ETV Bharat / city

ರಿಕ್ಷಾ ಮೇಲೆ ಬಿದ್ದ ಮರ: ಚಾಲಕನ ಸಮಯ ಪ್ರಜ್ಞೆಯಿಂದ ಐವರು ಪಾರು - undefined

ಏಕಾಏಕಿ ಬೃಹತ್ ಗಾತ್ರದ ಮಾವಿನ ಮರವೊಂದು ರಿಕ್ಷಾ ಮೇಲೆ ಬಿದ್ದಿದ್ದು, ಡ್ರೈವರ್ ಸಮಯ ಪ್ರಜ್ಞೆಯಿಂದ ರಿಕ್ಷಾದಲ್ಲಿದ್ದ ಇಬ್ಬರು ಮಕ್ಕಳ ಸಹಿತ ಐವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಿಕ್ಷಾ ಮೇಲೆ ಬಿದ್ದ ಮರ
author img

By

Published : Apr 22, 2019, 9:46 PM IST

ಮಂಗಳೂರು: ಬೃಹತ್ ಗಾತ್ರದ ಮಾವಿನ ಮರವೊಂದು ಆಟೊ ರಿಕ್ಷಾವೊಂದರ ಮೇಲೆ ಬಿದ್ದಿದ್ದು, ಡ್ರೈವರ್​ನ ಸಮಯ ಪ್ರಜ್ಞೆಯಿಂದ‌ ಐವರು ಪ್ರಾಣಾಪಾಯದಿಂದ ಪಾರಾದ ಘಟನೆ ಕೋಟೆಕಾರ್ ಪಂಚಾಯತ್ ಬಳಿ‌ ಇಂದು ನಡೆದಿದೆ.

ಉಮೇಶ್ ಪೂಜಾರಿ ತನ್ನ ರಿಕ್ಷಾದೊಂದಿಗೆ ತಲಪಾಡಿ ಸಮೀಪದ ಸೋಮೇಶ್ವರ ಬಳಿ ಬಂದಾಗ ಏಕಾಏಕಿ ಬೃಹತ್ ಗಾತ್ರದ ಮಾವಿನ ಮರವೊಂದು ರಿಕ್ಷಾ ಮೇಲೆ ಬಿದ್ದಿದೆ. ಆದರೆ ರಿಕ್ಷಾ ಡ್ರೈವರ್ ಉಮೇಶ್​ರವರ ಸಮಯ ಪ್ರಜ್ಞೆಯಿಂದ ರಿಕ್ಷಾದಲ್ಲಿದ್ದ ಇಬ್ಬರು ಮಕ್ಕಳ ಸಹಿತ ಐವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರಿಂದ ದೊಡ್ಡ ಅಪಾಯವೊಂದು ತಪ್ಪಿದಂತಾಗಿದೆ.

ಮಂಗಳೂರು: ಬೃಹತ್ ಗಾತ್ರದ ಮಾವಿನ ಮರವೊಂದು ಆಟೊ ರಿಕ್ಷಾವೊಂದರ ಮೇಲೆ ಬಿದ್ದಿದ್ದು, ಡ್ರೈವರ್​ನ ಸಮಯ ಪ್ರಜ್ಞೆಯಿಂದ‌ ಐವರು ಪ್ರಾಣಾಪಾಯದಿಂದ ಪಾರಾದ ಘಟನೆ ಕೋಟೆಕಾರ್ ಪಂಚಾಯತ್ ಬಳಿ‌ ಇಂದು ನಡೆದಿದೆ.

ಉಮೇಶ್ ಪೂಜಾರಿ ತನ್ನ ರಿಕ್ಷಾದೊಂದಿಗೆ ತಲಪಾಡಿ ಸಮೀಪದ ಸೋಮೇಶ್ವರ ಬಳಿ ಬಂದಾಗ ಏಕಾಏಕಿ ಬೃಹತ್ ಗಾತ್ರದ ಮಾವಿನ ಮರವೊಂದು ರಿಕ್ಷಾ ಮೇಲೆ ಬಿದ್ದಿದೆ. ಆದರೆ ರಿಕ್ಷಾ ಡ್ರೈವರ್ ಉಮೇಶ್​ರವರ ಸಮಯ ಪ್ರಜ್ಞೆಯಿಂದ ರಿಕ್ಷಾದಲ್ಲಿದ್ದ ಇಬ್ಬರು ಮಕ್ಕಳ ಸಹಿತ ಐವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರಿಂದ ದೊಡ್ಡ ಅಪಾಯವೊಂದು ತಪ್ಪಿದಂತಾಗಿದೆ.

Intro:Body:

ಮಧ್ಯರಾತ್ರಿಯಿಂದಲೇ ತುರ್ತು ಪರಿಸ್ಥಿತಿ ಘೋಷಿಸಿದ ಲಂಕಾ ಅಧ್ಯಕ್ಷರು.. ನಾಳೆ ರಾಷ್ಟ್ರೀಯ ಶೋಕಾಚರಣೆ!



ಕೊಲಂಬೊ,(ಶ್ರೀಲಂಕಾ): ಬ್ಲಾಸ್ಟರ್‌ ಸರಣಿ ಬಾಂಬ್‌ ಸ್ಫೋಟದ ಹಿನ್ನೆಲೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸೋಮವಾರ ಮಧ್ಯರಾತ್ರಿಯಿಂದಲೇ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಜತೆಗೆ ಸ್ಥಳೀಯ ಉಗ್ರರ ಜತೆಗೆ ವಿದೇಶಿ ಭಯೋತ್ಪಾದಕ ಸಂಘಟನೆಗಳ ಪಾತ್ರವಿದೆ ಎಂಬ ಕಾರಣ ಜಾಗತಿಕ ಸಮುದಾಯದ ನೆರವು ಕೋರಿದ್ದಾರೆ.



ನೆರೆಯ ದೇಶ ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲೀಗ ಅಕ್ಷರಶಃ ಸ್ಮಶಾನ ಸದೃಶ ವಾತಾವರಣವಿದೆ. ಉಗ್ರರ ಕೃತ್ಯ ತಡೆಯಲು ಸರ್ಕಾರ ಸೋಮವಾರ ಮಧ್ಯರಾತ್ರಿಯಿಂದಲೇ ತುರ್ತು ಪರಿಸ್ಥಿತಿ ಹೇರಿ ಅಧಿಸೂಚನೆ ಹೊರಡಿಸಿದೆ ಅಂತಾ ಅಧ್ಯಕ್ಷ ಮೈತ್ರಿಪಾಲ್ ಸಿರಿಸೇನಾ ಹೇಳಿದ್ದಾರೆ. ಉಗ್ರವಾದ ಹತ್ತಿಕ್ಕಲು ಈ ಕ್ರಮಕೈಗೊಳ್ಳಲಾಗಿದೆ. ಈಸ್ಟರ್ನ್‌ ಸರಣಿ ಬಾಂಬ್ ಸ್ಫೋಟದಲ್ಲಿ ಸ್ಥಳೀಯ ಉಗ್ರರ ಹಿಂದೆ ವಿದೇಶಿ ಭಯೋತ್ಪಾದಕ ಸಂಘಟನೆಗಳ ಪಾತ್ರವೂ ಇದೆ ಅಂತಾ ಗುಪ್ತಚರ ವರದಿ ನೀಡಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಜಾಗತಿಕ ಸಮುದಾಯದ ನೆರವನ್ನ ಶ್ರೀಲಂಕಾ ಅಧ್ಯಕ್ಷರು ಕೋರಿದ್ದಾರೆ. ಅಷ್ಟೇ ಅಲ್ಲ, ನಾಳೆ ಏಪ್ರಿಲ್‌ 23ರಂದು ರಾಷ್ಟ್ರೀಯ ಶೋಕ ದಿನ ಆಚರಿಸಲಾಗುವುದು ಎಂದು ಅಧ್ಯಕ್ಷರ ಕಚೇರಿಯ ಮಾಧ್ಯಮ ವಿಭಾಗ ತಿಳಿಸಿದೆ. 



ಗಡಿಯಲ್ಲಿ ಕಣ್ಗಾವಲು, ವಿಮಾನಗಳ ಹಾರಾಟ ತಡ :

ಕರಾವಳಿ ಪಡೆ ಶ್ರೀಲಂಕಾ ಕಡಲ ಗಡಿಯಲ್ಲಿ ಕಟ್ಟೆಚ್ಚರವಹಿಸಿದೆ. ಹಡಗು ಮತ್ತು ವಿಮಾನಗಳು ಕಡಲ ಗಡಿಗುಂಟ ಕಣ್ಗಾವಲಿರಿಸಿವೆ. ಆತ್ಮಹತ್ಯೆ ದಾಳಿಕೋರರು ತಪ್ಪಿಸಿಕೊಳ್ಳದಂತೆ ಕಡಲ ಗಡಿಗುಂಟ ಹದ್ದಿನ ಕಣ್ಣಿರಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟದ ವೇಳಾಪಟ್ಟಿ ಅದಲು ಬದಲಾಗಿದೆ. ಪ್ರತಿ ಪ್ರಯಾಣಿಕರನ್ನೂ ಹೆಚ್ಚಿನ ಪರಿಶೀಲನೆಗೊಳಪಡಿಸಲಾಗುತ್ತಿದ್ದು, ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಕನಿಷ್ಠ 4 ಗಂಟೆ ತಡವಾಗುತ್ತಿದೆ. ಈಸ್ಟರ್‌ ಸರಣಿ ಬಾಂಬ್ ಸ್ಫೋಟದ ಹಿಂದೆ ನ್ಯಾಷನಲ್ ತೌಹೀದ್ ಜಮಾತ್ ಉಗ್ರ ಸಂಘಟನೆ ಕೈವಾಡದ ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆ ಬಾಂಬ್ ದಾಳಿಯಲ್ಲಿ ಲಂಕಾ ಉಗ್ರರ ಕೈವಾಡ ದೃಢಪಟ್ಟಿದೆ ಅಂತಾ ಸಂಪುಟ ಸಚಿವ ರಜಿತಾ ಸೇನಾರತ್ನೆ ಹೇಳಿದ್ದಾರೆ. ಬಾಂಬ್‌ ಸ್ಫೋಟದ ಆರೋಪದ ಮೇಲೆ ಪೊಲೀಸರು 24 ಶಂಕಿತರನ್ನ ಬಂಧಿಸಿದ್ದಾರೆ. ಈವರೆಗೂ 290ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ರೇ, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬಾಂಬ್ ದಾಳಿಯಲ್ಲಿ ಭಾರತ, ಇಂಗ್ಲೆಂಡ್‌ ಸೇರಿ ಇತರ ರಾಷ್ಟ್ರಗಳ ಪ್ರಜೆಗಳೂ ಸಾವನ್ನಪ್ಪಿರೋದು ದೃಢಪಟ್ಟಿದೆ.10 ವರ್ಷದ ಹಿಂದಿನ ನಾಗರಿಕ ಯುದ್ಧದ ಬಳಿಕ ಲಂಕಾದಲ್ಲಿ ಅತೀ ಹೆಚ್ಚು ಸಾವುನೋವುಗಳಾಗಿವೆ. ಕೊಲಂಬೊದ ಶಾಂಘ್ರೀಲಾ, ಕಿಂಗ್ಸ್‌ಬರೀ, ಸಿನ್ನಾಮನ್ ಗ್ರ್ಯಾಂಡ್‌ ಸೇರಿ ಲಂಕಾದ ನಾಲ್ಕು ಹೋಟೆಲ್‌ಗಳು ಮತ್ತು ಚರ್ಚ್‌ಗಳನ್ನೇ ಗುರಿಯಾಗಿಸಿ ಭಾನುವಾರ 8 ಕಡೆಗೆ ಸರಣಿ ಬಾಂಬ್ ಸ್ಫೋಟವಾಗಿತ್ತು.



ಬಸ್‌ ನಿಲ್ದಾಣದಲ್ಲಿ 87ಕ್ಕೂ ಅಧಿಕ ಜೀವಂತ ಬಾಂಬ್‌ ಪತ್ತೆ :

ಕೊಲಂಬೊದ ಬಾಸ್ಟಿಯನ್‌ ಮವಾತ್‌ ಖಾಸಗಿ ಬಸ್‌ ನಿಲ್ದಾಣದಲ್ಲಿ 87ಕ್ಕೂ ಹೆಚ್ಚು ಬಾಂಬ್‌ ಡೆಟೋನೇಟರ್‌ಗಳನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. 12 ಬಾಂಬ್‌ಗಳನ್ನ ಎಲ್ಲೆಂದರಲ್ಲಿ ಎಸೆಯಲಾಗಿತ್ತು. 75 ಬಾಂಬ್‌ಗಳನ್ನ ಕಸದ ತೊಟ್ಟಿಯಲ್ಲಿರಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.