ETV Bharat / city

ಮಂಗಳೂರಲ್ಲಿ ಮೀನುಗಾರ ಮಹಿಳೆಯರ ಅಹವಾಲು ಆಲಿಸಿ,  ಮತ ಯಾಚಿಸಿದ ತಾರಾ - undefined

ನಾನು ಚುನಾವಣಾ ಪ್ರಚಾರದ ದೃಷ್ಟಿಯಿಂದ ಇಡೀ ರಾಜ್ಯಾದ್ಯಂತ ಸಂಚರಿಸುತ್ತಿದ್ದೇನೆ. ಎಲ್ಲರಿಗೂ ಒಂದು ರೀತಿ ಅರಿವು ಮೂಡಿದೆ. ಎಲ್ಲರಲ್ಲೂ ಮೋದಿಯ ಹೆಸರು ಕೇಳಿ ಬರುತ್ತಿದೆ. ಕರ್ನಾಟಕದ ಎಲ್ಲಾ 28 ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ ಲಭಿಸಬೇಕು. ಮತ್ತೊಮ್ಮೆ ಮೋದಿಯವರೇ ಪ್ರಧಾನಿಯಾಗಬೇಕು ಎಂದು ನಟಿ ತಾರಾ ಹೇಳಿದರು.

ಮಂಗಳೂರು ಮೀನು ಮಾರುಕಟ್ಟೆ ಬಳಿ ನಟಿ ತಾರಾ ಚುನಾವಣಾ ಪ್ರಚಾರ
author img

By

Published : Apr 4, 2019, 7:00 PM IST

ಮಂಗಳೂರು: ಕನ್ನಡದ ಖ್ಯಾತ ನಟಿ, ಬಿಜೆಪಿ ಮುಖಂಡೆ ತಾರಾ ಅನುರಾಧ್​ ಇಂದು ನಗರದ ಸ್ಟೇಟ್ ಬ್ಯಾಂಕ್​ ಪಕ್ಕದಲ್ಲಿರುವ ಮೀನು ಮಾರುಕಟ್ಟೆಯಲ್ಲಿ‌ ಚುನಾವಣಾ ಪ್ರಚಾರ ನಡೆಸಿದರು.

ಈ ಸಂದರ್ಭ ಅವರು ಮೀನುಗಾರ ಮಹಿಳೆಯರ ಅಹವಾಲುಗಳನ್ನು ಆಲಿಸಿ ಅವರೊಂದಿಗೆ ಸಂವಾದ ನಡೆಸಿದರು.ನಂತರ ಸುದ್ದಿಗಾರರೊಂದಿಗೆ ನಟಿ‌ ತಾರಾ ಮಾತನಾಡಿ, ನಾನು ಮೀನುಗಾರ ಮಹಿಳೆಯರೊಂದಿಗೆ ಮಾತನಾಡಿದ್ದು, ಇಲ್ಲಿನ ಮೀನು ಮಾರಾಟ ಮಾಡುವ ಮಹಿಳೆಯರನ್ನು ಇಲ್ಲಿಂದ ಸ್ಥಳಾಂತರ ಮಾಡಲಾಗುತ್ತಿದೆ. ಅದು ಬೇಡ, ನಮಗೆ ಇಲ್ಲಿಯೇ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಿ ಎಂಬ‌ ಬೇಡಿಕೆ ಮುಂಡಿಟ್ಟಿದ್ದಾರೆ. ಹಿಂದೆಕೃಷಿ ಇಲಾಖೆಯೊಂದಿಗಿದ್ದ ಮೀನುಗಾರಿಕೆಗೆ ಮೋದಿ ಸರ್ಕಾರ ಬೇರೆಯೇ ಇಲಾಖೆ ಮಾಡಿದೆ. ಅಲ್ಲಿ ಪ್ರತ್ಯೇಕ ಮಂತ್ರಿಯನ್ನೂ ನೇಮಕ ಮಾಡಿದೆ. ಇದು ಮೀನುಗಾರರಿಗೆ ಸಿಕ್ಕಿದ ದೊಡ್ಡ ಗೆಲುವು. ಇದರಿಂದ ಇಡೀ ದೇಶದ ಸಮಗ್ರ ಮೀನುಗಾರರ ಸಮಸ್ಯೆಗಳ ನಿವಾರಣೆ ಸಾಧ್ಯ ಎಂದು ತಿಳಿಸಿದರು.

ನಾನು ಚುನಾವಣಾ ಪ್ರಚಾರದ ದೃಷ್ಟಿಯಿಂದ ರಾಜ್ಯಾದ್ಯಂತ ಸಂಚರಿಸುತ್ತಿದ್ದೇನೆ. ಎಲ್ಲಡೆ ಒಂದು ರೀತಿ ಅರಿವು ಮೂಡಿದ್ದು, ಎಲ್ಲರಲ್ಲೂ ಮೋದಿಯ ಹೆಸರು ಕೇಳಿ ಬರುತ್ತಿದೆ. ನಮ್ಮ ಉದ್ದೇಶ ಕರ್ನಾಟಕದ ಎಲ್ಲಾ 28 ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ ಲಭಿಸಬೇಕು. ಮತ್ತೊಮ್ಮೆ ಮೋದಿಯವರೇ ಪ್ರಧಾನಿಯಾಗಬೇಕು ಎಂದು ನಟಿ ತಾರಾ ಹೇಳಿದರು.

ಮಂಗಳೂರು ಮೀನು ಮಾರುಕಟ್ಟೆ ಬಳಿ ನಟಿ ತಾರಾ ಚುನಾವಣಾ ಪ್ರಚಾರ

ನಾನು ಇಲ್ಲಿಗೆ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತಳಾಗಿ ಬಂದಿದ್ದೇನೆ. ಈ ಮಾರುಕಟ್ಟೆಯು ಸ್ಥಳಾಂತರಗೊಳ್ಳುತ್ತೆ, ಶುಚಿ ಇಲ್ಲ ಎಂಬ ಅನೇಕ ಸಮಸ್ಯೆಗಳಿವೆ. ಇದನ್ನು ಇಲ್ಲಿನ ರಾಜ್ಯ ಸರ್ಕಾರ ನಿವಾರಣೆ ಮಾಡಬೇಕಿತ್ತು. ಆದ್ರೆ ಸರ್ಕಾರದಿಂದ ಆ ಕೆಲಸ ಆಗಿಲ್ಲ. ಹೀಗಾಗಿ ರಾಜ್ಯದಲ್ಲೂ ಬದಲಾವಣೆ ಬೇಕು. ಇದರಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಅಭಿಪ್ರಾಯಪಟ್ರು.

ಸಿನಿಮಾ ಕಲಾವಿದರು ರಾಜಕೀಯ ರಂಗಕ್ಕೆ ಬರುವ ಬಗ್ಗೆ ಸಿಎಂ ಕುಮಾರಸ್ವಾಮಿ ಟೀಕಿಸಿರುವ ಕುರಿತು ಮಾತನಾಡಿದ ಅವರು, ಸ್ವತಃ ಕುಮಾರಸ್ವಾಮಿಯವರೂ ಕೂಡಾ ನಿರ್ಮಾಪಕರಾಗಿ ಸಿನಿಮಾ ನಂಟು ಹೊಂದಿರುವವರು. ಅವರ ಸುಪುತ್ರ ಸಿನಿಮಾ‌ ಕಲಾವಿದರು. ಈ ಸಿನಿಮಾ ಕಲಾವಿದರೆಂದರೆ ಸಮಾಜದಿಂದ ಹೊರಗಿರುವ ವರ್ಗ ಅಲ್ಲ. ಅವರೂ ಕೂಡ ಸಮಾಜದ ಒಂದು ವರ್ಗ. ಸಿನಿಮಾ ರಂಗವನ್ನು ಯಾಕೆ ಜರಿಯುತ್ತಿದ್ದಾರೆ ಎಂಬುದನ್ನು‌ ನೀವು ಅವರನ್ನೇ ಕೇಳಬೇಕು ಎಂದರು.

ಇನ್ನು ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್​ ಕುರಿತು ಪ್ರತಿಕ್ರಿಯಿಸಿ ತಾರಾ, ನಳೀನ್​ ಕುಮಾರ್ ರಾಜ್ಯದ ನಂ 1 ಲೋಕಸಭಾ ಸದಸ್ಯರು. ರಾಷ್ಟ್ರದಲ್ಲಿ 26 ನೇ ಸ್ಥಾನ ಪಡೆದವರು. ಅವರ ಕಾರ್ಯ ಸಾಧನೆಗಳನ್ನು ಕರಪತ್ರಗಳಲ್ಲಿ‌ ಮುದ್ರಿಸಿದ್ದೇವೆ. ಅವರಿಗಿಂತ ಒಳ್ಳೆಯ ಅಭ್ಯರ್ಥಿ ಬೇರೆಯಾರೂ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್, ಸುಲೋಚನಾ ಭಟ್, ಪೂರ್ಣಿಮಾ ಭಟ್ ಮತ್ತು ಮಹಿಳಾ ಬಿಜೆಪಿ ಕಾರ್ಯಕರ್ತರ ಜೊತೆಗಿದ್ದರು.

ಮಂಗಳೂರು: ಕನ್ನಡದ ಖ್ಯಾತ ನಟಿ, ಬಿಜೆಪಿ ಮುಖಂಡೆ ತಾರಾ ಅನುರಾಧ್​ ಇಂದು ನಗರದ ಸ್ಟೇಟ್ ಬ್ಯಾಂಕ್​ ಪಕ್ಕದಲ್ಲಿರುವ ಮೀನು ಮಾರುಕಟ್ಟೆಯಲ್ಲಿ‌ ಚುನಾವಣಾ ಪ್ರಚಾರ ನಡೆಸಿದರು.

ಈ ಸಂದರ್ಭ ಅವರು ಮೀನುಗಾರ ಮಹಿಳೆಯರ ಅಹವಾಲುಗಳನ್ನು ಆಲಿಸಿ ಅವರೊಂದಿಗೆ ಸಂವಾದ ನಡೆಸಿದರು.ನಂತರ ಸುದ್ದಿಗಾರರೊಂದಿಗೆ ನಟಿ‌ ತಾರಾ ಮಾತನಾಡಿ, ನಾನು ಮೀನುಗಾರ ಮಹಿಳೆಯರೊಂದಿಗೆ ಮಾತನಾಡಿದ್ದು, ಇಲ್ಲಿನ ಮೀನು ಮಾರಾಟ ಮಾಡುವ ಮಹಿಳೆಯರನ್ನು ಇಲ್ಲಿಂದ ಸ್ಥಳಾಂತರ ಮಾಡಲಾಗುತ್ತಿದೆ. ಅದು ಬೇಡ, ನಮಗೆ ಇಲ್ಲಿಯೇ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಿ ಎಂಬ‌ ಬೇಡಿಕೆ ಮುಂಡಿಟ್ಟಿದ್ದಾರೆ. ಹಿಂದೆಕೃಷಿ ಇಲಾಖೆಯೊಂದಿಗಿದ್ದ ಮೀನುಗಾರಿಕೆಗೆ ಮೋದಿ ಸರ್ಕಾರ ಬೇರೆಯೇ ಇಲಾಖೆ ಮಾಡಿದೆ. ಅಲ್ಲಿ ಪ್ರತ್ಯೇಕ ಮಂತ್ರಿಯನ್ನೂ ನೇಮಕ ಮಾಡಿದೆ. ಇದು ಮೀನುಗಾರರಿಗೆ ಸಿಕ್ಕಿದ ದೊಡ್ಡ ಗೆಲುವು. ಇದರಿಂದ ಇಡೀ ದೇಶದ ಸಮಗ್ರ ಮೀನುಗಾರರ ಸಮಸ್ಯೆಗಳ ನಿವಾರಣೆ ಸಾಧ್ಯ ಎಂದು ತಿಳಿಸಿದರು.

ನಾನು ಚುನಾವಣಾ ಪ್ರಚಾರದ ದೃಷ್ಟಿಯಿಂದ ರಾಜ್ಯಾದ್ಯಂತ ಸಂಚರಿಸುತ್ತಿದ್ದೇನೆ. ಎಲ್ಲಡೆ ಒಂದು ರೀತಿ ಅರಿವು ಮೂಡಿದ್ದು, ಎಲ್ಲರಲ್ಲೂ ಮೋದಿಯ ಹೆಸರು ಕೇಳಿ ಬರುತ್ತಿದೆ. ನಮ್ಮ ಉದ್ದೇಶ ಕರ್ನಾಟಕದ ಎಲ್ಲಾ 28 ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ ಲಭಿಸಬೇಕು. ಮತ್ತೊಮ್ಮೆ ಮೋದಿಯವರೇ ಪ್ರಧಾನಿಯಾಗಬೇಕು ಎಂದು ನಟಿ ತಾರಾ ಹೇಳಿದರು.

ಮಂಗಳೂರು ಮೀನು ಮಾರುಕಟ್ಟೆ ಬಳಿ ನಟಿ ತಾರಾ ಚುನಾವಣಾ ಪ್ರಚಾರ

ನಾನು ಇಲ್ಲಿಗೆ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತಳಾಗಿ ಬಂದಿದ್ದೇನೆ. ಈ ಮಾರುಕಟ್ಟೆಯು ಸ್ಥಳಾಂತರಗೊಳ್ಳುತ್ತೆ, ಶುಚಿ ಇಲ್ಲ ಎಂಬ ಅನೇಕ ಸಮಸ್ಯೆಗಳಿವೆ. ಇದನ್ನು ಇಲ್ಲಿನ ರಾಜ್ಯ ಸರ್ಕಾರ ನಿವಾರಣೆ ಮಾಡಬೇಕಿತ್ತು. ಆದ್ರೆ ಸರ್ಕಾರದಿಂದ ಆ ಕೆಲಸ ಆಗಿಲ್ಲ. ಹೀಗಾಗಿ ರಾಜ್ಯದಲ್ಲೂ ಬದಲಾವಣೆ ಬೇಕು. ಇದರಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಅಭಿಪ್ರಾಯಪಟ್ರು.

ಸಿನಿಮಾ ಕಲಾವಿದರು ರಾಜಕೀಯ ರಂಗಕ್ಕೆ ಬರುವ ಬಗ್ಗೆ ಸಿಎಂ ಕುಮಾರಸ್ವಾಮಿ ಟೀಕಿಸಿರುವ ಕುರಿತು ಮಾತನಾಡಿದ ಅವರು, ಸ್ವತಃ ಕುಮಾರಸ್ವಾಮಿಯವರೂ ಕೂಡಾ ನಿರ್ಮಾಪಕರಾಗಿ ಸಿನಿಮಾ ನಂಟು ಹೊಂದಿರುವವರು. ಅವರ ಸುಪುತ್ರ ಸಿನಿಮಾ‌ ಕಲಾವಿದರು. ಈ ಸಿನಿಮಾ ಕಲಾವಿದರೆಂದರೆ ಸಮಾಜದಿಂದ ಹೊರಗಿರುವ ವರ್ಗ ಅಲ್ಲ. ಅವರೂ ಕೂಡ ಸಮಾಜದ ಒಂದು ವರ್ಗ. ಸಿನಿಮಾ ರಂಗವನ್ನು ಯಾಕೆ ಜರಿಯುತ್ತಿದ್ದಾರೆ ಎಂಬುದನ್ನು‌ ನೀವು ಅವರನ್ನೇ ಕೇಳಬೇಕು ಎಂದರು.

ಇನ್ನು ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್​ ಕುರಿತು ಪ್ರತಿಕ್ರಿಯಿಸಿ ತಾರಾ, ನಳೀನ್​ ಕುಮಾರ್ ರಾಜ್ಯದ ನಂ 1 ಲೋಕಸಭಾ ಸದಸ್ಯರು. ರಾಷ್ಟ್ರದಲ್ಲಿ 26 ನೇ ಸ್ಥಾನ ಪಡೆದವರು. ಅವರ ಕಾರ್ಯ ಸಾಧನೆಗಳನ್ನು ಕರಪತ್ರಗಳಲ್ಲಿ‌ ಮುದ್ರಿಸಿದ್ದೇವೆ. ಅವರಿಗಿಂತ ಒಳ್ಳೆಯ ಅಭ್ಯರ್ಥಿ ಬೇರೆಯಾರೂ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್, ಸುಲೋಚನಾ ಭಟ್, ಪೂರ್ಣಿಮಾ ಭಟ್ ಮತ್ತು ಮಹಿಳಾ ಬಿಜೆಪಿ ಕಾರ್ಯಕರ್ತರ ಜೊತೆಗಿದ್ದರು.

Intro:ಮಂಗಳೂರು: ಕನ್ನಡದ ಖ್ಯಾತ ನಟಿ, ಬಿಜೆಪಿ ಮುಖಂಡೆ ತಾರಾ ಇಂದು ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ನ ಪಕ್ಕದಲ್ಲಿರುವ ಮೀನು ಮಾರುಕಟ್ಟೆಯಲ್ಲಿ‌ ಚುನಾವಣಾ ಪ್ರಚಾರ ಮಾಡಿದರು. ಈ ಸಂದರ್ಭ ಅವರು ಮೀನುಗಾರ ಮಹಿಳೆಯರ ಅಹವಾಲುಗಳನ್ನು ಆಲಿಸಿ ಅವರೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ನಟಿ‌ ತಾರಾ ಮಾತನಾಡಿ, ನಾನು ಮೀನುಗಾರ ಮಹಿಳೆಯರೊಂದಿಗೆ ಮಾತನಾಡಿದ್ದು, ಇಲ್ಲಿನ ಮೀನು ಮಾರಾಟ ಮಾಡುವ ಮಹಿಳೆಯರನ್ನು ಇಲ್ಲಿಂದ ಸ್ಥಳಾಂತರ ಮಾಡಲಾಗುತ್ತಿದೆ ಅದು ಬೇಡ ನಮಗೆ ಇಲ್ಲಿಯೇ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಿ ಎಂದು‌ ಬೇಡಿಕೆ ಇಟ್ಟಿದ್ದರೂ ರಾಜ್ಯ ಸರಕಾರದ ಯಾವುದೇ ಮಂತ್ರಿ ಗಳು ಇದಕ್ಕೆ ಸ್ಪಂದಿಸಿಲ್ಲ‌. ಹಿಂದೆ ಕೃಷಿ ಇಲಾಖೆಯೊಂದಿಗಿದ್ದ ಮೀನುಗಾರಿಕೆಗೆ ಮೋದಿ ಸರಕಾರ ಬೇರೆಯೇ ಇಲಾಖೆ ಮಾಡಿದೆ. ಅಲ್ಲಿ ಪ್ರತ್ಯೇಕ ಮಂತ್ರಿಯನ್ನೂ ನೇಮಕ ಮಾಡಿದೆ. ಇದು ಮೀನುಗಾರರಿಗೆ ಸಿಕ್ಕಿದ ದೊಡ್ಡ ಗೆಲುವು. ಇದರಿಂದ ಇಡೀ ದೇಶದ ಸಮಗ್ರ ಮೀನುಗಾರರ ಸಮಸ್ಯೆಗಳ ನಿವಾರಣೆ ಸಾಧ್ಯ ಎಂದು ಹೇಳಿದರು.


Body:ನಾನು ಚುನಾವಣಾ ಪ್ರಚಾರದ ದೃಷ್ಟಿಯಿಂದ ಇಡೀ ರಾಜ್ಯಾದ್ಯಂತ ಸಂಚರಿಸುತ್ತಿದ್ದೇನೆ. ಎಲ್ಲರಿಗೂ ಒಂದು ರೀತಿ ಅರಿವು ಮೂಡಿದೆ. ಎಲ್ಲರಲ್ಲೂ ಮೋದಿಯ ಹೆಸರು ಕೇಳಿ ಬರುತ್ತಿದೆ. ನಮ್ಮ ಉದ್ದೇಶ ಕರ್ನಾಟಕದ ಎಲ್ಲಾ 28 ಕ್ಷೇತ್ರ ಗಳಲ್ಲಿ ಬಿಜೆಪಿಗೆ ಜಯ ಲಭಿಸಬೇಕು. ಮತ್ತೊಮ್ಮೆ ಮೋದಿಯವರೇ ಪ್ರಧಾನಿಯಾಗಬೇಕು ಎಂದು ನಟಿ ತಾರಾ ಹೇಳಿದರು.

ಮೋದಿ ಬಿಟ್ಟರೆ ನೀವು ಇಲ್ಲಿನ ಸಂಸದರ ಬಗ್ಗೆ ಯಾವುದೇ ಮಾತನಾಡುವುದಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ತಾರಾ, ಈ ಪ್ರಶ್ನೆಯನ್ನು ನಮಗೆ ಮಾತ್ರ ಕೇಳುತ್ತಿದ್ದೀರಿ. ಕಾಂಗ್ರೆಸ್ ನವರು ಈಗಲೂ ಇಂದಿರಾ ಗಾಂಧಿಯ ಬಗ್ಗೆ, ರಾಜೀವ ಗಾಂಧಿ ಬಗ್ಗೆ , ಅವರ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ. ಜೆಡಿಎಸ್ ನಲ್ಲಿ ಯಾರ ಬಗ್ಗೆ ಮಾತನಾಡುತ್ತಾರೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅವರಿಗಿಲ್ಲದ ಆಕ್ಷೇಪ ಒಳ್ಳೆಯ ಸರಕಾರ ಕೊಟ್ಟ, ನಮ್ಮ ದೇಶಕ್ಕೆ ಒಳ್ಳೆಯ ಯೋಜನೆಗಳನ್ನು ಕೊಟ್ಟ ಮೋದಿಯವರ ಹೆಸರನ್ನು ನಾವೇಕೆ ಹೇಳಬಾರದು. ನಮಗೂ ಈ ಬಗ್ಗೆ ಹಕ್ಕು ಇದೆ. ಅಭಿಮಾನ ಇದೆ. ಐದು ವರ್ಷಗಳಲ್ಲಿ ಮೋದಿಯವರು ಭ್ರಷ್ಟಾಚಾರ ರಹಿತವಾದ ಸರಕಾರ ಕೊಟ್ಟಿದ್ದಾರೆ. ಇಡೀ ವಿಶ್ವವೇ ಅವರನ್ನು ಮೆಚ್ಚಿಕೊಂಡಿದೆ ಎಂದು ತಾರಾ ಹೇಳಿದರು.


Conclusion:ಇಲ್ಲಿನ ಮೀನುಗಾರ ಮಹಿಳೆಯರಿಗೆ ಯಾವ ಭರವಸೆಯನ್ನು ನೀಡಿದಿರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಮಾತನಾಡಿದ ತಾರಾ, ನಾನು ಇಲ್ಲಿಗೆ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತಳಾಗಿ ಬಂದಿದ್ದೇನೆ. ಈ ಮಾರುಕಟ್ಟೆಯು ಸ್ಥಳಾಂತರ ಗೊಳ್ಳುತ್ತೆ, ಶುಚಿ ಇಲ್ಲ ಎಂಬ ಅನೇಕ ಸಮಸ್ಯೆಗಳಿವೆ. ಇದನ್ನು ಇಲ್ಲಿನ ರಾಜ್ಯ ಸರಕಾರ ನಿವಾರಣೆ ಮಾಡಬೇಕಿತ್ತು. ಎಲ್ಲಿ ಹೋಗಿದೆ ರಾಜ್ಯ ಸರಕಾರ, ಈ ಕೆಲಸಗಳನ್ನು ಯಾರು ಮಾಡಬೇಕು. ಯಾಕೆ ಇದಕ್ಕೆ ಸ್ಪಂದನೆ ಸಿಗುತ್ತಿಲ್ಲ ಎಂಬುದುದ ನನ್ನ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಬದಲಾವಣೆ ಬೇಕು. ಹಾಗಾಗಿ ರಾಜ್ಯದಲ್ಲಿಯೂ ಬಿಜೆಪಿ ಸರಕಾರ ಬರಬೇಕು. ಇದರಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಅವರು ಹೇಳಿದರು.

ಸಿನಿಮಾ ಕಲಾವಿದರು ರಾಜಕೀಯ ರಂಗಕ್ಕೆ ಬರುವ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ತಾರಾ, ಸ್ವತಃ ಕುಮಾರಸ್ವಾಮಿ ಯವರೂ ಕೂಡಾ ನಿರ್ಮಾಪಕರಾಗಿ ಸಿನಿಮಾ ನಂಟು ಹೊಂದಿರುವವರು. ಅವರ ಸುಪುತ್ರರೂ ಸಿನಿಮಾ‌ ಕಲಾವಿದರು. ಈ ಸಿನಿಮಾ ಕಲಾವಿದರೆಂದರೆ ಸಮಾಜದಿಂದ ಹೊರಗಿಡುವ ವರ್ಗ ಅಲ್ಲ. ಅವರೂ ಕೂಡಾ ಸಮಾಜದ ಒಂದು ವರ್ಗ. ಈ ಸಿನಿಮಾ ರಂಗವನ್ನು ಯಾಕೆ ಜರೆಯುತ್ತಿದ್ದಾರೆ ಎಂಬುವುದನ್ನು‌ ನೀವು ಅವರನ್ನೇ ಕೇಳಬೇಕು ಎಂದು ಹೇಳಿದರು.

ಇಲ್ಲಿನ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರ ಬಗ್ಗೆ ತಾವು ಯಾಕೆ ಮಾತನಾಡುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ತಾರ, ನಳಿನ್ ಕುಮಾರ್ ಸಾಧನೆ ಬಗ್ಗೆ ಎಷ್ಟು ಬೇಕಾದರೂ ಮಾತನಾಡಬಹುದು. ಅವರು ರಾಜ್ಯದ ನಂ 1 ಲೋಕಸಭಾ ಸದಸ್ಯರು. ರಾಷ್ಟ್ರದಲ್ಲಿ 26 ನೇ ಸ್ಥಾನ ಪಡೆದವರು. ಅವರ ಕಾರ್ಯಸಾಧನೆಗಳನ್ನು ಕರಪತ್ರಗಳಲ್ಲಿ‌ ಮುದ್ರಿಸಿದ್ದೇವೆ. ಅವರಿಗಿಂತ ಒಳ್ಳೆಯ ಅಭ್ಯರ್ಥಿ ಬೇರೆಯಾರೂ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಸಂದರ್ಭ ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್, ಸುಲೋಚನಾ ಭಟ್, ಪೂರ್ಣಿಮಾ ಭಟ್ ಮತ್ತು ಮಹಿಳಾ ಬಿಜೆಪಿ ಕಾರ್ಯಕರ್ತರ ಜೊತೆಗಿದ್ದರು.

Reporter_Vishwanath Panjimogaru

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.