ETV Bharat / city

ಎಐಸಿಸಿಗೆ ಇನ್ನೂ ಖಾಯಂ ಅಧ್ಯಕ್ಷರನ್ನು ನೇಮಕ ಮಾಡಲು ಆಗಿಲ್ಲ : ಕೆ ಎಸ್ ಈಶ್ವರಪ್ಪ ವ್ಯಂಗ್ಯ

ಬಿಜೆಪಿ ತನ್ನ ಬೂತ್ ಅಧ್ಯಕ್ಷರಿಗೆ ರಾಜ್ಯ ಘಟಕದಿಂದಲೇ ನಾಮಫಲಕ ನೀಡುತ್ತಿದೆ. ಪ್ರಪಂಚದಲ್ಲಿಯೇ ಯಾವ ಪಕ್ಷವೂ ಮಾಡದ ಕಾರ್ಯವನ್ನು ಮಾಡುತ್ತಿದ್ದೇವೆ..

author img

By

Published : Aug 21, 2021, 4:33 PM IST

ks eshwarappa criticize as congress still not appoint a president to aicc
ನಗರ ಘಟಕದ ಬೂತ್ ಅಧ್ಯಕ್ಷರಿಗೆ ನಾಮಫಲಕ ನೀಡುವ ಕಾರ್ಯಕ್ರಮ

ಶಿವಮೊಗ್ಗ : ಎಐಸಿಸಿಗೆ ಇನ್ನೂ ಖಾಯಂ ಅಧ್ಯಕ್ಷರನ್ನು ನೇಮಕ ಮಾಡಲು ಕಾಂಗ್ರೆಸ್​ಗೆ ಆಗಿಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ವ್ಯಂಗ್ಯವಾಗಿ ಹೇಳಿದ್ದಾರೆ.

ನಗರ ಘಟಕದ ಬೂತ್ ಅಧ್ಯಕ್ಷರಿಗೆ ನಾಮಫಲಕ ನೀಡುವ ಕಾರ್ಯಕ್ರಮ

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಗರ ಘಟಕದ ಬೂತ್ ಅಧ್ಯಕ್ಷರಿಗೆ ನಾಮಫಲಕ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಎಐಸಿಸಿಗೆ ಇನ್ನೂ ಖಾಯಂ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಆಗದೇ, ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ. ಈ ವೇಳೆಯಲ್ಲಿ ಬಿಜೆಪಿ ತನ್ನ ಬೂತ್ ಅಧ್ಯಕ್ಷರಿಗೆ ರಾಜ್ಯ ಘಟಕದಿಂದಲೇ ನಾಮಫಲಕ ನೀಡುತ್ತಿದೆ. ಪ್ರಪಂಚದಲ್ಲಿಯೇ ಯಾವ ಪಕ್ಷವೂ ಮಾಡದ ಕಾರ್ಯವನ್ನು ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ: 'ನನ್ನಂತವನು ಬಂದ್ರೂ ಬಗ್ಗಲ್ಲ ಅಂದ್ರೇ, ಮತ್ಯಾರೀಗೆ ಬಂಗ್ತೀರಾ ಹೇಳ್ರೋ ಮಾರಾಯ..'

ಪಕ್ಷದ ಬೂತ್ ಅಧ್ಯಕ್ಷ ತನ್ನ ವಾರ್ಡ್​​ನ ಸಮಸ್ಯೆಯನ್ನು ತಾನೇ ಪರಿಹರಿಸಬೇಕು. ಬೂತ್ ಅಧ್ಯಕ್ಷರ ಬಳಿ ಹೋದ್ರೆ ತಮ್ಮ ಕೆಲಸವಾಗುತ್ತದೆ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕಿದೆ. ವಾರ್ಡ್​​ನ ನಾಗರಿಕರು ತಮ್ಮ ಕೆಲಸಗಳಿಗೆ ಬೇರೆಯವರ ಬಳಿ ಹೋಗುವುದನ್ನು ತಪ್ಪಿಸಬೇಕಿದೆ.

ಹಿಂದೆ ನಮ್ಮ ಮೋರ್ಚಾಗಳಿಗೆ ಅಧ್ಯಕ್ಷರುಗಳು ಇರುತ್ತಿರಲಿಲ್ಲ. ಹಿಂದೆ ನಾನು ಯುವ ಮೂರ್ಚಾದ ರಾಜ್ಯಾಧ್ಯಕ್ಷರಾದಾಗ ಪ್ರತಿ ಬೂತ್​ಗೆ ಕನಿಷ್ಟ 10 ಕಾರ್ಯಕರ್ತರನ್ನು ನೇಮಕ ಮಾಡಬೇಕು ಅಂತಾ ಹೇಳಿದ್ದೆ, ಅದು ಈಗ ಸಾಧ್ಯವಾಗುತ್ತಿದೆ ಎಂದರು.

ಶಿವಮೊಗ್ಗ : ಎಐಸಿಸಿಗೆ ಇನ್ನೂ ಖಾಯಂ ಅಧ್ಯಕ್ಷರನ್ನು ನೇಮಕ ಮಾಡಲು ಕಾಂಗ್ರೆಸ್​ಗೆ ಆಗಿಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ವ್ಯಂಗ್ಯವಾಗಿ ಹೇಳಿದ್ದಾರೆ.

ನಗರ ಘಟಕದ ಬೂತ್ ಅಧ್ಯಕ್ಷರಿಗೆ ನಾಮಫಲಕ ನೀಡುವ ಕಾರ್ಯಕ್ರಮ

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಗರ ಘಟಕದ ಬೂತ್ ಅಧ್ಯಕ್ಷರಿಗೆ ನಾಮಫಲಕ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಎಐಸಿಸಿಗೆ ಇನ್ನೂ ಖಾಯಂ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಆಗದೇ, ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ. ಈ ವೇಳೆಯಲ್ಲಿ ಬಿಜೆಪಿ ತನ್ನ ಬೂತ್ ಅಧ್ಯಕ್ಷರಿಗೆ ರಾಜ್ಯ ಘಟಕದಿಂದಲೇ ನಾಮಫಲಕ ನೀಡುತ್ತಿದೆ. ಪ್ರಪಂಚದಲ್ಲಿಯೇ ಯಾವ ಪಕ್ಷವೂ ಮಾಡದ ಕಾರ್ಯವನ್ನು ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ: 'ನನ್ನಂತವನು ಬಂದ್ರೂ ಬಗ್ಗಲ್ಲ ಅಂದ್ರೇ, ಮತ್ಯಾರೀಗೆ ಬಂಗ್ತೀರಾ ಹೇಳ್ರೋ ಮಾರಾಯ..'

ಪಕ್ಷದ ಬೂತ್ ಅಧ್ಯಕ್ಷ ತನ್ನ ವಾರ್ಡ್​​ನ ಸಮಸ್ಯೆಯನ್ನು ತಾನೇ ಪರಿಹರಿಸಬೇಕು. ಬೂತ್ ಅಧ್ಯಕ್ಷರ ಬಳಿ ಹೋದ್ರೆ ತಮ್ಮ ಕೆಲಸವಾಗುತ್ತದೆ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕಿದೆ. ವಾರ್ಡ್​​ನ ನಾಗರಿಕರು ತಮ್ಮ ಕೆಲಸಗಳಿಗೆ ಬೇರೆಯವರ ಬಳಿ ಹೋಗುವುದನ್ನು ತಪ್ಪಿಸಬೇಕಿದೆ.

ಹಿಂದೆ ನಮ್ಮ ಮೋರ್ಚಾಗಳಿಗೆ ಅಧ್ಯಕ್ಷರುಗಳು ಇರುತ್ತಿರಲಿಲ್ಲ. ಹಿಂದೆ ನಾನು ಯುವ ಮೂರ್ಚಾದ ರಾಜ್ಯಾಧ್ಯಕ್ಷರಾದಾಗ ಪ್ರತಿ ಬೂತ್​ಗೆ ಕನಿಷ್ಟ 10 ಕಾರ್ಯಕರ್ತರನ್ನು ನೇಮಕ ಮಾಡಬೇಕು ಅಂತಾ ಹೇಳಿದ್ದೆ, ಅದು ಈಗ ಸಾಧ್ಯವಾಗುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.