ETV Bharat / city

ಬಾರ್​ನಲ್ಲಿ ಧಮ್​​ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ..

ಸಿಗರೇಟ್ ವಿಚಾರವಾಗಿ ಚಿಕ್ಕಪ್ಪನ ಮಗನಿಂದಲೇ ವ್ಯಕ್ತಿಯೊಬ್ಬ ತನ್ನ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವ ದಿನದಂದೇ ಕೊಲೆಯಾಗಿದ್ದಾನೆ..

author img

By

Published : Feb 12, 2022, 7:21 PM IST

man kills his cousin at a bar
ಬಾರ್​ನಲ್ಲಿ ಧಮ್​​ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ

ಮೈಸೂರು : ಎಣ್ಣೆ ಹೊಡೆಯುವಾಗ ಟೇಬಲ್ ಮೇಲೆ ಇಟ್ಟಿದ್ದ ಸಿಗರೇಟ್ ಅನ್ನು ಅನುಮತಿ ಇಲ್ಲದೆ ಸೇದಿದ ವಿಚಾರಕ್ಕೆ ನಡೆದ ಗಲಾಟೆ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಿನ್ನೆ ರಾತ್ರಿ ಆಲನಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯ ಬಾರ್‌ವೊಂದರಲ್ಲಿ ಕಿರಣ್ ಎಂಬಾತ, ಆತನ ಚಿಕ್ಕಪ್ಪನ ಮಗ ಪ್ರಮೋದ್ ಹಾಗೂ ಸ್ನೇಹಿತರಾದ ರಾಕೇಶ್ ಹಾಗೂ ಮಹೇಶ್ ಎಂಬುವರ ಜೊತೆ ಸೇರಿ ಎಣ್ಣೆ ಹೊಡೆಯುತ್ತಿದ್ದರು.

ಆ ಸಂದರ್ಭದಲ್ಲಿ ಪ್ರಮೋದ್ ಸಿಗರೇಟ್ ಸೇದಿ ಟೇಬಲ್ ಮೇಲೆ ಇಟ್ಟಿದ್ದ. ಆ ಸಿಗರೇಟ್‌ನ ಕಿರಣ್ ತೆಗೆದುಕೊಂಡು ಒಂದು ಧಮ್​ ಹೊಡೆದಿದ್ದಾನೆ. ಇದರಿಂದ ಸಿಟ್ಟಾದ ಪ್ರಮೋದ್, ಕಿರಣ್​​ಗೆ ಆವಾಜ್ ಹಾಕಿದ್ದಾನೆ.‌ ಬೇಸರಗೊಂಡ ಕಿರಣ್ ಸಿಗರೇಟ್‌ನ ಎಸೆದು ಕೋಪ ತೀರಿಸಿಕೊಂಡಿದ್ದಾನೆ.

ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಕಂಠ ಪೂರ್ತಿ ಕುಡಿದಿದ್ದ ಪ್ರಮೋದ್ ಬಾರ್​​ನಲ್ಲೇ ಕಿರಣ್​ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗಾಯಗೊಂಡಿದ್ದ ಕಿರಣ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಕಿರಣ್ ತನ್ನ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವ ದಿನದಂದೇ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ವಿವಾದಾತ್ಮಕ ಪೋಸ್ಟ್​​​.. ದಾವಣಗೆರೆ ಗಲಾಟೆ ಪ್ರಕರಣದ 10 ಆರೋಪಿಗಳು ಅಂದರ್!

ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಕೇಶ್ ಹಾಗೂ ಮಹೇಶ್ ಎಂಬುವರನ್ನ ಪೊಲೀಸರು ಬಂಧಿಸಿದ್ದಾರೆ. ತಲೆ ಮರಿಸಿಕೊಂಡಿರುವ ಪ್ರಮುಖ ಆರೋಪಿ ಪ್ರಮೋದ್​ಗಾಗಿ ಬಲೆ ಬೀಸಿದ್ದಾರೆ.

ಮೈಸೂರು : ಎಣ್ಣೆ ಹೊಡೆಯುವಾಗ ಟೇಬಲ್ ಮೇಲೆ ಇಟ್ಟಿದ್ದ ಸಿಗರೇಟ್ ಅನ್ನು ಅನುಮತಿ ಇಲ್ಲದೆ ಸೇದಿದ ವಿಚಾರಕ್ಕೆ ನಡೆದ ಗಲಾಟೆ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಿನ್ನೆ ರಾತ್ರಿ ಆಲನಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯ ಬಾರ್‌ವೊಂದರಲ್ಲಿ ಕಿರಣ್ ಎಂಬಾತ, ಆತನ ಚಿಕ್ಕಪ್ಪನ ಮಗ ಪ್ರಮೋದ್ ಹಾಗೂ ಸ್ನೇಹಿತರಾದ ರಾಕೇಶ್ ಹಾಗೂ ಮಹೇಶ್ ಎಂಬುವರ ಜೊತೆ ಸೇರಿ ಎಣ್ಣೆ ಹೊಡೆಯುತ್ತಿದ್ದರು.

ಆ ಸಂದರ್ಭದಲ್ಲಿ ಪ್ರಮೋದ್ ಸಿಗರೇಟ್ ಸೇದಿ ಟೇಬಲ್ ಮೇಲೆ ಇಟ್ಟಿದ್ದ. ಆ ಸಿಗರೇಟ್‌ನ ಕಿರಣ್ ತೆಗೆದುಕೊಂಡು ಒಂದು ಧಮ್​ ಹೊಡೆದಿದ್ದಾನೆ. ಇದರಿಂದ ಸಿಟ್ಟಾದ ಪ್ರಮೋದ್, ಕಿರಣ್​​ಗೆ ಆವಾಜ್ ಹಾಕಿದ್ದಾನೆ.‌ ಬೇಸರಗೊಂಡ ಕಿರಣ್ ಸಿಗರೇಟ್‌ನ ಎಸೆದು ಕೋಪ ತೀರಿಸಿಕೊಂಡಿದ್ದಾನೆ.

ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಕಂಠ ಪೂರ್ತಿ ಕುಡಿದಿದ್ದ ಪ್ರಮೋದ್ ಬಾರ್​​ನಲ್ಲೇ ಕಿರಣ್​ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗಾಯಗೊಂಡಿದ್ದ ಕಿರಣ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಕಿರಣ್ ತನ್ನ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವ ದಿನದಂದೇ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ವಿವಾದಾತ್ಮಕ ಪೋಸ್ಟ್​​​.. ದಾವಣಗೆರೆ ಗಲಾಟೆ ಪ್ರಕರಣದ 10 ಆರೋಪಿಗಳು ಅಂದರ್!

ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಕೇಶ್ ಹಾಗೂ ಮಹೇಶ್ ಎಂಬುವರನ್ನ ಪೊಲೀಸರು ಬಂಧಿಸಿದ್ದಾರೆ. ತಲೆ ಮರಿಸಿಕೊಂಡಿರುವ ಪ್ರಮುಖ ಆರೋಪಿ ಪ್ರಮೋದ್​ಗಾಗಿ ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.