ETV Bharat / city

ಶಿವಮೊಗ್ಗ: ದಸರಾ ಆಚರಣೆಗೆಂದು ಕರೆದ ಸಭೆಯಲ್ಲಿ ಗದ್ದಲ

author img

By

Published : Sep 7, 2019, 5:15 PM IST

ನಾಡ ಹಬ್ಬದ ದಸರಾ ಆಚರಣೆಗೆಂದು ಕರೆದ ಸಭೆಯಲ್ಲಿ‌ ನೆರೆ ಪರಿಹಾರ ಸರಿಯಾಗಿ ವಿತರಣೆ ಆಗಿಲ್ಲ ಎಂದು ಆಡಳಿತ ಪಕ್ಷದ ಮೇಲೆ ವಿಪಕ್ಷಗಳು ಮುಗಿಬಿದ್ದ ಘಟನೆ ಶಿವಮೊಗ್ಗದ ಮಹಾನಗರ ಪಾಲಿಕೆಯಲ್ಲಿ ನಡೆಯಿತು.

ನಾಡ ಹಬ್ಬ ದಸರಾ ಆಚರಣೆಗೆಂದು ಕರೆದ ಸಭೆಯಲ್ಲಿ ಗದ್ದಲ..ದಸರಾ ಆಚರಣೆ ಚರ್ಚೆ ಮುಂದೂಡಿದ ಮೇಯರ್​


ಶಿವಮೊಗ್ಗ: ನಾಡ ಹಬ್ಬದ ದಸರಾ ಆಚರಣೆಗೆಂದು ಕರೆದ ಸಭೆಯಲ್ಲಿ‌ ನೆರೆ ಪರಿಹಾರ ಸರಿಯಾಗಿ ವಿತರಣೆ ಆಗಿಲ್ಲ ಎಂದು ಆಡಳಿತ ಪಕ್ಷದ ಮೇಲೆ ವಿಪಕ್ಷಗಳು ಮುಗಿಬಿದ್ದ ಘಟನೆ ಶಿವಮೊಗ್ಗದ ಮಹಾನಗರ ಪಾಲಿಕೆಯಲ್ಲಿ ನಡೆಯಿತು.

ನಾಡ ಹಬ್ಬ ದಸರಾ ಆಚರಣೆಗೆಂದು ಕರೆದ ಸಭೆಯಲ್ಲಿ ಗದ್ದಲ: ದಸರಾ ಆಚರಣೆ ಚರ್ಚೆ ಮುಂದೂಡಿದ ಮೇಯರ್​

ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ಸೌಧದಲ್ಲಿ ಮಹಾನಗರ ಪಾಲಿಕೆ‌ ಸದಸ್ಯರಿಗೆ ದಸರಾ ಆಚರಣೆಯ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಭೆ ನಿಗದಿತ ಸಮಯಕ್ಕೆ ಪ್ರಾರಂಭವಾಯ್ತು. ಸಭೆಯ ಪ್ರಾರಂಭದಲ್ಲಿ ಕಾಂಗ್ರೆಸ್ ಸದಸ್ಯ ಯೋಗೇಶ್​ ಅವರು ನೆರೆ ಪರಿಹಾರ ವಿತರಣೆಯಲ್ಲಿ ಪಾಲಿಕೆ ಎಡವಿದೆ. ಪರಿಹಾರ ಸರಿಯಾಗಿ ನೀಡಿಲ್ಲ ಎಂದು ಆರೋಪಿಸಿದರು. ಇದರಿಂದ ಬಿಜೆಪಿ ಸದಸ್ಯರು ಕೆರಳಿ, ಎಲ್ಲಾ ಕಡೆ ಸರಿಯಾಗಿಯೇ ಸರ್ವೆಯಾಗಿದೆ. ಇನ್ನೂ ಕೆಲವು ಕಡೆ ಪರಿಹಾರ ವಿತರಣೆಯಲ್ಲಿ ಪ್ರಗತಿ ಇದೆ. ಆದಷ್ಟು ವೇಗವಾಗಿ ಪರಿಹಾರ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ರು.

ವಿರೋಧ ಪಕ್ಷದವರು ಕೇಳುತ್ತಿದ್ದ ಪ್ರಶ್ನೆಗೆ ಉಪ ಮೇಯರ್ ಚನ್ನಬಸಪ್ಪ ಉತ್ತರ ನೀಡುತ್ತಿದ್ದರು. ಇದಕ್ಕೆ ವಿರೋಧ ಪಕ್ಷದವರು, ಎಲ್ಲಾದಕ್ಕೂ ಉಪ ಮೇಯರ್ ಉತ್ತರ ನಿಡೋದಾದ್ರೆ ನೀವು ಯಾಕೆ ಇರಬೇಕು ಎಂದು ಉಳಿದವರಿಗೆ ಪ್ರಶ್ನಿಸಿದ್ರು. ಸಚಿವ‌ ಕೆ.ಎಸ್.ಈಶ್ವರಪ್ಪನವರ ವಾರ್ಡ್​ನಲ್ಲಿ ಇನ್ನೂರಕ್ಕೂ‌ ಹೆಚ್ಚು ಜನ ನಿರಾಶ್ರಿತರಿದ್ದಾರೆ. ಆದ್ರೆ, ಇದುವರೆಗೂ ಕೇವಲ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಪರಿಹಾರ ಲಭ್ಯವಾಗಿದೆ ಎಂದು ಕಾಂಗ್ರೆಸ್-ಜೆಡಿಎಸ್ ಸದಸ್ಯರು ಸಭೆಯ ಬಾವಿಗಿಳಿದು ತೀವ್ರ ಮಾತಿನ ಚಕಮಕಿ ನಡೆಸಿದರು. ನಂತರ ಉಪ ಮೇಯರ್ ಎಲ್ಲರ ಸಮಸ್ಯೆಯನ್ನು ಪರಿಹರಿಸಿ ಕೊಡುವ ಭರವಸೆ ನೀಡಿ, ಎಲ್ಲರನ್ನು ಅವರವರ ಸ್ಥಾನಕ್ಕೆ ಕಳುಹಿಸಿದರು.

ಸಭೆಯಲ್ಲಿ ಬಾರದ ದಸರಾ ವಿಚಾರ

ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ದಸರಾ ಆಚರಣೆ ಹೇಗೆ ಮಾಡಬೇಕು ಎಂಬ ಚರ್ಚೆ ನಡೆಯದೇ ನೆರೆ ಪರಿಹಾರದ ವಿತರಣೆ ಆಗದೆ ಇರುವ ಬಗ್ಗೆ ಚರ್ಚೆ ನಡೆದ‌ ಕಾರಣ ದಸರಾ ಆಚರಣೆ ಚರ್ಚೆಯನ್ನು‌ ಮುಂದಕ್ಕೆ ಹಾಕಲಾಯಿತು.‌ ಆಡಳಿತ ಪಕ್ಷದವರು, ವಿರೋಧ ಪಕ್ಷದವರ ಮೇಲೆ ಹಾಗೂ ವಿರೋಧ ಪಕ್ಷದವರು ಆಡಳಿತ ಪಕ್ಷಗಳ ಮೇಲೆ ಆರೋಪ ಪ್ರತ್ಯಾರೋಪ ಮಾಡುತ್ತಿದ್ದರು. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 960 ಮನೆಗಳು‌ ಪೂರ್ಣವಾಗಿ ಬಿದ್ದಿವೆ. 516 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಒಟ್ಟು 1476 ಮನೆಗಳಿಗೆ ಹಾನಿಗೊಳಗಾಗಿವೆ. 1476ಲ್ಲಿ ಈಗ 869 ಮನೆಗಳಿಗೆ ಪರಿಹಾರ ವಿತರಣೆಯಾಗಿದೆ. ಸಭೆಯಲ್ಲಿ ಮೇಯರ್​ ಲತಾ ಗಣೇಶ್​ ಹಾಗೂ ಇತರೆ ಸದಸ್ಯರು ಉಪಸ್ಥಿತರಿದ್ದರು.


ಶಿವಮೊಗ್ಗ: ನಾಡ ಹಬ್ಬದ ದಸರಾ ಆಚರಣೆಗೆಂದು ಕರೆದ ಸಭೆಯಲ್ಲಿ‌ ನೆರೆ ಪರಿಹಾರ ಸರಿಯಾಗಿ ವಿತರಣೆ ಆಗಿಲ್ಲ ಎಂದು ಆಡಳಿತ ಪಕ್ಷದ ಮೇಲೆ ವಿಪಕ್ಷಗಳು ಮುಗಿಬಿದ್ದ ಘಟನೆ ಶಿವಮೊಗ್ಗದ ಮಹಾನಗರ ಪಾಲಿಕೆಯಲ್ಲಿ ನಡೆಯಿತು.

ನಾಡ ಹಬ್ಬ ದಸರಾ ಆಚರಣೆಗೆಂದು ಕರೆದ ಸಭೆಯಲ್ಲಿ ಗದ್ದಲ: ದಸರಾ ಆಚರಣೆ ಚರ್ಚೆ ಮುಂದೂಡಿದ ಮೇಯರ್​

ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ಸೌಧದಲ್ಲಿ ಮಹಾನಗರ ಪಾಲಿಕೆ‌ ಸದಸ್ಯರಿಗೆ ದಸರಾ ಆಚರಣೆಯ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಭೆ ನಿಗದಿತ ಸಮಯಕ್ಕೆ ಪ್ರಾರಂಭವಾಯ್ತು. ಸಭೆಯ ಪ್ರಾರಂಭದಲ್ಲಿ ಕಾಂಗ್ರೆಸ್ ಸದಸ್ಯ ಯೋಗೇಶ್​ ಅವರು ನೆರೆ ಪರಿಹಾರ ವಿತರಣೆಯಲ್ಲಿ ಪಾಲಿಕೆ ಎಡವಿದೆ. ಪರಿಹಾರ ಸರಿಯಾಗಿ ನೀಡಿಲ್ಲ ಎಂದು ಆರೋಪಿಸಿದರು. ಇದರಿಂದ ಬಿಜೆಪಿ ಸದಸ್ಯರು ಕೆರಳಿ, ಎಲ್ಲಾ ಕಡೆ ಸರಿಯಾಗಿಯೇ ಸರ್ವೆಯಾಗಿದೆ. ಇನ್ನೂ ಕೆಲವು ಕಡೆ ಪರಿಹಾರ ವಿತರಣೆಯಲ್ಲಿ ಪ್ರಗತಿ ಇದೆ. ಆದಷ್ಟು ವೇಗವಾಗಿ ಪರಿಹಾರ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ರು.

ವಿರೋಧ ಪಕ್ಷದವರು ಕೇಳುತ್ತಿದ್ದ ಪ್ರಶ್ನೆಗೆ ಉಪ ಮೇಯರ್ ಚನ್ನಬಸಪ್ಪ ಉತ್ತರ ನೀಡುತ್ತಿದ್ದರು. ಇದಕ್ಕೆ ವಿರೋಧ ಪಕ್ಷದವರು, ಎಲ್ಲಾದಕ್ಕೂ ಉಪ ಮೇಯರ್ ಉತ್ತರ ನಿಡೋದಾದ್ರೆ ನೀವು ಯಾಕೆ ಇರಬೇಕು ಎಂದು ಉಳಿದವರಿಗೆ ಪ್ರಶ್ನಿಸಿದ್ರು. ಸಚಿವ‌ ಕೆ.ಎಸ್.ಈಶ್ವರಪ್ಪನವರ ವಾರ್ಡ್​ನಲ್ಲಿ ಇನ್ನೂರಕ್ಕೂ‌ ಹೆಚ್ಚು ಜನ ನಿರಾಶ್ರಿತರಿದ್ದಾರೆ. ಆದ್ರೆ, ಇದುವರೆಗೂ ಕೇವಲ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಪರಿಹಾರ ಲಭ್ಯವಾಗಿದೆ ಎಂದು ಕಾಂಗ್ರೆಸ್-ಜೆಡಿಎಸ್ ಸದಸ್ಯರು ಸಭೆಯ ಬಾವಿಗಿಳಿದು ತೀವ್ರ ಮಾತಿನ ಚಕಮಕಿ ನಡೆಸಿದರು. ನಂತರ ಉಪ ಮೇಯರ್ ಎಲ್ಲರ ಸಮಸ್ಯೆಯನ್ನು ಪರಿಹರಿಸಿ ಕೊಡುವ ಭರವಸೆ ನೀಡಿ, ಎಲ್ಲರನ್ನು ಅವರವರ ಸ್ಥಾನಕ್ಕೆ ಕಳುಹಿಸಿದರು.

ಸಭೆಯಲ್ಲಿ ಬಾರದ ದಸರಾ ವಿಚಾರ

ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ದಸರಾ ಆಚರಣೆ ಹೇಗೆ ಮಾಡಬೇಕು ಎಂಬ ಚರ್ಚೆ ನಡೆಯದೇ ನೆರೆ ಪರಿಹಾರದ ವಿತರಣೆ ಆಗದೆ ಇರುವ ಬಗ್ಗೆ ಚರ್ಚೆ ನಡೆದ‌ ಕಾರಣ ದಸರಾ ಆಚರಣೆ ಚರ್ಚೆಯನ್ನು‌ ಮುಂದಕ್ಕೆ ಹಾಕಲಾಯಿತು.‌ ಆಡಳಿತ ಪಕ್ಷದವರು, ವಿರೋಧ ಪಕ್ಷದವರ ಮೇಲೆ ಹಾಗೂ ವಿರೋಧ ಪಕ್ಷದವರು ಆಡಳಿತ ಪಕ್ಷಗಳ ಮೇಲೆ ಆರೋಪ ಪ್ರತ್ಯಾರೋಪ ಮಾಡುತ್ತಿದ್ದರು. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 960 ಮನೆಗಳು‌ ಪೂರ್ಣವಾಗಿ ಬಿದ್ದಿವೆ. 516 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಒಟ್ಟು 1476 ಮನೆಗಳಿಗೆ ಹಾನಿಗೊಳಗಾಗಿವೆ. 1476ಲ್ಲಿ ಈಗ 869 ಮನೆಗಳಿಗೆ ಪರಿಹಾರ ವಿತರಣೆಯಾಗಿದೆ. ಸಭೆಯಲ್ಲಿ ಮೇಯರ್​ ಲತಾ ಗಣೇಶ್​ ಹಾಗೂ ಇತರೆ ಸದಸ್ಯರು ಉಪಸ್ಥಿತರಿದ್ದರು.

Intro:ನಾಡ ಹಬ್ಬದ ದಸರಾ ಆಚರಣೆಗೆಂದು ಕರೆದ ಸಭೆಯಲ್ಲಿ‌ ನೆರೆ ಪರಿಹಾರ ಸರಿಯಾಗಿ ವಿತರಣೆ ಆಗಿಲ್ಲ ಎಂದು ಆಡಳಿತ ಪಕ್ಷದ ಮೇಲೆ ವಿಪಕ್ಷಗಳು ಮುಗಿಬಿದ್ದ ಘಟನೆ ಶಿವಮೊಗ್ಗದ ಮಹಾನಗರ ಪಾಲಿಕೆಯಲ್ಲಿ ನಡೆದಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ಸೌಧದಲ್ಲಿ ಮಹಾನಗರ ಪಾಲಿಕೆ‌ ಸದಸ್ಯರಿಗೆ ದಸರಾ ಆಚರಣೆಯ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಭೆ ನಿಗದಿತ ಸಮಯಕ್ಕೆ ಪ್ರಾರಂಭವಾಯ್ತು. ಸಭೆಯ ಪ್ರಾರಂಭದಲ್ಲಿ ಕಾಂಗ್ರೆಸ್ ಸದಸ್ಯ ಯೋಗೇಶ್ ರವರು ನೆರೆ ಪರಿಹಾರ ವಿತರಣೆಯಲ್ಲಿ ಪಾಲಿಕೆ ಎಡವಿದೆ. ಪರಿಹಾರ ಸರಿಯಾಗಿ ನೀಡಿಲ್ಲ ಎಂದು ಆರೋಪ ಮಾಡಿದರು. ಇದರಿಂದ ಬಿಜೆಪಿ ಸದಸ್ಯರು ಕೆರಳಿದರು. ಎಲ್ಲಾ ಕಡೆ ಸರಿಯಾಗಿಯೇ ಸರ್ವೆಯಾಗಿದೆ. ಇನ್ನೂ ಕೆಲವು ಕಡೆ ಪರಿಹಾರ ವಿತರಣೆಯಲ್ಲಿ ಪ್ರಗತಿ ಇದೆ. ಅದಷ್ಟು ವೇಗ ಪರಿಹಾರ ಕಾರ್ಯ ನಡೆಯುತ್ತಲಿದೆ ಎಂದು ಹೇಳಿದರು.


Body:ವಿರೋಧ ಪಕ್ಷದವರು ಕೇಳುತ್ತಿದ್ದ ಪ್ರಶ್ನೆಗೆ ಉಪಮೇಯರ್ ಚನ್ನಬಸಪ್ಪ ಉತ್ತರ ನೀಡುತ್ತಿದ್ದರು.ಇದಕ್ಕೆ ವಿರೋಧ ಪಕ್ಷದವರು ಕೆರಳಿದರು. ಎಲ್ಲಾದಕ್ಕೂ ಉಪ ಮೇಯರ್ ಉತ್ತರ ನಿಡೋದು ಆದ್ರೆ, ನೀವು ಯಾಕೆ ಇರಬೇಕು ಎಂದು ಪ್ರಶ್ನೆ ಮಾಡಿದರು. ನಂತ್ರ ಸಚಿವ‌ ಕೆ.ಎಸ್.ಈಶ್ವರಪ್ಪನವರ ವಾರ್ಡ್ ನಲ್ಲಿ ಇನ್ನೂರಕ್ಕೂ‌ ಹೆಚ್ಚು ಜನ ನಿರಾಶ್ರಿತರಿದ್ದಾರೆ. ಆದ್ರೆ ಇದುವರೆಗೂ ಕೇವಲ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಪರಿಹಾರ ಲಭ್ಯವಾಗಿದೆ ಎಂದು ಕಾಂಗ್ರೆಸ್-ಜೆಡಿಎಸ್ ಸದಸ್ಯರು ಸಭೆಯ ಬಾವಿಗಿಳಿದು ಮೇಯರ್, ಉಪಮೇಯರ್ ,ಕಮಿಷನರ್ ರವರ ಮುಂದೆ ಬಂದು ತೀವ್ರ ಮಾತಿನ ಚಕಮಕಿ ನಡೆಸಿದರು.ನಂತ್ರ ಉಪಮೇಯರ್ ರವರು ಎಲ್ಲಾರನ್ನು ಸಮಾಧಾನ ಮಾಡಿ ಅವರ ಸ್ಥಾನ ಕಳುಹಿಸಿದರು. ನಂತ್ರ‌ ಎಲ್ಲಾರ ಸಮಸ್ಯೆಯನ್ನು ಪರಿಹರಿಸಿ ಕೊಡುವ ಭರವಸೆ ನೋಡಿದ ಬಳಿಕೆ ಎಲ್ಲಾರು‌ ತಮ್ಮ‌‌ಸ್ವಾಸ್ಥಾನಗಳಿಗೆ ತೆರಳಿದರು.


Conclusion:ನಂತ್ರ ಆಡಳಿತ ಪಕ್ಷ ಬಿಜೆಪಿಯ ಸದಸ್ಯ ವಿಶ್ವಾಸ್ ರವರು ವಿರೋಧ ಪಕ್ಷದ ನಾಯಕ ರಮೇಶ್ ಹಗ್ಡೆ ರವರಿಗೆ ಕೈ ತೋರಿಸಿ ಏನೂ ಮಾತನಾಡಿದಕ್ಕೆ ಮತ್ತೆ ಮಾತಿನ‌ ಚಟಮಕಿ ನಡೆಯಿತು. ಈ ವೇಳೆ ಎಲ್ಲಾ ಪಕ್ಷದವರು ಸೇರಿ ಇಬ್ಬರನ್ನು ಸಮಾಧಾನ ಪಡಿಸಿದರು.ಇನ್ನೂ ಅಧಿಕಾರಿಗಳು‌ ಸರಿಯಾದ ಮಾಹಿತಿ ನೀಡುತ್ತಿಲ್ಲ, ತಮ್ಮನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳುವಂತೆ ಪಾಲಿಕೆಯ ಸದಸ್ಯರು ಒತ್ತಾಯ ಮಾಡಿದರು.

ಸಭೆಯಲ್ಲಿ ಬಾರದ ದಸರಾ ವಿಚಾರ-

ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ದಸರಾ ಆಚರಣೆ ಹೇಗೆ ಮಾಡಬೇಕು ಎಂಬ ಚರ್ಚೆ ನಡೆಯದೆ, ಸಭೆಯಲ್ಲಿ ನೆರೆ ಪರಿಹಾರದ ವಿತರಣೆ ಆಗದೆ ಇರುವ ಬಗ್ಗೆ ಚರ್ಚೆ ನಡೆದ‌ ಕಾರಣ ದಸರಾ ಆಚರಣೆ ಚರ್ಚೆಯನ್ನು‌ ಮುಂದಕ್ಕೆ ಹಾಕಲಾಯಿತು.‌ಆಡಳಿತ ಪಕ್ಷದವರು ವಿರೋಧ ಪಕ್ಷದವರ ಮೇಲೆ, ವಿರೋಧ ಪಕ್ಷದವರು ಆಡಳಿತ ಪಕ್ಷಗಳ ಮೇಲೆ ಆರೋಪ ಪ್ರತ್ಯರೋಪ ಮಾಡುತ್ತಿದ್ದರು. ಬಿಜೆಪಿ‌‌‌ಯವರು ಆರ್ ಎಸ್ ಎಸ್ ಬಗ್ಗೆ ಹೇಳಿಕೆ ನೀಡುತ್ತಿದ್ದಂತಯೇ, ಕಾಂಗ್ರೆಸ್ ನ ಯೋಗಿಶ್ ರವರು ಇದಕ್ಕೆ‌ ಆಕ್ಷೇಪ ವ್ಯಕ್ತಪಡಿಸಿದರು ಇದರಿಂದ ಸಭೆಯಲ್ಲಿ ಮತ್ತೆ ಗದ್ದಲ ಉಂಟಾಯಿತು.ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 960 ಮನೆಗಳು‌ ಪೂರ್ಣವಾಗಿ ಬಿದ್ದಿವೆ. 516 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಒಟ್ಟು 1476 ಮನೆಗಳಿಗೆ ಹಾನಿಗೊಳಗಾಗಿವೆ. 1476 ರಲ್ಲಿ ಈಗ 869 ಮನೆಗಳಿಗೆ ಪರಿಹಾರ ವಿತರಣೆ ಆಗಿದೆ. ಸಭೆಯ ಅಧ್ಯಕ್ಷತೆಯನ್ನು ಮೇಯರದ ಲತಾ ಗಣೇಶ, ಉಪ ಮೇಯರ್ ಚನ್ನಬಸಪ್ಪ‌ ಹಾಗೂ ಇತರೆ ಸದಸ್ಯರು ಹಾಜರಿದ್ಧರು.

ಕಿರಣ್ ಕುಮಾರ್. ಶಿವಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.