ಮೈಸೂರು : ನಗರದ ಚಿನ್ನ, ಬೆಳ್ಳಿ ಅಂಗಡಿಯಲ್ಲಿ ದರೋಡೆ ಮಾಡಲು ಬಂದ ದರೋಡೆಕೋರರ ಸಿಸಿಟಿವಿ ಫೋಟೋಗಳನ್ನು ಬಿಡುಗಡೆ ಮಾಡಿ, ಸಾರ್ವಜನಿಕರು ಇವರ ಬಗ್ಗೆ ಮಾಹಿತಿ ಗೊತ್ತಾದರೆ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
![Mysore police released CCTV Photos of Robbers](https://etvbharatimages.akamaized.net/etvbharat/prod-images/kn-mys-05-crimefollowup-7208092_23082021201422_2308f_1629729862_123.jpg)
ನಗರದ ವಿದ್ಯಾರಣ್ಯಪುರಂನ ಮುಖ್ಯರಸ್ತೆಯಲ್ಲಿರುವ ಅಮೃತ ಗೋಲ್ಡ್ & ಸಿಲ್ವರ್ ಮಳಿಗೆಗೆ ನುಗ್ಗಿದ್ದ ಮೂವರು ದರೋಡೆಕೋರರು ಚಿನ್ನ, ಬೆಳ್ಳಿ ಕದಿಯಲು ಯತ್ನಿಸಿದ್ದಾರೆ. ಇದನ್ನು ತಡೆಯಲು ಯತ್ನಿಸಿದ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
![Mysore police released CCTV Photos of Robbers](https://etvbharatimages.akamaized.net/etvbharat/prod-images/kn-mys-05-crimefollowup-7208092_23082021201422_2308f_1629729862_1037.jpg)
ಈ ವೇಳೆ ಅಂಗಡಿಯೊಳಗಿದ್ದ ದಡದಹಳ್ಳಿ ನಿವಾಸಿ ಚಂದ್ರು ಎಂಬುವರಿಗೆ ಗುಂಡೇಟು ತಗುಲಿ ಸಾವನ್ನಪ್ಪಿದ್ದಾರೆ. ದರೋಡೆಕೋರರ ಸಿಸಿಟಿವಿ ಪೋಟೋಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಇವರ ಬಗ್ಗೆ ಮಾಹಿತಿ ಗೊತ್ತಾದರೆ ತಕ್ಷಣ ತಿಳಿಸುವಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.
![Mysore police released CCTV Photos of Robbers](https://etvbharatimages.akamaized.net/etvbharat/prod-images/kn-mys-05-crimefollowup-7208092_23082021201422_2308f_1629729862_1029.jpg)
ಘಟನಾ ಸ್ಥಳಕ್ಕೆ ಡಿಸಿಪಿ ಗೀತಾ ಪ್ರಸನ್ನ ಭೇಟಿ ನೀಡಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲಿಸಿದ್ದಾರೆ.