ETV Bharat / city

ಜೆಡಿಎಸ್ ಒಂದು ವೇಳೆ ಮೈತ್ರಿ ಮಾಡಿಕೊಂಡರೆ ಅದು ಕಾಂಗ್ರೆಸ್ ಜತೆ ಮಾತ್ರ : ಶಾಸಕ ಸಾ.ರಾ‌.ಮಹೇಶ್

ಮೇಯರ್ ಚು‌ನಾವಣೆಯ ಬಗ್ಗೆ ವರಿಷ್ಠರ ಗಮನಕ್ಕೆ ತರಲಾಗಿದೆ. ನಾಳೆ ಸಂಜೆ ಅಂತಿಮ ನಿರ್ಧಾರ ಮಾಡುತ್ತೇವೆ. ನಮ್ಮ ನಾಯಕರ ಸೂಚನೆ ಬಂದ ಮೇಲೆ ನಿರ್ಧಾರ ಮಾಡುತ್ತೇವೆ. ವರಿಷ್ಠರ ಏನು ಹೇಳುತ್ತಾರೋ ಅದರಂತೆ ನಡೆದುಕೊಳ್ಳುತ್ತೇವೆ..

author img

By

Published : Aug 23, 2021, 8:17 PM IST

Updated : Aug 23, 2021, 9:05 PM IST

ಶಾಸಕ ಸಾ.ರಾ‌.ಮಹೇಶ್
ಶಾಸಕ ಸಾ.ರಾ‌.ಮಹೇಶ್

ಮೈಸೂರು : ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸುವುದು ಪಕ್ಷದ ಸದಸ್ಯರ ಇಚ್ಛೆಯಾಗಿದೆ ಎಂದು ಜೆಡಿಎಸ್ ಶಾಸಕ ಸಾ ರಾ‌ ಮಹೇಶ್ ಹೇಳಿದ್ದಾರೆ.

ನಗರ ಪಾಲಿಕೆಯ ವಲಯ‌ ಕಚೇರಿ-9ರಲ್ಲಿ ಮಾಧ್ಯಮಗಳೊಂದಿಗೆ ಮಾತ‌ನಾಡಿದ ಅವರು, ಜೆಡಿಎಸ್ ಒಂದು ವೇಳೆ ಮೈತ್ರಿ ಮಾಡಿಕೊಂಡರೆ ಅದು ಕಾಂಗ್ರೆಸ್ ಜೊತೆ ಮಾತ್ರ. ಮೇಯರ್ ಸ್ಥಾನ ಕೂಡ ಕಾಂಗ್ರೆಸ್​ಗೆ ನೀಡುತ್ತೇವೆ. ಬಿಜೆಪಿ ಜೊತೆ ಮೈತ್ರಿ ಇಲ್ಲ. ಉಪಚುನಾವಣೆ ಇರುವುದರಿಂದ ಈಗ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದೇವೆ ಎಂದರು.

ಪಾಲಿಕೆ ಮೇಯರ್ ಚುನಾವಣೆ ಕುರಿತಂತೆ ಜೆಡಿಎಸ್ ಶಾಸಕ ಸಾ ರಾ‌ ಮಹೇಶ್ ಹೀಗಂತಾರೆ..

ನಾವು ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್​ಗೆ ಮೇಯರ್ ಸ್ಥಾನ. ಆದರೆ, ಉಪ ಚುನಾವಣೆ ಇದೆ. ಅಲ್ಲಿ ಮೈತ್ರಿ ಮಾಡಿಕೊಂಡರೆ ಉಪ ಚುನಾವಣೆಯಲ್ಲಿ ಅವರ ವಿರುದ್ಧವೇ ಹೋರಾಡಬೇಕು. ಹಾಗಾಗಿ, ವಿರೋಧ ಪಕ್ಷದಲ್ಲಿ ಕುಳಿತರೂ ಪರವಾಗಿಲ್ಲ. ನಾವು ಮೇಯರ್ ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ ಅಂತಾ ಕೆಲ ಪಾಲಿಕೆ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಮೇಯರ್ ಚು‌ನಾವಣೆಯ ಬಗ್ಗೆ ವರಿಷ್ಠರ ಗಮನಕ್ಕೆ ತರಲಾಗಿದೆ. ನಾಳೆ ಸಂಜೆ ಅಂತಿಮ ನಿರ್ಧಾರ ಮಾಡುತ್ತೇವೆ. ನಮ್ಮ ನಾಯಕರ ಸೂಚನೆ ಬಂದ ಮೇಲೆ ನಿರ್ಧಾರ ಮಾಡುತ್ತೇವೆ. ವರಿಷ್ಠರ ಏನು ಹೇಳುತ್ತಾರೋ ಅದರಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.

ಓದಿ: ಮೊದಲ ದಿನವೇ ಶಾಲೆ ಬಾಗಿಲು ತಟ್ಟಿದ 3 ಲಕ್ಷ ವಿದ್ಯಾರ್ಥಿಗಳು: ಕೆಲವು ಜಿಲ್ಲೆಯಲ್ಲಿ ಆನ್​​ಲೈನ್ ಕ್ಲಾಸ್​​ಗೂ ಬಾರದ ಸ್ಟುಡೆಂಟ್ಸ್​​​

ಮೈಸೂರು : ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸುವುದು ಪಕ್ಷದ ಸದಸ್ಯರ ಇಚ್ಛೆಯಾಗಿದೆ ಎಂದು ಜೆಡಿಎಸ್ ಶಾಸಕ ಸಾ ರಾ‌ ಮಹೇಶ್ ಹೇಳಿದ್ದಾರೆ.

ನಗರ ಪಾಲಿಕೆಯ ವಲಯ‌ ಕಚೇರಿ-9ರಲ್ಲಿ ಮಾಧ್ಯಮಗಳೊಂದಿಗೆ ಮಾತ‌ನಾಡಿದ ಅವರು, ಜೆಡಿಎಸ್ ಒಂದು ವೇಳೆ ಮೈತ್ರಿ ಮಾಡಿಕೊಂಡರೆ ಅದು ಕಾಂಗ್ರೆಸ್ ಜೊತೆ ಮಾತ್ರ. ಮೇಯರ್ ಸ್ಥಾನ ಕೂಡ ಕಾಂಗ್ರೆಸ್​ಗೆ ನೀಡುತ್ತೇವೆ. ಬಿಜೆಪಿ ಜೊತೆ ಮೈತ್ರಿ ಇಲ್ಲ. ಉಪಚುನಾವಣೆ ಇರುವುದರಿಂದ ಈಗ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದೇವೆ ಎಂದರು.

ಪಾಲಿಕೆ ಮೇಯರ್ ಚುನಾವಣೆ ಕುರಿತಂತೆ ಜೆಡಿಎಸ್ ಶಾಸಕ ಸಾ ರಾ‌ ಮಹೇಶ್ ಹೀಗಂತಾರೆ..

ನಾವು ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್​ಗೆ ಮೇಯರ್ ಸ್ಥಾನ. ಆದರೆ, ಉಪ ಚುನಾವಣೆ ಇದೆ. ಅಲ್ಲಿ ಮೈತ್ರಿ ಮಾಡಿಕೊಂಡರೆ ಉಪ ಚುನಾವಣೆಯಲ್ಲಿ ಅವರ ವಿರುದ್ಧವೇ ಹೋರಾಡಬೇಕು. ಹಾಗಾಗಿ, ವಿರೋಧ ಪಕ್ಷದಲ್ಲಿ ಕುಳಿತರೂ ಪರವಾಗಿಲ್ಲ. ನಾವು ಮೇಯರ್ ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ ಅಂತಾ ಕೆಲ ಪಾಲಿಕೆ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಮೇಯರ್ ಚು‌ನಾವಣೆಯ ಬಗ್ಗೆ ವರಿಷ್ಠರ ಗಮನಕ್ಕೆ ತರಲಾಗಿದೆ. ನಾಳೆ ಸಂಜೆ ಅಂತಿಮ ನಿರ್ಧಾರ ಮಾಡುತ್ತೇವೆ. ನಮ್ಮ ನಾಯಕರ ಸೂಚನೆ ಬಂದ ಮೇಲೆ ನಿರ್ಧಾರ ಮಾಡುತ್ತೇವೆ. ವರಿಷ್ಠರ ಏನು ಹೇಳುತ್ತಾರೋ ಅದರಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.

ಓದಿ: ಮೊದಲ ದಿನವೇ ಶಾಲೆ ಬಾಗಿಲು ತಟ್ಟಿದ 3 ಲಕ್ಷ ವಿದ್ಯಾರ್ಥಿಗಳು: ಕೆಲವು ಜಿಲ್ಲೆಯಲ್ಲಿ ಆನ್​​ಲೈನ್ ಕ್ಲಾಸ್​​ಗೂ ಬಾರದ ಸ್ಟುಡೆಂಟ್ಸ್​​​

Last Updated : Aug 23, 2021, 9:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.