ETV Bharat / city

ಅವತ್ತು ಕರ್ನಾಟಕ ಟು ಮುಂಬೈ, ಇವತ್ತು ಮುಂಬೈ ಟು ಗುವಾಹಟಿ: ಹೆಚ್​ಡಿಕೆ ಕಿಡಿ

author img

By

Published : Jun 26, 2022, 6:29 PM IST

ಎಲ್ಲಾ ರಾಜ್ಯಗಳಲ್ಲೂ ಇವರು ಈ ರೀತಿ ಮಾಡಿದರೆ ಚುನಾವಣೆ ಮಾಡುವ ಅಗತ್ಯವೇ ಇಲ್ಲ. ಜನರೇ ಪ್ರಜಾಪ್ರಭುತ್ವವನ್ನು ಉಳಿಸಬೇಕು. ಕಾಂಗ್ರೆಸ್​ ಮುಕ್ತ ಭಾರತ ಆಯ್ತು, ಇನ್ನು ಪ್ರಾದೇಶಿಕ ಪಕ್ಷ ಮುಕ್ತವಾಗಿಸುವಾ ಪ್ರಯತ್ನವಾ ಎಂದು ಹೆಚ್.ಡಿ. ಕುಮಾರಸ್ವಾಮಿ ಶಿವಮೊಗ್ಗದಲ್ಲಿ ಕೇಳಿದರು.

H D Kumaraswamy reaction about Maharashtra political issue in Shivamogga
ಹೆಚ್​.ಡಿ. ಕುಮಾರಸ್ವಾಮಿ

ಶಿವಮೊಗ್ಗ: ಅವತ್ತು ಕರ್ನಾಟಕ ಟು ಮುಂಬೈ. ಇವತ್ತು ಮುಂಬೈ ಟು ಗುವಾಹಟಿ. ಕರ್ನಾಟಕದಲ್ಲಿ ಎಂಟು ತಿಂಗಳ ಪ್ರಯತ್ನದಲ್ಲಿ ಬಿಜೆಪಿ ಆಪರೇಷನ್​ ಮಾಡಿತ್ತು. ಮಹಾರಾಷ್ಟ್ರದಲ್ಲಿ ಒಂದೂವರೆ ವರ್ಷ ಪ್ರಯತ್ನ ಮಾಡಿದ್ದಾರೆ. ಈಗ ಅಲ್ಲಿ ರಾಜಿಕೀಯ ಮಾಡುತ್ತಿದ್ದಾರೆ. ಕರ್ನಾಟಕದವರು ಗಲಭೆ ಮಾಡಲಿಲ್ಲ. ಆದರೆ ಅಲ್ಲಿಯ ಪರಿಸ್ಥಿತಿ ಬೇರೆ ಇದೆ. ಇದನ್ನು ಹೇಗೆ ಬಿಜೆಪಿ ನಿರ್ವಹಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಲೇವಡಿ ಮಾಡಿದರು.

ನಗರದಲ್ಲಿಂದು ಕರ್ನಾಟಕದಲ್ಲಿ 2008ರಲ್ಲಿ ಈ ಆಪರೇಷನ್​ ಕಮಲ ಆರಂಭಿಸಿದರು. ಮತ್ತೆ 2014ರಲ್ಲಿ ಆಪರೇಷನ್​ ಕಮಲ ಮಾಡಿ ಬಹಳಾ ರಾಜ್ಯಗಳಲ್ಲಿ ಅಕ್ರಮವಾಗಿ ಅಧಿಕಾರಕ್ಕೆ ಬಂದರು. ಈಗ ಎಲ್ಲಾ ಕಡೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜಸ್ಥಾನ ಅಥವಾ ಜಾರ್ಖಂಡ್ ಇರಬಹುದು ಎಂದರು.

ಅವತ್ತು ಕರ್ನಾಟಕ ಟು ಮುಂಬೈ, ಇವತ್ತು ಮುಂಬೈ ಟು ಗುವಾಹಟಿ ಎಂದ ಹೆಚ್​ಡಿಕೆ

ಪ್ರಾದೇಶಿಕ ಪಕ್ಷಗಳನ್ನು ಮುಕ್ತಗೊಳಿಸಲು ಹೊರಟಿದ್ದಾರಾ?: ಕಾಂಗ್ರೆಸ್ ಮುಕ್ತ ಭಾರತ ಆಯ್ತು. ಇದೀಗ ಪ್ರಾದೇಶಿಕ ಪಕ್ಷಗಳನ್ನು ಮುಕ್ತಗೊಳಿಸಲು ಹೊರಟಿದ್ದಾರಾ?. ಪಶ್ಚಿಮ ಬಂಗಾಳದಲ್ಲಿ ಪ್ರಯತ್ನ ಮಾಡಿದರು. ಆದರೆ, ಹೋರಾಟ ಮಾಡಿ ಮಮತಾ ಬ್ಯಾನರ್ಜಿ ಉಳಿಸಿಕೊಂಡರು. ಅಲ್ಲಿ ಸಹ ಇಡಿ, ಬೇರೆ ಬೇರೆ ಸಂಸ್ಥೆ ಬಳಸಿಕೊಂಡು ನೋಟಿಸ್ ಕೊಟ್ಟರು. ಆತಂಕ ಸೃಷ್ಟಿ ಮಾಡಿದರು. ಅಂತಿಮವಾಗಿ ಎಲ್ಲಿಗೆ ತೆಗೆದುಕೊಂಡು ಹೋಗ್ತಾರೆ ನೋಡೋಣ. ಪ್ರಜಾಪ್ರಭುತ್ವ ಉಳಿಸಲು ಅಂತಿಮವಾಗಿ ಜನರಲ್ಲಿ ಪರಿವರ್ತನೆಯಾಗುತ್ತಾ ನೋಡೋಣ ಎಂದರು‌.

ಆಪರೇಷನ್​ಗೆ ರಾಜ್ಯ ನಾಯಕರ ಅಗತ್ಯ ಇಲ್ಲ: ಮಹಾರಾಷ್ಟ್ರ ಪತನದಲ್ಲಿ ರಾಜ್ಯ ನಾಯಕರ ಪಾತ್ರದ ಅಗತ್ಯ ಇಲ್ಲ. ಬಿಜೆಪಿ ಹೈಕಮಾಂಡ್​ನಲ್ಲಿ ಆಪರೇಷನ್​ ಮಾಡಲು ಬೇಕಾದಷ್ಟು ಜನ ಇದ್ದಾರೆ. ನಮ್ಮ ರಾಜ್ಯದಲ್ಲಿ ಅಷ್ಟು ದೊಡ್ಡ ಮುಖಂಡರಿದ್ದಾರೆ ಎಂದು ಅನಿಸಲ್ಲ. ಅಮಿತ್ ಶಾಗಿಂತ ದೊಡ್ಡ ಮುಖಂಡರು ಆಪರೇಷನ್ ಮಾಡಲು ಬೇಡ ಎಂದು ಟೀಕಿಸಿದರು.

ಸ್ಪಷ್ಟ ಬಹುಮತ ಇದ್ದರೂ ಸರ್ಕಾರ ಉಳಿಯುವುದು ಅನುಮಾನ: ಸ್ಪಷ್ಟ ಬಹುಮತ ಇದ್ದರೂ ಸರ್ಕಾರ ಉಳಿಯುತ್ತಾ -ಇಲ್ವಾ ಎಂಬ ಅನುಮಾನ ಪ್ರಾರಂಭವಾಗಿದೆ. ಹೀಗಾಗಿ ಚುನಾವಣೆಯನ್ನೇ ನಡೆಸೋದು ಬೇಡ. ನೀವ್ಯಾರು ಚುನಾವಣೆಗೆ ನಿಲ್ಲಬೇಡಿ ನಮ್ಮ ಅಜೆಂಡಾ ಹೀಗಿದೆ ಎಂದು ರೆಸಲ್ಯೂಶನ್ ಮಾಡಿಬಿಡಿ. ದೇಶದಲ್ಲಿ ನೋ ಎಲೆಕ್ಷನ್ ಎಂದು ತೀರ್ಮಾನವಾಗಲಿ, ಎಲ್ಲವೂ ಮುಗಿದು ಹೋಗುತ್ತೆ ಎಂದು ಟೀಕಿಸಿದರು.

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ಮಾಲೀಕತ್ವದ ಫ್ಯಾಕ್ಟರಿಯಲ್ಲಿ 819 ಕೋಟಿ ಮೊತ್ತದ ಅಕ್ರಮ ಆರೋಪ.. ತನಿಖೆಗೆ ಕಾಂಗ್ರೆಸ್​ ಆಗ್ರಹ

ಶಿವಮೊಗ್ಗ: ಅವತ್ತು ಕರ್ನಾಟಕ ಟು ಮುಂಬೈ. ಇವತ್ತು ಮುಂಬೈ ಟು ಗುವಾಹಟಿ. ಕರ್ನಾಟಕದಲ್ಲಿ ಎಂಟು ತಿಂಗಳ ಪ್ರಯತ್ನದಲ್ಲಿ ಬಿಜೆಪಿ ಆಪರೇಷನ್​ ಮಾಡಿತ್ತು. ಮಹಾರಾಷ್ಟ್ರದಲ್ಲಿ ಒಂದೂವರೆ ವರ್ಷ ಪ್ರಯತ್ನ ಮಾಡಿದ್ದಾರೆ. ಈಗ ಅಲ್ಲಿ ರಾಜಿಕೀಯ ಮಾಡುತ್ತಿದ್ದಾರೆ. ಕರ್ನಾಟಕದವರು ಗಲಭೆ ಮಾಡಲಿಲ್ಲ. ಆದರೆ ಅಲ್ಲಿಯ ಪರಿಸ್ಥಿತಿ ಬೇರೆ ಇದೆ. ಇದನ್ನು ಹೇಗೆ ಬಿಜೆಪಿ ನಿರ್ವಹಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಲೇವಡಿ ಮಾಡಿದರು.

ನಗರದಲ್ಲಿಂದು ಕರ್ನಾಟಕದಲ್ಲಿ 2008ರಲ್ಲಿ ಈ ಆಪರೇಷನ್​ ಕಮಲ ಆರಂಭಿಸಿದರು. ಮತ್ತೆ 2014ರಲ್ಲಿ ಆಪರೇಷನ್​ ಕಮಲ ಮಾಡಿ ಬಹಳಾ ರಾಜ್ಯಗಳಲ್ಲಿ ಅಕ್ರಮವಾಗಿ ಅಧಿಕಾರಕ್ಕೆ ಬಂದರು. ಈಗ ಎಲ್ಲಾ ಕಡೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜಸ್ಥಾನ ಅಥವಾ ಜಾರ್ಖಂಡ್ ಇರಬಹುದು ಎಂದರು.

ಅವತ್ತು ಕರ್ನಾಟಕ ಟು ಮುಂಬೈ, ಇವತ್ತು ಮುಂಬೈ ಟು ಗುವಾಹಟಿ ಎಂದ ಹೆಚ್​ಡಿಕೆ

ಪ್ರಾದೇಶಿಕ ಪಕ್ಷಗಳನ್ನು ಮುಕ್ತಗೊಳಿಸಲು ಹೊರಟಿದ್ದಾರಾ?: ಕಾಂಗ್ರೆಸ್ ಮುಕ್ತ ಭಾರತ ಆಯ್ತು. ಇದೀಗ ಪ್ರಾದೇಶಿಕ ಪಕ್ಷಗಳನ್ನು ಮುಕ್ತಗೊಳಿಸಲು ಹೊರಟಿದ್ದಾರಾ?. ಪಶ್ಚಿಮ ಬಂಗಾಳದಲ್ಲಿ ಪ್ರಯತ್ನ ಮಾಡಿದರು. ಆದರೆ, ಹೋರಾಟ ಮಾಡಿ ಮಮತಾ ಬ್ಯಾನರ್ಜಿ ಉಳಿಸಿಕೊಂಡರು. ಅಲ್ಲಿ ಸಹ ಇಡಿ, ಬೇರೆ ಬೇರೆ ಸಂಸ್ಥೆ ಬಳಸಿಕೊಂಡು ನೋಟಿಸ್ ಕೊಟ್ಟರು. ಆತಂಕ ಸೃಷ್ಟಿ ಮಾಡಿದರು. ಅಂತಿಮವಾಗಿ ಎಲ್ಲಿಗೆ ತೆಗೆದುಕೊಂಡು ಹೋಗ್ತಾರೆ ನೋಡೋಣ. ಪ್ರಜಾಪ್ರಭುತ್ವ ಉಳಿಸಲು ಅಂತಿಮವಾಗಿ ಜನರಲ್ಲಿ ಪರಿವರ್ತನೆಯಾಗುತ್ತಾ ನೋಡೋಣ ಎಂದರು‌.

ಆಪರೇಷನ್​ಗೆ ರಾಜ್ಯ ನಾಯಕರ ಅಗತ್ಯ ಇಲ್ಲ: ಮಹಾರಾಷ್ಟ್ರ ಪತನದಲ್ಲಿ ರಾಜ್ಯ ನಾಯಕರ ಪಾತ್ರದ ಅಗತ್ಯ ಇಲ್ಲ. ಬಿಜೆಪಿ ಹೈಕಮಾಂಡ್​ನಲ್ಲಿ ಆಪರೇಷನ್​ ಮಾಡಲು ಬೇಕಾದಷ್ಟು ಜನ ಇದ್ದಾರೆ. ನಮ್ಮ ರಾಜ್ಯದಲ್ಲಿ ಅಷ್ಟು ದೊಡ್ಡ ಮುಖಂಡರಿದ್ದಾರೆ ಎಂದು ಅನಿಸಲ್ಲ. ಅಮಿತ್ ಶಾಗಿಂತ ದೊಡ್ಡ ಮುಖಂಡರು ಆಪರೇಷನ್ ಮಾಡಲು ಬೇಡ ಎಂದು ಟೀಕಿಸಿದರು.

ಸ್ಪಷ್ಟ ಬಹುಮತ ಇದ್ದರೂ ಸರ್ಕಾರ ಉಳಿಯುವುದು ಅನುಮಾನ: ಸ್ಪಷ್ಟ ಬಹುಮತ ಇದ್ದರೂ ಸರ್ಕಾರ ಉಳಿಯುತ್ತಾ -ಇಲ್ವಾ ಎಂಬ ಅನುಮಾನ ಪ್ರಾರಂಭವಾಗಿದೆ. ಹೀಗಾಗಿ ಚುನಾವಣೆಯನ್ನೇ ನಡೆಸೋದು ಬೇಡ. ನೀವ್ಯಾರು ಚುನಾವಣೆಗೆ ನಿಲ್ಲಬೇಡಿ ನಮ್ಮ ಅಜೆಂಡಾ ಹೀಗಿದೆ ಎಂದು ರೆಸಲ್ಯೂಶನ್ ಮಾಡಿಬಿಡಿ. ದೇಶದಲ್ಲಿ ನೋ ಎಲೆಕ್ಷನ್ ಎಂದು ತೀರ್ಮಾನವಾಗಲಿ, ಎಲ್ಲವೂ ಮುಗಿದು ಹೋಗುತ್ತೆ ಎಂದು ಟೀಕಿಸಿದರು.

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ಮಾಲೀಕತ್ವದ ಫ್ಯಾಕ್ಟರಿಯಲ್ಲಿ 819 ಕೋಟಿ ಮೊತ್ತದ ಅಕ್ರಮ ಆರೋಪ.. ತನಿಖೆಗೆ ಕಾಂಗ್ರೆಸ್​ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.