ETV Bharat / city

ಫೇಸ್‌ಬುಕ್​ನಲ್ಲಿ ಲವ್ವಾಯ್ತು, 7 ತಿಂಗಳ ಹಿಂದೆ ಮದ್ವೆನೂ ಆದರು.. ಈಗ ಯುವತಿ ನೇಣಿಗೆ ಕೊರಳೊಡ್ಡಿದಳಾ!?

ಉಮೇಶ್‌ ನನ್ನ ಮಗಳನ್ನು ನಿತಿನ್ ಹಾಗೂ ಕಿಶೋರ್ ಎಂಬುವರ ಜೊತೆ ಕರೆದುಕೊಂಡು ಹೋಗಿ ದೇವಾಲಯದಲ್ಲಿ ಮದುವೆಯಾಗಿದ್ದರು. ನಂತರ ನನ್ನ ಇನ್ನೋರ್ವ ಮಗಳು ಐಶ್ವರ್ಯ ಜೂನ್ 10 ರಂದು ಸಾವನ್ನಪ್ಪಿದ್ದು, ಅಂದು ಸೌಂದರ್ಯ ನಮ್ಮೂರಿಗೆ ಬಂದಿದ್ದಳು. ಐಶ್ವರ್ಯ ಸಾವನ್ನಪ್ಪಿದ ಕೇವಲ 15 ದಿನಗಳಿಗೆ ಸೌಂದರ್ಯ ಸಾವನ್ನಪ್ಪಿದ್ದಾಳೆ..

author img

By

Published : Jun 26, 2021, 10:22 PM IST

shivamogga-kadgigere-girl-suicide
ಯುವತಿ ಆತ್ಮಹತ್ಯೆ

ಶಿವಮೊಗ್ಗ : ಫೇಸ್‌ಬುಕ್‌ನಲ್ಲಿ ಲವ್ ಮಾಡಿ ಮದುವೆಯಾದ ಏಳು ತಿಂಗಳಿಗೆ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಹೊಸನಗರ ತಾಲೂಕಿನ‌ ಕಾಡ್ಗಿಗೆರೆ ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯ ಸಕಲೇಶಪುರ ತಾಲೂಕಿನ ಗೊಳಗೊಂಡೆ ಗ್ರಾಮದ ನಿವಾಸಿ ಸೌಂದರ್ಯ (21) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವತಿ. ಕಳೆದ ಒಂದು ವರ್ಷದ ಹಿಂದೆ ಹೊಸನಗರ ತಾಲೂಕಿನ ಕಾಡ್ಗಿಗೆರೆ ಗ್ರಾಮದ ಉಮೇಶ್ ಎಂಬಾತನನ್ನು ಫೇಸ್‌ಬುಕ್‌ನಲ್ಲಿ ಲವ್ ಮಾಡಿ 2020ರ ನವೆಂಬರ್‌ನಲ್ಲಿ ಮದುವೆಯಾಗಿದ್ದರು. ಮದುವೆಯಾದ ಏಳು ತಿಂಗಳಲ್ಲಿ ಗೃಹಿಣಿ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊಲೆ ಆರೋಪ : ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಉಮೇಶ್​ನ ಮನೆಯವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದು ಕೊಲೆ ಎಂದು ಸೌಂದರ್ಯ ತಂದೆ ಉದಯ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿಂದೆ 2020ರ ನವೆಂಬರ್‌ನಲ್ಲಿ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಸಕಲೇಶಪುರ ಠಾಣೆಯಲ್ಲಿ ಸೌಂದರ್ಯ ಪೋಷಕರು ದೂರು ನೀಡಿದ್ದರು.

ಉಮೇಶ್‌ ನನ್ನ ಮಗಳನ್ನು ನಿತಿನ್ ಹಾಗೂ ಕಿಶೋರ್ ಎಂಬುವರ ಜೊತೆ ಕರೆದುಕೊಂಡು ಹೋಗಿ ದೇವಾಲಯದಲ್ಲಿ ಮದುವೆಯಾಗಿದ್ದರು. ನಂತರ ನನ್ನ ಇನ್ನೋರ್ವ ಮಗಳು ಐಶ್ವರ್ಯ ಜೂನ್ 10 ರಂದು ಸಾವನ್ನಪ್ಪಿದ್ದು, ಅಂದು ಸೌಂದರ್ಯ ನಮ್ಮೂರಿಗೆ ಬಂದಿದ್ದಳು. ಐಶ್ವರ್ಯ ಸಾವನ್ನಪ್ಪಿದ ಕೇವಲ 15 ದಿನಗಳಿಗೆ ಸೌಂದರ್ಯ ಸಾವನ್ನಪ್ಪಿದ್ದಾಳೆ.

ಸೌಂದರ್ಯ ಸಾವಿಗೆ ಉಮೇಶ್ ತಂದೆ ಪಾಂಡುರಂಗ ಕಾರಣ. ನೀನು ಬೇರೆ ಜಾತಿಯ ಹುಡುಗಿ, ನನ್ನ ಮಗನಿಗೆ ಬೇರೆ ಮದುವೆ ಮಾಡುವುದಾಗಿ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದರು. ಜೊತೆಗೆ ಉಮೇಶ್‌ನ ತಾಯಿ ಶಾಂತಮ್ಮ, ಸಹೋದರಿ ರೂಪ ಹಾಗೂ ಉಮೇಶ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರು ನೀಡಿದ್ದಾರೆ. ಸದ್ಯ ಉಮೇಶ್ ಸೇರಿದಂತೆ ಆತನ ಕುಟುಂಬದ ವಿರುದ್ಧ ನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಶಿವಮೊಗ್ಗ : ಫೇಸ್‌ಬುಕ್‌ನಲ್ಲಿ ಲವ್ ಮಾಡಿ ಮದುವೆಯಾದ ಏಳು ತಿಂಗಳಿಗೆ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಹೊಸನಗರ ತಾಲೂಕಿನ‌ ಕಾಡ್ಗಿಗೆರೆ ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯ ಸಕಲೇಶಪುರ ತಾಲೂಕಿನ ಗೊಳಗೊಂಡೆ ಗ್ರಾಮದ ನಿವಾಸಿ ಸೌಂದರ್ಯ (21) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವತಿ. ಕಳೆದ ಒಂದು ವರ್ಷದ ಹಿಂದೆ ಹೊಸನಗರ ತಾಲೂಕಿನ ಕಾಡ್ಗಿಗೆರೆ ಗ್ರಾಮದ ಉಮೇಶ್ ಎಂಬಾತನನ್ನು ಫೇಸ್‌ಬುಕ್‌ನಲ್ಲಿ ಲವ್ ಮಾಡಿ 2020ರ ನವೆಂಬರ್‌ನಲ್ಲಿ ಮದುವೆಯಾಗಿದ್ದರು. ಮದುವೆಯಾದ ಏಳು ತಿಂಗಳಲ್ಲಿ ಗೃಹಿಣಿ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊಲೆ ಆರೋಪ : ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಉಮೇಶ್​ನ ಮನೆಯವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದು ಕೊಲೆ ಎಂದು ಸೌಂದರ್ಯ ತಂದೆ ಉದಯ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿಂದೆ 2020ರ ನವೆಂಬರ್‌ನಲ್ಲಿ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಸಕಲೇಶಪುರ ಠಾಣೆಯಲ್ಲಿ ಸೌಂದರ್ಯ ಪೋಷಕರು ದೂರು ನೀಡಿದ್ದರು.

ಉಮೇಶ್‌ ನನ್ನ ಮಗಳನ್ನು ನಿತಿನ್ ಹಾಗೂ ಕಿಶೋರ್ ಎಂಬುವರ ಜೊತೆ ಕರೆದುಕೊಂಡು ಹೋಗಿ ದೇವಾಲಯದಲ್ಲಿ ಮದುವೆಯಾಗಿದ್ದರು. ನಂತರ ನನ್ನ ಇನ್ನೋರ್ವ ಮಗಳು ಐಶ್ವರ್ಯ ಜೂನ್ 10 ರಂದು ಸಾವನ್ನಪ್ಪಿದ್ದು, ಅಂದು ಸೌಂದರ್ಯ ನಮ್ಮೂರಿಗೆ ಬಂದಿದ್ದಳು. ಐಶ್ವರ್ಯ ಸಾವನ್ನಪ್ಪಿದ ಕೇವಲ 15 ದಿನಗಳಿಗೆ ಸೌಂದರ್ಯ ಸಾವನ್ನಪ್ಪಿದ್ದಾಳೆ.

ಸೌಂದರ್ಯ ಸಾವಿಗೆ ಉಮೇಶ್ ತಂದೆ ಪಾಂಡುರಂಗ ಕಾರಣ. ನೀನು ಬೇರೆ ಜಾತಿಯ ಹುಡುಗಿ, ನನ್ನ ಮಗನಿಗೆ ಬೇರೆ ಮದುವೆ ಮಾಡುವುದಾಗಿ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದರು. ಜೊತೆಗೆ ಉಮೇಶ್‌ನ ತಾಯಿ ಶಾಂತಮ್ಮ, ಸಹೋದರಿ ರೂಪ ಹಾಗೂ ಉಮೇಶ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರು ನೀಡಿದ್ದಾರೆ. ಸದ್ಯ ಉಮೇಶ್ ಸೇರಿದಂತೆ ಆತನ ಕುಟುಂಬದ ವಿರುದ್ಧ ನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.