ETV Bharat / city

ಸಚಿವ ಈಶ್ವರಪ್ಪಗೆ 70 ವರ್ಷ: ಭೀಮರಥ ಶಾಂತಿಗೆ ಸಿದ್ದತೆ - ಪೂಜೆ, ಹೋಮ-ಹವನ

ಪಂಚಾಯತ್​ ರಾಜ್​ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಇಂದಿಗೆ 70 ವಸಂತ ಪೂರೈಸಿದ ಹಿನ್ನೆಲೆಯಲ್ಲಿ ಭೀಮರಥ ಶಾಂತಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

minister k.s.Eshwarappa birth anniversary
ಭೀಮರಥ ಶಾಂತಿಗೆ ಸಿದ್ದತೆ
author img

By

Published : Feb 15, 2020, 6:36 PM IST

ಶಿವಮೊಗ್ಗ: ಪಂಚಾಯತ್​ ರಾಜ್​ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಇಂದಿಗೆ 70 ವಸಂತ ಪೂರೈಸಿದೆ. ಹೀಗಾಗಿ ಭೀಮರಥ ಶಾಂತಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಅವರ ನಿವಾಸದಲ್ಲಿ ಎರಡು ದಿನಗಳಿಂದ ಪೂಜೆ, ಹೋಮ-ಹವನಗಳನ್ನು ನಡೆಸಲಾಗುತ್ತಿದೆ. ಇಂದು‌ ಸಹಸ್ರ ರುದ್ರಾಪಠಣ, ನಿನ್ನೆ ಸಹಸ್ರ ನಾರಿಕೇಳ ಹೋಮ ನಡೆಯಿತು. ನಾಳೆ ಭೀಮರಥ ಶಾಂತಿ ಹೋಮ ನಡೆಸಲಾಗುತ್ತದೆ.

ಭೀಮರಥ ಶಾಂತಿಗೆ ಸಿದ್ದತೆ

ಕಾರ್ಯಕ್ರಮಕ್ಕಾಗಿ ಭರ್ಜರಿ ವೇದಿಕೆ ಸಿದ್ದಪಡಿಸಲಾಗಿದೆ. ಸುಮಾರು‌ 10 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ನಾಳಿನ‌ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ಭಾಗಿಯಾಗಿ‌ ಈಶ್ವರಪ್ಪ ದಂಪತಿಗೆ ಆಶೀರ್ವಾದ ಮಾಡಲಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ‌ ಸೇರಿ‌ ಸಚಿವರು ಭಾಗಿಯಾಗಲಿದ್ದಾರೆ.

ಶಿವಮೊಗ್ಗ: ಪಂಚಾಯತ್​ ರಾಜ್​ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಇಂದಿಗೆ 70 ವಸಂತ ಪೂರೈಸಿದೆ. ಹೀಗಾಗಿ ಭೀಮರಥ ಶಾಂತಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಅವರ ನಿವಾಸದಲ್ಲಿ ಎರಡು ದಿನಗಳಿಂದ ಪೂಜೆ, ಹೋಮ-ಹವನಗಳನ್ನು ನಡೆಸಲಾಗುತ್ತಿದೆ. ಇಂದು‌ ಸಹಸ್ರ ರುದ್ರಾಪಠಣ, ನಿನ್ನೆ ಸಹಸ್ರ ನಾರಿಕೇಳ ಹೋಮ ನಡೆಯಿತು. ನಾಳೆ ಭೀಮರಥ ಶಾಂತಿ ಹೋಮ ನಡೆಸಲಾಗುತ್ತದೆ.

ಭೀಮರಥ ಶಾಂತಿಗೆ ಸಿದ್ದತೆ

ಕಾರ್ಯಕ್ರಮಕ್ಕಾಗಿ ಭರ್ಜರಿ ವೇದಿಕೆ ಸಿದ್ದಪಡಿಸಲಾಗಿದೆ. ಸುಮಾರು‌ 10 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ನಾಳಿನ‌ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ಭಾಗಿಯಾಗಿ‌ ಈಶ್ವರಪ್ಪ ದಂಪತಿಗೆ ಆಶೀರ್ವಾದ ಮಾಡಲಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ‌ ಸೇರಿ‌ ಸಚಿವರು ಭಾಗಿಯಾಗಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.