ETV Bharat / city

ದೇವೇಗೌಡರ ಸೋಲಿಗೆ ಕಾರಣಗಳೇನು: ರಾಜ್ಯ ಯುವ ಕಾಂಗ್ರೆಸ್​ ಉಪಾಧ್ಯಕ್ಷ ಹೇಳಿದ್ದೇನು? - undefined

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಹೆಚ್.ಡಿ. ದೇವೇಗೌಡರ ಸೋಲಿಗೆ ಕಾರಣಗಳೇನೆಂಬುದನ್ನು ರಾಜ್ಯ ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಆರ್. ರಾಜೇಂದ್ರ ವಿವರಿಸಿದ್ದಾರೆ. ತುಮಕೂರು ಕ್ಷೇತ್ರದ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಡಿಸಿಎಂ ಪರಮೇಶ್ವರ್​ ಅವರೇ ದೇವೇಗೌಡರ ಸೋಲಿಗೆ ಕಾರಣ ಎಂದು ಆರ್​ ರಾಜೇಂದ್ರ ಹೊಸ ಬಾಂಬ್​ ಸಿಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಆರ್. ರಾಜೇಂದ್ರ
author img

By

Published : May 27, 2019, 5:54 PM IST

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಹೆಚ್.ಡಿ. ದೇವೇಗೌಡರ ಸೋಲಿಗೆ, ಉಸ್ತುವಾರಿ ವಹಿಸಿಕೊಂಡಿದ್ದ ಡಿಸಿಎಂ ಡಾ. ಜಿ ಪರಮೇಶ್ವರ್ ಹಾಗೂ ಸಚಿವ ಎಸ್.ಆರ್. ಶ್ರೀನಿವಾಸ್ ಅವರೇ ಕಾರಣವೆಂದು ರಾಜ್ಯ ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಆರ್. ರಾಜೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜೆಡಿಎಸ್​ನವರು ಕಾಂಗ್ರೆಸ್ ನಾಯಕರನ್ನು ಒಟ್ಟಾಗಿ ಕರೆದೊಯ್ಯುವ ಪ್ರಯತ್ನ ಮಾಡಲಿಲ್ಲ. ದೇವೇಗೌಡರು ಗೆದ್ದರೆ ಹಾಸನ ಅಥವಾ ಬೆಂಗಳೂರಿನ ಪದ್ಮನಾಭನಗರಕ್ಕೆ ಆಡಳಿತ ಶಿಫ್ಟ್ ಆಗುತ್ತಾ ಎಂಬ ಆತಂಕ ಕಾರ್ಯಕರ್ತರಲ್ಲಿತ್ತು. ಈ ಹಿನ್ನೆಲೆಯಲ್ಲಿ ಮತದಾರರು ಅವರಿಗೆ ಮತ ನೀಡಲಿಲ್ಲ ಎಂದರು.

ಕೆ.ಎನ್. ರಾಜಣ್ಣ ಹಾಗೂ ಮುದ್ದಹನುಮೇಗೌಡರ ಮೇಲೆ ಅದ್ಯಾರೋ ವ್ಯಕ್ತಿ ಇಲ್ಲಸಲ್ಲದ ಆರೋಪ ಮಾಡಿದ್ದು ಕೂಡ ಅಭ್ಯರ್ಥಿಯ ಸೋಲಿಗೆ ಕಾರಣವಾಗಿದೆ. ಇಷ್ಟೇ ಅಲ್ಲದೆ, ದೇವೇಗೌಡರ ಸೋಲಿಗೆ ಅವರು ಸೊಸೆಯಂದಿರು ಕಾರಣ. ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸುವ ಹುನ್ನಾರದಲ್ಲಿ ದೇವೇಗೌಡರನ್ನು ಅವರ ಸೊಸೆಯಂದಿರು ತುಮಕೂರಿಗೆ ಕಳುಹಿಸಿದ್ದಕ್ಕೆ ಸೋಲುವಂತಾಯಿತು. ಹೀಗೆ ದೇವೇಗೌಡರ ಸೋಲಿಗೆ ಹಲವು ಕಾರಣಗಳಿವೆ ಎಂದು ಆರ್​ ರಾಜೇಂದ್ರ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಆರ್. ರಾಜೇಂದ್ರ

ದೇವೇಗೌಡರು ತುಮಕೂರಿನಲ್ಲಿ ಜಿಲ್ಲಾ ಪಂಚಾಯತ್​, ತಾಲೂಕು ಪಂಚಾಯತ್ ಸದಸ್ಯರ ಮನೆಗಳಿಗೆ ಹೋಗುತ್ತಾರೆ. ಆದರೆ, ನಾಯಕರಾದ ಕೆ.ಎನ್. ರಾಜಣ್ಣ ಅವರ ಮನೆಗೆ ಬಂದಿರಲಿಲ್ಲ. ಕ್ಯಾಸಂದ್ರಕ್ಕೆ ಬಂದರೂ, ರಾಜಣ್ಣ ಅವರ ಮನೆಗೆ ಬರಲಿಲ್ಲ, ಅಲ್ಲದೆ ನಾಯಕರನ್ನು ಕರೆದು ಒಗ್ಗಟ್ಟಾಗಿ ಹೋಗುವ ಬಗ್ಗೆ ಮಾತನಾಡದಿರುವುದು ಸಹ ಕಾಂಗ್ರೆಸ್​ ನಾಯಕರಿಗೆ ಬೇಸರ ತರಿಸಿತ್ತು. ಜೆಡಿಎಸ್ ಜೊತೆ ಮೈತ್ರಿ ಮುರಿದುಕೊಳ್ಳಬೇಕಿದೆ, ಇಲ್ಲವಾದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್​ಗೆ ಉಳಿಗಾಲವಿಲ್ಲ. ಇನ್ನಾದರೂ ನಾಯಕರು ಅರ್ಥಮಾಡಿಕೊಂಡು ಪಕ್ಷ ಉಳಿಸುವ ನಿಟ್ಟಿನಲ್ಲಿ ಉತ್ತಮ ಯೋಜನೆ ಮಾಡಬೇಕಿದೆ ಎಂದು ಕಾಂಗ್ರೆಸ್​ ಯುವ ಘಟಕದ ಉಪಾಧ್ಯಕ್ಷ ಒತ್ತಾಯಿಸಿದ್ದಾರೆ.

ಇನ್ನು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಅವರು ಮಾಜಿ ಶಾಸಕ ಕೆ.ಎನ್. ರಾಜಣ್ಣರ ಬಗ್ಗೆ ಹಗುರವಾಗಿ ಮಾತನಾಡಿರುವ ಬಗ್ಗೆ ಕಿಡಿಕಾರಿದ ರಾಜೇಂದ್ರ, ಗ್ರಾಮಾಂತರ ಶಾಸಕ ನಾಲಿಗೆ ಬಿಗಿ ಹಿಡಿದು ಮಾತನಾಡಲಿ, ಗಂಡಸುತನದ ಬಗ್ಗೆ ಮಾತನಾಡುವವನು, ಗಂಡಸುತನವಿದ್ದರೆ ಗ್ರಾಮಾಂತರ ಕ್ಷೇತ್ರದಲ್ಲಿ ರಾಜೀನಾಮೆ ನೀಡಲಿ. ನಾನು ಅದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ನನ್ನ ವಿರುದ್ಧ ಗೆಲ್ಲಲಿ ಎಂದು ಆರ್​ ರಾಜೇಂದ್ರ ಸವಾಲು ಹಾಕಿದರು.


ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಹೆಚ್.ಡಿ. ದೇವೇಗೌಡರ ಸೋಲಿಗೆ, ಉಸ್ತುವಾರಿ ವಹಿಸಿಕೊಂಡಿದ್ದ ಡಿಸಿಎಂ ಡಾ. ಜಿ ಪರಮೇಶ್ವರ್ ಹಾಗೂ ಸಚಿವ ಎಸ್.ಆರ್. ಶ್ರೀನಿವಾಸ್ ಅವರೇ ಕಾರಣವೆಂದು ರಾಜ್ಯ ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಆರ್. ರಾಜೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜೆಡಿಎಸ್​ನವರು ಕಾಂಗ್ರೆಸ್ ನಾಯಕರನ್ನು ಒಟ್ಟಾಗಿ ಕರೆದೊಯ್ಯುವ ಪ್ರಯತ್ನ ಮಾಡಲಿಲ್ಲ. ದೇವೇಗೌಡರು ಗೆದ್ದರೆ ಹಾಸನ ಅಥವಾ ಬೆಂಗಳೂರಿನ ಪದ್ಮನಾಭನಗರಕ್ಕೆ ಆಡಳಿತ ಶಿಫ್ಟ್ ಆಗುತ್ತಾ ಎಂಬ ಆತಂಕ ಕಾರ್ಯಕರ್ತರಲ್ಲಿತ್ತು. ಈ ಹಿನ್ನೆಲೆಯಲ್ಲಿ ಮತದಾರರು ಅವರಿಗೆ ಮತ ನೀಡಲಿಲ್ಲ ಎಂದರು.

ಕೆ.ಎನ್. ರಾಜಣ್ಣ ಹಾಗೂ ಮುದ್ದಹನುಮೇಗೌಡರ ಮೇಲೆ ಅದ್ಯಾರೋ ವ್ಯಕ್ತಿ ಇಲ್ಲಸಲ್ಲದ ಆರೋಪ ಮಾಡಿದ್ದು ಕೂಡ ಅಭ್ಯರ್ಥಿಯ ಸೋಲಿಗೆ ಕಾರಣವಾಗಿದೆ. ಇಷ್ಟೇ ಅಲ್ಲದೆ, ದೇವೇಗೌಡರ ಸೋಲಿಗೆ ಅವರು ಸೊಸೆಯಂದಿರು ಕಾರಣ. ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸುವ ಹುನ್ನಾರದಲ್ಲಿ ದೇವೇಗೌಡರನ್ನು ಅವರ ಸೊಸೆಯಂದಿರು ತುಮಕೂರಿಗೆ ಕಳುಹಿಸಿದ್ದಕ್ಕೆ ಸೋಲುವಂತಾಯಿತು. ಹೀಗೆ ದೇವೇಗೌಡರ ಸೋಲಿಗೆ ಹಲವು ಕಾರಣಗಳಿವೆ ಎಂದು ಆರ್​ ರಾಜೇಂದ್ರ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಆರ್. ರಾಜೇಂದ್ರ

ದೇವೇಗೌಡರು ತುಮಕೂರಿನಲ್ಲಿ ಜಿಲ್ಲಾ ಪಂಚಾಯತ್​, ತಾಲೂಕು ಪಂಚಾಯತ್ ಸದಸ್ಯರ ಮನೆಗಳಿಗೆ ಹೋಗುತ್ತಾರೆ. ಆದರೆ, ನಾಯಕರಾದ ಕೆ.ಎನ್. ರಾಜಣ್ಣ ಅವರ ಮನೆಗೆ ಬಂದಿರಲಿಲ್ಲ. ಕ್ಯಾಸಂದ್ರಕ್ಕೆ ಬಂದರೂ, ರಾಜಣ್ಣ ಅವರ ಮನೆಗೆ ಬರಲಿಲ್ಲ, ಅಲ್ಲದೆ ನಾಯಕರನ್ನು ಕರೆದು ಒಗ್ಗಟ್ಟಾಗಿ ಹೋಗುವ ಬಗ್ಗೆ ಮಾತನಾಡದಿರುವುದು ಸಹ ಕಾಂಗ್ರೆಸ್​ ನಾಯಕರಿಗೆ ಬೇಸರ ತರಿಸಿತ್ತು. ಜೆಡಿಎಸ್ ಜೊತೆ ಮೈತ್ರಿ ಮುರಿದುಕೊಳ್ಳಬೇಕಿದೆ, ಇಲ್ಲವಾದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್​ಗೆ ಉಳಿಗಾಲವಿಲ್ಲ. ಇನ್ನಾದರೂ ನಾಯಕರು ಅರ್ಥಮಾಡಿಕೊಂಡು ಪಕ್ಷ ಉಳಿಸುವ ನಿಟ್ಟಿನಲ್ಲಿ ಉತ್ತಮ ಯೋಜನೆ ಮಾಡಬೇಕಿದೆ ಎಂದು ಕಾಂಗ್ರೆಸ್​ ಯುವ ಘಟಕದ ಉಪಾಧ್ಯಕ್ಷ ಒತ್ತಾಯಿಸಿದ್ದಾರೆ.

ಇನ್ನು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಅವರು ಮಾಜಿ ಶಾಸಕ ಕೆ.ಎನ್. ರಾಜಣ್ಣರ ಬಗ್ಗೆ ಹಗುರವಾಗಿ ಮಾತನಾಡಿರುವ ಬಗ್ಗೆ ಕಿಡಿಕಾರಿದ ರಾಜೇಂದ್ರ, ಗ್ರಾಮಾಂತರ ಶಾಸಕ ನಾಲಿಗೆ ಬಿಗಿ ಹಿಡಿದು ಮಾತನಾಡಲಿ, ಗಂಡಸುತನದ ಬಗ್ಗೆ ಮಾತನಾಡುವವನು, ಗಂಡಸುತನವಿದ್ದರೆ ಗ್ರಾಮಾಂತರ ಕ್ಷೇತ್ರದಲ್ಲಿ ರಾಜೀನಾಮೆ ನೀಡಲಿ. ನಾನು ಅದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ನನ್ನ ವಿರುದ್ಧ ಗೆಲ್ಲಲಿ ಎಂದು ಆರ್​ ರಾಜೇಂದ್ರ ಸವಾಲು ಹಾಕಿದರು.


Intro:ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಹೆಚ್.ಡಿ ದೇವೇಗೌಡರ ಸೋಲಿಗೆ ಉಸ್ತುವಾರಿ ವಹಿಸಿಕೊಂಡಿದ್ದ ಡಿಸಿಎಂ ಡಾ. ಜಿ ಪರಮೇಶ್ವರ್ ಹಾಗೂ ಸಚಿವ ಎಸ್.ಆರ್ ಶ್ರೀನಿವಾಸ್ ಅವರೇ ಕಾರಣ ಎಂದು ರಾಜ್ಯ ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಆರ್.ರಾಜೇಂದ್ರ ಆರೋಪಿಸಿದರು.


Body:ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ನವರು ಕಾಂಗ್ರೆಸ್ ನಾಯಕರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಪ್ರಯತ್ನ ಮಾಡಲಿಲ್ಲ, ದೇವೇಗೌಡರು ಗೆದ್ದರೆ ಹಾಸನ ಅಥವಾ ಬೆಂಗಳೂರಿನ ಪದ್ಮನಾಭನಗರಕ್ಕೆ ಆಡಳಿತ ಶಿಫ್ಟ್ ಆಗುತ್ತಾ ಎಂಬ ಆತಂಕ ಕಾರ್ಯಕರ್ತರಲ್ಲಿತ್ತು. ಈ ಹಿನ್ನೆಲೆಯಲ್ಲಿ ಮತದಾರರು ಅವರಿಗೆ ಮತ ನೀಡಲಿಲ್ಲ ಎಂದರು.
ಕೆ.ಎನ್ ರಾಜಣ್ಣ ಹಾಗೂ ಮುದ್ದಹನುಮೇಗೌಡರ ಮೇಲೆ ಅದ್ಯಾರೋ ವ್ಯಕ್ತಿ ಇಲ್ಲಸಲ್ಲದ ಆರೋಪ ಮಾಡಿದ್ದು ಕೂಡ ಅಭ್ಯರ್ಥಿಯ ಸೋಲಿಗೆ ಕಾರಣವಾಗಿದೆ.
ಇಷ್ಟೇ ಅಲ್ಲದೆ ಹೊಳೆನರಸೀಪುರಕ್ಕೆ ಒಮ್ಮೆ ಹೋದಾಗ ಅಲ್ಲಿಯ ಹಿರಿಯರು ಹೇಳುತ್ತಿದ್ದರು, ದೇವೇಗೌಡರ ಸೋಲಿಗೆ ಸೊಸೆಯಂದಿರು ಕಾರಣ. ಅವರ ಮಕ್ಕಳಿಗೆ ಟಿಕೆಟ್ ಕೊಡಿಸುವ ಹುನ್ನಾರದಲ್ಲಿ ದೇವೇಗೌಡ ಅವರನ್ನು ತುಮಕೂರಿಗೆ ಕಳುಹಿಸಿ ಸೋಲುವಂತಾಯಿತು. ಹೀಗೆ ದೇವೇಗೌಡರ ಸೋಲಿಗೆ ಹಲವು ಕಾರಣಗಳಿವೆ ಎಂದರು.
ದೇವೇಗೌಡರು ತುಮಕೂರಿನಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಯವರ ಮನೆಗೆ ಹೋಗುತ್ತಾರೆ, ಆದರೆ ನಾಯಕರಾದ ಕೆ.ಎನ್ ರಾಜಣ್ಣ ಅವರ ಮನೆಗೆ ಬರಲಿಲ್ಲ. ಕ್ಯಾಸಂದ್ರಕ್ಕೆ ಬಂದರೂ, ರಾಜಣ್ಣ ಅವರ ಮನೆಗೆ ಬರಲಿಲ್ಲ, ಅಲ್ಲದೆ ನಾಯಕರನ್ನು ಕರೆದು ಒಗ್ಗಟ್ಟಾಗಿ ಹೋಗುವ ಮಾತನಾಡದೆ ಇರುವುದು ನಿಜಕ್ಕೂ ನಾಯಕರಿಗೆ ಬೇಸರ ತರಿಸಿತ್ತು ಎಂದರು.
ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮುರಿದುಕೊಳ್ಳಬೇಕಿದೆ, ಇಲ್ಲವಾದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಉಳಿಗಾಲವಿಲ್ಲ. ಇನ್ನಾದರೂ ನಾಯಕರು ಅರ್ಥಮಾಡಿಕೊಂಡು ಪಕ್ಷ ಉಳಿಸುವ ನಿಟ್ಟಿನಲ್ಲಿ ಉತ್ತಮ ಯೋಜನೆ ಮಾಡಬೇಕಿದೆ ಎಂದರು.
ತುಮಕೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ ಅವರು ವೆಸ್ಟ್ ಕ್ಯಾಂಡಿಡೇಟ್ ಅವರು ಮನೆ ಕಾಯುವ ಕೆಲಸ ಮಾಡುವುದು ಬಿಟ್ಟರೆ ಬೇರೆ ಯಾವುದನ್ನೂ ಮಾಡುವುದಿಲ್ಲ. ಇವರ ಹಿನ್ನೆಲೆ ಏನು ಎಂದು ಗೊತ್ತಿದ್ದರೂ, ಅವರನ್ನು ಮತ್ತೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸಿದ್ದಾರೆ. ಇವರು ಪಕ್ಷ ಸಂಘಟನೆ ಮಾಡುವಲ್ಲಿ ವಿಫಲರಾಗಿದ್ದು, ಇವರನ್ನು ಕೂಡಲೇ ಜಿಲ್ಲಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಬೇಕು ಎಂದರು. ರಾಜ್ಯ ಕಾಂಗ್ರೆಸ್ ವಕ್ತಾರ ಮುರುಳೀಧರ ಹಾಲಪ್ಪ ಒಂದಿಷ್ಟು ಮಂದಿ ಚೇಲಾಗಳನ್ನು ಇಟ್ಟುಕೊಂಡು ನಾನೇ ಬಾಸ್ ಎಂಬಂತೆ ಆಡುತ್ತಿದ್ದಾರೆ ಇವರಿಂದ ಪಕ್ಷಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದರು.
ಇನ್ನು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಅವರು ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಬಗ್ಗೆ ಕಿಡಿಕಾರಿದ ರಾಜೇಂದ್ರ ಗ್ರಾಮಾಂತರ ಶಾಸಕ ನಾಲಿಗೆ ಬಿಗಿ ಹಿಡಿದು ಮಾತನಾಡಲಿ, ಗಂಡಸುತನದ ಬಗ್ಗೆ ಮಾತನಾಡುವವನು, ಗಂಡಸುತನವಿದ್ದರೆ ಗ್ರಾಮಾಂತರ ಕ್ಷೇತ್ರದಲ್ಲಿ ರಾಜೀನಾಮೆ ನೀಡಲಿ. ನಾನು ಅಲ್ಲಿ ಸ್ಪರ್ಧಿಸುತ್ತೇನೆ ನನ್ನ ವಿರುದ್ಧ ಗೆಲ್ಲಲಿ ಎಂದು ಸವಾಲು ಹಾಕಿದರು.
ಗೌರಿಶಂಕರ್ ಎಲ್ಲಿ ಎಷ್ಟು ಹಣ ನುಂಗುತ್ತಿದ್ದಾನೆ ಎಂಬುದು ಗೊತ್ತಿದೆ. ಆಪರೇಷನ್ ಕಮಲಕ್ಕೆ ಒಳಗಾಗಿ ಬೆಂಗಳೂರಿಗೆ ಶಿಫ್ಟ್ ಕಾರು ಓಡಿಸಿಕೊಂಡು ಹೋಗಿ ಹಣ ಪಡೆದಿರುವುದು ಗೊತ್ತಿದೆ, ಆಫೀಸ್ ಗಳು, ಕಛೇರಿಗಳಲ್ಲಿ ಟೆಂಡರ್ ಗಳಲ್ಲಿ ಹಣ ಪಿಕೂವ ಇವನ ಕೆಲಸ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.


Conclusion:ವರದಿ
ಸುಧಾಕರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.