ಶಿವಮೊಗ್ಗ : ಕಾಶ್ಮೀರದ ಆರ್ಟಿಕಲ್ 370 ಹಿಂಪಡೆಯದೇ ಇದ್ದರೆ ಇಂದು ಕಾಶ್ಮೀರಕ್ಕೂ ಅಫ್ಘಾನಿಸ್ತಾನಕ್ಕೆ ಆದ ಸ್ಥಿತಿಯೇ ಆಗುತ್ತಿತ್ತೇನೋ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.
ನಗರದ ಶುಭಮಂಗಳ ಸಭಾಂಗಣದಲ್ಲಿ ನಡೆದ ಜನಾರ್ಶಿವಾದ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಶ್ಮೀರದ ಆರ್ಟಿಕಲ್ 370 ಹಿಂಪಡೆಯಬೇಕು ಎಂಬುದು ನಮ್ಮ ಬಹು ಹಿಂದಿನ ಕನಸಾಗಿತ್ತು. ಅದು ನನಸಾಗಿದ್ದರಿಂದ ಕಾಶ್ಮೀರ ಕ್ಷೇಮವಾಗಿದೆ. ಒಂದು ವೇಳೆ ಆರ್ಟಿಕಲ್ 370ಯನ್ನು ಹಿಂಪಡೆಯದಿದ್ದರೆ ಅಪ್ಘಾನಿಸ್ತಾನಕ್ಕೆ ಆದ ಗತಿಯೇ ಕಾಶ್ಮೀರಕ್ಕೂ ಆಗುತ್ತಿತ್ತೇನೋ ಎಂದು ಹೇಳಿದರು.