ETV Bharat / city

ತುಮಕೂರಲ್ಲಿ ಕುರಿಗಳ ಮೈ ತೊಳೆಯಲು ಹೋಗಿ ಒಂದೇ ಕುಟುಂಬದ ಮೂವರು ನೀರುಪಾಲು! - ನೀರಲ್ಲಿ ಮುಳುಗಿ ಕುರಿಗಾಹಿ ಕುಟುಂಬ ಸಾವು

ದಷ್ಟಪುಷ್ಟವಾಗಿ ಬೆಳೆದಿದ್ದ ಕುರಿಗಳನ್ನು ಕೆರೆಯಲ್ಲಿ ತೊಳೆದು, ನೀರಿನಿಂದ ಹೊರ ಎಳೆಯುತ್ತಿದ್ದಾಗ ನೀರಿನಲ್ಲಿ ಮುಳುಗಿ ಕುರಿಗಾಹಿ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹೊಸೂರಿನಲ್ಲಿ ನಡೆದಿದೆ.

ಕುರಿಗಾಹಿ ಕುಟುಂಬವನ್ನೇ ಬಲಿ ಪಡೆದ ಕುರಿಗಳು
author img

By

Published : Oct 20, 2019, 2:58 PM IST

ತುಮಕೂರು: ಕೆರೆಯಲ್ಲಿ ಕುರಿಗಳನ್ನು ತೊಳೆಯುತ್ತಿದ್ದಾಗ ನೀರಿನಲ್ಲಿ ಮುಳುಗಿ ಕುರಿಗಾಹಿ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಶಿರಾ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ನಾಗರಾಜು(38), ಪತ್ನಿ ಮಮತ( 35) ಹಾಗೂ ಮಗ ಕಿರಣ್ (14) ಎಂದು ಗುರುತಿಸಲಾಗಿದೆ.

ನಾಗರಾಜು ಸುಮಾರು 30 ಕುರಿಗಳನ್ನು ಸಾಕಿದ್ದಾರೆ. ಈ ಕೊಬ್ಬಿದ ಕುರಿಗಳನ್ನು ತೊಳೆಯಲು ಹೊಸೂರು ಕೆರೆಯಲ್ಲಿ ಸ್ವಲ್ಪ ಆಳದವರೆಗೂ ಕರೆದುಕೊಂಡು ಹೋಗಿದ್ದಾರೆ. ನಂತರ ಅವುಗಳನ್ನು ದಡಕ್ಕೆ ಕರೆದುಕೊಂಡು ಬರುವ ಸಂದರ್ಭದಲ್ಲಿ ಕುರಿಗಳು ನಾಗರಾಜು ಅವರನ್ನೇ ನೀರಿಗೆ ವಾಪಸ್ ಎಳೆದಿವೆ. ಈಜು ಬಾರದ ನಾಗರಾಜ್ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಅಲ್ಲಿಯೇ ಇದ್ದ ಅವರ ಪತ್ನಿ ಮತ್ತು ಮಗ ಪಾರು ಮಾಡಲು ಹೋಗಿ ಅವರೂ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.

ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತುಮಕೂರು: ಕೆರೆಯಲ್ಲಿ ಕುರಿಗಳನ್ನು ತೊಳೆಯುತ್ತಿದ್ದಾಗ ನೀರಿನಲ್ಲಿ ಮುಳುಗಿ ಕುರಿಗಾಹಿ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಶಿರಾ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ನಾಗರಾಜು(38), ಪತ್ನಿ ಮಮತ( 35) ಹಾಗೂ ಮಗ ಕಿರಣ್ (14) ಎಂದು ಗುರುತಿಸಲಾಗಿದೆ.

ನಾಗರಾಜು ಸುಮಾರು 30 ಕುರಿಗಳನ್ನು ಸಾಕಿದ್ದಾರೆ. ಈ ಕೊಬ್ಬಿದ ಕುರಿಗಳನ್ನು ತೊಳೆಯಲು ಹೊಸೂರು ಕೆರೆಯಲ್ಲಿ ಸ್ವಲ್ಪ ಆಳದವರೆಗೂ ಕರೆದುಕೊಂಡು ಹೋಗಿದ್ದಾರೆ. ನಂತರ ಅವುಗಳನ್ನು ದಡಕ್ಕೆ ಕರೆದುಕೊಂಡು ಬರುವ ಸಂದರ್ಭದಲ್ಲಿ ಕುರಿಗಳು ನಾಗರಾಜು ಅವರನ್ನೇ ನೀರಿಗೆ ವಾಪಸ್ ಎಳೆದಿವೆ. ಈಜು ಬಾರದ ನಾಗರಾಜ್ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಅಲ್ಲಿಯೇ ಇದ್ದ ಅವರ ಪತ್ನಿ ಮತ್ತು ಮಗ ಪಾರು ಮಾಡಲು ಹೋಗಿ ಅವರೂ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.

ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:Body:ಕುರಿಗಾಹಿ ಕುಟುಂಬವನ್ನೇ ಬಲಿ ಪಡೆದ ಕುರಿಗಳು..... ಮೂವರು ನೀರುಪಾಲು

ತುಮಕೂರು
ಕೆರೆಯಲ್ಲಿ ಕುರಿಗಳನ್ನು ತೊಳೆಯುತ್ತಿದ್ದಾಗ ಬಲಿಷ್ಠವಾದ ಕುರಿಗಳನ್ನು ನೀರಿನಿಂದ ಹೊರ ಎಳೆಯುತ್ತಿದ್ದಾಗ ನೀರಿನಲ್ಲಿ ಮುಳುಗಿ ಕುರಿಗಾಹಿ ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಸಿರಾ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು ನಾಗರಾಜು(38), ಪತ್ನಿ ಮಮತ( 35), ಮಗ ಕಿರಣ್ (14) ಎಂದು ಗುರುತಿಸಲಾಗಿದೆ.
ನಾಗರಾಜ್ ಸುಮಾರು 30 ಕುರಿಗಳನ್ನು ಸಾಕಿದ್ದು ಕೊಬ್ಬಿದ ದಷ್ಟ ಪುಷ್ಟವಾಗಿದ್ದವು. ಹೊಸೂರು ಕೆರೆಯಲ್ಲಿ ಸ್ವಲ್ಪ ಆಳದವರೆಗೂ ಕುರಿಗಳನ್ನು ತೊಳೆಯಲು ನಾಗರಾಜ್ ಕರೆದುಕೊಂಡು ಹೋಗಿದ್ದಾರೆ. ನಂತರ ಅವುಗಳನ್ನು ದಡಕ್ಕೆ ಕರೆದುಕೊಂಡು ಬರುವ ಸಂದರ್ಭದಲ್ಲಿ ಕುರಿಗಳು ನಾಗರಾಜ್ ಅವರನ್ನೇ ನೀರಿಗೆ ವಾಪಸ್ ಎಳೆದಿವೆ. ಈಜು ಬಾರದ ನಾಗರಾಜ್ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಅಲ್ಲಿಯೇ ಇದ್ದ ಅವರ ಪತ್ನಿ ಮಮತ ಮತ್ತು ಮಗ ಕಿರಣ್ ಅವರುಗಳು ಪಾರು ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.