ETV Bharat / city

ಸಾಗರದಲ್ಲಿ ಮಂಗನ ಶವ ಪತ್ತೆ, ಗ್ರಾಮಸ್ಥರಲ್ಲಿ ಕಾಯಿಲೆ ಹರಡುವ ಭೀತಿ

author img

By

Published : Jun 1, 2019, 4:39 PM IST

ಮಂಗಗಳ ಸಾವಿನ ಪ್ರಕರಣ ಆನಂದಪುರದ ಸುತ್ತಮುತ್ತ ಹಲವೆಡೆ ನಡೆದಿದೆ. ಈ ರೀತಿ ಮಂಗಗಳ ಸಾವಿಗೆ ಕಾರಣ ಕಾಯಿಲೆಯೋ ಅಥವಾ ಆಹಾರ ಸಿಗದೆ ಉಪವಾಸದಿಂದ ನರಳಿ ಸಾವು ಸಂಭವಿಸುತ್ತಿದೆಯೇ ಎಂಬೆಲ್ಲಾ ಅನುಮಾನ ಜನರನ್ನು ಕಾಡುತ್ತಿದೆ.

ಮಂಗನ ಶವ ಪತ್ತೆ

ಶಿವಮೊಗ್ಗ: ಸಾಗರ ತಾಲೂಕಿನ ತವರೆಹಳ್ಳಿ ಗ್ರಾಮದಲ್ಲಿ ಮಂಗ ಸಾವನ್ನಪ್ಪಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.

ತವರೆಹಳ್ಳಿಯ ಜಯಪ್ಪ ಕೆ. ಗೌಡ ಅವರ ಮನೆಯ ಮುಂಭಾಗದಲ್ಲಿ ಮಂಗನ ಶವ ಪತ್ತೆಯಾಗಿದೆ. ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಪಶು ವೈದ್ಯರಾದ ಡಾ.ಮೋಹನ್, ಅರಣ್ಯ ಇಲಾಖೆಯ ಗಾರ್ಡ್ ಬಸವರಾಜ್, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮೃಪಟ್ಟ ಮಂಗನ ಶವ ಪರೀಕ್ಷಿಸಿದ ಬಳಿಕ ಅಂತ್ಯಕ್ರಿಯೆ ನಡೆಸಿದರು.

ಈ ರೀತಿ ಮಂಗಗಳ ಸಾವಿನ ಪ್ರಕರಣಗಳು ಆನಂದಪುರದ ಸುತ್ತಮುತ್ತಿನ ಪ್ರದೇಶಗಳಲ್ಲಿ ಬೆಳಕಿಗೆ ಬಂದಿದೆ. ಈ ರೀತಿ ಮಂಗಗಳ ಸಾವಿಗೆ ಕಾರಣ ಕಾಯಿಲೆಯೋ ಅಥವಾ ಕಾಡು ನಾಶದಿಂದ ಬರಗಾಲ ಉಂಟಾಗಿ ಆಹಾರ ಸಿಗದೆ ಅವುಗಳ ಸಾವು ಸಂಭವಿಸುತ್ತಿದೆಯೇ ಎಂಬ ಬಗ್ಗೆ ಗ್ರಾಮಸ್ಥರಲ್ಲಿ ಅನುಮಾನ ಉಂಟಾಗಿದೆ.

ಸಾಗರ ತಾಲೂಕಿನ ಅರಳಗೋಡು ಸುತ್ತಮುತ್ತ 20ಕ್ಕೂ ಹೆಚ್ಚು ಮಂಗಳ ಸಾವು ಸಂಭವಿಸಿರುವುದನ್ನು ಇಲ್ಲಿ‌ ಸ್ಮರಿಸಬೇಕಿದೆ.

ಮಂಗನ ಕಾಯಿಲೆ ಹರಡುವ ಭೀತಿ ಜನರನ್ನು ಕಾಡುತ್ತಿದ್ದು,ಆರೋಗ್ಯ ಇಲಾಖೆ ಅಧಿಕಾರಿಗಳು ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶಿವಮೊಗ್ಗ: ಸಾಗರ ತಾಲೂಕಿನ ತವರೆಹಳ್ಳಿ ಗ್ರಾಮದಲ್ಲಿ ಮಂಗ ಸಾವನ್ನಪ್ಪಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.

ತವರೆಹಳ್ಳಿಯ ಜಯಪ್ಪ ಕೆ. ಗೌಡ ಅವರ ಮನೆಯ ಮುಂಭಾಗದಲ್ಲಿ ಮಂಗನ ಶವ ಪತ್ತೆಯಾಗಿದೆ. ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಪಶು ವೈದ್ಯರಾದ ಡಾ.ಮೋಹನ್, ಅರಣ್ಯ ಇಲಾಖೆಯ ಗಾರ್ಡ್ ಬಸವರಾಜ್, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮೃಪಟ್ಟ ಮಂಗನ ಶವ ಪರೀಕ್ಷಿಸಿದ ಬಳಿಕ ಅಂತ್ಯಕ್ರಿಯೆ ನಡೆಸಿದರು.

ಈ ರೀತಿ ಮಂಗಗಳ ಸಾವಿನ ಪ್ರಕರಣಗಳು ಆನಂದಪುರದ ಸುತ್ತಮುತ್ತಿನ ಪ್ರದೇಶಗಳಲ್ಲಿ ಬೆಳಕಿಗೆ ಬಂದಿದೆ. ಈ ರೀತಿ ಮಂಗಗಳ ಸಾವಿಗೆ ಕಾರಣ ಕಾಯಿಲೆಯೋ ಅಥವಾ ಕಾಡು ನಾಶದಿಂದ ಬರಗಾಲ ಉಂಟಾಗಿ ಆಹಾರ ಸಿಗದೆ ಅವುಗಳ ಸಾವು ಸಂಭವಿಸುತ್ತಿದೆಯೇ ಎಂಬ ಬಗ್ಗೆ ಗ್ರಾಮಸ್ಥರಲ್ಲಿ ಅನುಮಾನ ಉಂಟಾಗಿದೆ.

ಸಾಗರ ತಾಲೂಕಿನ ಅರಳಗೋಡು ಸುತ್ತಮುತ್ತ 20ಕ್ಕೂ ಹೆಚ್ಚು ಮಂಗಳ ಸಾವು ಸಂಭವಿಸಿರುವುದನ್ನು ಇಲ್ಲಿ‌ ಸ್ಮರಿಸಬೇಕಿದೆ.

ಮಂಗನ ಕಾಯಿಲೆ ಹರಡುವ ಭೀತಿ ಜನರನ್ನು ಕಾಡುತ್ತಿದ್ದು,ಆರೋಗ್ಯ ಇಲಾಖೆ ಅಧಿಕಾರಿಗಳು ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Intro:ಆನಂದಪುರಂ ಬಳಿ ಮಂಗನ ಶವ ಪತ್ತೆ ಭಯಭೀತರಾದ ಗ್ರಾಮಸ್ಥರು .

ಶಿವಮೊಗ್ಗ: ಸಾಗರ ತಾಲೂಕಿನ ತವರೆಹಳ್ಳಿ ಗ್ರಾಮದ ಲ್ಲಿ ಮಂಗ ಸಾವನ್ನಪ್ಪಿದ್ದು ಸುತ್ತ ಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ. ತವರೆ ಹಳ್ಳಿಯ ಜಯಪ್ಪ ಕೆ ಗೌಡ ಅವರ ಮನೆಯ ಮುಂಭಾಗದಲ್ಲಿ ಮಂಗನ ಶವ ಪತ್ತೆಯಾಗಿದೆ. ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಪಶು ವೈದ್ಯರಾದ ಡಾ.ಮೋಹನ್ , ಫಾರೆಸ್ಟ್ ಇಲಾಖೆಯ ಗಾರ್ಡ್ ಬಸವರಾಜ್. ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಪ್ರೇಮ ಸಿಸ್ಟರ್ ಸಹಾಯಕ ಶಿವಾನಂದ .ಅಶಾ ಕಾರ್ಯಕರ್ತೆ ಗುಣಶೀಲ. ಸ್ಥಳಕ್ಕೆ ಆಗಮಿಸಿ ಸತ್ತ ಮಂಗನ ಶವ ಪರೀಕ್ಷಿಸಿದ ನಂತರ ಸ್ಥಳದಲ್ಲಿ ಮಗನ ಶವವನ್ನು ಸುಡಲಾಯಿತು Body:
ಈ ರೀತಿ ಮಂಗಗಳ ಸಾವಿನ ಪ್ರಕರಣ ಆನಂದಪುರದ ಸುತ್ತಮುತ್ತ ಹಲವೆಡೆ ನಡೆದಿದೆ .ಈ ರೀತಿ ಮಂಗಗಳ ಸಾವಿಗೆ ಕಾರಣ ಕಾಯಿಲೆಯೋ ಅಥವಾ ಕಾಡು ಕಡೆದು ಅರಣ್ಯ ನಾಶದಿಂದ ಬರಗಾಲ ಬಂದ ಕಾರಣ ಆಹಾರ ಸಿಗದೆ ಊರಿನಲ್ಲಿ ಬಂದು ಉಪವಾಸದಿಂದ ಸತ್ತಿರುವುದು ಅನುಮಾನ ಹುಟ್ಟಿಸುತ್ತಿದೆ . Conclusion:ಮಂಗಳ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಜನ ಮಂಗನ ಕಾಯಿಲೆ ಬರಬಹುದು ಎಂಬ ಭಯದಲ್ಲಿ ಇದ್ದಾರೆ. ಆರೋಗ್ಯ ಇಲಾಖೆ ಸೂಕ್ತ ಕ್ರಮ ತೆಗೆದು ಕೊಂಡು ಮಂಗನ ಕಾಯಿಲೆ ಹರಡದಂತೆ ಮುಂಜಾಗೃತ ಕ್ರಮ ವಹಿಸಬೇಕಿದೆ. ಸಾಗರ ತಾಲೂಕಿನಲ್ಲಿ ಮಳೆಯಾಗದೆ ಇರುವುದರಿಂದ ಮಂಗನ ಸಾವು ಸಾಕಷ್ಟು ಭಯವನ್ನುಂಟು ಮಾಡಿರುವುದು ಸುಳ್ಳಲ್ಲ. ಸಾಗರ ತಾಲೂಕಿನ ಅರಳಗೋಡು ಸುತ್ತಮುತ್ತ 20 ಕ್ಕೂ ಹೆಚ್ಚು ಸಾವು ಮಂಗನ ಕಾಯಿಲೆಯಿಂದ ಸಂಭವಿಸಿರುವುದನ್ನು ಇಲ್ಲಿ‌ ಸ್ಮರಿಸಬೇಕಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.