ETV Bharat / city

ದೇವಾಲಯ ತೆರೆಯುವ ಅನುಮತಿ: ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ಪೂರ್ವ ಸಿದ್ಧತೆ - ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ನ್ಯೂಸ್​

ಜೂನ್ 1 ರಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯಕ್ಕೆ ಭಕ್ತರು ಬರಲು ಯಾವುದೇ ನಿರ್ಬಂಧ ಇಲ್ಲ. ಆದರೆ ದೇವಾಲಯ ಪ್ರವೇಶಕ್ಕೆ ಮುನ್ನ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸ್ಯಾನಿಟೈಸರ್​ ಬಳಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಕುದ್ರೋಳಿ ಶ್ರೀ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.

Preparation of Kudroli Shree temple
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಪೂರ್ವ ಸಿದ್ಧತೆ
author img

By

Published : May 27, 2020, 7:22 PM IST

ಮಂಗಳೂರು: ಜೂನ್ 1 ರಿಂದ ದೇವಸ್ಥಾನಗಳಿಗೆ ಭಕ್ತರು ಪ್ರವೇಶಿಸಬಹುದು ಎಂದು ಸರ್ಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯಕ್ಕೆ ಕೆಲ ಪೂರ್ವ ಸಿದ್ಧತೆ ಕಾರ್ಯ ಕೈಗೊಳ್ಳಲಿದ್ದು ಸ್ಯಾನಿಟೈಸೇಷನ್ ಮಾಡುತ್ತೇವೆ ಎಂದು ಕುದ್ರೋಳಿ ಶ್ರೀ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಹೇಳಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಪೂರ್ವ ಸಿದ್ಧತೆ

ಜೂನ್ 1 ರಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯಕ್ಕೆ ಭಕ್ತರು ಬರಲು ಯಾವುದೇ ನಿರ್ಬಂಧ ಇಲ್ಲ. ಆದರೆ ದೇವಾಲಯ ಪ್ರವೇಶಕ್ಕೆ ಮುನ್ನ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸ್ಯಾನಿಟೈಸರ್​ ಬಳಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಲಿದೆ. ಅಲ್ಲದೇ ಕೊರೊನಾ ಮಹಾಮಾರಿ ಬೇಗ ಶಮನವಾಗಲು ಜೂನ್ 1 ರಂದು ದೇವಳದಲ್ಲಿ ಬೆಳಗ್ಗೆ 8.30 ಕ್ಕೆ ಧನ್ವಂತರಿ ಹೋಮ ನಡೆಸಲಿದ್ದೇವೆ. ಅದೇ ರೀತಿ ಗೋಕರ್ಣನಾಥ ಶತ ಸೀಯಾಳಾಭಿಷೇಕ ನಡೆಸಲಿದ್ದೇವೆ ಎಂದು ಹೇಳಿದರು.

ಕೊರೊನಾ ಸೋಂಕಿನ ನಿಯಂತ್ರಿಸಲು ಸರ್ಕಾರ ಮಸೀದಿ, ಚರ್ಚ್, ದೇವಸ್ಥಾನಕ್ಕೆ ಜನರು ಆಗಮಿಸುವುದಕ್ಕೆ ನಿರ್ಬಂಧ ಹೇರಿತ್ತು. ಆ ಪ್ರಕಾರ ನಾವು ಕೂಡ ಮಾರ್ಚ್ 22 ರಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭಕ್ತರು ಆಗಮಿಸುವುದಕ್ಕೆ ನಿರ್ಬಂಧ ಹೇರಿದ್ದೆವು. ದೇವಳದ ಸಿಬ್ಬಂದಿ ಹಾಗೂ ಪುರೋಹಿತರು ಮಾತ್ರ ಇದ್ದು ತ್ರಿಕಾಲ ಪೂಜೆ ನೆರವೇರುತ್ತಿತ್ತು ಎಂದು ಪದ್ಮರಾಜ್ ಆರ್. ಹೇಳಿದರು.

ಮಂಗಳೂರು: ಜೂನ್ 1 ರಿಂದ ದೇವಸ್ಥಾನಗಳಿಗೆ ಭಕ್ತರು ಪ್ರವೇಶಿಸಬಹುದು ಎಂದು ಸರ್ಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯಕ್ಕೆ ಕೆಲ ಪೂರ್ವ ಸಿದ್ಧತೆ ಕಾರ್ಯ ಕೈಗೊಳ್ಳಲಿದ್ದು ಸ್ಯಾನಿಟೈಸೇಷನ್ ಮಾಡುತ್ತೇವೆ ಎಂದು ಕುದ್ರೋಳಿ ಶ್ರೀ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಹೇಳಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಪೂರ್ವ ಸಿದ್ಧತೆ

ಜೂನ್ 1 ರಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯಕ್ಕೆ ಭಕ್ತರು ಬರಲು ಯಾವುದೇ ನಿರ್ಬಂಧ ಇಲ್ಲ. ಆದರೆ ದೇವಾಲಯ ಪ್ರವೇಶಕ್ಕೆ ಮುನ್ನ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸ್ಯಾನಿಟೈಸರ್​ ಬಳಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಲಿದೆ. ಅಲ್ಲದೇ ಕೊರೊನಾ ಮಹಾಮಾರಿ ಬೇಗ ಶಮನವಾಗಲು ಜೂನ್ 1 ರಂದು ದೇವಳದಲ್ಲಿ ಬೆಳಗ್ಗೆ 8.30 ಕ್ಕೆ ಧನ್ವಂತರಿ ಹೋಮ ನಡೆಸಲಿದ್ದೇವೆ. ಅದೇ ರೀತಿ ಗೋಕರ್ಣನಾಥ ಶತ ಸೀಯಾಳಾಭಿಷೇಕ ನಡೆಸಲಿದ್ದೇವೆ ಎಂದು ಹೇಳಿದರು.

ಕೊರೊನಾ ಸೋಂಕಿನ ನಿಯಂತ್ರಿಸಲು ಸರ್ಕಾರ ಮಸೀದಿ, ಚರ್ಚ್, ದೇವಸ್ಥಾನಕ್ಕೆ ಜನರು ಆಗಮಿಸುವುದಕ್ಕೆ ನಿರ್ಬಂಧ ಹೇರಿತ್ತು. ಆ ಪ್ರಕಾರ ನಾವು ಕೂಡ ಮಾರ್ಚ್ 22 ರಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭಕ್ತರು ಆಗಮಿಸುವುದಕ್ಕೆ ನಿರ್ಬಂಧ ಹೇರಿದ್ದೆವು. ದೇವಳದ ಸಿಬ್ಬಂದಿ ಹಾಗೂ ಪುರೋಹಿತರು ಮಾತ್ರ ಇದ್ದು ತ್ರಿಕಾಲ ಪೂಜೆ ನೆರವೇರುತ್ತಿತ್ತು ಎಂದು ಪದ್ಮರಾಜ್ ಆರ್. ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.