ETV Bharat / city

ಕಾಲಾಯ ತಸ್ಮೈ ನಮಃ, ಕಾಂಗ್ರೆಸ್ ಮತ್ತೆ ಪುಟಿದೇಳುತ್ತೆ ಎಂದ ಸಿ.ಎಂ. ಇಬ್ರಾಹಿಂ - ಕಾಂಗ್ರೆಸ್ ಪಕ್ಷ

ಕಾಂಗ್ರೆಸ್ ಅನ್ನು ದಮನ ಮಾಡುವ ಕಲ್ಪನೆ ಏನಾದರೂ ಬಿಜೆಪಿಗಿದ್ದರೆ ಅದೊಂದು ಹಗಲುಗನಸು ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್​​ ಬಂಧಿಸಿರುವ ಕುರಿತು ಮಾಜಿ‌ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ.

ಮಾಜಿ‌ ಕೆಂದ್ರ ಸಚಿವ ಸಿ.ಎಂ. ಇಬ್ರಾಹಿಂ
author img

By

Published : Sep 4, 2019, 3:58 PM IST

ಮೈಸೂರು: ಹಿಂದೂ ಹಿಂದೂ ಎನ್ನುವ ಬಿಜೆಪಿಗರು ಹಬ್ಬದ ದಿನ ಎಡೆ ಹಾಕಲು ಸಹ ಬಿಡದೇ ಮಾಜಿ ಸಚಿವ ಡಿ ಕೆ ಶಿವಕುಮಾರ್​ ಅವರನ್ನು ಬಂಧಿಸಿರುವುದು ಅಮಾನವೀಯ ಕ್ರಮ ಎಂದು ಮಾಜಿ‌ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.

ಇಂದು ಸಿದ್ದರಾಮಯ್ಯ ಅವರ ಜೊತೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಇಬ್ರಾಹಿಂ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ, ಕಾಂಗ್ರೆಸ್ ಅನ್ನು ದಮನ ಮಾಡುವ ಆಲೋಚನೆ ಹೊಂದಿದ್ದರೆ ಅದೊಂದು ಹಗಲು ಕನಸು ಅಷ್ಟೇ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷ ನೀವು ಸುಮ್ಮನಿದ್ದಿರಿ. ಈಗ ಮನೆಯಲ್ಲಿ ಹಬ್ಬದ ವೇಳೆ ಒಂದು ದಿನ ಎಡೆ ಹಾಕಲು ಸಹ ಬಿಟ್ಟಿಲ್ಲ. 4 ದಿನ ವಶದಲ್ಲಿಟ್ಟುಕೊಂಡು ಈಗ ಬಂಧಿಸಿದರೆ ಏನು ಅರ್ಥ ಎಂದು ಪ್ರಶ್ನಿಸಿದರು.

ಸಿ.ಎಂ. ಇಬ್ರಾಹಿಂ, ಮಾಜಿ ಕೇಂದ್ರ ಸಚಿವ

ಹಿಂದೂ ಹಿಂದೂ ಎಂದು ಮಾತನಾಡುವ ನೀವು ಹಬ್ಬದ ಸಮದರ್ಭದಲ್ಲೇ ಡಿಕೆಶಿ ಅವರನ್ನು ಬಂಧಿಸಿರುವುದನ್ನು ಕರ್ನಾಟಕದ ಜನರು ನೋಡುತ್ತಿದ್ದಾರೆ.‌ ಇವತ್ತು ಕಾಂಗ್ರೆಸ್ ಪಕ್ಷ ಅವರ ಪರವಾಗಿ ನಿಂತಿದೆ. ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೇವೆ. ಏನಾದರೂ ಕರ್ನಾಟಕದಲ್ಲಿ ನಾವು ಇದರಿಂದ ಕುಗ್ಗಿದ್ದೇವೆ ಅಂದುಕೊಂಡಿದ್ದರೆ ಅದು ನಿಮ್ಮ ಭ್ರಮೆ. ಚೆಂಡನ್ನು ನೆಲಕ್ಕೆ ಎಷ್ಟು ಬಲವಾಗಿ ಎಸೆಯುತ್ತೇವೋ ಅಷ್ಟು ಮೇಲಕ್ಕೆ ಪುಟಿಯುತ್ತದೆ. ಕಾಲಾಯ ತಸ್ಮೈ ನಮಃ ಎಂದು ಇಬ್ರಾಹಿಂ ವ್ಯಂಗ್ಯವಾಡಿದ್ರು.

ಮೈಸೂರು: ಹಿಂದೂ ಹಿಂದೂ ಎನ್ನುವ ಬಿಜೆಪಿಗರು ಹಬ್ಬದ ದಿನ ಎಡೆ ಹಾಕಲು ಸಹ ಬಿಡದೇ ಮಾಜಿ ಸಚಿವ ಡಿ ಕೆ ಶಿವಕುಮಾರ್​ ಅವರನ್ನು ಬಂಧಿಸಿರುವುದು ಅಮಾನವೀಯ ಕ್ರಮ ಎಂದು ಮಾಜಿ‌ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.

ಇಂದು ಸಿದ್ದರಾಮಯ್ಯ ಅವರ ಜೊತೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಇಬ್ರಾಹಿಂ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ, ಕಾಂಗ್ರೆಸ್ ಅನ್ನು ದಮನ ಮಾಡುವ ಆಲೋಚನೆ ಹೊಂದಿದ್ದರೆ ಅದೊಂದು ಹಗಲು ಕನಸು ಅಷ್ಟೇ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷ ನೀವು ಸುಮ್ಮನಿದ್ದಿರಿ. ಈಗ ಮನೆಯಲ್ಲಿ ಹಬ್ಬದ ವೇಳೆ ಒಂದು ದಿನ ಎಡೆ ಹಾಕಲು ಸಹ ಬಿಟ್ಟಿಲ್ಲ. 4 ದಿನ ವಶದಲ್ಲಿಟ್ಟುಕೊಂಡು ಈಗ ಬಂಧಿಸಿದರೆ ಏನು ಅರ್ಥ ಎಂದು ಪ್ರಶ್ನಿಸಿದರು.

ಸಿ.ಎಂ. ಇಬ್ರಾಹಿಂ, ಮಾಜಿ ಕೇಂದ್ರ ಸಚಿವ

ಹಿಂದೂ ಹಿಂದೂ ಎಂದು ಮಾತನಾಡುವ ನೀವು ಹಬ್ಬದ ಸಮದರ್ಭದಲ್ಲೇ ಡಿಕೆಶಿ ಅವರನ್ನು ಬಂಧಿಸಿರುವುದನ್ನು ಕರ್ನಾಟಕದ ಜನರು ನೋಡುತ್ತಿದ್ದಾರೆ.‌ ಇವತ್ತು ಕಾಂಗ್ರೆಸ್ ಪಕ್ಷ ಅವರ ಪರವಾಗಿ ನಿಂತಿದೆ. ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೇವೆ. ಏನಾದರೂ ಕರ್ನಾಟಕದಲ್ಲಿ ನಾವು ಇದರಿಂದ ಕುಗ್ಗಿದ್ದೇವೆ ಅಂದುಕೊಂಡಿದ್ದರೆ ಅದು ನಿಮ್ಮ ಭ್ರಮೆ. ಚೆಂಡನ್ನು ನೆಲಕ್ಕೆ ಎಷ್ಟು ಬಲವಾಗಿ ಎಸೆಯುತ್ತೇವೋ ಅಷ್ಟು ಮೇಲಕ್ಕೆ ಪುಟಿಯುತ್ತದೆ. ಕಾಲಾಯ ತಸ್ಮೈ ನಮಃ ಎಂದು ಇಬ್ರಾಹಿಂ ವ್ಯಂಗ್ಯವಾಡಿದ್ರು.

Intro:ಮೈಸೂರು: ಹಿಂದೂ ಹಿಂದೂ ಎನ್ನುವ ಈ ಜನ ಹಬ್ಬದ ದಿನ ಎಡೆ ಹಾಕಲು ಬಿಡಲಿಲ್ಲ, ಇದೊಂದು ಅಮಾನವೀಯ ಕ್ರಮ ಎಂದು ಡಿಕೆಶಿ ಬಂಧನದ ಬಗ್ಗೆ ಸಿ.ಎಂ. ಇಬ್ರಾಹಿಂ ಲೇವಡಿ ಮಾಡಿದ್ದಾರೆ.


Body:ಇಂದು ಸಿದ್ದರಾಮಯ್ಯ ಅವರ ಜೊತೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾಜಿ‌ ಕೆಂದ್ರ ಸಚಿವ ಸಿ.ಎಂ.‌ಇಬ್ರಾಹಿಂ ಮಾಧ್ಯಮಗಳ ಜೊತೆ ಮಾತನಾಡಿ,
ಬಿಜೆಪಿಗೆ ಕಾಂಗ್ರೆಸ್ ಅನ್ನು ದಮನ ಮಾಡುವ ಕಲ್ಪನೆ ಏನಾದರೂ ಮಾಡಿದ್ದರೆ ಅದೊಂದು ಹಗಲುಗನಸು ಹಿಂದೂ ಹಿಂದೂ ಹಿಂದೂ ಎನ್ನುವ ಇವರು ಗಣೇಶನ ಹಬ್ಬದ ೧ ದಿನ ಎಡೆ ಹಾಕಲು ಬಿಟ್ಟಿದ್ದರೆ ಎನಾಗುತ್ತಿತ್ತು.
೨ ವರ್ಷ ನೀವು ಸುಮ್ಮನಿದ್ದರಲ್ಲಾ ಈ ಕ್ರಮವನ್ನು ಕರ್ನಾಟಕದ ೬ ವರೆ ಕೋಟಿ ಜನ ನೋಡುತ್ತಿದ್ದಾರೆ.‌ಇವತ್ತು ಕಾಂಗ್ರೆಸ್ ಪಕ್ಷ ಅವರ ಪರವಾಗಿ ನಿಂತಿದೆ. ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೇವೆ. ಏನಾದರೂ ಕರ್ನಾಟಕದಲ್ಲಿ ನಾವು ಇದರಿಂದ ಕುಗ್ಗಿದ್ದೇವೆ ಅಂದುಕೊಂಡಿದ್ದರೆ ತಪ್ಪು,
ಚೆಂಡನ್ನು ನೆಲಕ್ಕೆ ಎಷ್ಟು ಎಸೆಯುತ್ತಿವೊ ಅಷ್ಟು ಮೇಲಕ್ಕೆ ಬರುತ್ತದೆ,‌ ಕಾಲಾಯ ತಸ್ಮೈ ನಮಃ.
೪ ದಿನ ಇಟ್ಟುಕೊಂಡು ಈಗ ಅರೆಸ್ಟ್ ಮಾಡಿದರೆ ಏನು ಅರ್ಥ ಎಂದು ವ್ಯಂಗ್ಯವಾಡಿದರು.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.