ETV Bharat / city

ರಾಜ್ಯದಲ್ಲಿ ಜೆಡಿಎಸ್​ನವರೇ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತಿದ್ದಾರೆ: ಬಿ.ವೈ ರಾಘವೇಂದ್ರ

author img

By

Published : Mar 23, 2019, 8:29 PM IST

ಶಿವಮೊಗ್ಗ, ತುಮಕೂರು, ಕಾರವಾರ, ಚಿಕ್ಕಮಗಳೂರು, ಬೆಂಗಳೂರು ಉತ್ತರ ಸೇರಿ ಎಂಟು ಸೀಟು ಪಡೆದುಕೊಳ್ಳುವ ಮೂಲಕ ಜೆಡಿಎಸ್ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಹೊರಟಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ವ್ಯಂಗ್ಯವಾಡಿದ್ದಾರೆ.

ಬಿ.ವೈ ರಾಘವೇಂದ್ರ
ಶಿವಮೊಗ್ಗ: ನರೇಂದ್ರ ಮೋದಿ ಕಾಂಗ್ರೆಸ್ ಮುಕ್ತ ಮಾಡಲು ಕಾರ್ಯಕರ್ತರಿಗೆ ಕರೆ ನೀಡಿದ್ದರು. ಈಗ ಕರ್ನಾಟಕದಲ್ಲಿ ಜೆಡಿಎಸ್​ನವರೇ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಹೊರಟಿದ್ದಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ವ್ಯಂಗ್ಯವಾಡಿದ್ದಾರೆ. ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಮೋದಿಯವರ ಸವಾಲನ್ನ ಜೆಡಿಎಸ್, ಗಂಭೀರವಾಗಿ ಸ್ವೀಕಾರ ಮಾಡಿದಂತೆ ಕಾಣುತ್ತಿದೆ. ಹಾಗಾಗಿ ತಾವೆಲ್ಲಾ ಗಮನಿಸಿದ್ದಿರಿ. ಈಗಾಗಲೇ ಶಿವಮೊಗ್ಗ, ತುಮಕೂರು, ಕಾರವಾರ, ಚಿಕ್ಕಮಗಳೂರು, ಬೆಂಗಳೂರು ಉತ್ತರ ಸೇರಿ ಎಂಟು ಸೀಟು ಪಡೆದುಕೊಳ್ಳುವ ಮೂಲಕ ಜೆಡಿಎಸ್, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಹೊರಟಿದೆ. ನಾವೇನೂ ಮಾಡುವುದು ಬೇಡ. ಅವರೇ ಮಾಡುತ್ತಾರೆ ಎಂದು ಮೈತ್ರಿ ಪಕ್ಷದ ಕಾಲೆಳೆದರು. ನಿಷ್ಠಾವಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈಗಲಾದರೂ ಚರ್ಚೆಮಾಡಿ ನಮ್ಮೊಂದಿಗೆ ಕೈ ಜೋಡಿಸಿ ಎಂದರು.
ಬಿ.ವೈ ರಾಘವೇಂದ್ರ ವ್ಯಂಗ್ಯ
ಕೆಲವರು ಜಿಲ್ಲೆಯಲ್ಲಿ ಎರಡು ಕುಟುಂಬದ ನಡುವೆ ನಡೆಯುತ್ತಿರುವ ಚುನಾವಣೆ ಎನ್ನುತ್ತಿದ್ದಾರೆ. ಆದರೆ ಇದು ಎರಡು ಕುಟುಂಬದ ಚುನಾವಣೆಯಲ್ಲ. ದೇಶವೇ ನನ್ನ ಕುಟುಂಬ ಎನ್ನುವ ಮೋದಿಜೀ ಅವರ ನೇತೃತ್ವದ ಆಡಳಿತಕ್ಕಾಗಿ, ಹಾಗೂ ದೇಶದ ಅಭಿವೃದ್ಧಿಗಾಗಿ ನಡೆಯುತ್ತಿರುವ ಚುನಾವಣೆ ಎಂದರು.

ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗುವುದು ಕೂಡಾ ಅಷ್ಟೇ ಸತ್ಯ ಎಂದರು.

ಶಿವಮೊಗ್ಗ: ನರೇಂದ್ರ ಮೋದಿ ಕಾಂಗ್ರೆಸ್ ಮುಕ್ತ ಮಾಡಲು ಕಾರ್ಯಕರ್ತರಿಗೆ ಕರೆ ನೀಡಿದ್ದರು. ಈಗ ಕರ್ನಾಟಕದಲ್ಲಿ ಜೆಡಿಎಸ್​ನವರೇ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಹೊರಟಿದ್ದಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ವ್ಯಂಗ್ಯವಾಡಿದ್ದಾರೆ. ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಮೋದಿಯವರ ಸವಾಲನ್ನ ಜೆಡಿಎಸ್, ಗಂಭೀರವಾಗಿ ಸ್ವೀಕಾರ ಮಾಡಿದಂತೆ ಕಾಣುತ್ತಿದೆ. ಹಾಗಾಗಿ ತಾವೆಲ್ಲಾ ಗಮನಿಸಿದ್ದಿರಿ. ಈಗಾಗಲೇ ಶಿವಮೊಗ್ಗ, ತುಮಕೂರು, ಕಾರವಾರ, ಚಿಕ್ಕಮಗಳೂರು, ಬೆಂಗಳೂರು ಉತ್ತರ ಸೇರಿ ಎಂಟು ಸೀಟು ಪಡೆದುಕೊಳ್ಳುವ ಮೂಲಕ ಜೆಡಿಎಸ್, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಹೊರಟಿದೆ. ನಾವೇನೂ ಮಾಡುವುದು ಬೇಡ. ಅವರೇ ಮಾಡುತ್ತಾರೆ ಎಂದು ಮೈತ್ರಿ ಪಕ್ಷದ ಕಾಲೆಳೆದರು. ನಿಷ್ಠಾವಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈಗಲಾದರೂ ಚರ್ಚೆಮಾಡಿ ನಮ್ಮೊಂದಿಗೆ ಕೈ ಜೋಡಿಸಿ ಎಂದರು.
ಬಿ.ವೈ ರಾಘವೇಂದ್ರ ವ್ಯಂಗ್ಯ
ಕೆಲವರು ಜಿಲ್ಲೆಯಲ್ಲಿ ಎರಡು ಕುಟುಂಬದ ನಡುವೆ ನಡೆಯುತ್ತಿರುವ ಚುನಾವಣೆ ಎನ್ನುತ್ತಿದ್ದಾರೆ. ಆದರೆ ಇದು ಎರಡು ಕುಟುಂಬದ ಚುನಾವಣೆಯಲ್ಲ. ದೇಶವೇ ನನ್ನ ಕುಟುಂಬ ಎನ್ನುವ ಮೋದಿಜೀ ಅವರ ನೇತೃತ್ವದ ಆಡಳಿತಕ್ಕಾಗಿ, ಹಾಗೂ ದೇಶದ ಅಭಿವೃದ್ಧಿಗಾಗಿ ನಡೆಯುತ್ತಿರುವ ಚುನಾವಣೆ ಎಂದರು.

ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗುವುದು ಕೂಡಾ ಅಷ್ಟೇ ಸತ್ಯ ಎಂದರು.
Intro:ಶಿವಮೊಗ್ಗ,
ಮಾದ್ಯಮ ಸಂವಾದ ಕಾರ್ಯಕ್ರಮ ದಲ್ಲಿ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ ನರೇಂದ್ರ ಮೋದಿ ಯವರ ಕಾಂಗ್ರೆಸ್ ಮುಕ್ತ ಮಾಡಲು ಕಾರ್ಯಕರ್ತರಿಗೆ ಕರೆ ನೀಡಿದ್ದರು ಆದರೆ ಕರ್ನಾಟಕ ದಲ್ಲಿ ಜೆಡಿಎಸ್ ನವರೆ ಕಾಂಗ್ರೆಸ್ ಮುಕ್ತ ಮಾಡಲು ಹೋರಟಿದ್ದಾರೆ ಎಂದರು .
ಮೋದಿಯವರ ಸವಾಲನ್ನ ಜೆಡಿಎಸ್ ಗಂಭೀರವಾಗಿ ಸ್ವೀಕಾರ ಮಾಡಿದಂಗೆ ಕಾಣುತ್ತಿದೆ ಹಾಗಾಗಿ ತಾವೇಲ್ಲಾ ಗಮನಿಸಿದ್ದಿರಿ
ಈಗಾಗಲೇ ಶಿವಮೊಗ್ಗ, ತುಮಕೂರು, ಕಾರವಾರ,ಚಿಕ್ಕಮಗಳೂರು, ಬೆಂಗಳೂರು ಉತ್ತರ ಸೇರಿ ಎಂಟು ಸೀಟು ಪಡೆದುಕೊಳ್ಳುವ ಮೂಲಕ ಜೆಡಿಎಸ್ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಹೊರಟಿದೆ ನಾವೇನು ಮಾಡುವುದು ಬೇಡ ಅವರೆ ಮಾಡುತ್ತಾರೆ ಎಂದರು.


Body:ಹಾಗಾಗಿ ನಿಷ್ಠಾವಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ಗಲಾದರೂ ಚರ್ಚೆಮಾಡಿ ನಮ್ಮೊಂದಿಗೆ ಕೈ ಜೋಡಿಸಿ ಎಂದರು.
ನಂತರದಲ್ಲಿ ಮಾತನಾಡಿದ ಅವರು ಕೇಲವರು ಜಿಲ್ಲೆ ಯಲ್ಲಿ ಎರಡು ಕುಟುಂಬದ ನಡುವೇ ನಡೆಯುತ್ತಿರು ಚುನಾವಣೆ ಎನ್ನುತ್ತಿದ್ದಾರೆ ಆದರೆ ಎರಡು ಕುಟುಂಬದ ಚುನಾವಣೆ ಅಲ್ಲ ದೇಶವೇ ನನ್ನ ಕುಟುಂಬ ಎನ್ನುವ ಮೋದಿಜೀ ಅವರ ನೇತೃತ್ವದ ಆಡಳಿತಕ್ಕಾಗಿ, ಹಾಗೂ ದೇಶದ ಅಭಿವೃದ್ಧಿ ಗಾಗಿ ಚುನಾವಣೆ ಎಂದರು.
ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಮೋದಿ ಯವರು ಪ್ರಧಾನಿ ಯಾಗುವುದು ಅಷ್ಟೇ ಸತ್ಯ ಎಂದರು
ಭೀಮಾನಾಯ್ಕ ಎಸ್ ಶಿವಮೊಗ್ಗ



Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.