ETV Bharat / city

ಲಾಕ್​​ಡೌನ್​​ 2.0 ಜಾರಿ: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ

author img

By

Published : Apr 14, 2020, 8:11 PM IST

ಮತ್ತೆ ಲಾಕ್​ಡೌನ್​ ಮುಂದುವರಿದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

Strict action by the police
ಬಿಗಿ ಬಂದೋಬಸ್ತ್​​

ಪುತ್ತೂರು: ಕೊರೊನಾ ಲಾಕ್​​ಡೌನ್ ಜಾರಿಗೆ ಬಂದು ಇಂದಿಗೆ 21 ದಿನ ಕಳೆದಿದೆ. ನಾಳೆಯಿಂದ ಮೇ.3ರ ತನಕ ಲಾಕ್​​​​ಡೌನ್ ಮತ್ತೆ ಮುಂದುವರೆಯಲಿದೆ. ಈ ಕುರಿತು ಪ್ರಧಾನಿ ಮೋದಿ ಬೆಳಗ್ಗೆ ಘೋಷಿಸಿದ್ದರು.

ಈ ಹಿನ್ನೆಲೆ ಜಿಲ್ಲಾದ್ಯಂತ ಪೊಲೀಸರು ಲಾಕ್​​​​ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದ್ದಾರೆ. ಪುತ್ತೂರು ನಗರದಲ್ಲಿ ಅನವಶ್ಯಕವಾಗಿ ತಿರುಗಾಡುತ್ತಿರುವ ವಾಹನಗಳ ಜಪ್ತಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 500ಕ್ಕೂ ಮಿಕ್ಕಿದ ವಾಹನಗಳನ್ನು ಪೋಲೀಸರು ಸೀಜ್​​ ಮಾಡಿದ್ದಾರೆ.

ಇನ್ನು, ಜನಧನ್ ಖಾತೆಯ ಹಣ ಪಡೆಯಲು ಬ್ಯಾಂಕುಗಳೆದುರು ಜನರು ಮುಗಿಬೀಳುತ್ತಿದ್ದಾರೆ. ಈ ವೇಳೆ ಅವರ ನಿಯಂತ್ರಣಕ್ಕೂ ಪೋಲೀಸರು ಕ್ರಮ ಕೈಗೊಂಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಸರತಿ ಸಾಲಿನಲ್ಲಿ ನಿಲ್ಲುವಂತೆ ಜನರಿಗೆ ಸೂಚನೆ ನೀಡುತ್ತಿದ್ದಾರೆ.

ಪುತ್ತೂರು: ಕೊರೊನಾ ಲಾಕ್​​ಡೌನ್ ಜಾರಿಗೆ ಬಂದು ಇಂದಿಗೆ 21 ದಿನ ಕಳೆದಿದೆ. ನಾಳೆಯಿಂದ ಮೇ.3ರ ತನಕ ಲಾಕ್​​​​ಡೌನ್ ಮತ್ತೆ ಮುಂದುವರೆಯಲಿದೆ. ಈ ಕುರಿತು ಪ್ರಧಾನಿ ಮೋದಿ ಬೆಳಗ್ಗೆ ಘೋಷಿಸಿದ್ದರು.

ಈ ಹಿನ್ನೆಲೆ ಜಿಲ್ಲಾದ್ಯಂತ ಪೊಲೀಸರು ಲಾಕ್​​​​ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದ್ದಾರೆ. ಪುತ್ತೂರು ನಗರದಲ್ಲಿ ಅನವಶ್ಯಕವಾಗಿ ತಿರುಗಾಡುತ್ತಿರುವ ವಾಹನಗಳ ಜಪ್ತಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 500ಕ್ಕೂ ಮಿಕ್ಕಿದ ವಾಹನಗಳನ್ನು ಪೋಲೀಸರು ಸೀಜ್​​ ಮಾಡಿದ್ದಾರೆ.

ಇನ್ನು, ಜನಧನ್ ಖಾತೆಯ ಹಣ ಪಡೆಯಲು ಬ್ಯಾಂಕುಗಳೆದುರು ಜನರು ಮುಗಿಬೀಳುತ್ತಿದ್ದಾರೆ. ಈ ವೇಳೆ ಅವರ ನಿಯಂತ್ರಣಕ್ಕೂ ಪೋಲೀಸರು ಕ್ರಮ ಕೈಗೊಂಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಸರತಿ ಸಾಲಿನಲ್ಲಿ ನಿಲ್ಲುವಂತೆ ಜನರಿಗೆ ಸೂಚನೆ ನೀಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.