ETV Bharat / city

ಈಶ್ವರಪ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಶಾಹುಲ್ ಹಮೀದ್ - ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ

ವೇದಿಕೆಯಲ್ಲಿದ್ದ ರೌಡಿಶೀಟರ್​ಗಳು, ಕೊಲೆ ಸುಲಿಗೆ ಮಾಡಿದವರನ್ನು ದೇಶಭಕ್ತರು ಎಂದು ಈಶ್ವರಪ್ಪ ಬಿಂಬಿಸುತ್ತಿದ್ದಾರೆ. ಬಿಜೆಪಿಗೆ ಮತ ಹಾಕದವರು ದೇಶದ್ರೋಹಿಗಳು ಎಂದಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿಗೆ ಜನತೆ ಮತ ಹಾಕಿದ್ದು 36%. ಉಳಿದ 64% ಜನತೆ ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಹಾಗಾದರೆ ಈ 64% ಜನತೆ ದೇಶದ್ರೋಹಿಗಳಾ ಎಂದು ಶಾಹುಲ್ ಹಮೀದ್ ಪ್ರಶ್ನಿಸಿದ್ದಾರೆ.

ಶಾಹುಲ್ ಹಮೀದ್ ಆಕ್ರೋಶ
author img

By

Published : Sep 17, 2019, 9:52 PM IST

ಮಂಗಳೂರು: ಮುಸ್ಲಿಂ ಸಮುದಾಯವನ್ನು ಅವಮಾನಗೊಳಿಸುವಂತಹ ಹೇಳಿಕೆ ನೀಡಿರುವ ಕೆ. ಎಸ್. ಈಶ್ವರಪ್ಪನವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ತಕ್ಷಣ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ದ.ಕ ಜಿ.ಪಂ ಸ್ಥಾಯೀ ಸಮಿತಿಯ ಸದಸ್ಯ ಶಾಹುಲ್ ಹಮೀದ್ ಹೇಳಿದ್ದಾರೆ.

ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪನವರು ಬಿಜೆಪಿಗೆ ಮತ ಚಲಾಯಿಸಿದವರು ದೇಶಭಕ್ತರು, ಮತ ಚಲಾಯಿಸದವರು ದೇಶ ದ್ರೋಹಿಗಳು ಎಂದು ಹೇಳಿಕೆ ನೀಡಿದ್ದಕ್ಕೆ ಶಾಹುಲ್ ಹಮೀದ್ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಹೇಳಿಕೆಗಳ ಮೂಲಕ ಅವರೊಬ್ಬ ಕೊಳಕು ಬಾಯಿಯ ರಾಜಕಾರಣಿ ಅನ್ನೋದನ್ನು ಸಾಬೀತು ಪಡಿಸಿದ್ದಾರೆ ಎಂದು ಶಾಹುಲ್ ಹಮೀದ್ ಜರಿದಿದ್ದಾರೆ.

ಶಾಹುಲ್ ಹಮೀದ್ ಆಕ್ರೋಶ

ವೇದಿಕೆಯಲ್ಲಿದ್ದ ರೌಡಿಶೀಟರ್​ಗಳು, ಕೊಲೆ ಸುಲಿಗೆ ಮಾಡಿದವರನ್ನು ದೇಶಭಕ್ತರು ಎಂದು ಈಶ್ವರಪ್ಪ ಬಿಂಬಿಸುತ್ತಿದ್ದಾರೆ. ಬಿಜೆಪಿಗೆ ಮತ ಹಾಕದವರು ದೇಶದ್ರೋಹಿಗಳು ಎಂದಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಗೆ ಜನತೆ ಮತ ಹಾಕಿದ್ದು ಶೇ. 36%. ಉಳಿದ 64% ರಷ್ಟು ಜನ ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಹಾಗಾದರೆ ಈ 64% ಜನತೆ ದೇಶದ್ರೋಹಿಗಳಾ ಎಂದು ಶಾಹುಲ್ ಹಮೀದ್ ಪ್ರಶ್ನಿಸಿದ್ದಾರೆ.

ಈಶ್ವರಪ್ಪನವರು ನೋಟು ಎಣಿಸುವ ಯಂತ್ರ ಮಾತ್ರವಲ್ಲ. ಮಾಡಿರುವ ಪಾಪಕೃತ್ಯವನ್ನು ಎಣಿಸುವಂತಹ ಯಂತ್ರವನ್ನು ಅವರು ಖರೀದಿಸಬೇಕು. ಅವರು ಮುಸ್ಲಿಮರಿಗೆ ನಿಂದಿಸಿದ ಕೂಡಲೇ ಪ್ರಮೋಷನ್ ದೊರಕುತ್ತದೆ ಎಂದು ತಿಳಿದುಕೊಂಡಿರಬೇಕು ಎಂದು ಶಾಹುಲ್​ ವಾಗ್ದಾಳಿ ನಡೆಸಿದರು.

ಮಂಗಳೂರು: ಮುಸ್ಲಿಂ ಸಮುದಾಯವನ್ನು ಅವಮಾನಗೊಳಿಸುವಂತಹ ಹೇಳಿಕೆ ನೀಡಿರುವ ಕೆ. ಎಸ್. ಈಶ್ವರಪ್ಪನವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ತಕ್ಷಣ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ದ.ಕ ಜಿ.ಪಂ ಸ್ಥಾಯೀ ಸಮಿತಿಯ ಸದಸ್ಯ ಶಾಹುಲ್ ಹಮೀದ್ ಹೇಳಿದ್ದಾರೆ.

ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪನವರು ಬಿಜೆಪಿಗೆ ಮತ ಚಲಾಯಿಸಿದವರು ದೇಶಭಕ್ತರು, ಮತ ಚಲಾಯಿಸದವರು ದೇಶ ದ್ರೋಹಿಗಳು ಎಂದು ಹೇಳಿಕೆ ನೀಡಿದ್ದಕ್ಕೆ ಶಾಹುಲ್ ಹಮೀದ್ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಹೇಳಿಕೆಗಳ ಮೂಲಕ ಅವರೊಬ್ಬ ಕೊಳಕು ಬಾಯಿಯ ರಾಜಕಾರಣಿ ಅನ್ನೋದನ್ನು ಸಾಬೀತು ಪಡಿಸಿದ್ದಾರೆ ಎಂದು ಶಾಹುಲ್ ಹಮೀದ್ ಜರಿದಿದ್ದಾರೆ.

ಶಾಹುಲ್ ಹಮೀದ್ ಆಕ್ರೋಶ

ವೇದಿಕೆಯಲ್ಲಿದ್ದ ರೌಡಿಶೀಟರ್​ಗಳು, ಕೊಲೆ ಸುಲಿಗೆ ಮಾಡಿದವರನ್ನು ದೇಶಭಕ್ತರು ಎಂದು ಈಶ್ವರಪ್ಪ ಬಿಂಬಿಸುತ್ತಿದ್ದಾರೆ. ಬಿಜೆಪಿಗೆ ಮತ ಹಾಕದವರು ದೇಶದ್ರೋಹಿಗಳು ಎಂದಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಗೆ ಜನತೆ ಮತ ಹಾಕಿದ್ದು ಶೇ. 36%. ಉಳಿದ 64% ರಷ್ಟು ಜನ ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಹಾಗಾದರೆ ಈ 64% ಜನತೆ ದೇಶದ್ರೋಹಿಗಳಾ ಎಂದು ಶಾಹುಲ್ ಹಮೀದ್ ಪ್ರಶ್ನಿಸಿದ್ದಾರೆ.

ಈಶ್ವರಪ್ಪನವರು ನೋಟು ಎಣಿಸುವ ಯಂತ್ರ ಮಾತ್ರವಲ್ಲ. ಮಾಡಿರುವ ಪಾಪಕೃತ್ಯವನ್ನು ಎಣಿಸುವಂತಹ ಯಂತ್ರವನ್ನು ಅವರು ಖರೀದಿಸಬೇಕು. ಅವರು ಮುಸ್ಲಿಮರಿಗೆ ನಿಂದಿಸಿದ ಕೂಡಲೇ ಪ್ರಮೋಷನ್ ದೊರಕುತ್ತದೆ ಎಂದು ತಿಳಿದುಕೊಂಡಿರಬೇಕು ಎಂದು ಶಾಹುಲ್​ ವಾಗ್ದಾಳಿ ನಡೆಸಿದರು.

Intro:ಮಂಗಳೂರು: ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರು ಬಿಜೆಪಿಗೆ ಮತ ಚಲಾಯಿಸಿದವರು ದೇಶಭಕ್ತರು, ಮತ ಚಲಾಯಿಸದವರು ದೇಶ ದ್ರೋಹಿಗಳು ಎಂದು ಹೇಳಿ ಮುಸ್ಲಿಂ ಸಮುದಾಯವನ್ನು ಅವಮಾನಗೊಳಿಸುವಂತಹ ಹೇಳಿಕೆ ನೀಡಿದ್ದಾರೆ. ಮನೆಯಲ್ಲಿಯೇ ನೋಟುಗಳನ್ನು ಎಣಿಸುವ ಯಂತ್ರವಿಟ್ಟುಕೊಂಡ ಅವರು ಪರಮ ಭ್ರಷ್ಟರು ಎಂದು ಎಣಿಸಿಕಡಿದ್ದೆವು. ಆದರೆ ಈಗ ಇಂತಹ ಹೇಳಿಕೆ ನೀಡಿ ಹೊಲಸು ಮತ್ತು ಕೊಳಕು ಬಾಯಿಯ ರಾಜಕಾರಣಿ ಎಂದು ಸಾಬಿತು ಮಾಡಿಕೊಂಡಿದ್ದಾರೆ ಎಂದು ದ.ಕ.ಜಿಪಂ ಸ್ಥಾಯೀ ಸಮಿತಿಯ ಸದಸ್ಯ ಶಾಹುಲ್ ಹಮೀದ್ ಹೇಳಿದ್ದಾರೆ.

ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಯಿಬಿಟ್ಟರೆ ಮುಸ್ಲಿಂ ಸಮುದಾಯವನ್ನು ಅವಮಾನ ಮಾಡುವ ಈಶ್ವರಪ್ಪನವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ತಕ್ಷಣ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಹೇಳಿದರು.



Body:ವೇದಿಕೆಯಲ್ಲಿದ್ದ ರೌಡಿಶೀಟರ್ ಗಳು, ಕೊಲೆ ಸುಲಿಗೆ ಮಾಡಿದವರನ್ನು ಅವರು ದೇಶಭಕ್ತರು ಎಂದು ಈಶ್ವರಪ್ಪ ಬಿಂಬಿಸುತ್ತಿದ್ದಾರೆ. ಬಿಜೆಪಿಗೆ ಮತ ಹಾಕದವರು ದೇಶದ್ರೋಹಿಗಳು ಎಂದಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿಗೆ ಜನತೆ ಮತ ಹಾಕಿದ್ದು 36%. ಉಳಿದ 64% ಜನತೆ ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಹಾಗಾದರೆ ಈ 64% ಜನತೆ ದೇಶದ್ರೋಹಿಗಳಾ ಎಂದು ಶಾಹುಲ್ ಹಮೀದ್ ಎಂದು ಹೇಳಿದರು.

ಈಶ್ವರಪ್ಪನವರು ನೋಟು ಎಣಿಸುವ ಯಂತ್ರ ಮಾತ್ರವಲ್ಲ‌, ಅವರು ಮಾಡಿರುವ ಪಾಪಕೃತ್ಯವನ್ನು ಎಣಿಸುವಂತಹ ಯಂತ್ರವನ್ನು ಅವರು ಖರೀದಿಸಬೇಕು. ಅವರು ಮುಸ್ಲಿಮರಿಗೆ ಬೈದಕೂಡಲೇ ಪ್ರಮೋಷನ್ ದೊರಕುತ್ತದೆ ಎಂದು ತಿಳಿದುಕೊಂಡಿದ್ದಾರೋ ಏನೋ, ಈಶ್ವರಪ್ಪನವರೇ ನಿಮಗೆ ಪ್ರೊಮೋಷನ್ ದೊರೆಯಬೇಕಾದರೆ ವಿಧಾನಸೌಧದಲ್ಲಿ ನೀಲಿಚಿತ್ರ ನೋಡಿ. ಖಂಡಿತವಾಗಿ ಉಪ ಮುಖ್ಯಮಂತ್ರಿ ಸ್ಥಾನ ದೊರಕುತ್ತದೆ ಎಂದು ಶಾಹುಲ್ ಹಮೀದ್ ಲೇವಡಿ ಮಾಡಿದರು‌.




Conclusion:ಜಿಪಂ ವಿರೋಧ ಪಕ್ಷದ ನಾಯಕ ಎಂ.ಎಸ್.ಮೊಹಮ್ಮದ್ ಮಾತನಾಡಿ, ಈಶ್ವರಪ್ಪನವರು ಮುಸ್ಲಿಂ ಸಮುದಾಯದ ವಿರುದ್ಧ ಮೊದಲನೆಯ ಬಾರಿ ಮಾತನಾಡುವುದಲ್ಲ. ಬಿಜೆಪಿಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೇಟ್ ಕೊಡಬೇಕಾದರೆ ನಮ್ಮ ಕಚೇರಿ ಗುಡಿಸಬೇಕು ಎಂದು ಅವರು ಹಿಂದೆ ಹೇಳಿಕೆ ನೀಡಿದ್ದರು. ನಿಮ್ಮ ಕಚೇರಿ ಗುಡಿಸಿಯೂ ಟಿಕೇಟ್ ಬೇಡ, ಗುಡಿಸದೆಯೂ ಬೇಡ. ನಿಜವಾದ ಅಲ್ಪಸಂಖ್ಯಾತರಿಗೆ ನಿಮ್ಮ ಕೃಪೆಯೇ ಬೇಡ. ಈಶ್ವರಪ್ಪನವರಿಗೆ ಸಂವಿಧಾನದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇಲ್ಲ. ನೀವು ಯಾವುದೇ ರೀತಿ ಮೂದಲಿಸಿದರೂ ನಾವು ಮಾತ್ರ ಭಾರತೀಯರೇ, ದೇಶ ಭಕ್ತರೇ. ಪಾಕಿಸ್ತಾನಕ್ಕೆ ಅವರೇ ಹೋಗಲಿ, ನಾವು ಹೋಗುವುದಿಲ್ಲ. ನಿಮ್ಮ ನಾಯಕ ನರೇಂದ್ರ ಮೋದಿಯವರೇ ನವಾಜ್ ಷರೀಫ್ ಹುಟ್ಟುಹಬ್ಬಕ್ಕೆ ಪಾಕಿಸ್ತಾನಕ್ಕೆ ಹೋದದ್ದು. ನಾವು ಕಾಂಗ್ರೆಸಿಗರು, ಮುಸಲ್ಮಾನರು ಹೋದದ್ದಲ್ಲ. ಮೋದಿಯವರ ಬಗ್ಗೆ ಮಾತನಾಡಿ ಎಂದು ಹೇಳಿದರು‌.

Vishwanath Panjimogaru

ಗಡ್ಡದವರು ಶಾಹುಲ್ ಹಮೀದ್

ನೀಟ್ ಶೇವ್ ಮಾಡಿದವರು ಎಂ ಎಸ್ ಮುಹಮ್ಮದ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.