ಮೈಸೂರು: ರಾಜ್ಯದ ವಿವಿಧ ಮೃಗಾಲಯಗಳಲ್ಲಿರುವ ಪ್ರಾಣಿಗಳನ್ನು ದತ್ತು ಪಡೆದಿರುವ ಅಭಿಮಾನಿಗಳಿಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧನ್ಯವಾದ ಸಲ್ಲಿಸಿದ್ದಾರೆ.
![Adoption of animals](https://etvbharatimages.akamaized.net/etvbharat/prod-images/kn-mys-01-actor-darshan-vis-ka10003_07062021114321_0706f_1623046401_969.jpg)
ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಿಗೆ ಜನರು ಬಾರದೇ ಇರುವುದರಿಂದ ರಾಜ್ಯದ ವಿವಿಧ ಮೃಗಾಲಯದಲ್ಲಿರುವ ಪ್ರಾಣಿಗಳಿಗೆ ತೊಂದರೆಯಾಗಿದೆ. ಹೀಗಾಗಿ, ಮೃಗಾಲಯದಲ್ಲಿರುವ ಪ್ರಾಣಿಗಳನ್ನು ದತ್ತು ಪಡೆಯುವಂತೆ ದರ್ಶನ್ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದರು.
![Adoption of animals](https://etvbharatimages.akamaized.net/etvbharat/prod-images/kn-mys-01-actor-darshan-vis-ka10003_07062021114321_0706f_1623046401_914.jpg)
ನೆಚ್ಚಿನ ನಟನ ಮನವಿಗೆ ಸ್ಪಂದಿಸಿದ ಅಭಿಮಾನಿಗಳು ಹಾಗೂ ಪ್ರಾಣಿ ಪ್ರಿಯರು ಮೃಗಾಲಯದಲ್ಲಿರುವ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಒಟ್ಟು 17 ಲಕ್ಷ ರೂ. ದೇಣಿಗೆ ಸಂಗ್ರಹವಾಗಿದ್ದು, ಕರ್ನಾಟಕ ಮೃಗಾಲಯ ಪ್ರಾಧಿಕಾರ ದರ್ಶನ್ಗೆ ಧನ್ಯವಾದ ತಿಳಿಸಿದೆ.
![Adoption of animals](https://etvbharatimages.akamaized.net/etvbharat/prod-images/kn-mys-01-actor-darshan-vis-ka10003_07062021114321_0706f_1623046401_149.jpeg)
ಇದನ್ನೂ ಓದಿ: ಪುಸ್ತಕ ಹಿಡಿಯುವ ಕೈಯ್ಯಲ್ಲಿ ಮದ್ಯದ ಲೋಟ, ಸಾಲದ್ದಕ್ಕೆ ಬಾಡೂಟ: ವಿಡಿಯೋ ವೈರಲ್