ETV Bharat / city

ಕೇಂದ್ರದಿಂದ ಹಿಂದಿ ಹೇರಿಕೆಯ ಪ್ರಯತ್ನ ನಡೆದಿಲ್ಲ: ಸಚಿವ ಈಶ್ವರಪ್ಪ

author img

By

Published : Sep 17, 2019, 7:28 PM IST

ಇಂಗ್ಲಿಷ್ ಅನ್ನು ಒಪ್ಪುವ ನಾವು, ಹಿಂದಿಯನ್ನು ಯಾಕೆ ವಿರೋಧಿಸುತ್ತೇವೆಯೋ ಗೊತ್ತಿಲ್ಲ. ಆದ್ರೆ ದೇಶಾದ್ಯಂತ ಹಿಂದಿ ಹೇರಿಕೆಯ ಪ್ರಯತ್ನ ನಡೆದಿಲ್ಲ. ಮತ್ತು ಮಾತೃಭಾಷೆ ಕನ್ನಡಕ್ಕೆ ಒಂಚೂರು ತೊಂದರೆ ಆಗೋಕೆ ಬಿಡೊಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಕನ್ನಡ ನಮ್ಮ ಮಾತೃ ಭಾಷೆ ಹಾಗೂ ಹಿಂದಿ, ದೇಶವನ್ನು ಒಂದೂಗೂಡಿಸುವ ಭಾಷೆ. ಇದನ್ನು ಯಾಕೆ ವಿರೋಧ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ. ಹಿಂದಿಯನ್ನು ಕೇಂದ್ರ ಸರ್ಕಾರ ಯಾರ ಮೇಲೂ ಹೇರುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ

ನಗರದಲ್ಲಿ ಮಾತನಾಡಿದ ಅವರು, ಇಂಗ್ಲಿಷ್​ ಅನ್ನು ಒಪ್ಪುವ ನಾವು, ಹಿಂದಿಯನ್ನು ಯಾಕೆ ವಿರೋಧಿಸುತ್ತೇವೆಯೋ ಗೊತ್ತಿಲ್ಲ. ವಿಶ್ವದಾದ್ಯಂತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ರವರಿಗೆ ಗೌರವ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಮುಜುಗರ ಉಂಟು ಮಾಡುವ ರಾಜಕೀಯ ಕುತಂತ್ರ ಇದಾಗಿದೆ. ದೇಶಾದ್ಯಂತ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ರಾಜಕೀಯ‌ ಕುತಂತ್ರವನ್ನು ನಾನು ಖಂಡಿಸುತ್ತೇನೆ ಎಂದರು.

ಸಿದ್ದರಾಮಯ್ಯ ಓರ್ವ ದಡ್ಡ:

ಸಿದ್ದರಾಮಯ್ಯನವರಿಗೆ ತಲೆ ಎಲ್ಲಿದೆ? ತಲೆ ಇದ್ದವರು ಹೀಗೆಲ್ಲಾ ಮಾತನಾಡುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಗರಂ ಆದ ಈಶ್ವರಪ್ಪ, ಸರ್ದಾರ್ ವಲ್ಲಭ ಭಾಯ್ ಪಟೇಲ್​ ನಂತರ ಉತ್ತಮ ಗೃಹಸಚಿವರೆಂದು ಅಮಿತ್​ ಶಾ ಅವರನ್ನೇ ದೇಶದ ಜನರು ಒಪ್ಪಿರುವಾಗ ಈ ದಡ್ಡ ಸಿದ್ದರಾಮಯ್ಯ ಅವರು ಶಾ ದಡ್ಡ ಅಂತ ಹೇಳಿರುವುದು ಎಷ್ಟು ಸರಿ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.

ದೇಶದಲ್ಲಿ ಜಲ ಪ್ರಳಯವೇ ಆಗಿದೆ. ಈಗಾಗಲೇ ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತರಾಮನ್ ಹಾಗೂ ಎರಡು ತಂಡಗಳು ಬಂದು‌ ರಾಜ್ಯದ ಪ್ರವಾಹ ಪರಿಸ್ಥಿತಿಯ ಕುರಿತು ವೀಕ್ಷಣೆ ಮಾಡಿ ಹೋಗಿದ್ದಾರೆ. ಹೀಗಾಗಿ ಪ್ರಧಾನಿ ಮೋದಿಯವರು ರಾಜ್ಯಕ್ಕೆ ಸೂಕ್ತ ಪರಿಹಾರ ನೀಡುವ ವಿಶ್ವಾಸವಿದೆ ಎಂದು ಸಚಿವ ಈಶ್ವರಪ್ಪ ಅಭಿಪ್ರಾಯಪಟ್ಟರು.

ಬಿಜೆಪಿಗೆ ಜಿಟಿಡಿ ಮಾತ್ರವಲ್ಲ ಹೆಚ್​​ಡಿಡಿ, ಸಿದ್ದು‌ ಬಂದ್ರೂ ಅಚ್ಚರಿ ಇಲ್ಲ:

ಮಾಜಿ ಸಚಿವ ಜಿ.ಟಿ. ದೇವೇಗೌಡರು ಬಿಜೆಪಿ ಬಗ್ಗೆ ಹೆಚ್ಚಿನ‌ ಒಲವು ತೋರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು ಜಿ.ಟಿ. ದೇವೇಗೌಡರಷ್ಟೇ ಅಲ್ಲ, ಹೆಚ್.ಡಿ. ದೇವೇಗೌಡ್ರು, ಸಿದ್ದರಾಮಯ್ಯನವರು ಬಿಜೆಪಿಗೆ ಬಂದ್ರು‌ ಅಚ್ಚರಿ ಪಡಬೇಡಿ. ಮುಳುಗುವ ಪಕ್ಷದಲ್ಲಿ ಯಾರು ಇರುವುದಕ್ಕೆ ಇಷ್ಟಪಡ್ತಾರೆ. ಸಿದ್ದರಾಮಯ್ಯನವರು ಸೋತೂ ಬೇರೆ ಕಡೆಯಿಂದ ಗೆದ್ದು ಬಂದಿದ್ದಾರೆ. ಈಗ ಪ್ರತಿಪಕ್ಷದ ನಾಯಕನಾಗಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್​​ನವರು ಮೊದಲು ತಮ್ಮ ಪ್ರತಿಪಕ್ಷದ ನಾಯಕ ಯಾರು ಅಂತ ಆಯ್ಕೆ ಮಾಡಿಕೊಳ್ಳಲಿ. ನಂತ್ರ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಬಗ್ಗೆ ಮಾತನಾಡಲಿ ಎಂದು‌ ಟಾಂಗ್ ನೀಡಿದರು.

ಶಿವಮೊಗ್ಗ: ಕನ್ನಡ ನಮ್ಮ ಮಾತೃ ಭಾಷೆ ಹಾಗೂ ಹಿಂದಿ, ದೇಶವನ್ನು ಒಂದೂಗೂಡಿಸುವ ಭಾಷೆ. ಇದನ್ನು ಯಾಕೆ ವಿರೋಧ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ. ಹಿಂದಿಯನ್ನು ಕೇಂದ್ರ ಸರ್ಕಾರ ಯಾರ ಮೇಲೂ ಹೇರುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ

ನಗರದಲ್ಲಿ ಮಾತನಾಡಿದ ಅವರು, ಇಂಗ್ಲಿಷ್​ ಅನ್ನು ಒಪ್ಪುವ ನಾವು, ಹಿಂದಿಯನ್ನು ಯಾಕೆ ವಿರೋಧಿಸುತ್ತೇವೆಯೋ ಗೊತ್ತಿಲ್ಲ. ವಿಶ್ವದಾದ್ಯಂತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ರವರಿಗೆ ಗೌರವ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಮುಜುಗರ ಉಂಟು ಮಾಡುವ ರಾಜಕೀಯ ಕುತಂತ್ರ ಇದಾಗಿದೆ. ದೇಶಾದ್ಯಂತ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ರಾಜಕೀಯ‌ ಕುತಂತ್ರವನ್ನು ನಾನು ಖಂಡಿಸುತ್ತೇನೆ ಎಂದರು.

ಸಿದ್ದರಾಮಯ್ಯ ಓರ್ವ ದಡ್ಡ:

ಸಿದ್ದರಾಮಯ್ಯನವರಿಗೆ ತಲೆ ಎಲ್ಲಿದೆ? ತಲೆ ಇದ್ದವರು ಹೀಗೆಲ್ಲಾ ಮಾತನಾಡುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಗರಂ ಆದ ಈಶ್ವರಪ್ಪ, ಸರ್ದಾರ್ ವಲ್ಲಭ ಭಾಯ್ ಪಟೇಲ್​ ನಂತರ ಉತ್ತಮ ಗೃಹಸಚಿವರೆಂದು ಅಮಿತ್​ ಶಾ ಅವರನ್ನೇ ದೇಶದ ಜನರು ಒಪ್ಪಿರುವಾಗ ಈ ದಡ್ಡ ಸಿದ್ದರಾಮಯ್ಯ ಅವರು ಶಾ ದಡ್ಡ ಅಂತ ಹೇಳಿರುವುದು ಎಷ್ಟು ಸರಿ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.

ದೇಶದಲ್ಲಿ ಜಲ ಪ್ರಳಯವೇ ಆಗಿದೆ. ಈಗಾಗಲೇ ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತರಾಮನ್ ಹಾಗೂ ಎರಡು ತಂಡಗಳು ಬಂದು‌ ರಾಜ್ಯದ ಪ್ರವಾಹ ಪರಿಸ್ಥಿತಿಯ ಕುರಿತು ವೀಕ್ಷಣೆ ಮಾಡಿ ಹೋಗಿದ್ದಾರೆ. ಹೀಗಾಗಿ ಪ್ರಧಾನಿ ಮೋದಿಯವರು ರಾಜ್ಯಕ್ಕೆ ಸೂಕ್ತ ಪರಿಹಾರ ನೀಡುವ ವಿಶ್ವಾಸವಿದೆ ಎಂದು ಸಚಿವ ಈಶ್ವರಪ್ಪ ಅಭಿಪ್ರಾಯಪಟ್ಟರು.

ಬಿಜೆಪಿಗೆ ಜಿಟಿಡಿ ಮಾತ್ರವಲ್ಲ ಹೆಚ್​​ಡಿಡಿ, ಸಿದ್ದು‌ ಬಂದ್ರೂ ಅಚ್ಚರಿ ಇಲ್ಲ:

ಮಾಜಿ ಸಚಿವ ಜಿ.ಟಿ. ದೇವೇಗೌಡರು ಬಿಜೆಪಿ ಬಗ್ಗೆ ಹೆಚ್ಚಿನ‌ ಒಲವು ತೋರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು ಜಿ.ಟಿ. ದೇವೇಗೌಡರಷ್ಟೇ ಅಲ್ಲ, ಹೆಚ್.ಡಿ. ದೇವೇಗೌಡ್ರು, ಸಿದ್ದರಾಮಯ್ಯನವರು ಬಿಜೆಪಿಗೆ ಬಂದ್ರು‌ ಅಚ್ಚರಿ ಪಡಬೇಡಿ. ಮುಳುಗುವ ಪಕ್ಷದಲ್ಲಿ ಯಾರು ಇರುವುದಕ್ಕೆ ಇಷ್ಟಪಡ್ತಾರೆ. ಸಿದ್ದರಾಮಯ್ಯನವರು ಸೋತೂ ಬೇರೆ ಕಡೆಯಿಂದ ಗೆದ್ದು ಬಂದಿದ್ದಾರೆ. ಈಗ ಪ್ರತಿಪಕ್ಷದ ನಾಯಕನಾಗಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್​​ನವರು ಮೊದಲು ತಮ್ಮ ಪ್ರತಿಪಕ್ಷದ ನಾಯಕ ಯಾರು ಅಂತ ಆಯ್ಕೆ ಮಾಡಿಕೊಳ್ಳಲಿ. ನಂತ್ರ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಬಗ್ಗೆ ಮಾತನಾಡಲಿ ಎಂದು‌ ಟಾಂಗ್ ನೀಡಿದರು.

Intro:ಕನ್ನಡ ನಮ್ಮ ಮಾತೃ ಭಾಷೆ, ಹಿಂದಿ ದೇಶವನ್ನು ಒಂದೂಗೂಡಿಸುವ ಭಾಷೆ ಇದನ್ನು ಯಾಕೆ ವಿರೋಧ ಮಾಡುತ್ತಿದ್ದಾರೂ ನಮಗತ್ತೂ ಗೂತ್ತಾಗುತ್ತಿಲ್ಲ, ಹಿಂದಿಯನ್ನು ಕೇಂದ್ರ ಸರ್ಕಾರ ಯಾರ ಮೇಲೂ ಹೇರುತ್ತಿಲ್ಲ ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟ ಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕನ್ನಡ ನಮ್ಮ ಮಾತೃ ಭಾಷೆ, ಕನ್ನಡ ನಮ್ಮದು, ಹಿಂದಿ ದೇಶದ ಜನರನ್ನು ಒಗ್ಗೂಡಿಸು ಭಾಷೆಯಾಗಿದೆ. ಇಂಗ್ಲೀಷ್ ನ್ನು ಒಪ್ಪುವ ನಾವು ಹಿಂದಿಯನ್ನು ಯಾಕೆ ವಿರೋಧ ಮಾಡುತ್ತೆವೆಯೂ ಗೂತ್ತಿಲ್ಲ. ವಿಶ್ವದ್ಯಾಂತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ರವರಿಗೆ ಗೌರವ ಹೆಚ್ಚಾಗುತ್ತಿರುವ ವೇಳೆಯಲ್ಲಿ ಅವರಿಗೆ ಮುಜುಗರ ಉಂಟು ಮಾಡುವ ರಾಜಕೀಯ ಕುತಂತ್ರ ಇದಾಗಿದೆ ಎಂದರು.ಹಿಂದಿ ಹೇರಿಕೆಯ ಒಂದೂಚೂರು ಪ್ರಯತ್ನ ನಡೆದಿಲ್ಲ. ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ರಾಜಕೀಯ‌ ಕುತಂತ್ರವನ್ನು ನಾನು ಖಂಡಿಸುತ್ತೆನೆ ಎಂದರು.


Body:ಸಿದ್ದು, ಓರ್ವ ದಡ್ಡ, ವಡ್ಡ-

ಸಿದ್ದರಾಮಯ್ಯನವರಿಗೆ ತಲೆ ಎಲ್ಲಿದೆ? ತಲೆ ಇದ್ದವರು ಹೀಗೆಲ್ಲಾ ಮಾತನಾಡುತ್ತಿರಲಿಲ್ಲ ಎಂದು ಸಿದ್ದರಾಮಯ್ಯನವರ ವಿರುದ್ದ ಗರಂ ಆದರು. ಸರ್ದಾರ್ ವಲ್ಲಭ ಬಾಯ್ ಪಟೇಲ್ ರ ನಂತ್ರ ಉತ್ತಮ ಗೃಹ ಮಂತ್ರಿ ಅಂತ ದೇಶವೇ ಒಪ್ಪಿರುವ ವೇಳೆಯಲ್ಲಿ ಅಮಿತ್ ಷಾರವರು ದಡ್ಡ ಅಂತ ಸಿದ್ದರಾಮಯ್ಯನವರು ಹೇಳಿರುವುದು ಎಷ್ಟು ಸರಿ ಎಂದರು. ವಡ್ಡರ ಬಗ್ಗೆ ನನಗೆ ಅಪಾರವಾದ ಗೌರವವಿದೆ ಎಂದು ವಡ್ಡ ಎಂದಿದಕ್ಕೆ ಸಮಜಾಯಿಸಿ ನೀಡಿದರು. ಮೋದಿ ಹಾಗೂ ಷಾರವರನ್ನು ಟೀಕಿಸಿದರೆ ನಾನು ದೊಡ್ಡ ವ್ಯಕ್ತಿ ಆಗುತ್ತೆನೆ ಅಂತ ಸಿದ್ದರಾಮಯ್ಯನವರು ತಿಳಿದು ಕೊಂಡಿದ್ರೆ ಅದು ತಪ್ಪು.ಸಿದ್ದರಾಮಯ್ಯನವರು ಅಮಿತ್ ಷಾ ರವರ ಬಗ್ಗೆ ಹೇಳಿಕೆ ನೀಡಿರುವುದು ಖಂಡನೀಯ. ಇದರಿಂದ ಸಿದ್ದರಾಮಯ್ಯ ಅಮಿತ್ ಷಾರವರ ಕ್ಷಮೆ ಕೇಳಬೇಕು ಎಂದರು ಆಗ್ರಹಿಸಿದರು.


Conclusion:ದೇಶದಲ್ಲಿ ಜಲ ಪ್ರಳಯವೇ ಆಗಿದೆ. ಈಗಾಗಲೇ ಅಮಿತ್ ಷಾ, ನಿರ್ಮಲ ಸೀತರಾಮನ್ ಹಾಗೂ ಎರಡು ತಂಡಗಳು ಬಂದು‌ ರಾಜ್ಯದ ಪ್ರವಾಹ ಪರಿಸ್ಥಿತಿಯ ಕುರಿತು ವೀಕ್ಷಣೆ ಮಾಡಿ ಕೊಂಡು ಹೋಗಿದ್ದಾರೆ. ಇದರಿಂದ ಪ್ರಧಾನ ಮಂತ್ರಿ ಮೋದಿರವರು ರಾಜ್ಯಕ್ಕೆ ಒಳ್ಳೆಯ ಪರಿಹಾರವನ್ನು ನೀಡುವ ವಿಶ್ವಾಸವಿದೆ ಎಂದರು.

ಬಿಜೆಪಿಗೆ ಜಿ.ಟಿ.ಡಿ ಮಾತ್ರವಲ್ಲ ಹೆಚ್.ಡಿ.ಡಿ, ಸಿದ್ದು‌ ಬಂದ್ರು ಅಚ್ಚರಿ ಇಲ್ಲ-

ಮೈಸೂರಿನ ಮಾಜಿ ಸಚಿವ ಜಿ.ಟಿ.ದೇವೆಗೌಡರು ಬಿಜೆಪಿ ಬಗ್ಗೆ ಹೆಚ್ಚಿನ‌ ಒಲವು ತೋರುತ್ತಿರುವ ಬಗ್ಗೆ ಉತ್ತರಿಸಿದ ಈಶ್ವರಪ್ಪ ಜಿ.ಟಿ.ದೇವೆಗೌಡರಷ್ಟೆ ಅಲ್ಲ, ಹೆಚ್.ಡಿ.ದೇವೆಗೌಡ್ರು, ಸಿದ್ದರಾಮಯ್ಯನವರು ಬಿಜೆಪಿಗೆ ಬಂದ್ರು‌ ಅಚ್ಚರಿ ಪಡಬೇಡಿ.ಸಾಯುವ, ಮುಳುಗುವ ಪಕ್ಷದಲ್ಲಿ ಯಾರು ಇರುವುದಕ್ಕೆ ಇಷ್ಟ ಪಡುತ್ತಾರೆ ಎಂದರು. ಸಿದ್ದರಾಮಯ್ಯನವರು ಸೋತೂ ಬೇರೆ ಕಡೆಯಿಂದ ಗೆದ್ದು ಬಂದಿದ್ದಾರೆ. ಈಗ ವಿರೋಧ ಪಕ್ಷದ ನಾಯಕನಾಗಲು ಯತ್ನ ಮಾಡ್ತಾ ಇದ್ದಾರೆ. ಕಾಂಗ್ರೆಸ್ ನವರು ಮೊದಲು ತಮ್ಮ ವಿರೋಧ ಪಕ್ಷದ ನಾಯಕ ಯಾರು ಅಂತ ಆಯ್ಕೆ ಮಾಡಿಕೊಳ್ಳಲಿ ನಂತ್ರ ನರೇಂದ್ರ ಮೋದಿ ಹಾಗೂ ಅಮಿತ್ ಷಾರವರ ಬಗ್ಗೆ ಮಾತನಾಡಲಿ ಎಂದು‌ ಕಾಂಗ್ರೆಸ್ ನವರಿಗೆ ಟಾಂಗ್ ನೀಡಿದರು. ಈ ವೇಳೆ ಮಾಜಿ ಎಂಎಲ್ಸಿ ಭಾನು ಪ್ರಕಾಶ್ ಸೇರಿ‌ ಇತರರು ಹಾಜರಿದ್ದರು.

ಬೈಟ್: ಕೆ.ಎಸ್.ಈಶ್ವರಪ್ಪ. ಸಚಿವರು.

ಕಿರಣ್ ಕುಮಾರ್. ಶಿವಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.