ETV Bharat / city

ಭದ್ರಾವತಿ: ಹಲ್ಲು ತೆಗೆಸಲು ಹೋದ ವ್ಯಕ್ತಿ ಆಸ್ಪತ್ರೆಯಲ್ಲೇ ಸಾವು!!

author img

By

Published : Jul 11, 2021, 1:42 AM IST

Updated : Jul 12, 2021, 12:34 PM IST

ಹಲ್ಲು ನೋವೆಂದು ಸ್ನೇಹಿತನ ಕ್ಲಿನಿಕ್​​ಗೆ ಹೋದ ವ್ಯಕ್ತಿ ಅಲ್ಲೇ ಮೃತಪಟ್ಟ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಘಟನೆ ಸಂಬಂಧ ಮೃತರ ಸಂಬಂಧಿಕರು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ

ಹಲ್ಲು ನೋವೆಂದು ಸ್ನೇಹಿತನ ಕ್ಲಿನಿಕ್​ಗೆ ಹೋದವ ಮಸಣ ಸೇರಿದ
ಹಲ್ಲು ನೋವೆಂದು ಸ್ನೇಹಿತನ ಕ್ಲಿನಿಕ್​ಗೆ ಹೋದವ ಮಸಣ ಸೇರಿದ

ಶಿವಮೊಗ್ಗ: ಹಲ್ಲು ನೋವೆಂದು ಸ್ನೇಹಿತನ ಕ್ಲಿನಿಕ್​ಗೆ ಹೋದ ವ್ಯಕ್ತಿ ಅಲ್ಲೇ ಮೃತಪಟ್ಟಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯ ಜನ್ನಾಪುರದ ನಿವಾಸಿ ಮೋಹನ್ ಮೂರ್ತಿ(43) ಮೃತಪಟ್ಟವರು.

''ಮೋಹನ್​ ಮೂರ್ತಿ ಎಂಬುವವರು ಶ್ರೇಯಸ್ ಕ್ಲಿನಿಕ್​ಗೆ ಹಲ್ಲು ನೋವೆಂದು ಹೋಗಿದ್ದರು. ಈ ವೇಳೆ ಮೂರ್ತಿಯವರಿಗೆ ದಂತ ವೈದ್ಯ ಸತೀಶ್ ಚಂದನ್ ಹಲ್ಲು ಕೀಳಲು ಅನಸ್ತೇಶಿಯ ನೀಡಿದ್ದರು. ತಕ್ಷಣ ಅಸ್ವಸ್ಥಗೊಂಡ ಮೋಹನ್​ ಮೂರ್ತಿ ಸಾವನ್ನಪ್ಪಿದ್ದಾರೆ'' ಎಂದು ಮೃತರ ಸಂಬಂಧಿಕರು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅನಸ್ತೇಶಿಯಾ ಓವರ್​​ ಡೋಸ್​​ನಿಂದಾಗಿಯೇ ಮೋಹನ್​ ಮೂರ್ತಿ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಮೂರ್ತಿ ಹಾಗೂ ಸತೀಶ್ ಚಂದನ್ ಇಬ್ಬರು ಸ್ನೇಹಿತರು:

ಮೃತ ಮೋಹನ್ ಮೂರ್ತಿ ಹಾಗೂ ದಂತ ವೈದ್ಯ ಸತೀಶ್ ಚಂದನ್ ಇಬ್ಬರು ಗೆಳೆಯರು. ಇವರಿಬ್ಬರು ಒಟ್ಟಿಗೆ ವಾಕಿಂಗ್ ಹೋಗುವುದು ಸೇರಿದಂತೆ ಆತ್ಮೀಯತೆ ಇತ್ತು. ಈ ಹಿನ್ನೆಲೆ ಮೋಹನ್ ಮೂರ್ತಿ ಸತೀಶ್ ಚಂದನ್ ಕ್ಲಿನಿಕ್​ಗೆ ಬಂದಿದ್ದಾನೆ. ಸತೀಶ್ ಚಂದನ್ ಭದ್ರಾವತಿಯ ಹಾಲಪ್ಪ ಸರ್ಕಲ್ ನಲ್ಲಿ ಶ್ರೇಯಸ್ ಕ್ಲಿನಿಕ್ ನಡೆಸುತ್ತಿದ್ದಾರೆ. ಮೃತ ಮೋಹನ್ ಮೂರ್ತಿಗೆ ಪತ್ನಿ ಹಾಗೂ 12 ವರ್ಷದ ಹೆಣ್ಣು ಮಗು, 2 ವರ್ಷದ ಗಂಡು ಮಗುವಿದೆ.

ಶಿವಮೊಗ್ಗ: ಹಲ್ಲು ನೋವೆಂದು ಸ್ನೇಹಿತನ ಕ್ಲಿನಿಕ್​ಗೆ ಹೋದ ವ್ಯಕ್ತಿ ಅಲ್ಲೇ ಮೃತಪಟ್ಟಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯ ಜನ್ನಾಪುರದ ನಿವಾಸಿ ಮೋಹನ್ ಮೂರ್ತಿ(43) ಮೃತಪಟ್ಟವರು.

''ಮೋಹನ್​ ಮೂರ್ತಿ ಎಂಬುವವರು ಶ್ರೇಯಸ್ ಕ್ಲಿನಿಕ್​ಗೆ ಹಲ್ಲು ನೋವೆಂದು ಹೋಗಿದ್ದರು. ಈ ವೇಳೆ ಮೂರ್ತಿಯವರಿಗೆ ದಂತ ವೈದ್ಯ ಸತೀಶ್ ಚಂದನ್ ಹಲ್ಲು ಕೀಳಲು ಅನಸ್ತೇಶಿಯ ನೀಡಿದ್ದರು. ತಕ್ಷಣ ಅಸ್ವಸ್ಥಗೊಂಡ ಮೋಹನ್​ ಮೂರ್ತಿ ಸಾವನ್ನಪ್ಪಿದ್ದಾರೆ'' ಎಂದು ಮೃತರ ಸಂಬಂಧಿಕರು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅನಸ್ತೇಶಿಯಾ ಓವರ್​​ ಡೋಸ್​​ನಿಂದಾಗಿಯೇ ಮೋಹನ್​ ಮೂರ್ತಿ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಮೂರ್ತಿ ಹಾಗೂ ಸತೀಶ್ ಚಂದನ್ ಇಬ್ಬರು ಸ್ನೇಹಿತರು:

ಮೃತ ಮೋಹನ್ ಮೂರ್ತಿ ಹಾಗೂ ದಂತ ವೈದ್ಯ ಸತೀಶ್ ಚಂದನ್ ಇಬ್ಬರು ಗೆಳೆಯರು. ಇವರಿಬ್ಬರು ಒಟ್ಟಿಗೆ ವಾಕಿಂಗ್ ಹೋಗುವುದು ಸೇರಿದಂತೆ ಆತ್ಮೀಯತೆ ಇತ್ತು. ಈ ಹಿನ್ನೆಲೆ ಮೋಹನ್ ಮೂರ್ತಿ ಸತೀಶ್ ಚಂದನ್ ಕ್ಲಿನಿಕ್​ಗೆ ಬಂದಿದ್ದಾನೆ. ಸತೀಶ್ ಚಂದನ್ ಭದ್ರಾವತಿಯ ಹಾಲಪ್ಪ ಸರ್ಕಲ್ ನಲ್ಲಿ ಶ್ರೇಯಸ್ ಕ್ಲಿನಿಕ್ ನಡೆಸುತ್ತಿದ್ದಾರೆ. ಮೃತ ಮೋಹನ್ ಮೂರ್ತಿಗೆ ಪತ್ನಿ ಹಾಗೂ 12 ವರ್ಷದ ಹೆಣ್ಣು ಮಗು, 2 ವರ್ಷದ ಗಂಡು ಮಗುವಿದೆ.

Last Updated : Jul 12, 2021, 12:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.