ETV Bharat / city

ಪ್ರಕರಣ ಭೇದಿಸಿದ ರೈಲ್ವೆ ಪೊಲೀಸರು: ಒಂದೂವರೆ ಕೆಜಿ ಚಿನ್ನ ವಶ

ರೈಲಿನಲ್ಲಿ ಪ್ರಯಾಣಿಸುವ ವ್ಯಕ್ತಿಗಳಿಂದ ಚಿನ್ನ ಕಸಿದು ಪರಾರಿಯಾಗಿದ್ದ ಆರೋಪಿಗಳನ್ನ ಮೈಸೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

author img

By

Published : Mar 18, 2019, 11:49 PM IST

ರೈಲ್ವೇ ಪೊಲೀಸರ ಕಾರ್ಯಚರಣೆಗೆ 45 ಲಕ್ಷದ ಚಿನ್ನ ವಶ

ಮೈಸೂರು: ರೈಲಿನಲ್ಲಿ ಪ್ರಯಾಣಿಸುವ ವ್ಯಕ್ತಿಗಳಿಂದ ಕೆಜಿಗಟ್ಟಲೆ ಚಿನ್ನ ಕಸಿದು ಪರಾರಿಯಾಗಿದ್ದ ಆರೋಪಿಗಳನ್ನ ಬಂಧಿಸಿ, ಅವರಿಂದ 45 ಲಕ್ಷ ರೂ. ಮೌಲ್ಯದ ಒಂದೂವರೆ ಕೆ.ಜಿ ಚಿನ್ನ ವಶಪಡಿಸಿಕೊಳ್ಳುವಲ್ಲಿ ಮೈಸೂರು ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ 5 ತಿಂಗಳ ಹಿಂದೆ ಬೆಂಗಳೂರು ಮೂಲದ ನವೀನ್ ಕುಮಾರ್ ಎಂಬಾತ ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಹೊರಟ ಸಂದರ್ಭದಲ್ಲಿ ರೈಲಿನ ಒಳಗಡೆ ಬಂದ 5 ಜನ ಅಪರಿಚಿತರು ಹೆದರಿಸಿ, 2 ಕೆಜಿ 300ಗ್ರಾಂ ತೂಕದ ಚಿನ್ನ ಕಿತ್ತುಕೊಂಡು ಪರಾರಿಯಾಗಿದ್ದರು.ಈ ಸಂಬಂಧ ಮೈಸೂರು ರೈಲ್ವೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ 5 ಜನ ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವುದು ರೈಲ್ವೆ ನಿಲ್ದಾಣದಲ್ಲಿದ್ದ ಸಿಸಿ ಟಿವಿಯಿಂದ ಗೊತ್ತಾಗಿತ್ತು.

ರೈಲ್ವೇ ಪೊಲೀಸರ ಕಾರ್ಯಚರಣೆಗೆ 45 ಲಕ್ಷದ ಚಿನ್ನ ವಶ

ಪ್ರಮುಖ ಆರೋಪಿಗಳಾದ ಮಹಾರಾಷ್ಟ್ರ ರಾಜ್ಯದ ಅಹಮದ್ ನಗರ ಜಿಲ್ಲೆಯ ಮಾಲಂಗಿ ಮತ್ತು ವಲ್ವಾಡ್ ಗ್ರಾಮದ ರಮೇಶ್ ಹಿಟ್ಟಂಕರ್, ಮಾರುತಿ, ಅನಂತ ಎಂಬುವರನ್ನು ಬಂಧಿಸಿ ತನಿಖೆ ಕೈಗೊಂಡಾಗ 1 ಕೆಜಿ 500 ಗ್ರಾಂ ಚಿನ್ನ ಸಿಕ್ಕಿದೆ. ಉಳಿದ ಇಬ್ಬರು ಆರೋಪಿಗಳಾದ ಲಕ್ಷ್ಮಣ್ ಪೀಟಾಂಕರ್ ಹಾಗೂ ಭಾನುದಾಸ್ ಪೀಟಾಂಕರ್ ತಲೆಮರೆಸಿಕೊಂಡಿದ್ದಾರೆ.5 ತಿಂಗಳ ನಂತರ ರೈಲ್ವೆ ಪೊಲೀಸರು ಪ್ರಕರಣ ಭೇದಿಸಿದ್ದು, ಉಳಿದ ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಮೈಸೂರು: ರೈಲಿನಲ್ಲಿ ಪ್ರಯಾಣಿಸುವ ವ್ಯಕ್ತಿಗಳಿಂದ ಕೆಜಿಗಟ್ಟಲೆ ಚಿನ್ನ ಕಸಿದು ಪರಾರಿಯಾಗಿದ್ದ ಆರೋಪಿಗಳನ್ನ ಬಂಧಿಸಿ, ಅವರಿಂದ 45 ಲಕ್ಷ ರೂ. ಮೌಲ್ಯದ ಒಂದೂವರೆ ಕೆ.ಜಿ ಚಿನ್ನ ವಶಪಡಿಸಿಕೊಳ್ಳುವಲ್ಲಿ ಮೈಸೂರು ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ 5 ತಿಂಗಳ ಹಿಂದೆ ಬೆಂಗಳೂರು ಮೂಲದ ನವೀನ್ ಕುಮಾರ್ ಎಂಬಾತ ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಹೊರಟ ಸಂದರ್ಭದಲ್ಲಿ ರೈಲಿನ ಒಳಗಡೆ ಬಂದ 5 ಜನ ಅಪರಿಚಿತರು ಹೆದರಿಸಿ, 2 ಕೆಜಿ 300ಗ್ರಾಂ ತೂಕದ ಚಿನ್ನ ಕಿತ್ತುಕೊಂಡು ಪರಾರಿಯಾಗಿದ್ದರು.ಈ ಸಂಬಂಧ ಮೈಸೂರು ರೈಲ್ವೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ 5 ಜನ ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವುದು ರೈಲ್ವೆ ನಿಲ್ದಾಣದಲ್ಲಿದ್ದ ಸಿಸಿ ಟಿವಿಯಿಂದ ಗೊತ್ತಾಗಿತ್ತು.

ರೈಲ್ವೇ ಪೊಲೀಸರ ಕಾರ್ಯಚರಣೆಗೆ 45 ಲಕ್ಷದ ಚಿನ್ನ ವಶ

ಪ್ರಮುಖ ಆರೋಪಿಗಳಾದ ಮಹಾರಾಷ್ಟ್ರ ರಾಜ್ಯದ ಅಹಮದ್ ನಗರ ಜಿಲ್ಲೆಯ ಮಾಲಂಗಿ ಮತ್ತು ವಲ್ವಾಡ್ ಗ್ರಾಮದ ರಮೇಶ್ ಹಿಟ್ಟಂಕರ್, ಮಾರುತಿ, ಅನಂತ ಎಂಬುವರನ್ನು ಬಂಧಿಸಿ ತನಿಖೆ ಕೈಗೊಂಡಾಗ 1 ಕೆಜಿ 500 ಗ್ರಾಂ ಚಿನ್ನ ಸಿಕ್ಕಿದೆ. ಉಳಿದ ಇಬ್ಬರು ಆರೋಪಿಗಳಾದ ಲಕ್ಷ್ಮಣ್ ಪೀಟಾಂಕರ್ ಹಾಗೂ ಭಾನುದಾಸ್ ಪೀಟಾಂಕರ್ ತಲೆಮರೆಸಿಕೊಂಡಿದ್ದಾರೆ.5 ತಿಂಗಳ ನಂತರ ರೈಲ್ವೆ ಪೊಲೀಸರು ಪ್ರಕರಣ ಭೇದಿಸಿದ್ದು, ಉಳಿದ ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Intro:ಮೈಸೂರು: ರೈಲಿನಲ್ಲೇ ವ್ಯಕ್ತಿಯಿಂದ ಕೇಜಿಗಟ್ಟಲೇ ಚಿನ್ನವನ್ನು ಕಸಿದು ಪರಾರಿಯಾಗಿದ್ದ ಆರೋಪಿಗಳ ಬಂಧಿಸಿ ಅವರಿಂದ ೪೫ಲಕ್ಷ ಮೌಲ್ಯದ ಒಂದೂವರೆ ಕೆಜಿ ಚಿನ್ನವನ್ನು ಮೈಸೂರು ರೈಲ್ವೇ ಪೋಲಿಸರು ವಶಪಡಿಸಿಕೊಂಡಿದ್ದಾರೆ.


Body:ಕಳೆದ ೫ ತಿಂಗಳ ಹಿಂದೆ ಬೆಂಗಳೂರು ಮೂಲದ ನವೀನ್ ಕುಮಾರ್ ಎಂಬಾತ ಮೈಸೂರಿನಿಂದ ರೈಲಿನಲ್ಲಿ ಬೆಂಗಳೂರಿಗೆ ಹೊರಟ ಸಂದರ್ಭದಲ್ಲಿ ರೈಲಿನ ಒಳಗಡೆ ಬಂದ ೫ಜನ ಅಪರಿಚಿತರು ಹೆದರಿಸಿ ಇತನಲ್ಲಿದ್ದ ೨ಕೆಜಿ ೩೦೦ಗ್ರಾಂ ತೂಕದ ಚಿನ್ನವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ಮೈಸೂರು ರೈಲ್ವೇ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ಈ ಸಂಬಂಧ ತನಿಖೆ ಕೈಗೊಂಡ ಪೋಲಿಸರು ೫ಜನ ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ರೈಲ್ವೆ ನಿಲ್ದಾಣದಲ್ಲಿದ್ದ ಸಿಸಿ ಟಿವಿ ಸಹಾಯದಿಂದ ದೃಢಪಟ್ಟಿದ್ದು ಅದರಲ್ಲಿ ಪ್ರಮುಖ ಆರೋಪಿ ಮಹಾರಾಷ್ಟ್ರ ರಾಜ್ಯದ ಅಹಮದ್ ನಗರ ಜಿಲ್ಲೆಯ ಮಾಲಂಗಿ ಮತ್ತು ವಲ್ವಾಡ್ ಗ್ರಾಮದಲ್ಲಿ ರಮೇಶ್ ಹಿಟ್ಟಂಕರ್, ಮಾರುತಿ, ಅನಂತ ಎಂಬುವರನ್ನು ದಸ್ತಗಿರಿ ಮಾಡಿ ತನಿಖೆ ಕೈಗೊಂಡು ಇವರಿಂದ ೧ ಕೆಜಿ ೫೦೦ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು ಉಳಿದ ಇಬ್ಬರು ಆರೋಪಿಗಳಾದ ಲಕ್ಷ್ಮಣ್ ಪೀಟಾಂಕರ್ ಹಾಗೂ ಭಾನುದಾಸ್ ಪೀಟಾಂಕರ್ ತಲೆಮರೆಸಿಕೊಂಡಿದ್ದಾರೆ.
೫ ತಿಂಗಳ ನಂತರ ಈ ಪ್ರಕರಣವನ್ನು ಭೇದಿಸಿರುವ ರೈಲ್ವೆ ಪೋಲಿಸರು ಉಳಿದ ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅದರಲ್ಲಿ ಮಾರುತಿ ಪೀಟಾಂಕರ್, ಲಕ್ಷ್ಮಣ್ ಪೀಟಾಂಕರ್ ಹಾಗೂ ಭಾನುದಾಸ್ ಪೀಟಾಂಕರ್ ಮೂವರು ಅಣ್ಣತಮ್ಮಂದಿರಾಗಿದ್ದಾರೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.