ETV Bharat / city

ಶಿವಮೊಗ್ಗದ ಆರಾಧನಾ ಸಮಿತಿ ಅಧ್ಯಕ್ಷರಾಗಿ ಮಧುಸೂದನ್ ಅಧಿಕಾರ ಸ್ವೀಕಾರ - ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿಯ ಅಧ್ಯಕ್ಷರಾಗಿ ಬಿಜೆಪಿಯ ಹಿರಿಯ ಕಾರ್ಯಕರ್ತ ಬಿ.ಆರ್. ಮಧುಸೂದನ್ ಅಧಿಕಾರ ಸ್ವೀಕರಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಶುಭ ಕೋರಿದರು.

ಶಿವಮೊಗ್ಗದ ಆರಾಧನಾ ಸಮಿತಿ ಅಧ್ಯಕ್ಷರಾಗಿ ಮಧುಸೂಧನ್ ಅಧಿಕಾರ ಸ್ವೀಕಾರ
author img

By

Published : Aug 31, 2020, 6:43 PM IST

ಶಿವಮೊಗ್ಗ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿಯ ಅಧ್ಯಕ್ಷರಾಗಿ ಬಿಜೆಪಿಯ ಹಿರಿಯ ಕಾರ್ಯಕರ್ತ ಬಿ.ಆರ್. ಮಧುಸೂದನ್ ಅಧಿಕಾರ ಸ್ವೀಕರಿಸಿದರು.

ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ಸರಳ‌ ಕಾರ್ಯಕ್ರಮದಲ್ಲಿ ಮಧುಸೂದನ್ ಆರಾಧನಾ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು. ಈ ವೇಳೆ ಜಿಲ್ಲಾ‌ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪನವರು ಪುಷ್ಪಗುಚ್ಚ ನೀಡಿ, ಅಭಿನಂದನೆ ಸಲ್ಲಿಸಿದರು.‌ ಈ ಆರಾಧನಾ ಸಮಿತಿಯು ದೇವಾಲಯಗಳ‌ ಅಭಿವೃದ್ದಿ, ಜೀರ್ಣೋದ್ಧಾರ, ದೇವಾಲಯ ಸಮಿತಿ ರಚನೆ ಸೇರಿದಂತೆ ಇತರೆ ಕಾರ್ಯಗಳನ್ನು ನಿರ್ವಹಿಸುತ್ತದೆ.

ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ತಕ್ಕ ವ್ಯಕ್ತಿಗೆ ತಕ್ಕನಾದ ಹುದ್ದೆ ಲಭ್ಯವಾಗಿದೆ ಎಂದು ಮಧುಸೂದನ್ ಅವರಿಗೆ ಶುಭಾಶಯ ಕೋರಿದರು. ಜೊತೆಗೆ ಸಮಿತಿಯ ಮೂಲಕ ದೇವಾಲಯಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು‌ ಕರೆ ನೀಡಿದರು.‌

ಬಂಗಾರಪ್ಪನವರ ಕಾಲದಲ್ಲಿ ಪ್ರಾರಂಭವಾದ ಆರಾಧನಾ ಸಮಿತಿ: ದಿವಂಗತ ಎಸ್. ಬಂಗಾರಪ್ಪನವರು ಸಿಎಂ ಆಗಿದ್ದಾಗ ಆರಾಧನಾ ಸಮಿತಿಯನ್ನು ಜಾರಿಗೆ ತಂದಿದ್ದರು.‌ ಇದು ಮುಜರಾಯಿ ಇಲಾಖೆ ಜೊತೆ-ಜೊತೆಯಾಗಿ ಕಾರ್ಯನಿರ್ವಹಿಸುವ ಸಮಿತಿಯಾಗಿದೆ. ಇದರ ಅಧ್ಯಕ್ಷರನ್ನಾಗಿ ನೇಮಿಸುವ ಅಧಿಕಾರ ಆಯಾ ಕ್ಷೇತ್ರದ ಶಾಸಕರುಗಳಿಗೆ ಮಾತ್ರ ಇರುತ್ತದೆ. ಈ ಸಮಿತಿಯಲ್ಲಿ ಸದಸ್ಯ ಕಾರ್ಯದರ್ಶಿಗಳಾಗಿ ತಹಶೀಲ್ದಾರ್ ಹಾಗೂ ಇವರ ಜೊತೆಗೆ ಲೋಕೊಪಯೋಗಿ ಇಲಾಖೆಯ ಇಂಜಿನಿಯರ್ ಒಬ್ಬರು ಇರುತ್ತಾರೆ. ಈ ಸಮಿತಿಯು ದೇವಾಲಗಳಿಗೆ ಭೇಟಿ‌ ನೀಡಿ, ಅಲ್ಲಿನ ಸಮಸ್ಯೆಯನ್ನು ರಾಜ್ಯ ಸರ್ಕಾರದ ಮುಂದೆ ಇಡುವುದು ಸಮಿತಿಯ ಕೆಲಸವಾಗಿದೆ.

ಶಿವಮೊಗ್ಗ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿಯ ಅಧ್ಯಕ್ಷರಾಗಿ ಬಿಜೆಪಿಯ ಹಿರಿಯ ಕಾರ್ಯಕರ್ತ ಬಿ.ಆರ್. ಮಧುಸೂದನ್ ಅಧಿಕಾರ ಸ್ವೀಕರಿಸಿದರು.

ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ಸರಳ‌ ಕಾರ್ಯಕ್ರಮದಲ್ಲಿ ಮಧುಸೂದನ್ ಆರಾಧನಾ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು. ಈ ವೇಳೆ ಜಿಲ್ಲಾ‌ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪನವರು ಪುಷ್ಪಗುಚ್ಚ ನೀಡಿ, ಅಭಿನಂದನೆ ಸಲ್ಲಿಸಿದರು.‌ ಈ ಆರಾಧನಾ ಸಮಿತಿಯು ದೇವಾಲಯಗಳ‌ ಅಭಿವೃದ್ದಿ, ಜೀರ್ಣೋದ್ಧಾರ, ದೇವಾಲಯ ಸಮಿತಿ ರಚನೆ ಸೇರಿದಂತೆ ಇತರೆ ಕಾರ್ಯಗಳನ್ನು ನಿರ್ವಹಿಸುತ್ತದೆ.

ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ತಕ್ಕ ವ್ಯಕ್ತಿಗೆ ತಕ್ಕನಾದ ಹುದ್ದೆ ಲಭ್ಯವಾಗಿದೆ ಎಂದು ಮಧುಸೂದನ್ ಅವರಿಗೆ ಶುಭಾಶಯ ಕೋರಿದರು. ಜೊತೆಗೆ ಸಮಿತಿಯ ಮೂಲಕ ದೇವಾಲಯಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು‌ ಕರೆ ನೀಡಿದರು.‌

ಬಂಗಾರಪ್ಪನವರ ಕಾಲದಲ್ಲಿ ಪ್ರಾರಂಭವಾದ ಆರಾಧನಾ ಸಮಿತಿ: ದಿವಂಗತ ಎಸ್. ಬಂಗಾರಪ್ಪನವರು ಸಿಎಂ ಆಗಿದ್ದಾಗ ಆರಾಧನಾ ಸಮಿತಿಯನ್ನು ಜಾರಿಗೆ ತಂದಿದ್ದರು.‌ ಇದು ಮುಜರಾಯಿ ಇಲಾಖೆ ಜೊತೆ-ಜೊತೆಯಾಗಿ ಕಾರ್ಯನಿರ್ವಹಿಸುವ ಸಮಿತಿಯಾಗಿದೆ. ಇದರ ಅಧ್ಯಕ್ಷರನ್ನಾಗಿ ನೇಮಿಸುವ ಅಧಿಕಾರ ಆಯಾ ಕ್ಷೇತ್ರದ ಶಾಸಕರುಗಳಿಗೆ ಮಾತ್ರ ಇರುತ್ತದೆ. ಈ ಸಮಿತಿಯಲ್ಲಿ ಸದಸ್ಯ ಕಾರ್ಯದರ್ಶಿಗಳಾಗಿ ತಹಶೀಲ್ದಾರ್ ಹಾಗೂ ಇವರ ಜೊತೆಗೆ ಲೋಕೊಪಯೋಗಿ ಇಲಾಖೆಯ ಇಂಜಿನಿಯರ್ ಒಬ್ಬರು ಇರುತ್ತಾರೆ. ಈ ಸಮಿತಿಯು ದೇವಾಲಗಳಿಗೆ ಭೇಟಿ‌ ನೀಡಿ, ಅಲ್ಲಿನ ಸಮಸ್ಯೆಯನ್ನು ರಾಜ್ಯ ಸರ್ಕಾರದ ಮುಂದೆ ಇಡುವುದು ಸಮಿತಿಯ ಕೆಲಸವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.