ಶಿವಮೊಗ್ಗ: ಬಸವ ಜಯಂತಿ, ರಂಜಾನ್ ನಿಮಿತ್ತ ಮುಸ್ಲಿಂ ಸಮುದಾಯದವರು ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಭಾವಕೈತೆ ಸಾರಿದ್ದಾರೆ. ಸರ್.ಎಂ.ವಿಶ್ವೇಶ್ವರಯ್ಯ ರಸ್ತೆಯಲ್ಲಿ ನಮಾಜ್ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಗಾಂಧಿ ಪಾರ್ಕ್ ಮುಂಭಾಗದ ಬಸವಣ್ಣನ ಪುತ್ಥಳಿಗೆ ಮುಸ್ಲಿಂ ಮತಸ್ಥರು ಮಾಲಾರ್ಪಣೆ ಮಾಡಿದ್ದಾರೆ.
ಬಸವಣ್ಣ ತಮ್ಮ ವಚನದ ಮೂಲಕ ಎಲ್ಲ ಧರ್ಮ ಒಂದೇ ಎಂದು ತಿಳಿಸಿದ್ದಾರೆ. ರಂಜಾನ್ ಮತ್ತು ಬಸವೇಶ್ವರರ ಜಯಂತಿ ಒಂದೇ ದಿನ ಇದ್ದು, ಒಬ್ಬರಿಗೊಬ್ಬರು ಸಹೋದರಂತೆ ಬಾಳಬೇಕಿದೆ ಎಂಬ ಭಾವೈಕ್ಯತೆಯ ಮಾತುಗಳು ಕೇಳಿ ಬಂದವು.
ಓದಿ: ಬಸವಣ್ಣನ ವಚನ, ಆದರ್ಶ ಪಾಲಿಸಿ ಅವರಂತೆ ಜೀವನ ಮಾಡಬೇಕು: ಅಮಿತ್ ಶಾ