ETV Bharat / city

ಸಿದ್ದರಾಮಯ್ಯ ಫೋಟೋಗಳು 10 ವರ್ಷಗಳಿಂದ ಸೇಲ್​ ಆಗ್ತಿಲ್ಲ: ಕಟೀಲ್​ ವ್ಯಂಗ್ಯ

author img

By

Published : Dec 17, 2019, 7:47 PM IST

ದೆಹಲಿಯ ಅಂಗಡಿಯೊಂದರಲ್ಲಿ ಯಡಿಯೂರಪ್ಪ ಅವರ ಫೋಟೋ ಬೇಗ ಖಾಲಿ ಆಗುತ್ತೆ, ಸಿದ್ದರಾಮಯ್ಯ ಅವರ 10 ವರ್ಷವಾದರೂ ಕೇಳುವವರೇ ಇರುವುದಿಲ್ಲ ಎಂದು ಅಂಗಡಿಯವರು ಹೇಳುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ವ್ಯಂಗ್ಯವಾಡಿದರು.

BJP President Nalin kumar katil
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​​​

ಶಿವಮೊಗ್ಗ: ಸಾವರ್ಕರ್ ಕುರಿತು ಮಾತನಾಡುವ ಕಾಂಗ್ರೆಸ್​​ ನಾಯಕರು ದೇಶದ್ರೋಹಿಗಳು ಎಂದು ಸಂಸದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು.

ಜಿಲ್ಲಾ ಬಿಜೆಪಿ ವಿಶೇಷ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಾರ್ವಕರ್ ದೇಶಕ್ಕಾಗಿ ಪ್ರಾಣ ಕೊಟ್ಟರು. ಅಂತಹ ವೀರರ ವಿರುದ್ಧ ಮಾತನಾಡುವುದು ಸರಿಯಲ್ಲ. ಈ ಮೂಲಕ ಕಾಂಗ್ರೆಸ್ ದೇಶದಲ್ಲಿ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದೆ ಎಂದು ಹರಿಹಾಯ್ದರು.

ಪೌರತ್ವ ತಿದ್ದುಪಡಿ ಕಾಯಿದೆ ಜಾರಿಯಿಂದ ಭಾರತದ ಮುಸಲ್ಮಾನರಿಗೆ ಅನ್ಯಾಯವಾಗುವುದಿಲ್ಲ. ಬದಲಾವಣೆ ಮತ್ತು ಪರಿವರ್ತನೆ ಬಿಜೆಪಿಯಲ್ಲಿ ಮಾತ್ರ ಸಾಧ್ಯ.‌ ಆದರೆ ಕಾಂಗ್ರೆಸ್​​ನಲ್ಲಿ ವಂಶಾವಳಿ ಆಡಳಿತ ಇದೆ ಎಂದು ಟೀಕಿಸಿದರು.

ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರಿಶ್ರಮದಿಂದಾಗಿಯೇ ಬಿಜೆಪಿ ಗೆಲುವು ಸಾಧಿಸಿದೆ ಎಂದು ನಳಿನ್​ ಕುಮಾರ್​ ಕಟೀಲ್​ ಬಣ್ಣಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​

ಐದು ನಿಮಿಷದಲ್ಲಿ ಬಿಎಸ್​​ವೈ ಫೋಟೋ ಖಾಲಿ ಆಗುತ್ತೆ: ವ್ಯಂಗ್ಯ

ಸಂಸದನಾದ ಬಳಿಕ ದೆಹಲಿಯಲ್ಲಿ ನೀಡಲಾಗಿರುವ ಮನೆಯಲ್ಲಿ ಗೃಹಪ್ರವೇಶಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಶಾ ಫೋಟೋಗಳಿವೆ. ಯಡಿಯೂರಪ್ಪ ಅವರ ಹಳೆಯ ಫೋಟೋ ಇದೆ. ಆದರೆ, ಹೊಸದು ಬೇಕಾಗಿದೆ ಎಂದು ಆಯನೂರು ಮಂಜುನಾಥ್ ಅವರಿಗೆ ಹೇಳಿದ್ದೆ.

ಫೋಟೋ ಖರೀದಿಸಲು ಮಾರುಕಟ್ಟೆಯಲ್ಲಿ ದೆಹಲಿಯ ಫೋಟೋ ಮಳಿಗೆಯಲ್ಲಿ ಬಿಎಸ್​​​ವೈ ಫೋಟೊ ಕೇಳಿದ್ದೆವು. ಹೀಗೆ 2-3 ಮಳಿಗೆಗಳಲ್ಲಿ ಕೇಳಿದರೂ ಸಿಗಲಿಲ್ಲ. ಮತ್ತೊಂದು ಅಂಗಡಿಯಲ್ಲಿ ಬಿಎಸ್​​​ವೈ ಅವರ ಬದಲಿಗೆ ಸಿದ್ದರಾಮಯ್ಯ ಫೋಟೋ ಕೊಟ್ಟರು.

ನಾವು ಕೇಳಿದ್ದು ಯಾರದು, ನೀವು ಕೊಟ್ಟಿದ್ದು ಯಾರದು ಎಂದು ಪ್ರಶ್ನಿಸಿದಾಗ ಅಂಗಡಿಯವ ಬಿಎಸ್​ವೈ ಫೋಟೋ ಇಲ್ಲ ಸ್ವಾಮಿ. ತಪ್ಪು ತಿಳಿದುಕೊಳ್ಳಬೇಡಿ. ಯಡಿಯೂರಪ್ಪ ಅವರ ಪೋಟೋಗಳು ಅಂಗಡಿಗೆ ಬಂದ ಐದು ನಿಮಿಷದಲ್ಲಿ ಖಾಲಿ ಆಗುತ್ತವೆ. ಆದ್ರೆ, ಸಿದ್ದರಾಮಯ್ಯ ಅವರ ಪೋಟೊಗಳು 10 ವರ್ಷದಿಂದ ಯಾರೂ ಕೇಳುತ್ತಿಲ್ಲ ಎಂದು ಅಂಗಡಿ ಮಾಲೀಕ ಹೇಳಿದರು ಎಂದು ಕಟೀಲ್​ ವ್ಯಂಗ್ಯವಾಡಿದರು.

ಶಿವಮೊಗ್ಗ: ಸಾವರ್ಕರ್ ಕುರಿತು ಮಾತನಾಡುವ ಕಾಂಗ್ರೆಸ್​​ ನಾಯಕರು ದೇಶದ್ರೋಹಿಗಳು ಎಂದು ಸಂಸದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು.

ಜಿಲ್ಲಾ ಬಿಜೆಪಿ ವಿಶೇಷ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಾರ್ವಕರ್ ದೇಶಕ್ಕಾಗಿ ಪ್ರಾಣ ಕೊಟ್ಟರು. ಅಂತಹ ವೀರರ ವಿರುದ್ಧ ಮಾತನಾಡುವುದು ಸರಿಯಲ್ಲ. ಈ ಮೂಲಕ ಕಾಂಗ್ರೆಸ್ ದೇಶದಲ್ಲಿ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದೆ ಎಂದು ಹರಿಹಾಯ್ದರು.

ಪೌರತ್ವ ತಿದ್ದುಪಡಿ ಕಾಯಿದೆ ಜಾರಿಯಿಂದ ಭಾರತದ ಮುಸಲ್ಮಾನರಿಗೆ ಅನ್ಯಾಯವಾಗುವುದಿಲ್ಲ. ಬದಲಾವಣೆ ಮತ್ತು ಪರಿವರ್ತನೆ ಬಿಜೆಪಿಯಲ್ಲಿ ಮಾತ್ರ ಸಾಧ್ಯ.‌ ಆದರೆ ಕಾಂಗ್ರೆಸ್​​ನಲ್ಲಿ ವಂಶಾವಳಿ ಆಡಳಿತ ಇದೆ ಎಂದು ಟೀಕಿಸಿದರು.

ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರಿಶ್ರಮದಿಂದಾಗಿಯೇ ಬಿಜೆಪಿ ಗೆಲುವು ಸಾಧಿಸಿದೆ ಎಂದು ನಳಿನ್​ ಕುಮಾರ್​ ಕಟೀಲ್​ ಬಣ್ಣಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​

ಐದು ನಿಮಿಷದಲ್ಲಿ ಬಿಎಸ್​​ವೈ ಫೋಟೋ ಖಾಲಿ ಆಗುತ್ತೆ: ವ್ಯಂಗ್ಯ

ಸಂಸದನಾದ ಬಳಿಕ ದೆಹಲಿಯಲ್ಲಿ ನೀಡಲಾಗಿರುವ ಮನೆಯಲ್ಲಿ ಗೃಹಪ್ರವೇಶಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಶಾ ಫೋಟೋಗಳಿವೆ. ಯಡಿಯೂರಪ್ಪ ಅವರ ಹಳೆಯ ಫೋಟೋ ಇದೆ. ಆದರೆ, ಹೊಸದು ಬೇಕಾಗಿದೆ ಎಂದು ಆಯನೂರು ಮಂಜುನಾಥ್ ಅವರಿಗೆ ಹೇಳಿದ್ದೆ.

ಫೋಟೋ ಖರೀದಿಸಲು ಮಾರುಕಟ್ಟೆಯಲ್ಲಿ ದೆಹಲಿಯ ಫೋಟೋ ಮಳಿಗೆಯಲ್ಲಿ ಬಿಎಸ್​​​ವೈ ಫೋಟೊ ಕೇಳಿದ್ದೆವು. ಹೀಗೆ 2-3 ಮಳಿಗೆಗಳಲ್ಲಿ ಕೇಳಿದರೂ ಸಿಗಲಿಲ್ಲ. ಮತ್ತೊಂದು ಅಂಗಡಿಯಲ್ಲಿ ಬಿಎಸ್​​​ವೈ ಅವರ ಬದಲಿಗೆ ಸಿದ್ದರಾಮಯ್ಯ ಫೋಟೋ ಕೊಟ್ಟರು.

ನಾವು ಕೇಳಿದ್ದು ಯಾರದು, ನೀವು ಕೊಟ್ಟಿದ್ದು ಯಾರದು ಎಂದು ಪ್ರಶ್ನಿಸಿದಾಗ ಅಂಗಡಿಯವ ಬಿಎಸ್​ವೈ ಫೋಟೋ ಇಲ್ಲ ಸ್ವಾಮಿ. ತಪ್ಪು ತಿಳಿದುಕೊಳ್ಳಬೇಡಿ. ಯಡಿಯೂರಪ್ಪ ಅವರ ಪೋಟೋಗಳು ಅಂಗಡಿಗೆ ಬಂದ ಐದು ನಿಮಿಷದಲ್ಲಿ ಖಾಲಿ ಆಗುತ್ತವೆ. ಆದ್ರೆ, ಸಿದ್ದರಾಮಯ್ಯ ಅವರ ಪೋಟೊಗಳು 10 ವರ್ಷದಿಂದ ಯಾರೂ ಕೇಳುತ್ತಿಲ್ಲ ಎಂದು ಅಂಗಡಿ ಮಾಲೀಕ ಹೇಳಿದರು ಎಂದು ಕಟೀಲ್​ ವ್ಯಂಗ್ಯವಾಡಿದರು.

Intro:ಅಂಗಡಿಯಲ್ಲಿ ಯಡಿಯೂರಪ್ಪನವರ ಫೋಟೋ ಬೇಗ ಖಾಲಿ ಆಗುತ್ತೆ, ಸಿದ್ದರಾಮಯ್ಯನವರ ಪೋಟೊ ಕೇಳುವವರೆ ಇಲ್ಲ: ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ವ್ಯಂಗ್ಯ.

ಶಿವಮೊಗ್ಗ: ಇಂದು ಮುಖ್ಯಮಂತ್ರಿ ಬಿ.ಎಸ್. ಯಡ್ಯೂರಪ್ಪ ಅವರ ತವರು ಕ್ಷೇತ್ರ ಶಿವಮೊಗ್ಗಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ರವರು ಸಿದ್ದರಾಮಯ್ಯನವರ ಬಗ್ಗೆ ಒಂದು ಜೋಕ್ ಹೇಳಿದ್ರು, ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದಲ್ಲಿ ನಡೆಸಿದ ಶಿವಮೊಗ್ಗ ಜಿಲ್ಲಾ ಸಮಿತಿ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಬಿ.ಎಸ್.ವೈ. ಪರಿಶ್ರಮದಿಂದ ಗೆಲುವು ಸಾಧಿಸಲಾಗಿದ್ದು, ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಲು ಸೂಚಿಸಿದ್ರು. Body:ಇದೇ ವೇಳೆ, ದೆಹಲಿಯಲ್ಲಿ ನಡೆದ ಒಂದು ಘಟನೆಯನ್ನು ಕಾಮಿಡಿ ಮಾಡಿ ಹೇಳಿದ್ರು, ದೆಹಲಿಯಲ್ಲಿ ತಮಗೆ ನೀಡಲಾದ ಮನೆ ಗೃಹಪ್ರವೇಶಕ್ಕೆ ಯಡ್ಯೂರಪ್ಪರ ಫೋಟೋ ತರಲು ಮಾರುಕಟ್ಟೆಗೆ ನಾನು ಮತ್ತು ಆಯನೂರು ಮಂಜುನಾಥ್ ಅವರು ಹೋಗಿದ್ದೆವು. ಈ ವೇಳೆ ಅಲ್ಲಿ ಫೋಟೋ ಇಟ್ಟ ಅಂಗಡಿಯಲ್ಲಿ, ಯಡ್ಯೂರಪ್ಪನವರ ಫೋಟೊ ಕೊಂಡುಕೊಳ್ಳಲು ಕೇಳಿದ್ದೆವು. ಆಗ ಅವನು ಇಲ್ಲ ಅಂದ. ಅದೇ ರೀತಿ 2-3 ಅಂಗಡಿ ಕೇಳಿದ್ರೂ ಕೂಡ, ಯಡ್ಯೂರಪ್ಪರ ಫೋಟೋ ಇಲ್ಲ ಎಂದು ತಿಳಿಸಿದರು.Conclusion:ನಂತ್ರ ಪಕ್ಕದ ಅಂಗಡಿಗೆ ಹೋಗಿ ಯಡಿಯೂರಪ್ಪನವರ ಪೋಟೊ ಕೇಳಿದಾಗ ಅಂಗಡಿಯವ ಸಿದ್ಧರಾಮಯ್ಯನವರ ಪೋಟೊ ನೀಡಿದ ಸಿಟ್ಟಿನಿಂದ ಇದು ಯಡಿಯೂರಪ್ಪನವರ ಪೋಟೊ ಅಲ್ಲ ಎಂದಾಗ, ಹೌದು ಸ್ವಾಮಿ ಯಡಿಯೂರಪ್ಪನವರ ಪೋಟೊ ಬೇಗ ಖಾಲಿ ಆಗುತ್ತೆ, ಆದ್ರೆ, ಸಿದ್ದರಾಮಯ್ಯನವರ ಪೋಟೊವನ್ನು ಯಾರೂ ಕೇಳೂದಿಲ್ಲ ಎಂಬ ಉತ್ತರ ನೀಡದ ಎಂದು ಕಟೀಲು‌ರವರು ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.


ಬೈಟ್ :ನಳೀನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.