ETV Bharat / city

ಜನಾಕ್ರೋಶದಿಂದ ತಪ್ಪಿಸಿಕೊಳ್ಳಲು ತೈಲ ಬೆಲೆ ಇಳಿಕೆ: ಖಾದರ್ ಕಿಡಿ

author img

By

Published : Nov 7, 2021, 7:10 AM IST

ಜನರು ಬಿಜೆಪಿಗರನ್ನು ಉಪ ಚುನಾವಣೆಯಲ್ಲಿ ಸೋಲಿಸಿದ ಕಾರಣ ತೈಲ ಬೆಲೆ ಇಳಿಕೆಯಾಯಿತು. ಇದು ಸರ್ಕಾರದ ಸೋಲಾಗಿದ್ದು, ಜನರ ಗೆಲುವಾಗಿದೆ. ಜನಾಕ್ರೋಶದಿಂದ ತಪ್ಪಿಸಿಕೊಳ್ಳಲು ತೈಲ ಬೆಲೆ ಇಳಿಕೆಯಾಗಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

mla u t khadar
ಶಾಸಕ ಯು.ಟಿ. ಖಾದರ್

ಮಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಾಕ್ರೋಶದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ತೈಲ ಬೆಲೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ಬಿಜೆಪಿ ನಡೆಗೆ ಶಾಸಕ ಯು.ಟಿ. ಖಾದರ್ ಟೀಕೆ

ಸರ್ಕಾರದ ಸೋಲು-ಜನರ ಗೆಲುವು:

ನಗರದ ಸರ್ಕ್ಯೂಟ್ ಹೌಸ್​ನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ಗೆ ತೈಲ ಬೆಲೆಯನ್ನು 70 ರೂ.ಗೆ ಇಳಿಸಲು 70 ವರ್ಷ ಬೇಕಾಯಿತು. ಆದರೆ ಇದನ್ನು 110ಕ್ಕೆ ಏರಿಕೆ ಮಾಡಲು ಬಿಜೆಪಿಗರಿಗೆ ಕೇವಲ ಏಳು ವರ್ಷಗಳು ಸಾಕಾಯಿತು. ಜನರು ಇವರನ್ನು ಉಪ ಚುನಾವಣೆಯಲ್ಲಿ ಸೋಲಿಸಿದ ಕಾರಣ ತೈಲ ಬೆಲೆ ಇಳಿಕೆಯಾಯಿತು. ಇದು ಸರ್ಕಾರದ ಸೋಲಾಗಿದ್ದು, ಜನರ ಗೆಲುವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಜನರ ಹೊರೆ ಕಡಿಮೆ ಮಾಡಿತ್ತು:

ಸರ್ಕಾರ ತೈಲ ಬೆಲೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದರೂ ಕೂಡ ಏರಿಯಾಗಿರುವ ದಿನ ಬಳಕೆ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಕಾರ್ಪೊರೇಟ್ ಸಂಸ್ಥೆಗಳ ಭಾರವನ್ನು ಇಳಿಕೆ ಮಾಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೇ ಹಣ ನಷ್ಟವಾಗಿದೆ. ಕಾಂಗ್ರೆಸ್ ಜನರ ಹೊರೆ ಕಡಿಮೆ ಮಾಡಿತ್ತು.‌ ಆದ್ರೆ ಬಿಜೆಪಿ ಕಾರ್ಪೊರೇಟ್ ಸಂಸ್ಥೆಗಳ ಭಾರ ತಗ್ಗಿಸಲು ಹೋಗಿ ಜನರಿಗೆ ಹೊರೆ ಹಾಕಿದೆ. ನಮ್ಮ ದೇಶದ ನೆರೆಹೊರೆಯ ಆರ್ಥಿಕವಾಗಿ ಹಿಂದುಳಿದ ಹಾಗೂ ಮುಂದುವರಿದ ದೇಶಗಳಲ್ಲಿ ತೈಲ ಬೆಲೆ ಕಡಿಮೆಯಿದೆ‌. ಈ ಸರ್ಕಾರದ ಸಾಧನೆ ಅಂದ್ರೆ, ಇಡೀ ಏಷ್ಯಾದಲ್ಲಿಯೇ ಅತೀ ಹೆಚ್ಚು ತೈಲ ಬೆಲೆಯೇರಿಕೆ ಮಾಡಿರುವುದು ಎಂದು ಹೇಳಿದರು.

ಕರಾವಳಿಗೆ ಅವಮಾನ:

ರಾಜ್ಯೋತ್ಸವ ಪ್ರಶಸ್ತಿಯಲ್ಲಿ ದ.ಕ. ಜಿಲ್ಲೆಯ ಸಂಸ್ಕೃತಿ, ಪರಂಪರೆಯ ಯಕ್ಷಗಾನ, ಭರತನಾಟ್ಯವನ್ನು ಗಣನೆಗೆ ತೆಗೆದುಕೊಂಡಿಲ್ಲ. ಸಂಸ್ಕೃತಿ, ಪರಂಪರೆಯೆಂದು ಅಧಿಕಾರಕ್ಕೆ ಬಂದವರೇ ಈಗ ಇದನ್ನು ಕಡೆಗಣಿಸಿದ್ದಾರೆ. ಕರಾವಳಿಯರೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದರೂ ದ.ಕ. ಜಿಲ್ಲೆಯ ಯಕ್ಷಗಾನ, ಭರತನಾಟ್ಯ ಕಲಾವಿದರು, ಸಾಹಿತಿಗಳು ಕಣ್ಣಿಗೆ ಬೀಳದಿರುವುದು ಕರಾವಳಿಗೆ ಮಾಡಿರುವ ಅವಮಾನವಾಗಿದೆ ಎಂದು ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯ ದಲಿತರು ಗೋಡ್ಸೆವಾದಿಗಳು:

ಮಾಜಿ ಸಿಎಂ ಸಿದ್ದರಾಮಯ್ಯರಿಂದ ದಲಿತರ ಅವಮಾನ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ದಲಿತರ ಬಗ್ಗೆ ವಾದಿಸುವ ಬಿಜೆಪಿಯ ದಲಿತ ಮುಖಂಡರು ಯಾರೂ ಅಂಬೇಡ್ಕರ್ ವಾದಿಗಳಲ್ಲ. ಅವರು ಗೋಡ್ಸೆವಾದಿಗಳು. ಈ ಹಿಂದೆ ಅಂಬೇಡ್ಕರ್ ಓರ್ವರೇ ಸಂವಿಧಾನ‌ ರಚನೆ ಮಾಡಿರೋದಲ್ಲ ಎಂದು ಹೇಳಿಕೆ ನೀಡುವಾಗ ಇವರು ಎಲ್ಲಿ ಹೋಗಿದ್ದರು. ಈ ಬಗ್ಗೆ ಅವರು ಬಿಜೆಪಿ ಕಚೇರಿಗೆ ಹೋಗಿ ಮಾತನಾಡಲಿ ಎಂದರು.

ಇದನ್ನೂ ಓದಿ: ವಾಜಪೇಯಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ತಪ್ಪಿದ ಭಾರಿ ದುರಂತ

ಕಾಂಗ್ರೆಸ್ ಸರ್ಕಾರ ಇರುವಾಗ ಸಾಕಷ್ಟು ದಲಿತ ಮೀಸಲಾತಿ, ಪರಿಶಿಷ್ಟ ವರ್ಗದವರಿಗೆ ಅತಿ ಹೆಚ್ಚು ನಿವೇಶನಗಳು ಜಾರಿಯಾಗಿದ್ದವು. ಈಗ ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಎಷ್ಟು ದಲಿತರಿಗೆ ಮೀಸಲಾತಿ, ನಿವೇಶನ ಜಾರಿಗೊಳಿಸಿದೆ ಎಂದು ಶ್ವೇತಪತ್ರ ಹೊರಡಿಸಲಿ ಎಂದು ಖಾದರ್ ಹೇಳಿದರು.

ಮಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಾಕ್ರೋಶದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ತೈಲ ಬೆಲೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ಬಿಜೆಪಿ ನಡೆಗೆ ಶಾಸಕ ಯು.ಟಿ. ಖಾದರ್ ಟೀಕೆ

ಸರ್ಕಾರದ ಸೋಲು-ಜನರ ಗೆಲುವು:

ನಗರದ ಸರ್ಕ್ಯೂಟ್ ಹೌಸ್​ನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ಗೆ ತೈಲ ಬೆಲೆಯನ್ನು 70 ರೂ.ಗೆ ಇಳಿಸಲು 70 ವರ್ಷ ಬೇಕಾಯಿತು. ಆದರೆ ಇದನ್ನು 110ಕ್ಕೆ ಏರಿಕೆ ಮಾಡಲು ಬಿಜೆಪಿಗರಿಗೆ ಕೇವಲ ಏಳು ವರ್ಷಗಳು ಸಾಕಾಯಿತು. ಜನರು ಇವರನ್ನು ಉಪ ಚುನಾವಣೆಯಲ್ಲಿ ಸೋಲಿಸಿದ ಕಾರಣ ತೈಲ ಬೆಲೆ ಇಳಿಕೆಯಾಯಿತು. ಇದು ಸರ್ಕಾರದ ಸೋಲಾಗಿದ್ದು, ಜನರ ಗೆಲುವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಜನರ ಹೊರೆ ಕಡಿಮೆ ಮಾಡಿತ್ತು:

ಸರ್ಕಾರ ತೈಲ ಬೆಲೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದರೂ ಕೂಡ ಏರಿಯಾಗಿರುವ ದಿನ ಬಳಕೆ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಕಾರ್ಪೊರೇಟ್ ಸಂಸ್ಥೆಗಳ ಭಾರವನ್ನು ಇಳಿಕೆ ಮಾಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೇ ಹಣ ನಷ್ಟವಾಗಿದೆ. ಕಾಂಗ್ರೆಸ್ ಜನರ ಹೊರೆ ಕಡಿಮೆ ಮಾಡಿತ್ತು.‌ ಆದ್ರೆ ಬಿಜೆಪಿ ಕಾರ್ಪೊರೇಟ್ ಸಂಸ್ಥೆಗಳ ಭಾರ ತಗ್ಗಿಸಲು ಹೋಗಿ ಜನರಿಗೆ ಹೊರೆ ಹಾಕಿದೆ. ನಮ್ಮ ದೇಶದ ನೆರೆಹೊರೆಯ ಆರ್ಥಿಕವಾಗಿ ಹಿಂದುಳಿದ ಹಾಗೂ ಮುಂದುವರಿದ ದೇಶಗಳಲ್ಲಿ ತೈಲ ಬೆಲೆ ಕಡಿಮೆಯಿದೆ‌. ಈ ಸರ್ಕಾರದ ಸಾಧನೆ ಅಂದ್ರೆ, ಇಡೀ ಏಷ್ಯಾದಲ್ಲಿಯೇ ಅತೀ ಹೆಚ್ಚು ತೈಲ ಬೆಲೆಯೇರಿಕೆ ಮಾಡಿರುವುದು ಎಂದು ಹೇಳಿದರು.

ಕರಾವಳಿಗೆ ಅವಮಾನ:

ರಾಜ್ಯೋತ್ಸವ ಪ್ರಶಸ್ತಿಯಲ್ಲಿ ದ.ಕ. ಜಿಲ್ಲೆಯ ಸಂಸ್ಕೃತಿ, ಪರಂಪರೆಯ ಯಕ್ಷಗಾನ, ಭರತನಾಟ್ಯವನ್ನು ಗಣನೆಗೆ ತೆಗೆದುಕೊಂಡಿಲ್ಲ. ಸಂಸ್ಕೃತಿ, ಪರಂಪರೆಯೆಂದು ಅಧಿಕಾರಕ್ಕೆ ಬಂದವರೇ ಈಗ ಇದನ್ನು ಕಡೆಗಣಿಸಿದ್ದಾರೆ. ಕರಾವಳಿಯರೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದರೂ ದ.ಕ. ಜಿಲ್ಲೆಯ ಯಕ್ಷಗಾನ, ಭರತನಾಟ್ಯ ಕಲಾವಿದರು, ಸಾಹಿತಿಗಳು ಕಣ್ಣಿಗೆ ಬೀಳದಿರುವುದು ಕರಾವಳಿಗೆ ಮಾಡಿರುವ ಅವಮಾನವಾಗಿದೆ ಎಂದು ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯ ದಲಿತರು ಗೋಡ್ಸೆವಾದಿಗಳು:

ಮಾಜಿ ಸಿಎಂ ಸಿದ್ದರಾಮಯ್ಯರಿಂದ ದಲಿತರ ಅವಮಾನ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ದಲಿತರ ಬಗ್ಗೆ ವಾದಿಸುವ ಬಿಜೆಪಿಯ ದಲಿತ ಮುಖಂಡರು ಯಾರೂ ಅಂಬೇಡ್ಕರ್ ವಾದಿಗಳಲ್ಲ. ಅವರು ಗೋಡ್ಸೆವಾದಿಗಳು. ಈ ಹಿಂದೆ ಅಂಬೇಡ್ಕರ್ ಓರ್ವರೇ ಸಂವಿಧಾನ‌ ರಚನೆ ಮಾಡಿರೋದಲ್ಲ ಎಂದು ಹೇಳಿಕೆ ನೀಡುವಾಗ ಇವರು ಎಲ್ಲಿ ಹೋಗಿದ್ದರು. ಈ ಬಗ್ಗೆ ಅವರು ಬಿಜೆಪಿ ಕಚೇರಿಗೆ ಹೋಗಿ ಮಾತನಾಡಲಿ ಎಂದರು.

ಇದನ್ನೂ ಓದಿ: ವಾಜಪೇಯಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ತಪ್ಪಿದ ಭಾರಿ ದುರಂತ

ಕಾಂಗ್ರೆಸ್ ಸರ್ಕಾರ ಇರುವಾಗ ಸಾಕಷ್ಟು ದಲಿತ ಮೀಸಲಾತಿ, ಪರಿಶಿಷ್ಟ ವರ್ಗದವರಿಗೆ ಅತಿ ಹೆಚ್ಚು ನಿವೇಶನಗಳು ಜಾರಿಯಾಗಿದ್ದವು. ಈಗ ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಎಷ್ಟು ದಲಿತರಿಗೆ ಮೀಸಲಾತಿ, ನಿವೇಶನ ಜಾರಿಗೊಳಿಸಿದೆ ಎಂದು ಶ್ವೇತಪತ್ರ ಹೊರಡಿಸಲಿ ಎಂದು ಖಾದರ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.