೂರಾರು ಮರಗಿಡಗಳಿಗೆ ನೀರು ಕೊಡಲಾಗುತ್ತದೆ. ಇದರಿಂದಾಗಿ ತುಮಕೂರು ನಗರದ ಬಹುತೇಕ ಎಲ್ಲಾ ಕಡೆ ಅರಣ್ಯ ಇಲಾಖೆ ಹಾಗೂ ವಿವಿಧೆಡೆ ನೀಡಲಾಗಿರುವ ಅಂತಹ ಸಸಿಗಳು ಮಾತು ಗಿಡಗಳು ಚೇತರಿಸಿಕೊಂಡಿದೆ.
ಬೈಟ್: ಜಗದೀಶ್, ಪ್ರಧಾನ ಕಾರ್ಯದರ್ಶಿ, ಭಾರತೀಯ ಕೃಷಿಕ ಸಮಾಜ....(ಬಿಳಿ ಶರ್ಟ್ ಧರಿಸಿದ್ದಾರೆ.....)
ಈ ಕೃಷಿಕ ಸಮಾಜದ ವಿಭಿನ್ನ ರೀತಿಯ ಸಸ್ಯರಾಶಿಯ ಮೇಲಿನ ಕಾಳಜಿ ಸಾಕಷ್ಟು ಪ್ರಶಂಸೆಗೆ ಒಳಗಾಗಿದೆ. ತುಮಕೂರು ನಗರದಲ್ಲಿ ಮಳೆಗಾಲದಲ್ಲಿಯೂ ಕೂಡ ಕೆಲ ಮರ- ಗಿಡಗಳು ನೀರಿಲ್ಲದೆ ಬಾಡುತ್ತವೆ. ಹೀಗಾಗಿ ಮಳೆಗಾಲ ವಿದ್ದರೂ ಕೂಡ ನಗರದೆಲ್ಲೆಡೆ ಇರುವಂತಹ ಮರಗಿಡಗಳಿಗೆ ಟ್ಯಾಂಕರ್ ಮೂಲಕ ಕೃಷಿಕ ಸಮಾಜದ ಇಬ್ಬರು ಸಿಬ್ಬಂದಿಗಳು ನಿರಂತರವಾಗಿ ನೀರನ್ನು ಹಾಕುತ್ತಿರುತ್ತಾರೆ. ಅರಣ್ಯ ಇಲಾಖೆಯೇನೋ ಮಳೆಗಾಲದಲ್ಲಿ ಸಸಿಗಳನ್ನು ನೆಟ್ಟು ಲೆಕ್ಕ ಬರೆದಿಡುತ್ತದೆ ಆದರೆ ಅವುಗಳನ್ನು ಬೆಳೆಸಿ ಪೋಷಿಸುವ ಗೋಜಿಗೆ ಹೋಗುವುದಿಲ್ಲ. ಇದರಿಂದಾಗಿ ಅದೆಷ್ಟು ಸಸಿಗಳು ಮಣ್ಣುಪಾಲಾಗಿದೆ. ಇದನ್ನು ಮನಗಂಡ ಕೃಷಿಕ ಸಮಾಜದ ಬಂಧುಗಳು ಅಂತಹ ಸಸಿಗಳಿಗೆ ನೀರು ಕೊಡುವಂತಹ ಇಂತಹ ಅಮೂಲ್ಯವಾದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಬೈಟ್ : ಪುಟ್ಟರಾಜು, ಭಾರತೀಯ ಕೃಷಿಕ ಸಮಾಜದ(ನೀಲಿ ಶರ್ಟ್ ಧರಿಸಿದ್ದಾರೆ....)
ಒಟ್ಟಾರೆ ಭಾರತೀಯ ಕೃಷಿಕ ಸಮಾಜದ ಅಬ್ಬರವಿಲ್ಲದ ಮರಗಿಡಗಳಿಗೆ ನೀರು ಕೊಡುವ ಅಪರೂಪದ ಸೇವೆ ನಿಜಕ್ಕೂ ಶ್ಲಾಘನೆಗೆ ಪಾತ್ರವಾಗಿದೆ ಎಂದೇ ಹೇಳಬಹುದಾಗಿದೆ.





Body:ತುಮಕೂರು


Conclusion:
Last Updated : Nov 24, 2019, 2:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.