ETV Bharat / city

ವಿದ್ಯುತ್ ಕಂಬಕ್ಕೆ ತ್ರಿಚಕ್ರ ಸ್ಕೂಟರ್ ಡಿಕ್ಕಿ: ಇಬ್ಬರು ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ - mysore road accident

ಚಾಲಕನ ನಿಯಂತ್ರಣ ತಪ್ಪಿ ತ್ರಿಚಕ್ರ ಸ್ಕೂಟರ್​ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.

ವಿದ್ಯುತ್ ಕಂಬಕ್ಕೆ ತ್ರಿಚಕ್ರ ಸ್ಕೂಟರ್ ಡಿಕ್ಕಿ
ವಿದ್ಯುತ್ ಕಂಬಕ್ಕೆ ತ್ರಿಚಕ್ರ ಸ್ಕೂಟರ್ ಡಿಕ್ಕಿ
author img

By

Published : Jun 25, 2022, 2:33 PM IST

ಮೈಸೂರು: ತ್ರಿಚಕ್ರ ಸ್ಕೂಟರ್​ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸರಗೂರಿನ ಶಾಂತಿ ನಗರದ ಬಳಿ ಸಂಭವಿಸಿದೆ.

ಕಲ್ಲಳ್ಳಿ ಹಾಡಿಯ ನಿವಾಸಿ ನಾಗಮ್ಮ ಹಾಗೂ ವಿಜಯೇಂದ್ರ ಮೃತರು. ಕಾಳ ಗಾಯಗೊಂಡ ವಿಕಲಚೇತನ ವ್ಯಕ್ತಿ. ಕಾಳ ತನ್ನ ತ್ರಿಚಕ್ರ ಸ್ಕೂಟರ್​ನಲ್ಲಿ ನಾಗಮ್ಮ ಮತ್ತು ವಿಜಯೇಂದ್ರರನ್ನು ಕರೆದುಕೊಂಡು ಬರುವಾಗ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಾಗ ಈ ದುರ್ಘಟನೆ ನಡೆದಿದೆ.

ಈ ಸಂಬಂಧ ಸ್ಥಳಕ್ಕೆ ಸರಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ವೃದ್ಧೆಗೆ ಆಪರೇಷನ್ ಮಾಡಿ ಬಳಿಕ ಹೊಲಿಗೆ ಹಾಕದೇ ಹಾಗೇ ಬಿಟ್ಟ ವೈದ್ಯ... ಮುಂದಾಗಿದ್ದೇನು?

ಮೈಸೂರು: ತ್ರಿಚಕ್ರ ಸ್ಕೂಟರ್​ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸರಗೂರಿನ ಶಾಂತಿ ನಗರದ ಬಳಿ ಸಂಭವಿಸಿದೆ.

ಕಲ್ಲಳ್ಳಿ ಹಾಡಿಯ ನಿವಾಸಿ ನಾಗಮ್ಮ ಹಾಗೂ ವಿಜಯೇಂದ್ರ ಮೃತರು. ಕಾಳ ಗಾಯಗೊಂಡ ವಿಕಲಚೇತನ ವ್ಯಕ್ತಿ. ಕಾಳ ತನ್ನ ತ್ರಿಚಕ್ರ ಸ್ಕೂಟರ್​ನಲ್ಲಿ ನಾಗಮ್ಮ ಮತ್ತು ವಿಜಯೇಂದ್ರರನ್ನು ಕರೆದುಕೊಂಡು ಬರುವಾಗ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಾಗ ಈ ದುರ್ಘಟನೆ ನಡೆದಿದೆ.

ಈ ಸಂಬಂಧ ಸ್ಥಳಕ್ಕೆ ಸರಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ವೃದ್ಧೆಗೆ ಆಪರೇಷನ್ ಮಾಡಿ ಬಳಿಕ ಹೊಲಿಗೆ ಹಾಕದೇ ಹಾಗೇ ಬಿಟ್ಟ ವೈದ್ಯ... ಮುಂದಾಗಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.