ETV Bharat / city

ರಜೆ ನಗದೀಕರಣ ಮಾಡಲು ಲಂಚ ಬೇಡಿಕೆ; ಎಸಿಬಿ ಬಲೆಗೆ ಎಸ್​ಡಿಎ

ರಜೆ ನಗದೀಕರಣ ಮಾಡಲು 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕುಣಿಗಲ್ ತಾಲೂಕು ಹುಲಿಯೂರುದುರ್ಗ ಕೆಂಪೇಗೌಡ ಅನುದಾನಿತ ಪ್ರೌಢಶಾಲೆಯ ಎಸ್​ಡಿಎ ಗೋಪಾಲಸ್ವಾಮಿ ಮತ್ತು ಸಿಬ್ಬಂದಿ ಬೆಟ್ಟಸ್ವಾಮಿ ಅವರನ್ನು ಎಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

author img

By

Published : Feb 12, 2021, 6:52 PM IST

Updated : Feb 12, 2021, 7:21 PM IST

acb-ride-on-kempegowda-funded-high-school-sda
ಎಸಿಬಿ

ತುಮಕೂರು : ರಜೆ ನಗದೀಕರಣ ಮಾಡಿಸಿಕೊಡಲು ಲಂಚಕ್ಕೆ ಬೇಡಿಕೆ ಇರಿಸಿದ್ದ ಕೆಂಪೇಗೌಡ ಅನುದಾನಿತ ಪ್ರೌಢಶಾಲೆಯ ಎಸ್​ಡಿಎ ಹಾಗೂ ನಿವೃತ್ತ ಸಿಬ್ಬಂದಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

acb ride on Kempegowda funded high school sda
ರಜೆ ನಗದೀಕರಣ ಮಾಡಲು ಲಂಚ ಬೇಡಿಕೆ

ಕುಣಿಗಲ್ ತಾಲೂಕು ಹುಲಿಯೂರುದುರ್ಗ ಕೆಂಪೇಗೌಡ ಅನುದಾನಿತ ಪ್ರೌಢಶಾಲೆಯ ಎಸ್​ಡಿಎ ಗೋಪಾಲಸ್ವಾಮಿ ಮತ್ತು ನಿವೃತ್ತ ಸಿಬ್ಬಂದಿ ಬೆಟ್ಟಸ್ವಾಮಿ ಎಂಬುವರು ರಜೆ ನಗದೀಕರಣ ಮಾಡಿಸಿಕೊಡಲು 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಕುಣಿಗಲ್ ತಾಲೂಕು ಅಮೃತೂರು ಹೋಬಳಿಯ ಜನ್ನಾಗರ ಗ್ರಾಮದ ಶ್ರೀನಿವಾಸ್​ ಎಂಬುವರು ಎಸಿಬಿಗೆ ದೂರು ನೀಡಿದ್ದರು.

ಅದರಂತೆ ಶ್ರೀನಿವಾಸ್​ರಿಂದ 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳಾದ ಗೋಪಾಲಸ್ವಾಮಿ ಮತ್ತು ಬೆಟ್ಟಸ್ವಾಮಿ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.

ತುಮಕೂರು : ರಜೆ ನಗದೀಕರಣ ಮಾಡಿಸಿಕೊಡಲು ಲಂಚಕ್ಕೆ ಬೇಡಿಕೆ ಇರಿಸಿದ್ದ ಕೆಂಪೇಗೌಡ ಅನುದಾನಿತ ಪ್ರೌಢಶಾಲೆಯ ಎಸ್​ಡಿಎ ಹಾಗೂ ನಿವೃತ್ತ ಸಿಬ್ಬಂದಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

acb ride on Kempegowda funded high school sda
ರಜೆ ನಗದೀಕರಣ ಮಾಡಲು ಲಂಚ ಬೇಡಿಕೆ

ಕುಣಿಗಲ್ ತಾಲೂಕು ಹುಲಿಯೂರುದುರ್ಗ ಕೆಂಪೇಗೌಡ ಅನುದಾನಿತ ಪ್ರೌಢಶಾಲೆಯ ಎಸ್​ಡಿಎ ಗೋಪಾಲಸ್ವಾಮಿ ಮತ್ತು ನಿವೃತ್ತ ಸಿಬ್ಬಂದಿ ಬೆಟ್ಟಸ್ವಾಮಿ ಎಂಬುವರು ರಜೆ ನಗದೀಕರಣ ಮಾಡಿಸಿಕೊಡಲು 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಕುಣಿಗಲ್ ತಾಲೂಕು ಅಮೃತೂರು ಹೋಬಳಿಯ ಜನ್ನಾಗರ ಗ್ರಾಮದ ಶ್ರೀನಿವಾಸ್​ ಎಂಬುವರು ಎಸಿಬಿಗೆ ದೂರು ನೀಡಿದ್ದರು.

ಅದರಂತೆ ಶ್ರೀನಿವಾಸ್​ರಿಂದ 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳಾದ ಗೋಪಾಲಸ್ವಾಮಿ ಮತ್ತು ಬೆಟ್ಟಸ್ವಾಮಿ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.

Last Updated : Feb 12, 2021, 7:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.