ETV Bharat / city

ಸಂತ್ರಸ್ತ ಪೋಷಕರಿಗೆ ಸಾಂತ್ವನ ಹೇಳಿದ ಸಂಸದ ಡಾ. ಉಮೇಶ್​ ಜಾಧವ್

author img

By

Published : Dec 7, 2019, 1:27 PM IST

ಚಿಂಚೋಳಿ ತಾಲೂಕಿನ ಯಾಕಾಪೂರ ಗ್ರಾಮಕ್ಕೆ ಸಂಸದ ಡಾ. ಉಮೇಶ್​ ಜಾಧವ್​ ಭೇಟಿ ನೀಡಿ ಅತ್ಯಾಚಾರ ಬಾಲಕಿಯ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಯಾಕಾಪೂರ ಗ್ರಾಮಕ್ಕೆ ಸಂಸದ ಡಾ. ಉಮೇಶ್​ ಜಾಧವ್​ ಭೇಟಿ
ಯಾಕಾಪೂರ ಗ್ರಾಮಕ್ಕೆ ಸಂಸದ ಡಾ. ಉಮೇಶ್​ ಜಾಧವ್​ ಭೇಟಿ

ಕಲಬುರಗಿ: ಚಿಂಚೋಳಿ ತಾಲೂಕಿನ ಯಾಕಾಪೂರ ಗ್ರಾಮಕ್ಕೆ ಸಂಸದ ಡಾ. ಉಮೇಶ್​ ಜಾಧವ್​ ಭೇಟಿ ನೀಡಿದ್ದು, ಅತ್ಯಾಚಾರ ನಡೆದ ಬಾಲಕಿಯ ಪೋಷಕರಿಗೆ ಸಾಂತ್ವನ ಹೇಳಿದರು.

ಯಾಕಾಪೂರ ಗ್ರಾಮಕ್ಕೆ ಸಂಸದ ಡಾ. ಉಮೇಶ್​ ಜಾಧವ್​ ಭೇಟಿ

ದೆಹಲಿ ಪ್ರವಾಸ ಮುಗಿದ ಬಳಿಕ ತಡರಾತ್ರಿ ಯಾಕಾಪೂರ ಗ್ರಾಮಕ್ಕೆ ಭೇಟಿ ನೀಡಿದ ಡಾ. ಉಮೇಶ್​ ಜಾಧವ್, ಅತ್ಯಾಚಾರ ನಡೆದ ಬಾಲಕಿಯ ಸಂತ್ರಸ್ತ ಪೋಷಕರಿಗೆ ಸಾಂತ್ವನ ಹೇಳಿದರು. ತಪ್ಪಿತಸ್ಥರಿಗೆ ಶಿಕ್ಷೆ ಸಿಗುವಂತೆ ಮಾಡಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.

ಬಳಿಕ ಮಾತನಾಡಿದ ಅವರು, ಹೈದರಾಬಾದ್​ ಅತ್ಯಾಚಾರ ಆರೋಪಿಗಳ ಶೂಟೌಟ್ ಪೊಲೀಸರ ಆತ್ಮರಕ್ಷಣೆಗಾಗಿ ನಡೆದಿದ್ದು, ಎಲ್ಲಿಯೂ ಕಾನೂನು ಉಲ್ಲಂಘನೆ ನಡೆದಿಲ್ಲ, ಇಲ್ಲಿನ ಆರೋಪಿ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನ್ಯಾಯಾಲಯದ ಮೂಲಕ ಕಠಿಣ ಶಿಕ್ಷೆ ಸಿಗಲಿದೆ ಎಂದು ಹೇಳಿದರು.

ಯಾಕಾಪೂರ ಗ್ರಾಮದ ಬುದ್ದಿಮಾಂದ್ಯ 8 ವರ್ಷದ ಬಾಲಕಿಗೆ ತಿಂಡಿ ಕೊಡಿಸುವುದಾಗಿ ಆರೋಪಿ ಯಲ್ಲಪ್ಪ ಕರೆದು, ಅತ್ಯಾಚಾರಗೈದು ಬಳಿಕ ಕುತ್ತಿಗೆ ಹಿಸುಕಿ ಕೊಲೆಗೈದಿದ್ದ, ಸದ್ಯ ಆತನನ್ನು ಸುಲೇಪೇಟ್ ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ‌.

ಕಲಬುರಗಿ: ಚಿಂಚೋಳಿ ತಾಲೂಕಿನ ಯಾಕಾಪೂರ ಗ್ರಾಮಕ್ಕೆ ಸಂಸದ ಡಾ. ಉಮೇಶ್​ ಜಾಧವ್​ ಭೇಟಿ ನೀಡಿದ್ದು, ಅತ್ಯಾಚಾರ ನಡೆದ ಬಾಲಕಿಯ ಪೋಷಕರಿಗೆ ಸಾಂತ್ವನ ಹೇಳಿದರು.

ಯಾಕಾಪೂರ ಗ್ರಾಮಕ್ಕೆ ಸಂಸದ ಡಾ. ಉಮೇಶ್​ ಜಾಧವ್​ ಭೇಟಿ

ದೆಹಲಿ ಪ್ರವಾಸ ಮುಗಿದ ಬಳಿಕ ತಡರಾತ್ರಿ ಯಾಕಾಪೂರ ಗ್ರಾಮಕ್ಕೆ ಭೇಟಿ ನೀಡಿದ ಡಾ. ಉಮೇಶ್​ ಜಾಧವ್, ಅತ್ಯಾಚಾರ ನಡೆದ ಬಾಲಕಿಯ ಸಂತ್ರಸ್ತ ಪೋಷಕರಿಗೆ ಸಾಂತ್ವನ ಹೇಳಿದರು. ತಪ್ಪಿತಸ್ಥರಿಗೆ ಶಿಕ್ಷೆ ಸಿಗುವಂತೆ ಮಾಡಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.

ಬಳಿಕ ಮಾತನಾಡಿದ ಅವರು, ಹೈದರಾಬಾದ್​ ಅತ್ಯಾಚಾರ ಆರೋಪಿಗಳ ಶೂಟೌಟ್ ಪೊಲೀಸರ ಆತ್ಮರಕ್ಷಣೆಗಾಗಿ ನಡೆದಿದ್ದು, ಎಲ್ಲಿಯೂ ಕಾನೂನು ಉಲ್ಲಂಘನೆ ನಡೆದಿಲ್ಲ, ಇಲ್ಲಿನ ಆರೋಪಿ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನ್ಯಾಯಾಲಯದ ಮೂಲಕ ಕಠಿಣ ಶಿಕ್ಷೆ ಸಿಗಲಿದೆ ಎಂದು ಹೇಳಿದರು.

ಯಾಕಾಪೂರ ಗ್ರಾಮದ ಬುದ್ದಿಮಾಂದ್ಯ 8 ವರ್ಷದ ಬಾಲಕಿಗೆ ತಿಂಡಿ ಕೊಡಿಸುವುದಾಗಿ ಆರೋಪಿ ಯಲ್ಲಪ್ಪ ಕರೆದು, ಅತ್ಯಾಚಾರಗೈದು ಬಳಿಕ ಕುತ್ತಿಗೆ ಹಿಸುಕಿ ಕೊಲೆಗೈದಿದ್ದ, ಸದ್ಯ ಆತನನ್ನು ಸುಲೇಪೇಟ್ ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ‌.

Intro:ಕಲಬುರಗಿ: ಚಿಂಚೋಳಿ ತಾಲೂಕಿನ ಯಾಕಾಪೂರ ಗ್ರಾಮಕ್ಕೆ ಸಂಸದ ಡಾ. ಉಮೇಶ ಜಾಧವ ಭೇಟಿನೀಡಿ ಹತ್ಯಾಚಾರ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು.
Body:ದೇಹಲಿ ಪ್ರವಾಸ ಮುಗಿದ ಬಳಿಕ ವಿಮಾನದ ಮೂಲಕ ಹೈದ್ರಾಬಾದ ಬಂದಿಳಿದ ಅವರು, ನೇರವಾಗಿ ತಡರಾತ್ರಿ ಗ್ರಾಮಕ್ಕೆ ಭೇಟಿನೀಡಿ ಸಂತ್ರಸ್ತ ಪೊಷಕರಿಗೆ ಸಾಂತ್ವಾನ ಹೇಳಿದರು. ತಪ್ಪಿತಸ್ತರಿಗೆ ಶಿಕ್ಷೆ ಸಿಗುವಂತೆ ಮಾಡಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು. ಬಳಿಕ ಮಾತನಾಡಿದ ಅವರು, ಹೈದ್ರಾಬಾದ ಹತ್ಯಾಚಾರ ಆರೋಪಿಗಳ ಶೂಟೌಟ್ ಪೊಲೀಸರ ಆತ್ಮರಕ್ಷಣೆಗಾಗಿ ನಡೆದಿದ್ದು, ಎಲ್ಲಿಯೂ ಕಾನನೂ ಉಲ್ಲಂಘನೆ ನಡೆದಿಲ್ಲ, ಇಲ್ಲಿನ ಆರೋಪಿ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುವದು ನ್ಯಾಯಾಲಯದ ಮೂಲಕ ಕಠಿಣ ಶಿಕ್ಷೆ ಸಿಗಲಿದೆ ಎಂದು ಹೇಳಿದರು.

ಯಾಕಾಪೂರ ಗ್ರಾಮದ ಬುದ್ದಿ ಮಾಂದ್ಯ 8 ವರ್ಷದ ಬಾಲಕಿಗೆ ಕುರಕುರೆ ಕೊಡಿಸುವದಾಗಿ ಆರೋಪಿ ಯಲ್ಲಪ್ಪ ಎಂಬಾತ ಅತ್ಯಾಚಾರಗೈದು ಬಳಿಕ ಕುತ್ತಿಗೆ ಹಿಸುಕಿ ಕೊಲೆಗೈದಿದ್ದ, ಸದ್ಯ ಆತನನ್ನು ಸುಲೇಪೇಟ್ ಪೊಲೀಸರು ಬಂಧಿಸಿ ಜೈಲಿಗಟ್ಟಿ ಹೆಚ್ಚಿನ ತನಿಕೆ ನಡೆಸುತ್ತಿದ್ದಾರೆ‌.

ಬೈಟ್ :- ಡಾ. ಉಮೇಶ ಜಾಧವ, ಕಲಬುರಗಿ ಸಂಸದ.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.